Ad Widget

ಅರಂತೋಡು : ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರರವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಅರಂತೋಡಿನ ಬಿಜೆಪಿ ಕಾರ್ಯಕರ್ತರು ಪೇಟೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ್ ಪೈಕ, ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಜೇಂದ್ರ ಮರ್ಕಂಜ, ಪುಷ್ಪಾಧರ ಕೋಡಂಕೇರಿ, ಬಿಜೆಪಿ ಕಾರ್ಯಕರ್ತರದ ರೋಹಿತ್ ಕಲ್ಲುಗದ್ದೆ, ವಿಜಯಕುಮಾರ್ ಶುಂಠಿಯಡ್ಕ, ನವೀನ...

ಸಚಿವರಾದ ಅಂಗಾರ – ಕೊಲ್ಲಮೊಗ್ರದಲ್ಲಿ ಕಾರ್ಯಕರ್ತರ ಸಂಭ್ರಮ

ಸತತ 28 ವರ್ಷಗಳಿಂದ ಶಾಸಕರಾಗಿದ್ದ ಅಂಗಾರರಿಗೆ ಸಚಿವ ಸ್ಥಾನ ಸಿಕ್ಕಿರುವುದು ಕಾರ್ಯಕರ್ತರಿಗೆ ಸಂಭ್ರಮ ತಂದುಕೊಟ್ಟಿದೆ. ಕೊಲ್ಲಮೊಗ್ರ ಪೇಟೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಂಹಿ ಹಂಚಿ ಸಂಭ್ರಮಾಚರಿಸಿದರು. ಈ ವೇಳೆ ತಾ.ಪಂ. ಹಾಗೂ ಗ್ರಾ.ಪಂ ಸದಸ್ಯ ಉದಯ ಕೊಪ್ಪಡ್ಕ, ಬಿ.ಜೆ.ಪಿ ಬೂತ್ ಕಾರ್ಯದರ್ಶಿ ಉದಯ ಶಿವಾಲ ಹಾಗೂ ಮನೋಜ್ ಪೆರ್ನಾಜೆ ಶೇಖರಪ್ಪ ಬೆಂಡೋಡಿ ಮತ್ತು ಕಾರ್ಯಕರ್ತರಿದ್ದರು.
Ad Widget

ಸಚಿವರಾಗಿ ಅಂಗಾರ ಪ್ರಮಾಣವಚನ – ಸುಳ್ಯದಲ್ಲಿ ಸಂಭ್ರಮಾಚರಣೆ

ರಾಜ್ಯ ಸಚಿವ ಸಂಪುಟ ಇಂದು ವಿಸ್ತರಣೆಯಾಗಿದ್ದು ಸುಳ್ಯ ಶಾಸಕ ಅಂಗಾರರವರು ಸಚಿವವಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದು ಅಪರಾಹ್ನ 4 ಗಂಟೆಗೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜ್ಯಪಾಲರು ಪ್ರತಿಜ್ಞಾವಿಧಿ ಭೋದಿಸಿದರು. ದೇವರ ಹೆಸರಿನಲ್ಲಿ ಅಂಗಾರರವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸುಳ್ಯದಲ್ಲಿ 6 ಬಾರಿ ಶಾಸಕರಾದ ಅಂಗಾರರಿಗೆ ಅರ್ಹವಾಗಿದೆ ಸಚಿವ ಸ್ಥಾನ ಒದಗಿ ಬಂದಿರುವುದು ಸುಳ್ಯದ ಬಿಜೆಪಿ...

ಅಂಗಾರ ಸಚಿವರಾಗುತ್ತಿರುವ ಖುಷಿಯಲ್ಲಿ ಆಲೆಟ್ಟಿ ಬಿಜೆಪಿ ಸಂಭ್ರಮಾಚರಣೆ

ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆರು ಬಾರಿ ಶಾಸಕರಾಗಿ ಆಯ್ಕೆಯಾದ ಸೋಲಿಲ್ಲದ ಸರದಾರ ರಾಗಿರುವ ಎಸ್.ಅಂಗಾರ ಅವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಪ್ರಪ್ರಥಮ ಬಾರಿಗೆ ನೂತನ ಸಚಿವರಾಗಿ ಇಂದು ಅಪರಾಹ್ನ 3.50 ಕ್ಕೆ ಬೆಂಗಳೂರಿನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಆಲೆಟ್ಟಿ ಬಿಜೆಪಿ ವತಿಯಿಂದ ಆಲೆಟ್ಟಿಯಲ್ಲಿ ಸಂಭ್ರಮಾಚರಣೆಯನ್ನು 6:00 ಗಂಟೆಗೆ ನಡೆಸಲು...

ಅಂಗಾರ ನಮ್ಮ ಬಂಗಾರ : ಸಚಿವರಾಗುತ್ತಿರುವ ಅಂಗಾರರಿಗೆ ಮುಖಂಡರಿಂದ ಅಭಿನಂದನೆ

ಸುಳ್ಯದಲ್ಲಿ ಆರು ಬಾರಿ ಶಾಸಕರಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿ ಇದೀಗ ನೂತನ ಸಚಿವರಾಗುತ್ತಿರುವ ಶಾಸಕ ಅಂಗಾರರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಪಕ್ಷದ ಕೆಲ ಪ್ರಮುಖರು,ಅಭಿಮಾನಿಗಳು ಇಂದು ಬೆಂಗಳೂರಿಗೆ ತಲುಪಿದ್ದು ನೂತನ ಸಚಿವರಾಗಲಿರುವ ಅಂಗಾರರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಬಿಜೆಪಿ ರೈತ ಮೋರ್ಛಾ ಉಪಾಧ್ಯಕ್ಷ ಎ.ವಿ.ತೀರ್ಥರಾಮ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್...

ರಾಜ್ಯ ಸಚಿವ ಸಂಪುಟ ವಿಸ್ತರಣೆ – ಶಾಸಕ ಅಂಗಾರರಿಗೆ ಒಲಿಯಲಿದೆ ಮುಜರಾಯಿ ಖಾತೆ!

ರಾಜ್ಯ ಸಚಿವ ಸಂಪುಟ ಇಂದು ವಿಸ್ತರಣೆಯಾಗಲಿದ್ದು ಮಂತ್ರಿಗಿರಿ ಸಿಗುವ ಲೀಸ್ಟ್ ನಲ್ಲಿ ಸುಳ್ಯ ಶಾಸಕ ಅಂಗಾರರ ಹೆಸರು ಮುಂಚೂಣಿಯಲ್ಲಿದ್ದು ಅಧಿಕೃತ ಘೋಷಣೆ ಆಗಬೇಕಿದೆ.‌ ಇಂದು ಅಪರಾಹ್ನ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಸುಳ್ಯದಲ್ಲಿ 6 ಬಾರಿ ಶಾಸಕರಾದ ಅಂಗಾರರಿಗೆ ಮುಜರಾಯಿ ಖಾತೆ ನೀಡುತ್ತಾರೆನ್ನುವ ಮಾತುಗಳು ಕೇಳಿ ಬರುತ್ತಿದೆ.

ಕಲೆಗಾರನ ಕೈಚಳಕದಿಂದ ಮೂಡಿಬಂದ ಶಾಸಕ ಅಂಗಾರರ ಚಿತ್ರ

Angara Venkat Valalambe ಸುಳ್ಯದ ಜಯಪ್ರಿಯ ಶಾಸಕ ಎಸ್. ಅಂಗಾರರವರು ಸಚಿವ ಹುದ್ದೆಯ ಸಮೀಪದಲ್ಲಿರುವಾಗ ವಿನೋದ್ ಕಾಯರ ಅವರ ಕೈಚಳಕದಲ್ಲಿ ಮೂಡಿಬಂದ ಭಾವಚಿತ್ರವೊಂದು ಸದ್ದು ಮಾಡುತ್ತಿದೆ. ಎನ್ ಎಂ ಸಿ ಯಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ವಿನೋದ್ ಕಾಯರ ಪೆನ್ಸಿಲ್ ನಿಂದ ಈ ಚಿತ್ರ ಬಿಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜತೆಗೆ ಇನ್ನೋರ್ವ ಬಿಜೆಪಿಯ ಧೀಮಂತ ನಾಯಕ...

ಸುಬ್ರಹ್ಮಣ್ಯ : ಎಬಿವಿಪಿ ವತಿಯಿಂದ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ಹಾಗೂ ಜಯಂತಿ ಯ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಜ. 12 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಬ್ರಹ್ಮಣ್ಯ ದ ನಗರ ಅಧ್ಯಕ್ಷರಾದ ಸುಬ್ರಹ್ಮಣ್ಯ ಪ.ಪೂ.ಕಾಲೇಜಿನ ಉಪನ್ಯಾಸಕ ಸೋಮಶೇಖರ್ ನಾಯಕ್...

ಜ.25 : ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ನ. ಪಂ.ಎದುರು ಪ್ರತಿಭಟನೆಗೆ ಸಿದ್ಧತೆ

ಸುಳ್ಯ ತಾಲೂಕು ನಗರ ಪಂಚಾಯಿತ್ ವ್ಯಾಪ್ತಿಗೆ ಸಂಬಂಧಪಟ್ಟ ಗಾಂಧಿನಗರದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವ್ಯಾಪಾರಕ್ಕೆ ಮೀಸಲಿರಿಸಿದ ವಾಣಿಜ್ಯ ಕಟ್ಟಡವನ್ನು ದಲಿತರಿಗೆ ವಂಚಿಸಿ ಮೇಲ್ವರ್ಗದ ಜನರು ವ್ಯಾಪಾರ ನಡೆಸಿಕೊಂಡು ಬಂದಿದ್ದಾರೆ. ಈ ಬಗ್ಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯವರು ಈ ಮೊದಲು ನಗರ ಪಂಚಾಯಿತಿಗೆ ದೂರನ್ನು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನಗರ ಪಂಚಾಯತ್...

ಪಂಜ :ಅಟೋ ಚಾಲಕರ ಸಂಘದ ಮಹಾಸಭೆ – ಅಧ್ಯಕ್ಷ ಹೇಮಂತ ದೊಡ್ಡಮನೆ, ಪ್ರ.ಕಾರ್ಯದರ್ಶಿ ತೀರ್ಥಪ್ರಸಾದ್ ಬಳ್ಳಕ್ಕ

ಪಂಜ ಆಟೋ ರಿಕ್ಷಾ ಚಾಲಕರ ಸಂಘ ( ಬಿ.ಯಂ.ಎಸ್ . ನಿಯೋಜಿತ) ಇದರ ಮಹಾಸಭೆ ಹಾಗೂ ಪದಗ್ರಹಣ ಸಮಾರಂಭವು ಜ. 12ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಪಾರ್ವತಿ ಸಭಾಭವನದಲ್ಲಿ ಜರಗಿತು. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು ಅವರು ಉದ್ಘಾಟಿಸಿದರು. ಪಂಜ ಅಟೋ ಚಾಲಕರ...
Loading posts...

All posts loaded

No more posts

error: Content is protected !!