Ad Widget

ರಾಜ್ಯ ಮಟ್ಟದ ಯುವ ಸಂಭ್ರಮ ಅಂಗವಾಗಿ ವಾಹನ,ಆಹಾರ, ಕೃಷಿ ಹಾಗೂ ಪ್ರಾಚ್ಯ ವಸ್ತು ಮೇಳ ಉದ್ಘಾಟನೆ

ರಾಜ್ಯ ಮಟ್ಟದ ಯುವ ಸಂಭ್ರಮ ಅಂಗವಾಗಿ ವಾಹನ,ಆಹಾರ, ಕೃಷಿ ಹಾಗೂ ಪ್ರಾಚ್ಯ ವಸ್ತು ಮೇಳ ಉದ್ಘಾಟನೆ ಇಂದು ಸಂಜೆ ನಡೆಯಿತು. ವಾಹನ ಮೇಳ ಉದ್ಘಾಟನೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಎನ್ ಮನ್ಮಥ, ವಸ್ತು ಮೇಳ ಉದ್ಘಾಟನೆಯನ್ನು ಶ್ರೀ ಅನ್ನಪೂರ್ಣೇಶ್ವರೀ ಕ್ಷೇತ್ರ ಯೋಗೀಶ್ವರಿ ಸಿದ್ದ ಮಠ ಮರ್ಕಂಜ ಇದರ ದರ್ಮದರ್ಶಿ ರಾಜೇಶನಾಥ್ ಜೀ, ಕೃಷಿ ಮೇಳ...

ಕೊಲ್ಲಮೊಗ್ರು : “ನ್ಯಾಯಕ್ಕಾಗಿ ಒಂದಾಗೋಣ” ಸಮಿತಿಯ ವತಿಯಿಂದ ವೈದ್ಯಾಧಿಕಾರಿಗಳಾದ ಡಾ| ಕುಲದೀಪ್.ಎಂ.ಡಿ ರವರಿಗೆ “ಅಭಿನಂದನಾ ಕಾರ್ಯಕ್ರಮ” ; “ಈ ಅಭಿನಂದನೆಯಿಂದ ನಾನು ಧನ್ಯನಾಗಿದ್ದೇನೆ” ಡಾ| ಕುಲದೀಪ್.ಎಂ.ಡಿ ; “ವೈದ್ಯರು ರೋಗಿಗಳನ್ನು ಬೆನ್ನು ತಟ್ಟಿ ಮಾತನಾಡಿಸಿದರೆ ಸಾಮಾನ್ಯ ಕಾಯಿಲೆ ವಾಸಿಯಾಗುತ್ತದೆ” : ಶಿವರಾಮ ಮಾಸ್ತರ್ ಕುಂಞೇಟಿ

ಕೊಲ್ಲಮೊಗ್ರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡುವರೆ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ| ಕುಲದೀಪ್.ಎಂ.ಡಿ ರವರು ಇಂದು(ಡಿ.17) ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮ್ಮ ಕೊನೆಯ ಕರ್ತವ್ಯ ದಿನವನ್ನು ಪೂರೈಸುತ್ತಿದ್ದು, ಆ ಪ್ರಯುಕ್ತ “ನ್ಯಾಯಕ್ಕಾಗಿ ಒಂದಾಗೋಣ” ಸಮಿತಿಯ ಸದಸ್ಯರಿಂದ ಡಾ| ಕುಲದೀಪ್ ರವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಭಿನಂದನಾ ಸಮಾರಂಭ...
Ad Widget

ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯಕ್ಕೆ ಶೇ.100 ಫಲಿತಾಂಶ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ನಿರ್ಣಯ ಮಂಡಳಿ, ಬೆಂಗಳೂರು ಇವರು ನಡೆಸುವ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯವು ಶೇಕಡಾ 100 ಫಲಿತಾಂಶ ದಾಖಲಿಸಿದ್ದು, ಸಂಸ್ಥೆಯಿಂದ ಒಟ್ಟು ಲೋವರ್ ಗ್ರೇಡ್ ಪರೀಕ್ಷೆಯಲ್ಲಿ 11 ವಿದ್ಯಾರ್ಥಿಗಳು ಹಾಗೂ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ 15 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಹೈಯರ್ ಗ್ರೇಡ್ ನಲ್ಲಿ ತನ್ವಿ ಪಿ.ಎಸ್...

ಅಜ್ಜಾವರ : ಮೇದಿನಡ್ಕದಲ್ಲಿ ಪೊಂಗಲ್ ಹಬ್ಬ ಆಚರಣೆ

ಅಜ್ಜಾವರ : ಮೇದಿನಡ್ಕದಲ್ಲಿ ಪೂರ್ವ ಸಂಪ್ರದಾಯದಂತೆ ನಡೆದುಕೊಂಡು ಬಂದ ಪೊಂಗಲ್ ಆಚರಣೆಯು ಶ್ರೀ ರಾಮ ಭಜನಾ ಮಂದಿರದಲ್ಲಿ ಜ.15 ರಂದು ಪೊಂಗಲ್ ಆಚರಣೆಯೊಂದಿಗೆ ವಿಜ್ರಂಭಣೆಯಿಂದ ಸಮಾಪನಗೊಂಡಿತು. ಬೆಳಗ್ಗೆ 8:30ಕ್ಕೆ ಶ್ರೀ ರಾಮಚಂದ್ರನಿಗೆ ವಿಶೇಷ ಅಲಂಕಾರ ಪೂಜೆ, ಪ್ರಸಾದ ವಿತರಣೆ ನಡೆಯಿತು. ತದ ನಂತರ ಮನೆ ಮನೆ ಭಜನಾ ಸಂಕೀರ್ತನೆ, ತ್ರಿಶೂಲ ದೀಪದೊಂದಿಗೆ ಶ್ರೀ ರಾಮ ದೇವರ...

ಕನಕಮಜಲು : ಯುವಜನ ವಿಕಾಸ ಕೇಂದ್ರ ಯುವಕ ಮಂಡಲದ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ

ಯುವಜನ ವಿಕಾಸ ಕೇಂದ್ರ ಯುವಕ ಮಂಡಲ(ರಿ.) ಕನಕಮಜಲು ಇದರ ವಾರ್ಷಿಕ ಸಭೆಯು 11 ಜನವರಿ 2026ನೇ ಆದಿತ್ಯವಾರದಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ವಾರ್ಷಿಕ ಮಹಾಸಭೆಯ ಸಭಾಧ್ಯಕ್ಷರಾಗಿ ಯುವಕ ಮಂಡಲ(ರಿ.) ಕನಕಮಜಲು ಇದರ ಅಧ್ಯಕ್ಷರಾದ ಹರ್ಷಿತ್ ಉಗ್ಗಮೂಲೆ ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ರಕ್ಷಿತ್ ಅಕ್ಕಿಮಲೆ, ಕಾರ್ಯದರ್ಶಿ ಅಶ್ವಥ್ ಅಡ್ಕಾರ್ ಉಪಸ್ಥಿತರಿದ್ದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಅಶ್ವಥ್ ಅಡ್ಕಾರ್...

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ : ಧ್ವಜಾರೋಹಣ

ಪೆರುವಾಜೆ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಧ್ವಜಾರೋಹಣಗೊಳ್ಳುವ ಮೂಲಕ ಮಾಗಣೆ ವ್ಯಾಪ್ತಿಯಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ‌. ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿ ಅವರ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ...

ಚಿನ್ನಮ್ಮ ವಳಲಂಬೆ ಇವರಿಂದ ಸೇವೆಯಾಟ ಶ್ರೀ ದೇವಿ ಮಹಾತ್ಮೆ ಪ್ರದರ್ಶನ – ಅಮರ ಸುದ್ದಿಯಲ್ಲಿ ನೇರಪ್ರಸಾರ

https://www.youtube.com/live/lIdKkIymSz4?si=_n4t6AQmjjZ1WtOz ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಚಿನ್ನಮ್ಮ ವಳಲಂಬೆ ಮತ್ತು ಮನೆಯವರ ಸೇವೆಯಾಟ  ಶ್ರೀ ದೇವಿ ಮಹಾತ್ಮೆ ಜ.16 ಶುಕ್ರವಾರ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಶ್ರೀ ದೇವಿಯ ಪೂಜೆಯೊಂದಿಗೆ ಆರಂಭಗೊಂಡಿತು.. ಇದರ ನೇರ ಪ್ರಸಾರ ಅಮರ ಸುದ್ದಿ ಯೂಟ್ಯೂಬ್ ನಲ್ಲಿ  ನಡೆಯುತ್ತಿದೆ.

ಚಿನ್ನಮ್ಮ ವಳಲಂಬೆ ಇವರಿಂದ ಸೇವೆಯಾಟ “ಶ್ರೀ ದೇವಿ ಮಹಾತ್ಮೆ ಪ್ರದರ್ಶನ” – ಅಮರ ಸುದ್ದಿಯಲ್ಲಿ ನೇರಪ್ರಸಾರ

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಚಿನ್ನಮ್ಮ ವಳಲಂಬೆ ಇವರಿಂದ ಸೇವೆಯ ಯಕ್ಷಗಾನ “ಶ್ರೀ ದೇವಿ ಮಹಾತ್ಮೆ” ಜ.16 ಶುಕ್ರವಾರ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಶ್ರೀ ದೇವಿಯ ಪೂಜೆಯೊಂದಿಗೆ ಆರಂಭಗೊಂಡಿತು. ಅಮರ ಸುದ್ದಿ ಯೂಟ್ಯೂಬ್ ನಲ್ಲಿ ನೇರ ಪ್ರಸಾರ ನಡೆಯುತ್ತಿದೆ.

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ನೂತನ ಅರ್ಚಕರಾಗಿ ಸುಬ್ರಹ್ಮಣ್ಯ ಶರ್ಮ

ಪಂಜ : ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ನೂತನ ಅರ್ಚಕರಾಗಿ ಸುಬ್ರಹ್ಮಣ್ಯ ಶರ್ಮ ನೇಮಕಗೊಂಡಿದ್ದಾರೆ.ಇವರಿಗೆ ದೇಗುಲದ ವತಿಯಿಂದ ಪ್ರಾರ್ಥನೆ ಮಾಡಿ ಪ್ರಸಾದ ನೀಡಲಾಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂ‌ರ್, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಮಾಯಿಲಪ್ಪ ಗೌಡ ಎಮ್ಮೂರು, ಧರ್ಮಣ್ಣ ನಾಯ್ಕ ಗರಡಿ, ಸಂತೋಷ್ ಕುಮಾ‌ರ್ ರೈ ಬಳ್ಳ, ಹಾಗೂ...

ಐವರ್ನಾಡು : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವವು ಫೆ.08, 09 ಹಾಗೂ 10 ರಂದು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆಯು ಜ.14 ರಂದು ದೇವಸ್ಥಾನದಲ್ಲಿ ನಡೆಯಿತು.ದೇವಸ್ಥಾನದ ಅರ್ಚಕ ರಾಮಚಂದ್ರ ಪಿ.ಜಿ.ಪೂಜಾ ಕಾರ್ಯ ನೆರವೇರಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್‌ ಬಾಂಜಿಕೋಡಿ, ವೈದಿಕ ಮುಖ್ಯಸ್ಥ ರಾಜಾರಾಮ...
Loading posts...

All posts loaded

No more posts

error: Content is protected !!