Ad Widget

ಅಡ್ಕಾರು ಸರಣಿ ಅಪಘಾತ – ವಾಹನಗಳು ಜಖಂ

ಇನೋವಾ, ಜೀಪು ಹಾಗೂ ಸ್ಕೂಟಿ ಮಧ್ಯೆ ಸರಣಿ ಅಪಘಾತ ಸಂಭವಿಸಿದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಸೆ.20 ರಂದು ಸಂಭವಿಸಿದೆ.ಮಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಇನೋವಾ ಕಾರು ಅಡ್ಕಾರು ಅಯ್ಯಪ್ಪ ಮಂದಿರದ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹಾಗೂ ಜೀಪಿಗೆ ಡಿಕ್ಕಿ ಹೊಡೆದು ಮೂರೂ ವಾಹನಗಳು ಜಖಂಗೊಂಡಿದೆ. ಇನೋವಾದಲ್ಲಿ ಒಟ್ಟು ನಾಲ್ವರು ಪ್ರಯಾಣಿಕರಿದ್ದು,...

ಪೆರುವಾಜೆ : ಪ್ರಧಾನಮಂತ್ರಿ ಪ್ರಜಾ ಸುರಕ್ಷಾ ಯೋಜನೆಗಳ ಉಚಿತ ನೋಂದಣಿ ಶಿಬಿರ

ಭಾರತೀಯ ಜನತಾ ಪಾರ್ಟಿ, ಗ್ರಾಮ ಸಮಿತಿ ಪೆರುವಾಜೆ ಇದರ ವತಿಯಿಂದ ಪ್ರಧಾನಮಂತ್ರಿ ಪ್ರಜಾ ಸುರಕ್ಷಾ ಯೋಜನೆಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳ ಉಚಿತ ನೋಂದಣಿ ಶಿಬಿರವು ಸೆ.20 ರಂದು ಪೆರುವಾಜೆಯ ಜೆ.ಡಿ. ಆಡಿಟೋರಿಯಂನಲ್ಲಿ ಜರುಗಿತು. ಶಿಬಿರವನ್ನು ನಂದಿ ಅಸೋಸಿಯೇಟ್ಸ್ ಬೆಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಶ್ರೀ ಲಕ್ಷ್ಮೀನಾರಾಯಣ ಐವರ್ನಾಡು...
Ad Widget

ಅರಂಬೂರು : ಮಾನಸಿಕ ಅಸ್ವಸ್ಥತೆ ಬಾಲಕಿಯ ಮೇಲೆ ಕಿರುಕುಳ – ಪೊಲೀಸ್ ದೂರು

ಸುಳ್ಯ ಅರಂಬೂರು ಬಳಿ ಮಾಣಿ-ಮೈಸೂರು ರಸ್ತೆಯ ಬದಿ ಒಂದು ಬಡಕುಟುಂಬ ವಾಸಿಸುತ್ತಿದ್ದು ಮನೆಯಲ್ಲಿ ತಾಯಿ ಮತ್ತು ಒಬ್ಬ ಅಸ್ವಸ್ಥ ಮಗಳು ಮಾತ್ರ ಜೀವನ ಸಾಗಿಸುತ್ತಿದ್ದಾರೆ. ಸೆಪ್ಟೆಂಬರ್ 19ರಂದು ಮನೆಯಲ್ಲಿ ಇದ್ದ ಮಾನಸಿಕವಾಗಿ ಅಸ್ವಸ್ಥ ಗೊಂಡಿರುವ 17 ವರ್ಷದ ಬಾಲಕಿ ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದರು. ನಂತರ ಮನೆಯವರು ಮತ್ತು ಸ್ಥಳೀಯರು ಹುಡುಕಾಡಿದರು ಎಲ್ಲಿಯೂ ಪತ್ತೆಯಾಗಿರಲಿಲ್ಲ. ಕೆಲ ಗಂಟೆಗಳ...

ಬಾಳಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ದಯಾನಂದ ಪಂಜಿಗಾರು ನಿಧನ

ಬಾಳಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ದಯಾನಂದ ಪಂಜಿಗಾರು ಅಸೌಖ್ಯದಿಂದ ಸೆ. 19 ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಶ್ರೀಮತಿ ಪೂರ್ಣಿಮಾ, ಪುತ್ರ ಕಾರ್ತಿಕ್, ಸಹೋದರರಾದ...

ಗರುಡ ಯುವಕ ಮಂಡಲ (ರಿ)ಚೊಕ್ಕಾಡಿ ಮಹಾಸಭೆ – ಅಧ್ಯಕ್ಷರಾಗಿ ಹರೀಶ್ ನೆಕ್ರಾಜೆ – ಕಾರ್ಯದರ್ಶಿ ಮನೋಜ್ ಪಡ್ಪು – ಖಜಾಂಜಿ ವಿಜೇತ್ ಕೊಳಂಬೆ

Harish nekraje Manoj padpu Vijeth kolambe ಗರುಡ ಯುವಕ ಮಂಡಲ ಚೊಕ್ಕಾಡಿ ಇದರ 2019- 2020 ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು 2020-2021 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ  ಪದಗ್ರಹಣ ಕಾರ್ಯಕ್ರಮ ಗರುಡ ಯುವಕ ಮಂಡಲದಲ್ಲಿ  ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗರುಡ  ಯುವಕ ಮಂಡಲದ ಅಧ್ಯಕ್ಷರಾದ ಸತೀಶ್ ಪಿಲಿಕಜೆ ವಹಿಸಿದ್ದರು,ಅತಿಥಿಗಳಾಗಿ...

ಇಂದ್ರಾಜೆ : ಸುಮಂಗಲ ಸಂಜೀವಿನಿ ಒಕ್ಕೂಟದಿಂದ ಶ್ರಮದಾನ

ಬಾಳಿಲ ಗ್ರಾಮ ಪಂಚಾಯತ್ ಮಟ್ಟದ ಸುಮಂಗಲ ಸಂಜೀವಿನಿ ಒಕ್ಕೂಟದ ಸದಸ್ಯರಿಂದ ಇಂದು (ಸೆ.19) ಇಂದ್ರಾಜೆ ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ನಡೆಯಿತು. ಶ್ರಮದಾನದ ಅಂಗವಾಗಿ ಕೃಷಿ ಚಟುವಟಿಕೆಗೆ ಪೂರಕವಾಗುವಂತೆ ತೆಂಗಿನಗುಂಡಿಗಳನ್ನು ರಚಿಸಲಾಯಿತು.

ಕಬಡ್ಡಿ ಮತ್ತು ವಾಲಿಬಾಲ್ ಎಸೋಸಿಯೇಶನ್ ವತಿಯಿಂದ ಹಾಜಿ ಅಬ್ದುಲ್‌ ಮಲ್ನಾಡ್ ಮತ್ತು ಗುರುದತ್ ರಿಗೆ ಶ್ರದ್ಧಾಂಜಲಿ

ಸುಳ್ಯತಾಲೂಕು ವಾಲಿಬಾಲ್ ಎಸೋಸಿಯೇಶನ್ ಮತ್ತು ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ವತಿಯಿಂದ ಉದ್ಯಮಿಗಳಾದ ಗುರು ಕೇಬಲ್ ನೆಟ್ ವರ್ಕ್ ಮಾಲಕ,ಕ್ರೀಡಾ ಪ್ರೋತ್ಸಾಹಕರು ಹಾಗೂ ಕ್ರೀಡಾ ಪೋಷಕರಾದ ಗುರುತ್ತದ್ ನಾಯಕ್ ಹಾಗೂ ಮಲ್ನಾಡ್ ಕಾಶ್ಯೂಶ್ ಮಾಲಕ, ಕೊಡುಗೈದಾನಿ, ಕೈಗಾರಿಕೋದ್ಯಮಿ ಹಾಜಿ ಅಬ್ದುಲ್ಲಾ ಮಲ್ನಾಡ್ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಸೆ.19ರಂದು ಕೆವಿಜಿ ಸುಳ್ಯ ಹಬ್ಬ ಸಮಿತಿ...

ಎಸ್ಸೆಸ್ಸೆಫ್ ಧ್ವಜ ದಿನ : ಸುಳ್ಯ ನಗರ ಪಂಚಾಯತ್ ಪೌರ ಕಾರ್ಮಿಕರೊಂದಿಗೆ ಸ್ನೇಹ ಸಮ್ಮಿಲನ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಧ್ವಜ ದಿನದ ಅಂಗವಾಗಿ ಸುಳ್ಯ ಡಿವಿಷನ್ ಸಮಿತಿ ವತಿಯಿಂದ ಸುಳ್ಯ ನಗರ ಪಂಚಾಯತ್ ಪೌರ ಕಾರ್ಮಿಕರೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸೆಪ್ಟಂಬರ್ 19ರಂದು ನಗರ ಪಂಚಾಯತ್ ಪೌರ ಸಮ್ಮೇಳನ ಸಭಾಂಗಣದಲ್ಲಿ ಜರಗಿತು. ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ನ ವಿವಿಧ ಕ್ಷೇತ್ರಗಳ ಕಾರ್ಯಾಚರಣೆಗಳನ್ನು...

ಸವಣೂರು ಪುಣ್ಚಪ್ಪಾಡಿ ಹೊಸಗದ್ದೆ ರಸ್ತೆ ಕಾಮಗಾರಿಗೆ ಶಾಸಕ ಎಸ್.ಅಂಗಾರ ಗುದ್ದಲಿಪೂಜೆ

ಸವಣೂರು ಪುಣ್ಚಪ್ಪಾಡಿ ಹೊಸಗದ್ದೆ ರಸ್ತೆ ಕಾಮಗಾರಿಗೆ ಶಾಸಕ ಶ್ರೀ ಎಸ್ ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು, ಸುಮಾರು ರೂ 80 ಲಕ್ಷ ಅನುದಾನದಲ್ಲಿ ಈ ಕಾಮಗಾರಿ ನಡೆಯಲಿದೆ. ಈ ಸಂದರ್ಭದಲ್ಲಿ ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ಕು ರಾಜೇಶ್ವರಿ , ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಕಾರ್ಯದರ್ಶಿ ಶ್ರೀಮತಿ...

ಸೇವಾಜೆ : ಸಂಜೀವಿನಿ ಸಂಘದ ಸದಸ್ಯರಿಂದ ಪೌಷ್ಟಿಕಾಹಾರ ಕೈತೋಟ ರಚನೆ

ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ದೇವಚಳ್ಳ ಇದರ ಮೂಲಕ ಸೇವಾಜೆ ಅಂಗನವಾಡಿ ಕೇಂದ್ರದಲ್ಲಿ ಸಂಜೀವಿನಿ ಸಂಘದ ಸದಸ್ಯರಿಂದ ಪೌಷ್ಟಿಕ ಆಹಾರ ಬೆಳೆಗಳ ಕೈತೋಟ ರಚನೆ ಮಾಡಲಾಯಿತು. ಸಂಜೀವಿನಿ ಸಂಘದ ಸದಸ್ಯರಾದ ಭಾರತಿ, ಪ್ರೇಮ, ಗೌರಿ, ಪ್ರಮೀಳಾ, ಗೀತಾ, ಅಂಗನವಾಡಿ ಕಾರ್ಯಕರ್ತೆ ರೇಣುಕಾ ಗುಡ್ಡನಮನೆ, ದೇವಚಳ್ಳ ಗ್ರಾ.ಪಂ.ಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!