- Tuesday
- March 10th, 2026
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಕಟ್ಟ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಾಧವ ಚಾಂತಾಳ, ಗ್ರಾಮ ಪಂಚಾಯತ್ ಸದಸ್ಯರಾದ ಜಯಶ್ರೀ ಚಾಂತಾಳ, ಕೀರ್ತಿ ಸ್ವಸಹಾಯ ಸಂಘದ ಎಂ.ಬಿ.ಕೆ ವಿಮಲಾಕ್ಷಿ ಗೊಳ್ಯಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಮುಖ್ಯೋಪಾಧ್ಯಾಯರಾದ ಶ್ರೀಮತಿ...
ಇಂದು(ಜ.26) ಕೊಲ್ಲಮೊಗ್ರು ಗ್ರಾಮದ ಗಾಳಿಗನಮಜಲು-ಚಾಳೆಪ್ಪಾಡಿಯಲ್ಲಿ “ಶ್ರೀ ಅಗ್ನಿ ಗುಳಿಗ ರಾಜನ ನೇಮೋತ್ಸವ”ವು ನಡೆಯಲಿದ್ದು, ಸಂಜೆ 6:00 ಗಂಟೆಗೆ ಮಿತ್ತೊಡಿ ದೈವಸ್ಥಾನದಿಂದ ದೀವಟಿಗೆ ಮೂಲಕ ಭಂಡಾರ ತರುವುದು, ಸಂಜೆ 7:00 ಗಂಟೆಗೆ ಮೇಲೆರಿಗೆ ಅಗ್ನಿ ಸ್ಪರ್ಶ, ರಾತ್ರಿ 8:30ಕ್ಕೆ ಅನ್ನಸಂತರ್ಪಣೆ ಹಾಗೂ ರಾತ್ರಿ 10:00 ಗಂಟೆಯಿಂದ ಶ್ರೀ ದೈವದ ನೇಮೋತ್ಸವ ನಡೆದು ನಂತರ ಪ್ರಸಾದ ವಿತರಣೆ ನಡೆಯಲಿದೆ.
ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆ ಮೆತ್ತಡ್ಕ ರಸ್ತೆಯನ್ನು ರಸ್ತೆಯ ಪಲಾನುಭವಿಗಳಾದ ಕೃಷಿಕ ಮೆತ್ತಡ್ಕ ನರಸಿಂಹ ಗೌಡರು ದೀಪ ಬೆಳಗಿಸಿ ಉದ್ಘಾಟಿಸಿದರು. ಪಾರೆಪ್ಪಾಡಿ ಬೆಳ್ಯಪ್ಪ ಗೌಡರು ತೆಂಗಿನ ಕಾಯಿ ಒಡೆದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸದಸ್ಯರಾದ ದುರ್ಗಾದಾಸ್ ಮೆತ್ತಡ್ಕ, ರಾಜೇಶ್ವರಿ ಮಾವಿನಕಟ್ಟೆ, ಶರತ್ ಮೆತ್ತಡ್ಕ, ಅಬ್ದುಲ್ಲ ಮೆತ್ತಡ್ಕ,ಯಶವಂತ ಮೆತ್ತಡ್ಕ,ಅಶ್ವತ್ ಗೌಡ...
ಕನಕಮಜಲು : ಯುವಜನ ವಿಕಾಸ ಕೇಂದ್ರ ಯುವಕ ಮಂಡಲ(ರಿ.) ಕನಕಮಜಲು ಇದರ ಆಶ್ರಯದಲ್ಲಿ ಜ.22 ಮತ್ತು 23 ರಂದು ಕನಕಮಜಲು ಪೇಟೆಯಿಂದ ಶ್ರೀರಾಮ್ ಪೇಟೆ ಕನಕಮಜಲಿನವರೆಗೆ ಸ್ವಚ್ಛತಾ ಕಾರ್ಯಕ್ರಮ, ಆತ್ಮಾರಾಮ ಭಜನಾ ಮಂದಿರದ ಬಳಿಯಲ್ಲಿ ರಸ್ತೆಯ ಪಕ್ಕ ಮಣ್ಣು ಹಾಕಿ ಶ್ರಮದಾನ ನಡೆಸಲಾಯಿತು.ಈ ಸಂದರ್ಭದಲ್ಲಿ ಕನಕಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀಧರ್ ಕುತ್ಯಾಳ, ಸದಸ್ಯ ಜಗನ್ನಾಥ...
ಚಿಗುರು ಗೆಳೆಯರ ಬಳಗ(ರಿ.) ಪಂಬೆತ್ತಾಡಿ ಇದರ ಆಶ್ರಯದಲ್ಲಿ ಮೂರನೇ ವರ್ಷದ ಚಿಗುರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಜ.25 ರಂದು ಪಂಬೆತ್ತಾಡಿ ಶಾಲಾ ಆಟದ ಮೈದಾನದಲ್ಲಿ ಜರುಗಿತು. ಇದರ ಅಧ್ಯಕ್ಷತೆಯನ್ನು ಚಿಗುರು ಗೆಳೆಯರ ಬಳಗದ ಅಧ್ಯಕ್ಷರಾದ ಅಶ್ವತ್ ಬಾಬ್ಲುಬೆಟ್ಟು ವಹಿಸಿದ್ದರು. ಉದ್ಘಾಟನೆಯನ್ನು ಕಲ್ಮಡ್ಕ ಗ್ರಾ.ಪಂ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ನೆರೆವೇರಿಸಿದರು.ಗೌರವ ಉಪಸ್ಥಿತಿಯಲ್ಲಿ...
ಉತ್ತರ ಕನ್ನಡದ ದಾಂಡೇಲಿಯಲ್ಲಿ ನಡೆದ ಸಾಯಿ ಸೂಪರ್ ಸಿಂಗರ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಸುಳ್ಯದ ಅಶ್ವಿಜ್ ಆತ್ರೇಯ
ದಾಂಡೇಲಿಯ ಪ್ರತಿಷ್ಠಿತ ಸಂಗೀತ ಸಂಸ್ಥೆಯಾದ ಸಾಯಿ ಮೆಲೋಡೀಸ್ ಇದರ 10ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಗರಸಭೆ ಮೈದಾನದಲ್ಲಿ ನಡೆದ ಸೂಪರ್ ಸಿಂಗರ್ ಸೀಸನ್ ವನ್ ಸ್ಪರ್ಧೆಯಲ್ಲಿ ಸುಳ್ಯದ ಅಶ್ವಿಜ್ ಆತ್ರೇಯ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.ನಿರ್ಣಾಯಕರಾಗಿ ಹುಬ್ಬಳ್ಳಿಯ ಆನಂದ ಗುರುಮಠ ಹಾಗೂ ಹಳಿಯಾಳದ ಮಹಾನಂದ ಗೋಸಾವಿ ಉಪಸ್ಥಿತರಿದ್ದರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್...
ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಬೆಳ್ಳಾರೆ ಸಹಭಾಗಿತ್ವದಲ್ಲಿ ಡಾ-ಅಶ್ವಿನ್ ಐ ಕೇರ್ ಸೆಂಟರ್ ಪುತ್ತೂರು ಸಹಕಾರದೊಂದಿಗೆ ಉಚಿತನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವು ಜ.25 ರಂದು ಬೆಳಿಗ್ಗೆ ಘಂಟೆ10:00 ರಿಂದ 1:00 ರವರೆಗೆ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ.ಈ ಶಿಬಿರದ ವಿಶೇಷತೆ ಏನೆಂದರೆ ಶಿಬಿರದಲ್ಲಿ...
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಜ.24 ರಿಂದ ಫೆ.9 ತನಕ ನಡೆಯಲಿದ್ದು, ಇದರ ಅಂಗವಾಗಿ ಜ.24 ರಂದು ಗೊನೆ ಮುಹೂರ್ತ ನಡೆಯಿತು. ಕುದ್ವ ತೋಟದಲ್ಲಿ ಗೊನೆ ಕಡಿದು ಬ್ಯಾಂಡ್ ವಾಲಗದ ಮೆರವಣಿಗೆಯಲ್ಲಿ ದೇವಳಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ...
ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಗುರುಗಳಾದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬೆಂಗಳೂರಿನಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಗುರುಕುಲವನ್ನು ಸ್ಥಾಪಿಸಿದ್ದಾರೆ.ಈ ಗುರುಕುಲದಲ್ಲಿ ಸಹಸ್ರಾರುಚ ವಿದ್ಯಾರ್ಥಿಗಳು ಶಾಸ್ತ್ರವನ್ನು ಅಭ್ಯಸಿಸುತ್ತಿದ್ದಾರೆ.ಇಲ್ಲಿ 12 ವರ್ಷ ಅಧ್ಯಾಯನ ಪೂರ್ತಿಗೊಳಿಸಿದ ವಿದ್ಯಾಥಿಗಳಿಗೆ ಘಟಿಕೋತ್ಸವವನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆಸುತ್ತಾ ಬರಲಾಗಿದೆ.ಈ ವರ್ಷ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ...
ಸುಬ್ರಹ್ಮಣ್ಯ ಜನವರಿ 23 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು, ಭಜನೋತ್ಸವ-2026 ಸಮಿತಿ ಸುಬ್ರಹ್ಮಣ್ಯ ವಲಯ ಮತ್ತು ಸ್ಥಳೀಯ ಎಲ್ಲಾ ಸಂಘ-ಸಂಸ್ಥೆಗಳ ಹಾಗೂ ಭಜಕರ ಸಹಯೋಗದಲ್ಲಿ ಜನವರಿ 8ರಂದು ಆದಿತ್ಯವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ರಥಬೀದಿ...
Loading posts...
All posts loaded
No more posts
