Ad Widget

ಆಡು,ಕೋಳಿ,ಹಂದಿ ಮರಿ ಬೇಕಾಗಿದೆ

ಊರು ಕೋಳಿ ಮರಿ ,ಹಂದಿ ಮರಿ, ಊರು ಹಸು, ಮೇಕೆ ಮರಿ ಬೇಕಾಗಿದೆ. ಮಾರಲಿಚ್ಚಿಸುವವರು ಸಂಪರ್ಕಿಸಿ ಮೊ: 9449451328

ಎಲಿಮಲೆ ಸೇವಾಜೆ ರಸ್ತೆ ಬದಿ ಸ್ವಚ್ಛತೆ

ಶ್ರೀಕೃಷ್ಣ ಸಾಂಸ್ಕೃತಿಕ ಸೇವಾ ಸಮಿತಿ ಸೇವಾಜೆ ಇದರ ವತಿಯಿಂದ ಸೇವಾಜೆ ಶಾಲಾ ವಠಾರ ಮತ್ತು ಸೇವಾಜೆಯಿಂದ ಎಲಿಮಲೆ ವರೆಗೆ ರಸ್ತೆ ಬದಿಯ ಗಿಡಗಂಟಿಗಳನ್ನು ಕಡಿದು ಸ್ವಚ್ಚಗೊಳಿಸುವ ಮೂಲಕ ಶ್ರಮಸೇವ ಇಂದು ಮಾಡಲಾಯಿತು
Ad Widget

ಕ್ವಾರಂಟೈನ್ ಉಲ್ಲಂಘನೆ – ಕೆವಿಜಿ ವೈದ್ಯಕೀಯ ಕಾಲೇಜಿನ ಐವರು ವೈದ್ಯರೆಂದು ಕೇಸು ದಾಖಲು – ನಮ್ಮ ಸಂಸ್ಥೆಯ ವೈದ್ಯರಲ್ಲ ಕೆವಿಜಿ ಸಂಸ್ಥೆಯಿಂದ ಸ್ಪಷ್ಟನೆ

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಸುಳ್ಯ ಕೆವಿಜಿ ವೈದ್ಯಕೀಯ ಕಾಲೇಜಿನ ಐವರು ವೈದ್ಯರು ಎಂದು ಪರಿಗಣಿಸಿದ ಜಿಲ್ಲಾಡಳಿತ ಸುಳ್ಯ ಪೊಲೀಸ್ ಠಾಣೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.ಮಾಧ್ಯಮ ಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಕೆವಿಜಿ ಸಂಸ್ಥೆಯ ವಕ್ತಾರರು ಮಾಧ್ಯಮ ಗಳಿಗೆ ಸ್ಪಷ್ಟನೆ ನೀಡಿ ನಮ್ಮ ಸಂಸ್ಥೆಯ ವೈದ್ಯರು ಅಲ್ಲ ,ಸಿಬ್ಬಂದಿಯೂ ಅಲ್ಲ ಎಂದಿದೆ. ನಮ್ಮಲ್ಲಿರುವ ಯಾರೂ ಕ್ವಾರೆಂಟೈನ್...

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಸದಸ್ಯರಿಂದ ಮೊಗರ್ಪಣೆ ಸೇತುವೆಯ ದುರಸ್ತಿ

*ಪೈಚಾರು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಸಮಿತಿಯ ಸದಸ್ಯರು ಮೊಗರ್ಪಣೆ ಸೇತುವೆಯ ದುರಸ್ತಿ ಗೊಂಡಿರುವ ಭಾಗವನ್ನು ಕಾಂಕ್ರೀಟ್ ತುಂಬಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟರು*. ಕಳೆದ ಬಾರಿ ಕೆಆರ್ ಡಿಸಿಎಲ್ ವತಿಯಿಂದ ರಸ್ತೆ ಡಾಮರೀಕರಣ ಸಂದರ್ಭದಲ್ಲಿ ಸೇತುವೆಯ ಮೇಲ್ಭಾಗಕ್ಕೆ ಸಂಪೂರ್ಣ ಡಾಮರೀಕರಣ ಗೊಳಿಸಲಾಗಿತ್ತು. ಆದರೆ ದಿನಗಳು ಕಳೆದಂತೆ ಸೇತುವೆಯ ಸಸ್ಪೆನ್ಸನ್ ಜಾಯಿಂಟ್ ಬಳಿ ಡಾಮರು ಬಿಟ್ಟು ಹೋಗಿದ್ದು...

ಕಲ್ಲುಗುಂಡಿ – ಆಡು ಕದ್ದು ಸಿಕ್ಕಿ ಬಿದ್ದ ಪಿಂಟು

ಆಡು ಕದ್ದು ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಟಯರು ಹೂತು ಹೋಗಿ ಆಡು ಕಳ್ಳ ಸಿಕ್ಕಿಬಿದ್ದ ಘಟನೆ ಕಲ್ಲುಗುಂಡಿಯಲ್ಲಿ ಜು.17 ರಂದು ನಡೆದಿದೆ. ನೆಲ್ಲಿಕುಮೇರಿಯ ವಿನ್ಸೆಂಟ್ ಎಂಬುವರ ಆಡು ನಿನ್ನೆ ಸಾಂಯಕಾಲ ಕಾಣೆಯಾಗಿದ್ದು ಹುಡುಕಾಡಿದಾಗ ಕೆಎಫ್ ಡಿಸಿಯ ರಬ್ಬರ್ ತೋಟದಲ್ಲಿ ಟಯರ್ ಹೂತು ಹೊಗಿ ಬಾಕಿಯಾಗಿದ್ದ ರಿಕ್ಷಾದಲ್ಲಿ ಆಡು ಕಟ್ಟಿಹಾಕಿದ್ದು ಊರಿನವರಿಗೆ ತಿಳಿಯಿತು. ಜನ ಸೇರಿದಾಗ...

ದನಸಾಗಾಟ ಅಕ್ರಮವಲ್ಲ. ಹಾಲು ಉತ್ಪಾದನೆಗಾಗಿ ಹಸುಗಳನ್ನು ಖರೀದಿಸಲಾಗಿದೆ. ದಾಖಲೆಗಳು ಇದ್ದರು ನಮ್ಮನ್ನು ಅಪರಾಧಿಗಳನ್ನಾಗಿಸಿರುವುದು ಸರಿಯಲ್ಲ – ಮಹಿಳೆ ಹೇಳಿಕೆ

ಜುಲೈ 14 ರಂದು ಪುತ್ತೂರು ಕಾವು ನಿಂದ ಸುಳ್ಯಕ್ಕೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಪಡೆದ ಬಜರಂಗದಳದ ಯುವಕರು ಕನಕಮಜಲಿನಲ್ಲಿ ಕಾದು ಕುಳಿತು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿ ನಂತರ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಕಾರ್ಯಾಚರಣೆಯಲ್ಲಿ ಬಾರಿ ಸಾಹಸಮಯ ರೀತಿಯಲ್ಲಿ ಪಿಕಪ್ ವಾಹನವನ್ನು ಹಾಗೂ ದನಸಾಗಾಟ ದಲ್ಲಿ ಭಾಗಿಯಾದ ವ್ಯಕ್ತಿಯನ್ನು...

ಹೀಗೂ ಉಂಟೇ!!! ದನದ ರಕ್ತ ಹೀರಿದ ಮರ-ಜೋಯಿಡಾದಲ್ಲೊಂದು ಅಚ್ಚರಿಯ ಘಟನೆ-ವೈರಲ್ ಆದ ವಿಡಿಯೋ ಇಲ್ಲಿದೆ

ಕಾರವಾರ: ಕೆಲವು ಗಿಡ, ಮರಗಳು ಪ್ರಾಣಿಯ ರಕ್ತ ಹೀರುತ್ತವೆ, ಕೀಟಗಳನ್ನು ತಿನ್ನುತ್ತವೆ ಎನ್ನುವುದನ್ನು ಕೇಳಿರಬಹುದು. ಈ ಸುದ್ದಿ ನಿಜ ಎನ್ನುವಂತೆ ಸಾವಿರಾರು ವರ್ಷಗಳಿಂದ ತನ್ನ ಮಡಿಲಿನಲ್ಲಿ ಅಪರೂಪದ ವನಸಿರಿಯನ್ನು ಹೊತ್ತು ನಿಂತಿರುವ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಸಮೀಪದ ಹನ್ನೊಲ್ಲಿಯಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಕಾಡಿನಲ್ಲಿ...

ಏನೆಕಲ್ಲು : ಅರಣ್ಯ ಪ್ರದೇಶದಿಂದ ಮರ ಕಡಿದ ವ್ಯಕ್ತಿ ಇಲಾಖೆ ವಶ

ಬಳ್ಪ ಮೀಸಲು ಅರಣ್ಯ ಪ್ರದೇಶದಿಂದ ಮರ ಕಡಿದ ಆರೋಪದಲ್ಲಿ ಮನೋಜ್ ಮಾಣಿಬೈಲು ಎಂಬುವರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಏನೆಕಲ್ಲು ಗ್ರಾಮದ ಮಾಣಿಬೈಲು ಸಮೀಪದ ಮೀಸಲು ಅರಣ್ಯ ದಿಂದ ಒಣಗಿದ ಸಾಗುವಾನಿ ಮರ ಕಡಿದು ಸಾಗಿದ್ದಾರೆಂಬ ಮಾಹಿತಿ ಪಡೆದ ಪಂಜ ಅರಣ್ಯ ಇಲಾಖೆಯವರು ರೇಂಜರ್ ಗಿರೀಶ್ ಆರ್ . , ಬಳ್ಪ...

ಬೊಳುಬೈಲು : ವಿದ್ಯುತ್ ಕಂಬಕ್ಕೆ ಪಿಕಪ್ ಡಿಕ್ಕಿ

ಬೊಳುಬೈಲು ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಜು.17 ರಂದು ನಡೆದಿದೆ. ಪರಿಣಾಮ ಪಿಕಪ್ ಜಖಂ ಗೊಂಡಿದ್ದು ವಿದ್ಯುತ್ ಕಂಬ ಮುರಿದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಪೇರಾಲಿನ ವಕ್ರತುಂಡ ಪಿಕಪ್ ಎಂದು ತಿಳಿದುಬಂದಿದೆ.

ನಾಳೆ ದಕ ಸಂಪೂರ್ಣ ಲಾಕ್ಡೌನ್! ಅಗತ್ಯ ವಸ್ತುಗಳು ಕೂಡ ಸಿಗೋದಿಲ್ಲ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಪೂರ್ತಿ ಲಾಕ್ ಡೌನ್ ಇರಲಿದೆ. ಪ್ರತಿ ದಿನ ಬೆಳಿಗ್ಗೆ 8 ರಿಂದ 11 ಗಂಟೆಯ ಲಾಕ್ ಡೌನ್ ರಿಯಾಯಿತಿ ನಾಳೆ ಇರುವುದಿಲ್ಲ. ನಾಳೆ ಕಟ್ಟುನಿಟ್ಟಿನ ಲಾಕ್ಡೌನ್ ಹೇರಿರುವ ಡಿಸಿ, ಲಾಕ್ಡೌನ್ ನಿಯಮಗಳನ್ನು ಮೀರಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಖಡಕ್...
Loading posts...

All posts loaded

No more posts

error: Content is protected !!