Ad Widget

ಸೆ.26ರಂದು ಅರಂತೋಡಿನಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಪ್ಲಾಸ್ಮಾ ದಾನಿಗಳ ರಕ್ತದ ಮಾದರಿ ಸಂಗ್ರಹ ಮತ್ತು ರಕ್ತ ವರ್ಗೀಕರಣ ಶಿಬಿರ

ಸುಳ್ಯ :ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗ ದ.ಕ,ಜಿಲ್ಲೆ, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್, ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಹಾಗೂ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, (ರಿ) ಪಠೇಲ್ ಚಾರಿಟೇಬಲ್ ಟ್ರಸ್ಟ್ (ರಿ), ಪಠೇಲ್ ಮೆಡಿಕಲ್ &ಲ್ಯಾಬೋರೇಟರಿ ಸುಳ್ಯ ಮತ್ತು ಇಂಡಿಯನ್ ರೆಡ್...

ಸಹಾಯಧನ ಚೆಕ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಸುಳ್ಯ ತಾಲೂಕು ಬೆಳ್ಳಾರೆ ವಲಯದ ವತಿಯಿಂದ ಐವರ್ನಾಡು ಒಕ್ಕೂಟದ ಜ್ಞಾನಶ್ರೀ ಸ್ವ ಸಹಾಯ ಸಂಘದ ಸದಸ್ಯರಾದ ಪ್ರೇಮ ನಾಯಕ್ ಅವರ ಮನೆಗೆ ಪ್ರಾಕೃತಿಕ ವಿಕೋಪದಡಿಯಲ್ಲಿ ಮನೆ ಹಾನಿಗೆ 5000ರೂ ಸಹಾಯಧನದ ಚೆಕ್ಕನ್ನು ಸುಳ್ಯ ಯೋಜನೆ ಕಚೇರಿಯಲ್ಲಿ ಪ್ರಬಂಧಕರಾದ ಜನಾರ್ದನ ಅವರು ವಿತರಿಸಿದರು .ಈ ಸಂದರ್ಭ ಬೆಳ್ಳಾರೆ...
Ad Widget

ಪುತ್ತೂರು : ಕಮ್ಮಾಡಿ ಇಬ್ರಾಹಿಂ ಹಾಜಿ ನಿಧನ

ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್'ನ ಅಧ್ಯಕ್ಷರೂ ,ಕಮ್ಮಾಡಿ ಸಂಸ್ಥೆಯ ಮಾಲಕ, ಸಾಮಾಜಿಕ ಮತ್ತು ಧಾರ್ಮಿಕ ನೇತಾರಾಗಿ ಸೇವೆ ಸಲ್ಲಿಸುತ್ತಿದ್ದ ಕಮ್ಮಾಡಿ ಇಬ್ರಾಹಿಂ ಹಾಜಿ ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 22ರಂದು ರಾತ್ರಿ ನಿಧನರಾಗಿದ್ದಾರೆ.

ಸುಳ್ಯ : ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ (ರಿ.) ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಸುಳ್ಯದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸೆ.23 ರಂದು ಪ್ರತಿಭಟಿಸಲಾಯಿತು. ಕೋವಿಡ್ - 19 ರ ಈ ಸಂಕಟ ಕಾಲದಲ್ಲಿ ಕೊರೋನಾ ವಾರಿಯರ್ಸ್...

ಲಕ್ಷ್ಮೀಶ ಕಿನ್ನಿಮಜಲು ಇವರಿಗೆ ಬೆಳ್ಳಾರೆ ಆಟೋ ಚಾಲಕರಿಂದ ಶ್ರದ್ಧಾಂಜಲಿ

ಇತ್ತೀಚೆಗೆ ನಿಧನರಾದ ಬೆಳ್ಳಾರೆಯ ಆಟೋಚಾಲಕ ಲಕ್ಷ್ಮೀಶ ಕಿನ್ನಿಮಜಲು ನೆಟ್ಟಾರು ಇವರಿಗೆ ಬೆಳ್ಳಾರೆ ಮೇಲಿನ ಪೇಟೆಯ ಆಟೋಚಾಲಕ ಮಾಲಕರ ವತಿಯಿಂದ ಸೆ.23 ರಂದು ಬೆಳಿಗ್ಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ಳಾರೆ ಮೇಲಿನ ಪೇಟೆಯ ಎಲ್ಲಾ ಆಟೋ ಚಾಲಕ - ಮಾಲಕರು ಉಪಸ್ಥಿತರಿದ್ದರು.

ಸೆ 28 ಭ್ರಷ್ಟಾಚಾರ ನಿಗ್ರಹ ದಳ ಸುಳ್ಯಕ್ಕೆ ಭೇಟಿ.

ದಕ್ಷಿಣ ಕನ್ನಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸೆಪ್ಟೆಂಬರ್ 24 ರಿಂದ 30ರ ತನಕ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಲಿದ್ದಾರೆ. ಇದರ ಅಂಗವಾಗಿ ಸೆಪ್ಟೆಂಬರ್ 28 ರಂದು ಸುಳ್ಯಕ್ಕೆ ಭೇಟಿ ನೀಡಲಿದ್ದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸುಳ್ಯ ಸರಕಾರಿ ನಿರೀಕ್ಷಣಾ ಮಂದಿರದಲ್ಲಿ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲಿದ್ದಾರೆ ಎಂದು...

ತಹಶೀಲ್ದಾರ್ ಅನಂತಶಂಕರ್ ಕಡಬಕ್ಕೆ ವರ್ಗಾವಣೆ

ಸುಳ್ಯ ತಹಶೀಲ್ದಾರ್ ಆಗಿದ್ದ ಕುಂಞ ಅಹಮ್ಮದ್ ರಿಗೆ ನಾಗಮಂಗಲಕ್ಕೆ ವರ್ಗಾವಣೆ ಯಾದಾಗ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿಷ್ಟಾಚಾರ ವಿಭಾಗದ ತಹಶೀಲ್ದಾರ್ ಆಗಿದ್ದ ಅನಂತಶಂಕರ್ ರನ್ನು ಸುಳ್ಯಕ್ಕೆ ನಿಯೋಜಿಸಲಾಗಿತ್ತು .ಕಡಬ ತಹಶೀಲ್ದಾರ್ ಆಗಿದ್ದ ಜಾನ್ ಪ್ರಕಾಶ್ ರೋಡ್ರಿಗಸ್ ಅವರಿಗೆ ವರ್ಗಾವಣೆಯಾಗಿದ್ದು ಅನಂತ ಶಂಕರ ಅವರನ್ನು ಕಡಬ ತಹಶೀಲ್ದಾರ್ ಆಗಿ ಸರಕಾರದಿಂದ ಆದೇಶವಾಗಿದೆ.

ನೂತನವಾಗಿ ಶುಭಾರಂಭಗೊಂಡಿದೆ ಡಿ-ಡೆಕೋರ್ಸ್

ಕಡಿಮೆ ವೆಚ್ಚ ಹಾಗೂ ನೂತನ ಡಿಸೈನ್ ವೈಶಿಷ್ಟ್ಯಗಳೊಂದಿಗೆ ಡಿ - ಡೆಕೋರ್ಸ್ ಸೆ. 21 ರಂದು ಶುಭಾರಂಭಗೊಂಡಿತು. ಮದುವೆ, ಹುಟ್ಟುಹಬ್ಬ, ವಿವಾಹ ನಿಶ್ಚಿತಾರ್ಥ, ನಾಮಕರಣ, ಬಯಕೆ ಮದುವೆ, ಶಾಲಾ ಕಾಲೇಜು ಕಾರ್ಯಕ್ರಮ ಹಾಗೂ ಇನ್ನಿತರ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲಾ ವಿಧದ ಸ್ಟೇಜ್ ಡೆಕೊರೇಷನ್ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.

ಕಳಂಜ: ಪೋಷಣ್ ಅಭಿಯಾನ್ ಮಾಸಾಚರಣೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಬೆಳ್ಳಾರೆ ವಲಯ ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,ಶ್ರೀ ರಕ್ಷ ಗೊಂಚಲು ಸಮಿತಿ ಹಾಗೂ ಕಳಂಜ ಗ್ರಾಮಪಂಚಾಯತ್ ಆಶ್ರಯದಲ್ಲಿ ಅಯ್ಯನಕಟ್ಟೆ ಸಭಾಭವನದಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಮತ್ತು ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಸೆ.22ರಂದು ನಡೆಯಿತು .ಶ್ರೀ ರಕ್ಷ...

ಕೆಎಫ್ ಡಿಸಿ ಸಿಬ್ಬಂದಿ ಬಾಲಕೃಷ್ಣ ಗೌಡ ದೊಡ್ಡಮನೆ ಸೇವಾನಿವೃತ್ತಿ

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಐವರ್ನಾಡು ರಬ್ಬರ್ ಫ್ಯಾಕ್ಟರಿಯಲ್ಲಿ ಸುಮಾರು 40 ವರ್ಷಗಳ ಕಾಲ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದ ಬಾಲಕೃಷ್ಣ ಗೌಡ ದೊಡ್ಡಮನೆಯವರು ಮಾ.30 ರಂದು ಸೇವೆಯಿಂದ ನಿವೃತ್ತಿಗೊಂಡಿದ್ದಾರೆ. 1985 ರಲ್ಲಿ ಸೇವೆಗೆ ಸೇರಿದ ಇವರು ರಬ್ಬರ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದರು. ಐವರ್ನಾಡು ಗ್ರಾಮದ ದೊಡ್ಡಮನೆಯವರಾದ ಇವರ ಪತ್ನಿ ಸಾವಿತ್ರಿ ದೊಡ್ಡಮನೆಯವರು ಗೃಹಿಣಿಯಾಗಿದ್ದಾರೆ. ಪುತ್ರರಾದ...
Loading posts...

All posts loaded

No more posts

error: Content is protected !!