- Tuesday
- August 4th, 2026
ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.03 ಮಂಗಳವಾರದಂದು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶ್ರೀ ದೇವರ ದರುಶನ ಹಾಗೂ ಸೇವೆಗಳಲ್ಲಿ ವ್ಯತ್ಯಯ ಮಾಡಲಾಗಿದ್ದು, ಭಕ್ತರು ಸಹಕರಿಸಬೇಕಾಗಿ ಶ್ರೀ ದೇವಳದ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಸರ್ಪಸಂಸ್ಕಾರ ಪ್ರಾರಂಭ ಇಲ್ಲ : ಮಾ.02 ಸೋಮವಾರ ಮತ್ತು ಮಾ.03 ಮಂಗಳವಾರದಂದು ಸರ್ಪಸಂಸ್ಕಾರ ಪೂಜೆ ಪ್ರಾರಂಭವಿರುವುದಿಲ್ಲ. ಮಾ.03ರಂದು ಯಾವುದೇ ಸೇವೆಗಳು...
ಜಾತ್ಯಾತೀತ ಜನತಾದಳ ದ.ಕ ಜಿಲ್ಲಾಧ್ಯಕ್ಷರಾಗಿ ಜಾಕೆ ಮಾಧವ ಗೌಡರು ಪುನರಾಯ್ಕೆಗೊಂಡಿದ್ದು,ಜೆ.ಡಿ.ಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೆಗೌಡರು ಈ ನೇಮಕವನ್ನು ಮಾಡಿದ್ದಾರೆ.ಫೆ.07 ರಂದು ಬೆಂಗಳೂರಿನಲ್ಲಿ ನಡೆದ ಜೆ.ಡಿ.ಎಸ್ ಕಾರ್ಯಕಾರಿಣಿ ಸಭೆಯಲ್ಲಿ ನೇಮಕದ ಆದೇಶ ಪತ್ರವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಕೊಟ್ಟು ಶುಭಾಶಯ ಸಲ್ಲಿಸಿದರು.ಜಾಕೆ ಮಾಧವ ಗೌಡರು ಈ ಹಿಂದಿನ ಅವಧಿಗೂ ಅಧ್ಯಕ್ಷರಾಗಿದ್ದರು.
ದಿನಾಂಕ 10.02.2026 ಮಂಗಳವಾರ*01,🐏ಮೇಷರಾಶಿ🐏*📖,ನಿಮ್ಮ ಮಾತುಗಳನ್ನು ಸರಿಯಾಗಿ ಸಾಬೀತುಪಡಿಸಲು ಇಂದು ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಜಗಳವಾಡಬಹುದು. ಇಂದು ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಯೋಚಿಸುವ ಕೆಲಸಗಳನ್ನು ಮಾಡುತ್ತೀರಿ.ಪರಿಹಾರ:-ಶ್ರೀ ಆಂಜನೇಯ ಸ್ವಾಮಿಯ ದರ್ಶನ ಮಾಡಿ,*02,🐂ವೃಷಭರಾಶಿ🐂*📖,ಏನಾದರೂ ಆಸಕ್ತಿದಾಯಕವಾದದ್ದನ್ನು ಓದುವ ಮೂಲಕ ಮಾನಸಿಕ ವ್ಯಾಯಾಮ ಮಾಡಿ. ಆರ್ಥಿಕ ದೃಷ್ಟಿಯಿಂದ ಈ ದಿನ ಮಿಶ್ರ ಫಲದಾಯಕವಾಗಿದೆ. ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ನಿಮ್ಮ...
ಬೆಳ್ಳಾರೆಯ ಅಂಗನವಾಡಿ ಕೇಂದ್ರದಲ್ಲಿ ಪೋಷಕರ ಸಂಭ್ರಮ-2026 ಇಂದು(ಫೆ. 9) ಬೆಳಿಗ್ಗೆ 11 ಘಂಟೆಗೆ ಬೆಳ್ಳಾರೆಯ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.ಬೆಳ್ಳಾರೆ ಅಂಗನವಾಡಿಯ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ದೇವಿಕಾ ಕೆ .ಅಧ್ಯಕ್ಷತೆಯನ್ನು ವಹಿಸಿದ್ದರು.ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಮಿತಾ ಎಲ್.ರೈ ಉದ್ಘಾಟನೆ ಕಾರ್ಯ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ...
ಸುಳ್ಯದ ಸಂತ ಜೋಸೆಫ್ ಶಾಲೆಯಲ್ಲಿ ರಾಷ್ಟ್ರಮಟ್ಟದ ಯೋಗ ಹಾಗೂ ರಾಜ್ಯಮಟ್ಟದ ಗೀತಾ ಗಾಯನ ಸ್ಪರ್ಧೆಗಳಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಅವರಿಗೆ ತರಬೇತಿ ಹಾಗು ಪ್ರೋತ್ಸಾಹ ನೀಡಿದ ಶಿಕ್ಷಕರುಗಳಿಗೆ ಅಭಿನಂದನ ಕಾರ್ಯಕ್ರಮವು ಫೆ.09 ರಂದು ನಡೆಯಿತು. ಸಾಧಕರನ್ನು ಜ್ಯೋತಿ ಸರ್ಕಲ್ ನಿಂದ ಶಾಲಾ ವಠಾರದವರೆಗೆ ತೆರೆದ ಜೀಪಿನಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು...
ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ನೂತನ ವಿಸ್ತೃತ ಕಟ್ಟಡದಲ್ಲಿ ಪ್ರಾಂಶುಪಾಲರ ಕೊಠಡಿ ಮತ್ತು ಕಚೇರಿಯನ್ನು ಉದ್ಘಾಟಿಸಲಾಯಿತು. ಪುರೋಹಿತ್ ಶ್ರೀ ನಾಗರಾಜ ಭಟ್ಟರವರು ಗಣ ಹೋಮವನ್ನು ನೆರವೇರಿಸಿದರು. ನೂತನ ಕೊಠಡಿಯನ್ನು ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ನಿರ್ದೇಶಕರು ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಸಂಜೀವ ಮಠಂದೂರುರವರು ಉದ್ಘಾಟಿಸಿ ಶುಭ ಹಾರೈಸಿದರು....
ಸುಬ್ರಹ್ಮಣ್ಯ : “ಭಜನೆಯಿಂದ ಜ್ಞಾನದೊಂದಿಗೆ ಏಕಾಗ್ರತೆ ಮತ್ತು ಮಾನಸಿಕ ನೆಮ್ಮದಿ ಅದ್ವಿತೀಯವಾಗುತ್ತದೆ. ಸಾಮರಸ್ಯತೆ ಮತ್ತು ಒಗ್ಗಟ್ಟು ಬೆಳೆಯಲು ಭಜನೆಯಂತಹ ಕಾರ್ಯಕ್ರಮಗಳು ಅತ್ಯಗತ್ಯ. ನಮ್ಮ ದೇಶದ ಆಧ್ಯಾತ್ಮಿಕ ಪರಂಪರೆಗಳಾದ ಯೋಗ, ಧ್ಯಾನಗಳು ವಿಶ್ವ ಮಾನ್ಯತೆಯನ್ನು ಪಡೆದಿದೆ. ಪ್ರತಿ ಮನೆಮನೆಗಳಲ್ಲಿ ಭಜನಾ ಸಂಸ್ಕೃತಿ ಬೆಳೆಯಬೇಕು. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಭಜನೆಯನ್ನು ಯುವ ಜನಾಂಗ ಉಳಿಸಿ ಬೆಳೆಸುವತ್ತ ಪ್ರಯತ್ನಿಸಬೇಕು” ಎಂದು...
ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹರಿಹರ ಪಳ್ಳತ್ತಡ್ಕ ಹಾಗೂ ತೋಟಗಾರಿಕಾ ಇಲಾಖೆ ಸುಳ್ಯ ಇದರ ಸಹಯೋಗದೊಂದಿಗೆ “ಕಾಫಿ ಬೆಳೆ ಮತ್ತು ಕಾಳುಮೆಣಸು ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ”ವು ಫೆ.11 ಬುಧವಾರದಂದು ಬೆಳಿಗ್ಗೆ 10:30ಕ್ಕೆ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಹರಿಹರ ಪಳ್ಳತ್ತಡ್ಕದ ಪ್ರಧಾನ ಕಚೇರಿಯ ವಠಾರದಲ್ಲಿ ನಡೆಯಲಿದ್ದು, ಪ್ರಗತಿಪರ ಕೃಷಿಕರಾದ...
ಸಿರಾಜುಲ್ ಇಸ್ಲಾಂ ಕಮಿಟಿ ಪಳ್ಳಿಮಜಲು ಹಾಗೂ ಎಸ್ಸೆಸ್ಸೆಫ್ ಪಳ್ಳಿಮಜಲು ಘಟಕದ ಆಶ್ರಯದಲ್ಲಿಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಜುಮುಅ: ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಫೆ 8 ರಂದು ಮುಸ್ಸಂಜೆ ಮಗ್ರಿಬ್ ನಮಾಝಿನ ನಂತರ ನಡೆಯಿತು.ಪಳ್ಳಿಮಜಲು ಜುಮುಅ: ಮಸೀದಿಯ ಖತೀಬರಾದ ಮುಹಮ್ಮದ್ ರಫೀಖ್ ಬಾಹಸನಿ ನೇತೃತ್ವ ನೀಡಿದರು.ಇಶಾ: ನಮಾಝಿನ ನಂತರ 'ರಮಲಾನ್ ತಿಂಗಳಿಗೆ ಪೂರ್ವ ಸಿದ್ಧತಾ ತರಗತಿ'ಎಂಬ...
ದೇವಚಳ್ಳ ಗ್ರಾಮ ಪಂಚಾಯತ್ 15ನೇ ಹಣಕಾಸು ಹಾಗೂ ಉದ್ಯೋಗಖಾತ್ರಿ ಯೋಜನೆ ಯಲ್ಲಿ ನಿರ್ಮಾಣಗೊಂಡ ಮುಳಿಯಡ್ಕ - ವಾಲ್ತಾಜೆ ಕಾಂಕ್ರೀಟ್ ರಸ್ತೆಯನ್ನು ಶ್ರೀಮತಿ ಕಮಲ ಕೊಂಬೊಟ್ಟು ರಿಬ್ಬನ್ ಎಳೆಯುವುದರ ಮೂಲಕ ಚಾಲನೆ ನೀಡಿದರು.ಗುಡ್ಡಪ್ಪ ಗೌಡ ಪಿಲಿಂಜ ದೀಪ ಬೆಳಗಿಸಿದರು. ಗುತ್ತಿಗಾರು ಸೊಸೈಟಿ ನಿರ್ದೇಶಕ ಪದ್ಮನಾಭ ಮೀನಾಜೆ ತೆಂಗಿನಕಾಯಿ ಹೊಡೆದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು,...
Loading posts...
All posts loaded
No more posts
