- Saturday
- March 14th, 2026
ಕೇಂದ್ರ ಸರ್ಕಾರದ ರೈತವಿರೋಧಿ ನೀತಿಗಳ ಹಾಗೂ ರೈತ ವಿರೋಧಿ ಮಸೂದೆ ಜಾರಿ ವಿರೋಧಿಸಿ ಕರ್ನಾಟಕ ರಾಜ್ಯ ವ್ಯಾಪ್ತಿ ದಲಿತ ಸಂಘಟನೆಗಳು ,ಕಾಮಿ೯ಕ ಸಂಘಟನೆ , ರೈತ ಸಂಘ ರೈತಪರ ಸಂಘಟನೆಗಳು ಹಾಗೂ ವಿವಿಧ ಪಕ್ಷಗಳು ಸೆ. 28ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದು ಜನತಾದಳ (ಜ್ಯಾ) ಸುಳ್ಯ ಘಟಕವು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ಹಾಗೂ...
ಕೃಷಿ ಮಸೂದೆ ವಿವಿಧ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಸುಮಾರು ೨೬೫ಕ್ಕೂ ಸಂಘಟನೆಗಳು ಬೀದಿಗಿಳಿದಿದ್ದು, ಸುಳ್ಯದಲ್ಲಿ ೧೦ಕ್ಕಿಂತ ಹೆಚ್ಚು ಸಂಘಟನೆಗಳು ಬಂದ್ಗೆ ಬೆಂಬಲ ಘೋಷಿಸಿದೆ.ಹೊಸ ಕೃಷಿ ಕಾನೂನುಗಳು ಅನ್ನದಾತರನ್ನು ಜೀತದಾಳುಗಳನ್ನಾಗಿ ಮಾಡಿ ಮತ್ತು ಅವರಿಂದ ಕನಿಷ್ಟ ಬೆಂಬಲ ಬೆಲೆಯನ್ನು ಕಸಿದು ಕಸಿದುಕೊಳ್ಳಲಿದೆ. ಕೃಷಿ ಕಾನೂನಿಂದಾಗಿ ರೈತರಿಗೆ ಸರಿಯಾದ ಬೆಲೆಯೂ ಸಿಗುತ್ತಿಲ್ಲ. ತಾವೇ ಕೂಲಿಯಾಳುಗಳಾಗ ಬೇಕಾಗುತ್ತದೆ. ಕೋಟ್ಯಾಧಿಪತಿಗಳ...
ಸುಳ್ಯ ಮಂಡಲ ಬಿಜೆಪಿಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಶೇಖರ್ ಉಳುವಾರು ನೇಮಕವಾಗಿದ್ದಾರೆ. ಈ ಹಿಂದೆ ಇವರು ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿದ್ದರು. ಇಬ್ಬರು ಪ್ರಧಾನ ಕಾರ್ಯದರ್ಶಿಗಳಿರಬೇಕೆಂಬ ನಿರ್ಧಾರದ ಹಿನ್ನೆಲೆಯಲ್ಲಿ ಇವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಡ್ತಿಗೊಳಿಸಲಾಗಿದೆ. ಇವರು ಅರಂತೋಡಿನ ಉಳುವಾರಿನ ಯು.ಡಿ.ಶೇಖರ್ರವರ ಪತ್ನಿ.
ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ನೂತನ ಕಾರ್ಯದರ್ಶಿಯಾಗಿ ಯಮಿತ ಪೂರ್ಣಚಂದ್ರ ಪೈಕ ಆಯ್ಕೆಯಾಗಿದ್ದಾರೆ. ಇವರು ಗುತ್ತಿಗಾರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯೆಯಾಗಿದ್ದಾರೆ.
ಬಳ್ಪ ಗ್ರಾಮದ ಕಾಂಜಿ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ನವರಾತ್ರಿ ಪೂಜೆಯು ಅ. 17 ರಂದು ಮೊದಲ್ಗೊಂಡು ಅ. 26ರ ತನಕ ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಸೆ. 26ರಂದು ನಡೆಯಿತು. ಪ್ರಗತಿಪರ ಕೃಷಿಕರಾದ ವಾಸುದೇವ ಕಾರ್ಜ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ದೇವಳದ ಆಡಳಿತ ಮೊಕ್ತೇಸರರಾದ ಎಂ.ವಿ. ಶ್ರೀವತ್ಸ, ಉತ್ಸವ ಸಮಿತಿ ಗೌರವಾಧ್ಯಕ್ಷ...
ನಮ್ಮ ಮುಂದಿನ ಭವಿಷ್ಯದ ದೃಷ್ಠಿಯಿಂದ ಜಲ ಸಂರಕ್ಷಣೆ ಅಗತ್ಯ ಇದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು. ಅವರು ತೊಡಿಕಾನ ಹಾಲು ಸೊಸೈಟಿಯಲ್ಲಿ ಜಿಲ್ಲಾ ಪಂಚಾಯತ್ ಅನುದಾನ ದಿಂದ ನಿರ್ಮಿಸಿದ ಜಲಮರುಪೂರಣ ಯೋಜನೆಗೆ ಚಾಲನೆ ನೀಡಿ ನಂತರ ನಡೆದ ಸಭಾ ಕಾರ್ಯಕ್ರಮಲ್ಲಿ ಮಾತನಾಡಿದರು. ನಮ್ಮ ಭಾಗದಲ್ಲಿ ಬೇಸಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಲಕ್ಷಾಮ ತಲೆದೊರದಿದ್ದರೂ...
ಅರಂತೋಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸೆ. 25 ರಂದು (SVAMITVA) ಸ್ವಾಮಿತ್ವ ಯೋಜನೆಯ ವಿಶೇಷ ಗ್ರಾಮ ಸಭೆ ನಡೆಯಿತು. ಈ ಸಂದರ್ಭದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಆರ್.ವೆಂಕಟೇಶ್, ಭೂ ದಾಖಲೆಗಳ ಇಲಾಖಾ ಸೂಪರ್ ವೈಸರ್ ಸಿಂಗಾರ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್., ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ಉಪಸ್ಥಿತರಿದ್ದರು.ಡ್ರೋನ್ ಕ್ಯಾಮೆರಾದ...
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಯವರು ಸೆ.25ರಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು ಮನೆಗೆ ಭೇಟಿ ನೀಡಿದರು. ಈ ವೇಳೆ ಪುಷ್ಪಾವತಿ ದೇವಿದಾಸ್ ಬುಡ್ಲೆಗುತ್ತು, ಶಿವಪ್ರಸಾದ್ ಹಾಲೆಮಜಲು, ಸುಪ್ರಿತ್ ಗುಡ್ಡೆಮನೆ,ಹರೀಶ್ ಹಾಲೆಮಜಲು, ಯಕ್ಷಿತ್ ಮಡ್ತಿಲ, ಜಗದೀಶ್ ಕೆರೆಕ್ಕೋಡಿ, ಗಿರೀಶ್ ಆಳ್ವ, ಚೇತನ್, ಮನೀಷ್ ಉಪಸ್ಥಿತರಿದ್ದರು.
ಸುಳ್ಯದ ಜನಪ್ರಿಯ ವಾರಪತ್ರಿಕೆ ಅಮರ ಸುಳ್ಯ ಸುದ್ದಿ ಈ ಬಾರಿ ನಾಲ್ಕನೇ ವರ್ಷದ ದೀಪಾವಳಿ ವಿಶೇಷಾಂಕ ಹೊರತರುತ್ತಿದ್ದು ಇದಕ್ಕಾಗಿ ಆಸಕ್ತ ಬರಹಗಾರರಿಂದ ಕಥೆ, ಕವನ, ಲೇಖನಗಳನ್ನು ಆಹ್ವಾನಿಸಿದೆ. ದೀಪಾವಳಿ ಆಚರಣೆ, ಪತಿ-ಪತ್ನಿಯರ ಸಂಸಾರ ಬಂಧನ, ಪ್ರೀತಿ-ಪ್ರೇಮ, ಲಾಕ್ ಡೌನ್ ಪರಿಣಾಮ, ಸಾಧಕರನ್ನು ಪರಿಚಯಿಸಲು 'ಇವರು ನಮ್ಮವರು' ಮಕ್ಕಳಿಗಾಗಿ 'ಫೋಟೋ ಸ್ಪರ್ಧೆ', ಮುಂತಾದ ವಿಷಯಗಳ ಜೊತೆಗೆ ಪ್ರಚಲಿತ...
Loading posts...
All posts loaded
No more posts
