Ad Widget

ಗಾಂಧಿನಗರ ಎಪಿಎಲ್ ಸೀಸನ್ 2 ಫುಟ್ಬಾಲ್ ಪಂದ್ಯಾಟದಲ್ಲಿ ಗಾಂಧಿನಗರ ಶೂಟರ್ ತಂಡ ಪ್ರಥಮ – ಕಲ್ಲುಮುಟ್ಲು ತಂಡ ದ್ವಿತೀಯ

ಎಪಿಎಲ್ (ಏರಿಯಾ ಪ್ರೀಮಿಯರ್ ಲೀಗ್) ಫುಟ್ಬಾಲ್ ಪಂದ್ಯಾಟವು ಗಾಂಧಿನಗರ ಶಾಲಾ ಮೈದಾನದಲ್ಲಿ ನಡೆಯಿತು. ಈ ಪಂದ್ಯಾಟವನ್ನು ಹಬೀಬ್ ಗಾಂಧಿನಗರ ಹಾಗೂ ಉರ್ಷಾನ್ ನಾವೂರು ಆಯೋಜಿಸಿದರು. ಪಂದ್ಯಾಟದಲ್ಲಿ ಸುಮಾರು 6 ತಂಡಗಳು ಭಾಗವಹಿಸಿದ್ದವು. ಬಹಳ ಜಿದ್ದಾಜಿದ್ದಿನ ಸೆಣಸಾಟದಲ್ಲಿ ಫೈಝಲ್ ಕಟ್ಟೆ ಕಾರ್ಸ್ ರವರ ಮಾಲಕತ್ವದ ಗಾಂಧಿನಗರ ಶೂಟರ್ ತಂಡ ಪ್ರಥಮ ಸ್ಥಾನ ಪಡೆದರೆ ಆಬಿದ್ ಕಲ್ಲುಮುಟ್ಲು ರವರ...

ಅಜ್ಜಾವರ ಗ್ರಾಮಸ್ಥರಿಗೆ ಅ.2 ರಂದು ಕೋವಿಡ್-19 ತಪಾಸಣಾ ಶಿಬಿರ

ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗಾಗಿ ವಿಶೇಷ ಕೋವಿಡ್ ತಪಾಸಣಾ ಶಿಬಿರವನ್ನು ಅ.2 ಶುಕ್ರವಾರ ದಂದು ಪೂರ್ವಾಹ್ನ 10 ಗಂಟೆಗೆ ಮೇನಾಲದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪರೀಕ್ಷೆ ನಡೆಸಿಕೊಳ್ಳಬಹುದು.🔹ಪರೀಕ್ಷೆ ನಡೆಸಲು ಬರುವವರು ತಮ್ಮ ಮೊಬೈಲ್ ಪೋನ್ ಜೊತೆಗೆ ತರಬೇಕು.🔹 ನೋಂದಾವಣೆಯ ಬಳಿಕ ನಿಮ್ಮ ಮೊಬೈಲ್ ನಂಬರಿಗೊಂದು ಒಟಿಪಿ ಸಂಖ್ಯೆ...
Ad Widget

ಅಪಘಾತದಲ್ಲಿ ಗಾಯಗೊಂಡ ಬಡ ಕುಟುಂಬದ ಗಾಯಾಳುವಿನ ಚಿಕಿತ್ಸೆಗೆ ಬೇಕಿದೆ ನೆರವಿನ ಹಸ್ತ

ದಿನಾಂಕ 20.04.2020 ರಂದು ಸಂಪಾಜೆಯಿಂದ ಕಲ್ಲುಗುಂಡಿಗೆ ಬೈಕ್ ನಲ್ಲಿ ಚಲಿಸುತ್ತಿರುವಾಗ ಕಲ್ಲುಗುಂಡಿ ಅಂಚೆ ಕಚೇರಿ ಬಳಿ ಬೈಕ್ ಮತ್ತು ಸ್ಕೂಟರ್ ಅಪಘಾತ ನಡೆದಿದ್ದು ಬೈಕ್ ಸವಾರ ಗೌತಮ್.ಕೆ ಎನ್(20) ಇವರು ಭೀಕರ ಗಾಯಗೊಂಡು ಪ್ರಥಮ ಚಿಕಿತ್ಸೆಗೆ ಸುಳ್ಯ ಕೆ.ವಿ.ಜಿಗೆ ದಾಖಲುಗೊಂಡು ಹೆಚ್ಚಿನ ಚಿಕಿತ್ಸೆಗೆ ದಿನಾಂಕ 20.4.2020ರಂದು ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರಿನಲ್ಲಿ ದಾಖಲಾಗಿದ್ದು ಸುಮಾರು 2...

ಶೀಘ್ರದಲ್ಲಿ ಬಡರೋಗಿಗಳ ಸಹಾಯಕ್ಕಾಗಿ ಆಂಬುಲೆನ್ಸ್ ಸೇವೆ ನೀಡಲು ಸಜ್ಜಾಗಿದೆ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್

ಸುಳ್ಯ ನಗರ ಮತ್ತು ತಾಲೂಕಿನಾದ್ಯಂತ ಈಗಾಗಲೇ ಹಲವಾರು ಸಮಾಜ ಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡು ಸಮಾಜದ ವಿವಿಧ ಮೂಲಭೂತ ಸಮಸ್ಯೆಗಳ ಕುರಿತು ಸ್ಪಂದಿಸುತ್ತಿದ್ದ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದೀಗ ನೂತನವಾಗಿ ಅಂಬುಲೆನ್ಸ್ ವಾಹನವನ್ನು ಸಾರ್ವಜನಿಕರ ಸೇವೆಗೆ ನೀಡಲು ಮುಂದಾಗಿದೆ. ಇದರ ಅಂಗವಾಗಿ ಈಗಾಗಲೇ ನೂತನ ಆಂಬುಲೆನ್ಸ್ ಕಾರನ್ನು ಖರೀದಿ ಮಾಡಲಾಗಿದ್ದು ಅತೀ ಶೀಘ್ರದಲ್ಲಿ ಬಡರೋಗಿಗಳ ಸೇವೆಗೆ...

ನ.ಪಂ. ಗೆ ಸಂಬಂಧಿಸಿದ ಕಟ್ಟಡ ಕೋಣೆಗಳ ವಿವರಗಳನ್ನು ಮಾಹಿತಿ ಹಕ್ಕಿನಲ್ಲಿ ಕೇಳಿದ ರಂಜಿತ್ ಪೂಜಾರಿಗೆ ಜೀವ ಬೆದರಿಕೆ !?

ಗಾಂಧಿನಗರದ ಮೀನು ಮಾರುಕಟ್ಟೆ ಬಳಿ ಇರುವ ಬಾಡಿಗೆ ಕೋಣೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ. ಈ ಕೋಣೆಗಳನ್ನು ಕೆಲವು ಪ್ರಭಾವಿ ಬೇನಾಮಿ ವ್ಯಕ್ತಿಗಳು ನಗರ ಪಂಚಾಯತ್ ಮೀಸಲು ಹೆಸರಿನಲ್ಲಿ ಕಡಿಮೆ ಬಾಡಿಗೆಗೆ ಎಲಂನಲ್ಲಿ ಪಡೆದು 3 ನೇ ವ್ಯಕ್ತಿಗಳಿಗೆ ಹೆಚ್ಚಿನ ಬಾಡಿಗೆ ನಿಗದಿಪಡಿಸಿ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಸಂಪೂರ್ಣ...

ಪಕ್ಷದ ವ್ಯವಹಾರಗಳಲ್ಲಿ ಅಧ್ಯಕ್ಷರ ನಿರ್ದೇಶನಗಳನ್ನು ಪಾಲಿಸದ ಆರೋಪ- ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ವಜಾ

ಪಕ್ಷದ ವ್ಯವಹಾರಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಿರ್ದೇಶನಗಳನ್ನು ಪಾಲಿಸಿಲಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ವಜಾಗೊಳಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಆದೇಶಿಸಿದ್ದಾರೆ.ಈ ಬಗ್ಗೆ ಧರ್ಮಪಾಲ ಕೊಯಿಂಗಾಜೆ ಅವರನ್ನು ಸಂಪರ್ಕಿಸಿದಾಗ ನಿನ್ನೆ ದಿನ ಎ.ಐ.ಸಿ.ಸಿ. ಹಾಗು ಕೆ.ಪಿ.ಸಿ.ಸಿ. ಯ ನಿರ್ದೇಶನದಂತೆ ಕೇಂದ್ರ ಸರಕಾರದ...

ಬೆಳ್ಳಾರೆ ಬಲಿಗಾಗಿ ಕಾದು ಕುಳಿತಿದೆ ತೆಂಗಿನ ಮರ

          ಬೆಳ್ಳಾರೆ - ಸುಳ್ಯ ಮುಖ್ಯರಸ್ತೆಯಲ್ಲಿ ಬೆಳ್ಳಾರೆ ಪೇಟೆಯಿಂದ ಅಣತಿ ದೂರದಲ್ಲಿರುವ ಬೂಡು ಎಂಬಲ್ಲಿ ತೆಂಗಿನ ಮರವೊಂದರ ಕಾಂಡ ಮಣ್ಣಿನಿಂದ ಶಿಥಿಲಗೊಂಡು ಅಡಿಕೆ ಮರಗಳ ನಡುವೆ ಸಿಲುಕಿಕೊಂಡು ರಸ್ತೆ ಮೇಲೆ ವಾಲಿ ನಿಂತುಕೊಂಡಿದ್ದು ಯಾವುದೇ ಕ್ಷಣದಲ್ಲಿ ಬೀಳುವ ಆತಂಕದಲ್ಲಿದೆ. ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ತೆಂಗಿನ ಮರ ಬಿದ್ದರೆ ಅದರ ಕೆಳಗಡೆ ಹಾದು...

ಸುಳ್ಯದಲ್ಲಿ ಹೆಚ್ಚಾಗುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳು – ಕಾಮುಕರ ಅಟ್ಟಹಾಸಕ್ಕೆ ಬಲಿಯಾಗುತ್ತಿದ್ದಾರೆ ಮುಗ್ಧ ಅಪ್ರಾಪ್ತ ಹೆಣ್ಣು ಮಕ್ಕಳು

ಕಳೆದ ಒಂದು ವಾರಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ 2 ಪ್ರಕರಣಗಳು ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದರೊಂದಿಗೆ ಕಳೆದ ಒಂದೇ ತಿಂಗಳಿನಲ್ಲಿ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ಕೆಲವು ದಿನಗಳ ಹಿಂದೆ ಅರಂಬೂರು ಪರಿಸರದಲ್ಲಿ ಮಾನಸಿಕ ಅಸ್ವಸ್ಥೆ ಅಪ್ರಾಪ್ತೆ ಹೆಣ್ಣುಮಗಳ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಪ್ರಕರಣ ಈಗಾಗಲೇ ಸುಳ್ಯ...

ಬಾಳಿಲ ವಿಶೇಷ ಗ್ರಾಮಸಭೆ

ಬಾಳಿಲ ಗ್ರಾಮ ಪಂಚಾಯತ್‌ನಲ್ಲಿ ವಿಶೇಷ ಗ್ರಾಮಸಭೆಯು ಸೆ.19ರಂದು ಬಾಳಿಲ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ನಿರಂಜನ ಚಿದಾನಂದ ಹಿರೇಮಠ ವಹಿಸಿದ್ದರು. ಸಭೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಉಪಸ್ಥಿತರಿದ್ದರು. ಜೂನಿಯರ್ ಇಂಜಿನಿಯರ್ ಜನಾರ್ಧನರವರು ಜಲಜೀವನ್ ಮಿಷನ್ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರಿಗೂ ಶುದ್ಧಜಲ ಒದಗಿಸುವ ನಿಟ್ಟಿನಲ್ಲಿ...

ಸ್ಲಾಬ್ ಮುರಿದು ಬಿದ್ದು ಬಾಯಿ ತೆರೆದು ನಿಂತಿರುವ ಚರಂಡಿಗೆ ಬಿದ್ದ ಕಾರು

ಸುಳ್ಯದ ಬಸ್ ನಿಲ್ದಾಣದ ಬಳಿ ಹಲವು ತಿಂಗಳುಗಳಿಂದ ಚರಂಡಿಯ ಸ್ಲಾಬ್ ಮುರಿದುಬಿದ್ದು ಅಪಾಯದ ಸ್ಥಿತಿಯಲ್ಲಿ ನಿಂತಿದ್ದವು. ಇದರ ಬಗ್ಗೆ ಕಳೆದ ಎರಡು ಬಾರಿ ಅಮರ ಸುಳ್ಯ ಸುದ್ದಿ ಪತ್ರಿಕೆಯ ವತಿಯಿಂದ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸಗಳನ್ನು ಮಾಡಲಾಗಿತ್ತು. ನಗರದ ಪುಟ್ ಪಾತ್ ಗಳ ಅವಸ್ಥೆ ಆದರೆ ಇತ್ತ ಕಡೆ ಗಮನಹರಿಸದ ಇವರು ಇದಕ್ಕೂ ಮುನ್ನ ಹಲವು...
Loading posts...

All posts loaded

No more posts

error: Content is protected !!