Ad Widget

ಚೆಂಬು : ಕಾಡಾನೆ‌ ದಾಳಿಗೆ ಅಪಾರ ಪ್ರಮಾಣದ ಕೃಷಿ ನಾಶ

ಕಾಡಾನೆ ದಾಳಿ ನಡೆಸಿ ಕೊಡಗು ಜಿಲ್ಲೆಯ ಚೆಂಬು ಗ್ರಾಮದ ನಿಡಿಂಜಿ ಗುಡ್ಡೆ ಮೋಹಿನಿ ಯವರ ಅಡಿಕೆ ತೋಟದ ಸುಮಾರು 40 ಹೆಚ್ಚು ಅಡಿಕೆ ಮರಗಳನ್ನು ನಾಶ ಮಾಡಿವೆ. ಅಲ್ಲದೆ ತೆಂಗು ಬಾಳೆ ಅಡಿಕೆ ಮರಳನ್ನು ಮುರಿದು ಹಾಕಿವೆ ಎಂದು ತಿಳಿದು ಬಂದಿವೆ. ಇಲ್ಲಿಯ ತೋಟಕ್ಕೆ ಕಳೆದ ಕೆಲವು ವರ್ಷಗಳಿಂದ ನಿರಂತರ ಆನೆ ದಾಳಿ ನಡೆಸುತ್ತಿವೆ ನಡೆಯುತ್ತಿವೆ.

ಅಚ್ರಪ್ಪಾಡಿ ಶಾಲೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಯಧನ ಹಸ್ತಾಂತರ

ದೇವಚಳ್ಳ‌ ಗ್ರಾಮದ ಅಚ್ರಪ್ಪಾಡಿ ಸ.ಕಿ.ಪ್ರಾ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಸಹಾಯಧನವನ್ನು ಶಾಲಾ ಆವರಣ ಗೋಡೆ ರಚನೆಗಾಗಿ ಮಂಜೂರಾತಿ ಮಾಡಿದ್ದು ಈ ಮಂಜೂರಾದ ಹಣವನ್ನು ಗುತ್ತಿಗಾರು ವಲಯದ ಮೇಲ್ವಿಚಾರಕರು ಸುಧೀರ್ ನೆಕ್ರಾಜೆ ಮತ್ತು ಸೇವಾಪ್ರತಿನಿಧಿ ಉಷಾಲತಾ ಇವರು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹರೀಶ ಕಡಪಳ ಇವರಿಗೆ ಮಂಗಳವಾರ...
Ad Widget

ಸೆ.17 : ಕಂದ್ರಪ್ಪಾಡಿಯಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣೆ

ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿಇದರ ಆಶ್ರಯದಲ್ಲಿ ಭಾರತ ಸರಕಾರದ ಆರೋಗ್ಯ ಇಲಾಖೆಯ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಶಿಬಿರ ಸೆ. 17 ಗುರುವಾರದಂದು ಬೆ.ಗಂಟೆ 8 ರಿಂದ ಸಂಜೆ ಗಂಟೆ 5ರ ತನಕ ಕಂದ್ರಪ್ಪಾಡಿ ಶಾಲಾ ವಠಾರದಲ್ಲಿ ನಡೆಯಲಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಇಚ್ಚಿಸುವವರು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಯನ್ನು ತರಬೇಕು ಹಾಗೂ...

ಸುಳ್ಯ ಮಂಡಲಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರ ತಂಡ ಭೇಟಿ

ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ದ ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ, ಉಪಾಧ್ಯಕ್ಷ , ಸುಳ್ಯ ಪ್ರಭಾರಿ ಬೂಡಿಯಾರು ರಾಧಾಕೃಷ್ಣ ರೈ , ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಬೆಳ್ತಂಗಡಿ, ಜಿಲ್ಲಾ...

ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ – ಮಲ್ಲಾಡ್ ಕ್ಯಾಶ್ ಫ್ಯಾಕ್ಟರಿ ಮಾಲಕ ಹಾಜಿ ಅಬ್ದುಲ್ಲಾ ಎಸ್ ನಿಧನ

ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷರು ಮಲ್ಲಾಡ್ ಕ್ಯಾಶ್ ಫ್ಯಾಕ್ಟರಿ ಮಾಲಕರು ಹಾಜಿ ಅಬ್ದುಲ್ಲಾ ಎಸ್ . ಸೆ .16 ರಂದು ಅಲ್ಪಕಾಲದ ಅಸೌಖ್ಯದಿಂದ ಗಾಂಧಿನಗರ ಗುರುಂಪು ಮನೆಯಲ್ಲಿ ನಿಧನರಾದರು . ಅಬ್ದುಲ್ಲಾ ರವರು ಹಲವಾರು ವರ್ಷಗಳ ಕಾಲ ಗಾಂಧಿನಗರ ಜುಮಾ ಮಸ್ಜಿದ್ ಇದರ ಪ್ರತಿಯೊಂದು ಕಾರ್ಯದಲ್ಲಿಯೂ ಕೂಡ ಸುಮಾರು 40 ,45 ವರ್ಷಗಳಿಂದ ತಮ್ಮನ್ನು...

ಪ್ರಬಂಧ ಸ್ಪರ್ಧೆಯಲ್ಲಿ ವಿನುತಾ ಪೈಲೂರು ಪ್ರಥಮ

ಬೈರ ಯುವ ವೇದಿಕೆ ಇದರ ಆಶ್ರಯದಲ್ಲಿ ಏರ್ಪಡಿಸಿದ, 'ನಿಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಅಂಬೇಡ್ಕರ್ ಬಾಲ್ಯಜೀವನ ಹೇಗೆ ಸ್ಪೂರ್ತಿದಾಯಕ?' ಎಂಬ ವಿಷಯದ ಕುರಿತಾದ ಅಂಬೇಡ್ಕರ್ ಜೀವನಾಧಾರಿತ ಪ್ರಬಂಧ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ವಿನುತಾ ಪೈಲೂರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಗಿರಿಜ ಸುಬ್ಬ ಪೈಲೂರುರವರ ಮಗಳು,ಇವರು ಜೂನಿಯರ್ ಕಾಲೇಜು ಸುಳ್ಯದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ...

ಹಿಂದಿ ಭಾಷಣ ಸ್ಪರ್ಧೆ – ಪುತ್ತೂರಿನ ಫಿಲೊಮಿನಾ ಕಾಲೇಜಿನ ವಿದ್ಯಾರ್ಥಿನಿ ಸ್ನಿಗ್ಧ ಎಮ್ ಜೆ ಪ್ರಥಮ

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಆನ್ ಲೈನ್ ಹಿಂದಿ ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟಡಾ. ದಯಾನಂದ ಪೈ, ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥ ಬೀದಿ, ಮಂಗಳೂರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ ವತಿಯಿಂದ 2020 ರ ಹಿಂದಿ ದಿನಾಚರಣೆ ಪ್ರಯುಕ್ತ ಮೊದಲ ಬಾರಿಗೆ ಆನ್ ಲೈನ್ ಹಿಂದಿ ಭಾಷಣ...

ಗುರುಪ್ರಕಾಶ್ ಕೇಬಲ್ ನೆಟ್ವರ್ಕ್ ಮಾಲಕ ಗುರುದತ್ ನಾಯಕ್ ನಿಧನ

ಸುಳ್ಯದ ಗುರು ಪ್ರಕಾಶ್ ಕೇಬಲ್ ನೆಟ್ ವರ್ಕ್ ಮಾಲಕ, ಹಿರಿಯ ಉದ್ಯಮಿ ಹಾಗೂ ಕ್ರೀಡಾ ಪ್ರೋತ್ಸಾಹಕ ಗುರುದತ್ ನಾಯಕ್ ರವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ ಸುಮಾರು 54 ವರ್ಷ ವಯಸ್ಸಾಗಿತ್ತು.ಕಿಡ್ನಿ ಸಮಸ್ಯೆಯಿಂದ ಕೆಲ ಸಮಯದಿಂದ ಬಳಲುತ್ತಿದ್ದ ಅವರಿಗೆ ಡಯಾಲಿಸಿಸ್ ಆರಂಭಿಸಲಾಗಿತ್ತು. ವಾರದ ಹಿಂದೆ ಅಸೌಖ್ಯ ಉಲ್ಬಣಗೊಂಡಿತ್ತು. ಅವರ ಅಂತ್ಯ ಸಂಸ್ಕಾರ...

ಅಡ್ಕಾರ್ ಬಳಿ ಕಾರು- ಪಿಕಪ್ ಡಿಕ್ಕಿ

ಅಡ್ಕಾರ್ ಬಳಿ ಕಾರು ಮತ್ತು ಪಿಕಪ್ ಮುಖಾಮುಖಿ ಡಿಕ್ಕಿಯಾದ ಘಟನೆ ಇಂದು ನಡೆದಿದೆ.

ಅಲೆಂಗಾರ : ಯುವಕ ಮೃತ್ಯು

ಎಣ್ಮೂರು ಗ್ರಾಮದ ಅಲೆಂಗಾರದ ಯುವಕನೊಬ್ಬ ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೆ .15 ರಂದು ನಡೆದಿದೆ . ಎಣ್ಮೂರು ಗ್ರಾಮದ ಅಲೆಂಗಾರ ಬಾಲಕೃಷ್ಣ ಗೌಡರ ಪುತ್ರ ಕಾರ್ತಿಕ್ ಮೃತಪಟ್ಟ ದುರ್ದೈವಿ . ಅವರಿಗೆ 25 ವರ್ಷ ವಯಸ್ಸಾಗಿತ್ತು . ಅವರು ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರೆಂದು ತಿಳಿದುಬಂದಿದೆ....
Loading posts...

All posts loaded

No more posts

error: Content is protected !!