- Saturday
- March 14th, 2026
ತೊಡಿಕಾನ ಗ್ರಾಮದ ದೊಡ್ಡಡ್ಕ ನಿವಾಸಿ ಉರಿಮಜಲು ವಸಂತ ಭಟ್ (70) ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಸಾಮಾಜಿಕ ಕಳಕಳಿ ಹೊಂದಿದ ಅವರು ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಕೃಷಿ ವಿಷಯದಲ್ಲಿ ಪದವಿ ಪದವಿಧರರಾದ ಅವರು ಸುಳ್ಯ ತಾಲೂಕಿನಲ್ಲಿ ಅಡಿಕೆ ಕೃಷಿಗೆ ಹಳದಿ ರೋಗ ಬಾಧಿಸಿದ್ದು ಇದಕ್ಕೆ ಪರ್ಯಾಯ ಬೆಳೆಯಾಗಿ ತಾಳೆಕೃಷಿಯನ್ನು ಪರಿಚಯಿಸಿಕೊಟ್ಟು ಅನೇಕರನ್ನು...
ವಸಂತ ಶೆಟ್ಟಿ ಬೆಳ್ಳಾರೆಯವರ ಮುಂದಾಳತ್ವದಲ್ಲಿ 'ನಿನಾದ' ಸಾಂಸ್ಕೃತಿಕ ಕಲಾ ಕೇಂದ್ರದ ಉದ್ಘಾಟನೆ ಮತ್ತು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಕಾಲಮಿತಿ ಯಕ್ಷಗಾನ ಮಾನಿಷಾದ ಡಿ. 05 ರಂದು ಸಂಜೆ ಕಳಂಜ ಗ್ರಾಮದ ತಂಟೆಪ್ಪಾಡಿಯ ನಿನಾದ ಕಲಾಕೇಂದ್ರದಲ್ಲಿ ನಡೆಯಲಿದ್ದು, ಈ ಬಗ್ಗೆ ಪತ್ರಿಕಾಗೋಷ್ಠಿಯು ಡಿ.04ರಂದು ನಿನಾದದಲ್ಲಿ ನಡೆಯಿತು....
ಸುಳ್ಯ ತಾಲೂಕು ಕಳಂಜ ಗ್ರಾಮದ ಶ್ರೀ ವೆಂಕಟರಮಣ ಆಚಾರ್ಯರ ಪುತ್ರ ಪ್ರದೀಪ್ ರವರ ವಿವಾಹವು ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕೋಡಿಕಜೆ ಶ್ರೀ ಸುಕುಮಾರ ಆಚಾರ್ಯರ ಪುತ್ರಿ ಕವಿತಾರೊಂದಿಗೆ ನ.30 ರಂದು ಸುಬ್ರಹ್ಮಣ್ಯದ ಸ್ಕಂದ ಕಲ್ಯಾಣ ಮಂಟಪದಲ್ಲಿ ನಡೆಯಿತು. ಡಿ.01 ರಂದು ಆರತಕ್ಷತೆ ಕಾರ್ಯಕ್ರಮವು ಕಳಂಜದ ವರನ ಮನೆಯಲ್ಲಿ ಜರುಗಿತು.
ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸುವಂತೆ ವಿಹಿಂಪ ಭಜರಂಗದಳ ಸುಳ್ಯ ಪ್ರಖಂಡದ ಮುಕ್ಕೂರು - ಕುಂಡಡ್ಕ ಛತ್ರಪತಿ ಶಾಖೆಯ ಸದಸ್ಯರು ಪೆರುವಾಜೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಛತ್ರಪತಿ ಶಾಖೆಯ ಅಧ್ಯಕ್ಷರಾದ ಜಯಂತ ಕುಂಡಡ್ಕ, ಕಾರ್ಯದರ್ಶಿ ಕಿರಣ್, ಉಪಾಧ್ಯಕ್ಷರಾದ ಐತಪ್ಪ ಕಾನಾವು ಚಾಮುಂಡಿಮೂಲೆ, ವಿದ್ಯಾರ್ಥಿ ಪ್ರಮುಖ್ ಜನಿತ್ ಸಂಕೇಶ, ಗೋರಕ್ಷಾ...
ಸಂಪಾಜೆ ಲಯನ್ಸ್ ಕ್ಲಬ್ಬಿಗೆ ಪ್ರಾಂತ್ಯ 1ರ ಅಧ್ಯಕ್ಷರಾದ ಲಯನ್ ಸಂತೋಷ್ ಕುಮಾರ್ ಶೆಟ್ಟಿ mjfರವರು ನ.28 ರಂದು ಅಧಿಕೃತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಪಾಜೆ ಲಯನ್ಸ್ ವತಿಯಿಂದ ನಿರ್ಮಿಸಿದ ಮಂಗ ಹಿಡಿಯುವ ಗೂಡು (Fabricated Cage)ನ್ನು ರೈತ ಹಿತರಕ್ಷಣಾ ವೇದಿಕೆ ಸಂಪಾಜೆ ಇವರಿಗೆ ಹಸ್ತಾಂತರಿಸಿದರು. ಸಭಾ ಕಾರ್ಯಕ್ರಮದಲ್ಲಿ ಲಯನ್ ವಾಸುದೇವ ಕಟ್ಟೆಮನೆ ಅಧ್ಯಕ್ಷತೆ ವಹಿಸಿದರು....
ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯದ ರಥಬೀದಿ ಯಲ್ಲಿರುವ ಪ್ರತಿಷ್ಠಿತ ವಸ್ತ್ರ ಮಳಿಗೆಯಾದ ತಾಹಿರಾ ಸಿಲ್ಕ್ ನಲ್ಲಿ ವಸ್ತ್ರ ಖರೀದಿಸುವ ಗ್ರಾಹಕರಿಗಾಗಿ ಆಯೋಜಿಸಲಾಗಿರುವ ಲಕ್ಕಿ ಕೂಪನ್ ನ ಡ್ರಾ ನ.1 ರಂದು ನಡೆಯಿತು. ಸಂಸ್ಥೆಯ ಮಾಲಕ ಶಾಫಿ ಕುತ್ತಮೊಟ್ಟೆಯವರ ಪುತ್ರ ಮಹಮ್ಮದ್ ಶೀಸ್ ರವರು ಡ್ರಾ ನಡೆಸಿಕೊಟ್ಟರು. ಪ್ರಥಮ ವಿಜೇತರಾಗಿ ಜಯರಾಮ ಜಯನಗರ, ದ್ವಿತೀಯ ಅದೃಷ್ಟಶಾಲಿಯಾಗಿ ಜ್ಯೋತಿ...
ಕಲ್ಲಾಜೆ ಸ.ಕಿ.ಪ್ರಾ. ಶಾಲೆಯಲ್ಲಿ ಶಿಕ್ಷಕರಾಗಿ ಡೆಪ್ಟೇಶನ್ ಮೂಲಕ ಬಾನಡ್ಕ ಕಿ.ಪ್ರಾ.ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುತ್ತಪ್ಪ ಮಾಸ್ತರ್ ಮಾದನಮನೆಯವರು ಡಿ. 1ರಂದು ಮಂಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 52 ವರ್ಷ ವಯಸ್ಸಾಗಿತ್ತು. ವಿಶೇಷ ಚೇತನ ಮಕ್ಕಳ ಏಳಿಗೆಗಾಗಿ ಶಶಾಂಕ ಚಾರಿಟೇಬಲ್ ಟ್ರಸ್ಟ್ನ್ನು ಸ್ಥಾಪಿಸಿ ಆ ಮೂಲಕ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜನಾನುರಾಗಿಯಾಗಿಯಾಗಿದ್ದರು. ಮೃತರು ಪತ್ನಿ ಬಾನಡ್ಕ...
ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಇದರ ಕಾರ್ಯಕಾರಿಣಿ ಸದಸ್ಯರಾಗಿ ಶ್ರೀ ಸತೀಶ್ ಮೂಕಮಲೆ ಆಯ್ಕೆಯಾಗಿದ್ದಾರೆ. ಡಿ.1 ರಂದು ಸುಳ್ಯದ ಶ್ರೀ ಕಲ್ಕುಡ ದೈವಸ್ಥಾನದ ವಠಾರದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆಯ , ಜಿಲ್ಲಾ ಬೈಠಕ್ ನಲ್ಲಿ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಇವರು ಈ ಜವಾಬ್ದಾರಿಯನ್ನು...
ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ನ ತಡಗಜೆ ಗ್ರಾಮಸ್ಥರು ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಚುನಾವಣಾ ಬಹಿಷ್ಕಾರದ ಮೊರೆಹೋಗಿದ್ದಾರೆ. ಈ ವಾರ್ಡಿನಲ್ಲಿ ಸುಮಾರು 25 ವರ್ಷಗಳಿಂದ ಪ್ರಮುಖ ಮೂಲಭೂತ ಬೇಡಿಕೆಗಳಾದ ರಸ್ತೆ, ಚರಂಡಿ, ಕುಡಿಯುವ ನೀರು ಇತ್ಯಾದಿ ಸಮಸ್ಯೆಗಳಿದ್ದರೂ ಇಲ್ಲಿನ ಪಂಚಾಯತ್ ಸದಸ್ಯರಿಂದ ಹಿಡಿದು ವಿಧಾನಸಭಾ ಸದಸ್ಯರವರೆಗೆ ಕೇವಲ ಭರವಸೆಯಲ್ಲದೇ, ಸೂಕ್ತ ಸ್ಪಂದನೆ...
Loading posts...
All posts loaded
No more posts
