- Monday
- August 3rd, 2026
ದಕ್ಷಿಣ ಕನ್ನಡ ಗೌಡ ವಿದ್ಯಾವರ್ಧಕ ಸಂಘ (ರಿ) ಸುಳ್ಯ ಇದರ ಆಡಳಿತ ಮಂಡಳಿಯ 2020 - 21 ನೇ ಸಾಲಿನ 2ನೇ ಸಾಮಾನ್ಯ ಸಭೆಯು ಸೆ.22ರಂದು ಶ್ರೀ ಶಾರದಾ ಮಹಿಳಾ ಪದವಿ ಕಾಲೇಜಿನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ರಾಜ್ಯ ರೈತ ಮೋರ್ಚಾದ...
ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಸೆ.22 ರಂದು ವಿಕಲಚೇತನರ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮ ಸಂಯೋಜಕರಾದ ಸುಳ್ಯ ವಿಕಲಚೇತನರ ಸಂಘದ ಕಾರ್ಯದರ್ಶಿ ಪ್ರವೀಣ್ ನಾಯಕ್ ಸುಳ್ಯ, ಎಂ.ಆರ್.ಡಬ್ಲ್ಯೂ. ಚಂದ್ರಶೇಖರ್, ಪುಟ್ಟಣ್ಣ ವಲಿಕಜೆ ಹಾಗೂ ವಿ.ಆರ್.ಡಬ್ಲ್ಯೂ ಅಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು. ಬಿ.ಆರ್.ಸಿ.ಯಿಂದ ಶಿಕ್ಷಕಿ ಕೃತಿಕಾ ಸಹಕರಿಸಿದರು.
ರಾಜ್ಯ ಸರ್ಕಾರವು ಗ್ರಾಮೀಣ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ವಿತರಿಸುವ ಅಧಿಕಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರ ತಂತ್ರಾಂಶಕ್ಕೆ ಇ-ಜನನ ತಂತ್ರಾಂಶ ಸಂಯೋಜನೆ ಮಾಡಲಿದ್ದು,...
ದೊಡ್ಡತೋಟ ಸಮೀಪ ಚಡಾವಿನಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದಿದೆ. ಈ ರಸ್ತೆಯಲ್ಲಿ ನಿಗದಿತ ಬಾರಕ್ಕಿಂತ ಹೆಚ್ಚಿನ ಲೋಡ್ ಸೇರಿಕೊಂಡು ಸಂಚರಿಸಲು ಅನುಮತಿ ಇಲ್ಲದಿದ್ದರೂ ಈ ರಸ್ತೆಯಲ್ಲಿ ಸಾಗುತ್ತಿವೆ. ಇದರಿಂದಾಗಿ ರಸ್ತೆ ಹಲವೆಡೆ ಹಾನಿಯಾಗಿದೆ. ಈ ಘನ ವಾಹನಗಳಿಂದಾಗಿ ಹಲವು ಕಡೆ ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು...
ಪನತ್ತಡಿ ಗ್ರಾಮಪಂಚಾಯತ್ ವತಿಯಿಂದ ಕಲ್ಲಪ್ಪಳ್ಳಿಯಲ್ಲಿ, ವಿವಿಧ ಕಾಮಗಾರಿ ಗಳ ಉದ್ಘಾಟನಾ ಸಮಾರಂಭ ಕಲ್ಲಪ್ಪಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇರಳ ರಾಜ್ಯ ಸರಕಾರದ ಕಂದಾಯ ಸಚಿವರಾದ ಚಂದ್ರಶೇಖರವರು ನೆರವೇರಿಸಿದರು. 1,ಪಾಣತ್ತೂರು-ಕಲ್ಲಪ್ಪಳ್ಳಿ ರಸ್ತೆಯ 3ಕಿಮೀ ನಿಂದ 6ಕಿಮೀ ವರೇಗೆ 3ಕೋಟಿ ರೂಪಾಯಿ ಗಳಲ್ಲಿ ಪೂರ್ತಿಗೊಂಡ ರಸ್ತೆಯ ಉದ್ಘಾಟನೆ.2,ಊಡಿಯಾರದಲ್ಲಿ 68ಲಕ್ಷ ರೂಪಾಯಿ ಅನುದಾನಲ್ಲಿ ಪೂರ್ತಿ ಗೊಂಡ ವೆಂಟಿಲೇಟರ್ ಕಂ...
ಸುಳ್ಯ ಗಾಂಧಿನಗರ ಕೆ ಪಿ ಎಸ್ ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್ ನಾಯಕ್ ಹಾಗೂ ಪುಷ್ಪಲತಾ ದಂಪತಿಗಳ ಪುತ್ರಿ ಲಕ್ಷ್ಮಿ ರವರ 15 ನೇ ವರುಷದ ಹುಟ್ಟು ಹಬ್ಬವನ್ನು ಸೆ.21 ರಂದು ಸುಳ್ಯದ ಅಂಗಡಿಮಠ ಮನೆಯಲ್ಲಿ ಆಚರಿಸಲಾಯಿತು.
ಸುಳ್ಯ ಪೈಚಾರಿನಲ್ಲಿ ಸುಮಾರು 20 ವರ್ಷಗಳಿಂದ ಕಾರ್ಯಚರಿಸುತ್ತಿರುವ ಕೆಪಿ ಮೈದೀನ್ ರವರ ಮಾಲಕತ್ವದ ಫೈವ್ ಸ್ಟಾರ್ ಕಟ್ಲೇರಿ ಮಳಿಗೆ ನವೀಕೃತ ಗೊಂಡು ವಿಶಾಲಗೊಳಿಸಿ ನೂತನ ಮಾದರಿಯಲ್ಲಿ ಕಾರ್ಯಾರಂಭ ಗೊಂಡಿದೆ. ಇದೀಗ ಬೇಕರಿ ಹಾಗೂ ಸ್ವೀಟ್ಸ್ ಪದಾರ್ಥಗಳು ಸಂಸ್ಥೆಯಲ್ಲಿ ಲಭ್ಯವಿದ್ದು ಗ್ರಾಹಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .
ಲಾರಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡಿರುವ ಘಟನೆ ಸೆ.20ರಂದು ನಡೆದಿದೆ. ಇವರಿಬ್ಬರಿಗೂ ಇಂದು ಜಾಮೀನು ದೊರೆತಿದೆ ಎಂದು ತಿಳಿದುಬಂದಿದೆ. ಲಾರಿ ಚಾಲಕ ಬೆಳ್ಳಾರೆ ಗ್ರಾಮ ಕಾವಿನಮೂಲೆ ಅಬ್ದುಲ್ ಖಾದರ್ರವರ ಪುತ್ರ ಖಲಂದರ್(31.ವ) ಹಾಗೂ ಸವಣೂರು ಗ್ರಾಮದ...
ಸವಣೂರು : ಎಸ್ಕೆ ಎಸ್ ಎಸ್ ಎಫ್ ತ್ವಲಬ ವಿಂಗ್ ಸವಣೂರು ಕ್ಲಸ್ಟರ್ ಪ್ರತಿನಿಧಿ ಸಂಗಮ ಪರಣೆ ಮದ್ರಸ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಣೆ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಕುಂಬಮೂಲೆ ರವರು ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಚಾಪಲ್ಲ ದರ್ಸ್ ವಿದ್ಯಾರ್ಥಿ ಮನ್ಸೂರ್ ಖಿರಾಅತ್ ಪಠಿಸಿದರು. ಸ್ಥಳೀಯ ಖತೀಬ್ ಬಶೀರ್ ದಾರಿಮಿ ದುಆ ನೆರವೇರಿಸಿದರು....
Loading posts...
All posts loaded
No more posts
