Ad Widget

ಏನೆಕಲ್ಲು – ಮಧುವನ – ಕಲ್ಲಾಜೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮಧುವನ ಕಲ್ಲಾಜೆ ರಸ್ತೆಯ ಕೋಟೆ ಎಂಬಲ್ಲಿ ಸುಬ್ರಹ್ಮಣ್ಯ ತಾಲೂಕು ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ. ಪಿಡಿಓ ಮುತ್ತಪ್ಪ, ಗ್ರಾ.ಪಂ. ಸದಸ್ಯ ಮೋಹನ ಕೋಟಿಗೌಡನ ಮನೆ, ಶ್ರೀಮತಿ ಜಯಂತಿ, ಶ್ರೀ ಕೃಷ್ಣ ಕೋಟೆ, ಅರ್ಜುನ್ ಕೋಟೆ, ಸತೀಶ್ ಬಿ., ಶ್ರೀಮತಿ ಸುಶೀಲ ರವಿ, ಗ್ರಾ.ಪಂ.ನ...

ಮಾ15 : ಕಂದ್ರಪ್ಪಾಡಿ ಜಾತ್ರೆ – ಅರವಿಂದ ಬೋಳಾರ್ ಅಭಿನಯಿಸಿದ “ಎನ್ನ ಬಂಙ ಎಂಕೇ ಗೊತ್ತು” ನಾಟಕ ಪ್ರದರ್ಶನ

ದೇವಚಳ್ಳ ಗ್ರಾಮದ ಇತಿಹಾಸ ಪ್ರಸಿದ್ದ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಮಾ.10 ಧ್ವಜಾರೋಹಣ ನೆರವೇರಿತು. ಮಾ.14 ರಂದು ಬೆಳಿಗ್ಗೆ ಮುಂಡೋಡಿ ತರವಾಡು ಮನೆಯಿಂದ ಮತ್ತು ರುದ್ರಚಾಮುಂಡಿ ದೈವಸ್ಥಾನದಿಂದ ದೈವಗಳ ಭಂಡಾರ ಬರುವುದು, ರಾತ್ರಿ ಉಗ್ರಾಣ ತುಂಬಿಸುವುದು, ಅನ್ನಸಂತರ್ಪಣೆ, ರಾತ್ರಿ ಗಂಟೆ 9ಕ್ಕೆ ತಳೂರಿನಿಂದ ಶ್ರೀ ದೈವಗಳ ಭಂಡಾರ ಬರುವುದು,...
Ad Widget

ಅಜ್ಜಾವರ : ಕತ್ತಲಲ್ಲಿದ್ದ ಮನೆಗಳಿಗೆ ಸೋಲಾರ್ ದೀಪ ಅಳವಡಿಕೆ

ಅಜ್ಜಾವರ ಗ್ರಾಮ ಪಂಚಾಯತ್ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆಯ ವತಿಯಿಂದ ಅಜ್ಜಾವರ ಗ್ರಾಮದ ನೆಹರುನಗರ ಹಾಗೂ ಕಲ್ತಡ್ಕದ ಎರಡು ಮನೆಗಳಿಗೆ ಸೋಲಾರ್ ದೀಪ ಅಳವಡಿಸಿ ಕತ್ತಲಲ್ಲಿ ಓದುತ್ತಿದ್ದ ಎಸ್ ಎಸ್ ಎಲ್ ಸಿ ಮಕ್ಕಳ ಬಾಳಿಗೆ ಬೆಳಕು ನೀಡುವ ಕಾರ್ಯಕ್ರಮ ಮಾ.10 ರಂದು ನಡೆಯಿತು. ಮುಖ್ಯ ಶಿಕ್ಷಕರಾದ ಗೋಪಿನಾಥ್ ಮೆತ್ತಡ್ಕ ರವರು ಮನೆ ಮನೆ ಸಮೀಕ್ಷೆ...

ಹರಿಹರ ಪಲ್ಲತ್ತಡ್ಕ:-ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ಗ್ರಾ.ಪಂ.ಗೆ ಮನವಿ ಸಲ್ಲಿಕೆ

ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 1994ರಲ್ಲಿ ಮದ್ಯದಂಗಡಿ ವಿರೋಧಿ ಚಳುವಳಿ ಪ್ರಾರಂಭಗೊಂಡು ಸರ್ಕಾರದ ಪರವಾನಗಿ ಹೊಂದಿದ್ದ ಶರಾಬು ಅಂಗಡಿ ನಾಗರಿಕರ ಹೋರಾಟದ ಫಲವಾಗಿ 1994 ಜುಲೈ ತಿಂಗಳಿನಿಂದ ತೆರವುಗೊಂಡಿರುತ್ತದೆ. ಅಲ್ಲಿಂದ ಇದುವರೆಗೆ ಗ್ರಾಮದ ನಾಗರಿಕರು ನೆಮ್ಮದಿ ಹಾಗೂ ಶಾಂತಿಯುತ ಮತ್ತು ಅಭಿವೃದ್ಧಿಶೀಲ ಜೀವನವನ್ನು ನಡೆಸುತ್ತಿದ್ದಾರೆ....

ಜೇಸಿಐ ಸುಳ್ಯ ಸಿಟಿಯ ವತಿಯಿಂದ ಮಹಿಳಾ ದಿನಾಚರಣೆ

ಜೇಸಿಐ ಸುಳ್ಯ ಸಿಟಿಯ ವತಿಯಿಂದ ಮಹಿಳಾ ದಿನಾಚರಣೆಯನ್ನು ಮಾ.08 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಸುಳ್ಯ ಇಲ್ಲಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಶ್ರೀಮತಿ ಶೀತಲ್ ಶಾಲಾ ಮುಖ್ಯೋಪಾಧ್ಯಾಯರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪದ್ಮಿನಿ ದೈಹಿಕ ಶಿಕ್ಷಕಿ ಹಾಗೂ ಅಬ್ದುಲ್ ಸಮಾದ್ ಪ್ರಾಂಶುಪಾಲರು ಮತ್ತು ಜೇಸಿಐ ಸುಳ್ಯ ಸಿಟಿಯ ಅಧ್ಯಕ್ಷ ಜೇಸಿ ಚಂದ್ರಶೇಖರ ಕನಕಮಜಲು, ಸ್ಥಾಪಕರಾದ ಜೇಸಿ...

ಜನಾರ್ದನ ಮೊಟ್ಟೆಮನೆ ಆತ್ಮಹತ್ಯೆ

ಗುತ್ತಿಗಾರು ಗ್ರಾಮದ ಮೊಟ್ಟೆಮನೆ ಜನಾರ್ದನ ಗೌಡ ಮಾ.10. ರಂದು ಬೆಳಿಗ್ಗೆ ಮನೆಯ ಪಕ್ಕದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಇವರು ಪತ್ನಿ,ಮಗು ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಎಡಮಂಗಲ : ಸ್ನೇಹ ಸಂಜೀವಿನಿ ಚೆಕ್ ವಿತರಣೆ

ಸ್ನೇಹ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಎಡಮಂಗಲ ಇದರ ಚೆಕ್ ವಿತರಣಾ ಕಾರ್ಯಕ್ರಮ ಮಾ.9ರಂದು ಎಡಮಂಗಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸುಳ್ಯ ತಾ.ಪಂ ಅಧಿಕಾರಿ ಮಹೇಶ್ ಸಂಘದ ಸದಸ್ಯರಿಗೆ ಚಕ್ ವಿತರಿಸಿದರು. ಸಂಘದ ಎಂ.ಬಿ.ಕೆ. ಆಶಾದೀಪ ಎಡಮಂಗಲ, ಎಲ್.ಸಿ.ಆರ್.ಪಿ.ಪುಷ್ಪಾವತಿ ಮರ್ದೂರು,ಬೇಬಿ ಕೇರ್ಪಡ ಹಾಗೂ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು.

ಕಳಂಜ ಗ್ರಾಮ ಪಂಚಾಯತ್ ಪ್ರಕಟಣೆ : ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಲಭ್ಯ

ಕೋವಿಡ್ -19 ವೈರಾಣುವಿನ ವಿರುದ್ದ ಈಗಾಗಲೇ ದೇಶಾದ್ಯಂತ ಕೋವಿಶೀಲ್ಡ್ ಲಸಿಕೆಯನ್ನು ಫ್ರಂಟ್ ಲೈನ್ ವರ್ಕರ್ಸ್ ಗಳಿಗೆ ನೀಡಲಾಗಿದೆ. ಮುಂದುವರೆದು ಈಗ ಸಾರ್ವಜನಿಕರಿಗೆ ಅದರಲ್ಲೂ ಮುಖ್ಯವಾಗಿ 60 ವರ್ಷ ದಾಟಿದ ವಯಸ್ಕರಿಗೆ ಮತ್ತು 45-59 ವರ್ಷ ವಯೋಮಾನದ ಬಿಪಿ, ಶುಗರ್,ಅಸ್ತಮಾ, ಹೃದಯ, ಕಿಡ್ನಿ ಸಂಬಂಧಿತ ತೊಂದರೆ ಇರುವವರಿಗೆ ಮೊದಲ ಆದ್ಯತೆಯಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತದೆ. ವಾರದ ಪ್ರತಿ...

ಬೂಡು ಅಂಗನವಾಡಿಯಲ್ಲಿ ಮಹಿಳಾ ದಿನಾಚರಣೆ – ಸನ್ಮಾನ

ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಾ. 8 ರಂದು ಕೇರ್ಪಳದ ಅಂಗನವಾಡಿ ಶಾಲೆಯಲ್ಲಿ ಹಲವು ವರ್ಷಗಳ ಕಾಲ ಅಂಗನವಾಡಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಸುಮತಿ ಹಾಗೂ ಇನ್ನರ್ ವಿಲ್ ಕ್ಲಬ್ ಮತ್ತು ಸಮಾಜ ಸೇವೆ ಯಲ್ಲಿ ತೊಡಗಿಕೊಂಡಿರುವ ಶ್ರೀಮತಿ ಲತಾ ಕೇರ್ಪಳ ಅವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಬೂಡು ಅಂಗನವಾಡಿ ಕೇಂದ್ರ...

ಶಿಕ್ಷಣ ಸಂಸ್ಥೆಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕ ವಾತಾವರಣ ಅಗತ್ಯ – ಚಂದ್ರಶೇಖರ ಬಿಳಿನೆಲೆ

ಮಕ್ಕಳು ಇಂದಿನ ದಿನಗಳಲ್ಲಿ ಕೇಳಿ ಕಲಿಯುವುದಕ್ಕಿಂತ ಹೆಚ್ಚಾಗಿ ನೋಡಿ ಕಲಿಯುವುದನ್ನು ರೂಡಿಸಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಪೂರಕ ವಾತಾವರಣದ ಅಗತ್ಯ ಇದೆ ಎಂದು ವಲಯ ತರಬೇತಿದಾರರು, ಕೆವಿಜಿ ಪಾಲಿಟೆಕ್ನಿಕ್ ನ ಎನ್ನೆಸ್ಸೆಸ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆಯವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸುಳ್ಯದ...
Loading posts...

All posts loaded

No more posts

error: Content is protected !!