Ad Widget

ನ.17 : ಎಸ್.ಎಂ.ಎ ಜಿಲ್ಲಾ ಮಟ್ಟದ 2021-24ನೇ ಸಾಲಿನ ಎಲೆಕ್ಷನ್ ಕ್ರಿಯೇಶನ್

ಎಸ್ ಎಂ ಎ ಸುನ್ನಿ ಮ್ಯಾನೇಜ್ಮೆಂಟ್ ಅಸೋಶಿಯೇಶನ್ ಇದರ ಆಶ್ರಯದಲ್ಲಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಮಟ್ಟದ ಎಲೆಕ್ಷನ್ ಕ್ರಿಯೇಶನ್ ಕಾರ್ಯಕ್ರಮ   ನಡೆಸುವ ಕುರಿತು ಸಭೆ ನಡೆಯಿತು.  ನವೆಂಬರ್ 7 ರಂದು ಆನ್ಲೈನ್ ನಲ್ಲಿ ನಡೆದ SMA ಜಿಲ್ಲಾ ಸಮಿತಿ ಸಭೆಯಲ್ಲಿ ಕಾರ್ಯಕ್ರಮ ಆಯೋಜಿಸುವ ಸ್ಥಳ ಮತ್ತು ಸಮಯಗಳ ಕುರಿತು ಚರ್ಚಿಸಿ ನೆಕ್ಕಿಲಾಡಿ ಯಲ್ಲಿ ಎಲೆಕ್ಷನ್ ಕ್ರಿಯೇಶನ್...

ಒಂದೇ ಮನೆಯ ಪುಟಾಣಿಗಳಿಬ್ಬರಿಗೆ ಸಿರಿ ಗನ್ನಡ ಕಂದ ಪ್ರಶಸ್ತಿ

ಅಂಗನವಾಡಿಯ ಪುಟಾಣಿಗಳಿಬ್ಬರಿಗೆ ಸಿರಿ ಗನ್ನಡ ಕಂದ ಪ್ರಶಸ್ತಿ ಲಭಿಸಿದೆ. ದೇವರಗುಂಡ ಮೂಲದ ಹರೀಶ್ ಡಿ. ಆರ್ ರವರ ಮಗಳಾದ ತನ್ವಿ ಡಿ. ಮತ್ತು ನವೀನ್ ಡಿ. ಆರ್ ರವರ ಮಗನಾದ ಅಶಿತ್ ಡಿ.ಎನ್ ರವರಿಗೆ ಸೆಪ್ಟೆಂಬರ್, ಅಕ್ಟೋಬರ್ 2020ರ ಅವಧಿಯಲ್ಲಿ ಪ್ರಸಾರವಾದ ಹಾಡು ಮಾತಾಡು ಕಾರ್ಯಕ್ರಮ ಸರಣಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ಸಿರಿ ಗನ್ನಡ ಕಂದ...
Ad Widget

ಜನತಾ ಬಜಾರ್ ನಿರ್ದೇಶಕರಾಗಿ ನವೀನ್ ಬಾಳುಗೋಡು

ಪ್ರತಿಷ್ಟಿತ ಮಂಗಳೂರು ಜನತಾ ಬಜಾರ್ ಆಡಳಿತ ಮಂಡಳಿ ನಿರ್ದೇಶಕ ರಾಗಿ ನವೀನ್ ಬಾಳುಗೋಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಗುತ್ತಿಗಾರು ಪ್ರಾ‌.ಕೃ.ಪ.ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಇವರು ಗುತ್ತಿಗಾರಿನಲ್ಲಿ ಮಹಾಲಕ್ಷ್ಮಿ ಎಂಟರ್ಪ್ರೈಸಸ್, ಹಾರ್ಡ್ ವೇರ್ ಸಂಸ್ಥೆ ನಡೆಸುತ್ತಿದ್ದಾರೆ.

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರ ನೇಮಕ ಮಾಡಿ ಸರಕಾರ ಆದೇಶಿಸಿದೆ. ಸದಸ್ಯರಾಗಿ ರೋಹಿಣಿ ಚೆನ್ನಕೇಶವ ಆರ್ನೋಜಿ, ಸೌಮ್ಯ ರಾಮಕೃಷ್ಣ ಪುರಿಯ, ದಿನೇಶ್ ಗರಡಿ ಪಂಬೆತ್ತಾಡಿ, ಪದ್ಮನಾಭ ರೈ ಅಗೋಳಿ ಬೈಲುಗುತ್ತು, ಲಕ್ಷ್ಮಣ ಗೌಡ ಆಕ್ರಿಕಟ್ಟೆ, ನಾರಾಯಣ ಗೌಡ ಕೋರ್ಜೆ ಹೇಮಳ, ಬಾಲಕೃಷ್ಣ ಕುದ್ವ, ಶಂಕರಕುಮಾರ್ ಭಟ್ ಕಲ್ಮಡ್ಕ, ಪ್ರಧಾನ...

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರ ನೇಮಕಗೊಳಿಸಿ ಸರಕಾರ ಆದೇಶಿಸಿದೆ. ಸದಸ್ಯರಾಗಿ ಕಿಶೋರ್ ಕುಮಾರ್ ಉಳುವಾರು, ಗಣಪತಿ ಭಟ್ ಮಜಿಗುಂಡಿ, ಉಮಾಶಂಕರ್ ಅಡ್ಯಡ್ಕ, ಎಸ್.ಪಿ.ಲೋಕನಾಥ ಪೆಲ್ತಡ್ಕ, ಚಂದ್ರಪ್ರಕಾಶ್ , ವಾರಿಜಾ ಪುರುಷೋತ್ತಮ ಕುರುಂಜಿ, ವೇದಾವತಿ ಚಿನ್ನಪ್ಪ ಗೌಡ ಕುತ್ತಮೊಟ್ಟೆ, ಲೋಕೇಶ್ ಕುಮಾರ್ ದೊಡ್ಡೇರಿ, ಪ್ರಧಾನ ಅರ್ಚಕ ಕೇಶವ ಮೂರ್ತಿ ಇವರುಗಳನ್ನು ಸದಸ್ಯರಾಗಿ...

ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಜಾತ್ರೋತ್ಸವ ಸಮಿತಿ ರಚನೆ – ಅಧ್ಯಕ್ಷ ಪ್ರೋ. ಮನಮೋಹನ ಮುಡೂರು, ಪ್ರ. ಕಾರ್ಯದರ್ಶಿ ಮಿಥುನ್ ಕರ್ಲಪ್ಪಾಡಿ

ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಕಾಲಾವಧಿ ಜಾತ್ರೋತ್ಸವದ ನೂತನ ಸಮಿತಿಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯರ ನೇತೃತ್ವದಲ್ಲಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಪ್ರೋ. ಮನಮೋಹನ ಮುಡೂರು ಪ್ರಧಾನ ಕಾರ್ಯದರ್ಶಿಯಾಗಿ ಮಿಥುನ್ ಕರ್ಲಪ್ಪಾಡಿ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪುಟ್ಟಣ್ಣ ಗೌಡ ಪಡ್ಡಂಬೈಲು , ಡಾ. ದಾಮೋದರ ನಾರಾಲು ಕಾರ್ಯದರ್ಶಿಯಾಗಿ ರೂಪಾನಂದ ಕರ್ಲಾಪ್ಪಾಡಿ ,ಮಾಧವ ಮುಡೂರು ಸದಸ್ಯರಾಗಿ...

ಬಿದ್ದು ಸಿಕ್ಕಿದ ಪರ್ಸ್ ನ್ನು ಹಿಂತಿರುಗಿಸಿ ಮಾನವೀಯತೆ ಮರೆದ ಮಹಿಮಾ ಆಟೋ ವರ್ಕ್ಸ್ ನ ಮಾಲಕ ನವೀನ್

ಸುಳ್ಯ ಎಸ್ ಡಿ ಎ ಯು ಇದರ ಸುಳ್ಯ ತಾಲೂಕು ಅಧ್ಯಕ್ಷ ಶಾಫಿ ರವರ 7000 ಹಣ ಮತ್ತು ಇತರ ಅತ್ಯಮೂಲ್ಯ ದಾಖಲೆ ಗಳಿದ್ದ ಪರ್ಸ್ ಗಾಂಧಿನಗರದ ಆಸುಪಾಸಿನಲ್ಲಿ ಕಳೆದು ಹೋಗಿತ್ತು. ಇದು ಮಹಿಮಾ ಆಟೋ ವರ್ಕ್ಸ್ ನ ಮಾಲಕರಾದ ನವೀನ್ ಎಂಬವರಿಗೆ ಬಿದ್ದು ಸಿಕ್ಕಿದ್ದು ಅವರು ಪರ್ಸ್ ನಲ್ಲಿದ್ದ ದಾಖಲೆಗಳಿದ್ದ ಹೆಸರು ಮತ್ತು ವಿಳಾಸವನ್ನು...

ರಾಜ್ಯದ ಮಸೀದಿಗಳಲ್ಲಿ ಧ್ವನಿವರ್ಧಕ ತೆರವುಗೊಳಿಸಲು ಪೊಲೀಸ್ ಮಹಾನಿರ್ದೇಶಕ ಕಚೇರಿಯಿಂದ ಆದೇಶ

ರಾಜ್ಯಾದ್ಯಂತ ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕೆಂದು ಕೋರಿ ವಕೀಲ ಹರ್ಷ ಮುತಾಲಿಕ್ ಎಂಬವರು ಸಲ್ಲಿಸಿದ ಮನವಿಯನ್ನು ಉಲ್ಲೇಖಿಸಿ ಕ್ರಮಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ. ಆದೇಶದಲ್ಲಿ ಉಲ್ಲೇಖಿತ ಮನವಿಯನ್ನು ಲಗತ್ತಿಸಲಾಗಿದ್ದು, ಮನವಿಯಲ್ಲಿ ರಾಜ್ಯಾದ್ಯಂತ ಮುಸ್ಲಿಮ್ ಬಾಂಧವರು ಸಲ್ಲಿಸುವ ಪ್ರಾರ್ಥನೆಗಳಲ್ಲಿ ಹೆಚ್ಚು ಧ್ವನಿಯುಂಟಾಗುತ್ತಿದ್ದು, ಅವುಗಳಿಂದ ತೊಂದರೆಯುಂಟಾಗುತ್ತಿದ್ದು, ಈ ಬಗ್ಗೆ ಮಸೀದಿಗಳಿಂದ ಧ್ವನಿವರ್ಧಕವನ್ನು ತೆರವುಗೊಳಿಸಬೇಕೆಂದು ಆಕ್ಷೇಪಿಸಿರುತ್ತಾರೆ....

ಸುಳ್ಯದಲ್ಲಿ ಪೊಲೀಸರ ಕಾರ್ಯಚರಣೆ – ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಆರೋಪಿಗಳು ವಶಕ್ಕೆ

ಕೇರಳ ರಾಜ್ಯದ ರಿಜಿಸ್ಟರ್ ನಂಬರ್ ಹೊಂದಿರುವ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಲಕ್ಷಾಂತರ ಬೆಲೆ ಬಾಳುವ ಗಾಂಜಾವನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಸುಳ್ಯ ಪೊಲೀಸರು ಮಾಲು ಸಮೇತ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಹಿಂಬಾಲಿಸಿಕೊಂಡು ಬಂದು ಸುಳ್ಯ ಜ್ಯೋತಿ ವೃತ್ತದ ಬಳಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಟವರ್ ನಿರ್ಮಾಣಕ್ಕೆ ಶಾಸಕರಿಂದ ಜಿಯೋ ಸಂಸ್ಥೆಗೆ ಪತ್ರ

ಸುಳ್ಯ ತಾಲೂಕಿನ ಮಡಪ್ಪಾಡಿ, ದೇವಚಳ್ಳ ಗ್ರಾಮದ ಕರಂಗಲ್ಲು, ಕೂತ್ಕುಂಜ ಗ್ರಾಮದ ಬಳ್ಳಕ, ಬಾಳುಗೋಡು ಪ್ರದೇಶಗಳಲ್ಲಿ ಸರಿಯಾದ ನೆಟ್ವರ್ಕ್ ಸಿಗದೇ ಇರುವುದರಿಂದ ಈ ಭಾಗದ ಜನರಿಗೆ, ಸಹಕಾರಿ ಸಂಘ, ಸ್ಥಳೀಯ ಸಂಸ್ಥೆ, ಧಾರ್ಮಿಕ ಸಂಸ್ಥೆಗಳಿಗೆ ತೊಂದರೆ ಉಂಟಾಗುತ್ತಿದ್ದು ಇದರಿಂದ ಈ ಪ್ರದೇಶದಲ್ಲಿ ಟವರ್ ಮುಖ್ಯವಾಗಿರುವುದರಿಂದ ಈ ಕುರಿತಂತೆ ಶಾಸಕ ಎಸ್.ಅಂಗಾರ ಜಿಯೋ ಕಂಪೆನಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
Loading posts...

All posts loaded

No more posts

error: Content is protected !!