- Saturday
- March 14th, 2026
ಭಾರತೀಯ ಗಡಿ ರಕ್ಷಣಾ ಪಡೆಗೆ ಆಯ್ಕೆಯಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆಯ ಅರೆಭಾಷಿಕ ಯುವತಿ ಕುಮಾರಿ ಸುಶ್ಮಿತಾ ಎಂ.ಎ ಇವರನ್ನು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆ.31 ರಂದು ಗೌರವಿಸಿ ಸನ್ಮಾನಿಸಲಾಯಿತು. ಸುಳ್ಯದ ಸದರ್ನ್ ರೆಸಿಡೆನ್ಸಿಯ ಸಭಾಂಗಣದಲ್ಲಿ ನಡೆದ ಅನೌಪಚಾರಿಕ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಸಾಧಕಿಯನ್ನು ಸನ್ಮಾನಿಸಿ...
ಶಿಕ್ಷಣ ಇಲಾಖೆಯಲ್ಲಿ ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದು ಆ. ೩೧ರಂದು ಸೇವಾ ನಿವೃತ್ತರಾದ ರತ್ನಾಕರ್ ಕೆ.ಯವರಿಗೆ ರತ್ನಾಕರ್ ಅಭಿಮಾನಿಗಳ ಬಳಗದಿಂದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಆ.೩೦ರಂದು ಸುಳ್ಯ ಸಿ.ಎ. ಬ್ಯಾಂಕ್ ಎ.ಎಸ್. ವಿಜಯಕುಮಾರ್ ಸಭಾಂಗಣದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ.ಯವರ ಅಧ್ಯಕ್ಷತೆಯಲ್ಲಿ...
ಎಸ್ಸೆಸ್ಸೆಫ್(ಸುನ್ನೀ ಸ್ಟುಡೆಂಟ್ ಫೆಡರೇಷನ್)ಬೆಳ್ಳಾರೆ ಸೆಕ್ಟರ್ ಸಾಹಿತ್ಯೋತ್ಸವವು ಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಸಿರಾಜುಲ್ ಹುದಾ ಸೆಕೆಂಡರಿ ಮದರಸ ವಠಾರದಲ್ಲಿ ಆ 31ರಂದು ಜರುಗಿತು. ಬೆಳಿಗ್ಗೆ 9 ಘಂಟೆಗೆ ಪಳ್ಳಿಮಜಲು ಮಸೀದಿಯ ಸಿರಾಜುಲ್ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಹನೀಫ್ ಸಲಾಲಹ್ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಉದ್ಘಾಟನೆಯನ್ನು ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ) ಮಸೀದಿಯ ಖತೀಬ್ ರಫೀಖ್...
ಸುರಿದ ಮಳೆ ಹನಿಗೂ ತಿಳಿಯಲಾಗಲಿಲ್ಲ ತಾನೇಕೆ ಆಗಸವ ಬಿಟ್ಟು ಭೂಮಿಗೆ ಬಂದೆ ಎಂದು, ಮಣ್ಣಿಗೆ ಸೇರಿದೆ ಎಂದು, ಅರಿಯುವಷ್ಟರಲ್ಲಿ ಆರಿ ಹೋಯಿತು ಇಂಗಿ ಮಣ್ಣ ಸೇರಿತು ಇಂದು, ಆದರೂ ಅದು ಮಣ್ಣಲ್ಲಿ ಸೇರಲು ಕಾರಣವೂ ಇತ್ತು ಒಂದು, ಆ ಕಾರಣವು ಅದಕ್ಕರಿವಿಲ್ಲದೇ ಪೂರ್ಣವಾಯಿತು ಇಂದು...ಹಾರಿದ ದೂಳಿನ ಕಣಕ್ಕೂ ಅರಿಯಲಾಗಲಿಲ್ಲ ತಾನೇಕೆ ಹಾರಿದೆ ಎಂದು, ಭುವಿಯ ಬಿಟ್ಟು...
ಸುಳ್ಯದ ಪ್ರಸಿದ್ಧ ಗೃಹೋಪಯೋಗಿ ವಸ್ತುಗಳ ಮಳಿಗೆ ಅಡ್ಕಾರ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು 30ನೇ ವಸಂತಕ್ಕೆ ಕಾಲಿರಿಸಿದ ಹಿನ್ನೆಲೆಯಲ್ಲಿ ಗ್ರಾಹಕರ ಪ್ರತೀ ಖರೀದಿಗೆ ಬಂಪರ್ ಬಹುಮಾನ, ವೀಕ್ಲಿ ಬಹುಮಾನ ಹಾಗೂ ಸ್ಕ್ರಾಚ್ ಕಾರ್ಡ್ ಮುಖಾಂತರ 10 ಲಕ್ಷಕ್ಕೂ ಮಿಕ್ಕಿ ಗೆಲ್ಲುವ ಅವಕಾಶ ಒದಗಿಸಿದೆ.ಅಡ್ಕಾರ್ ಮಹೋತ್ಸವವು ಆ.25 ರಂದು ಆರಂಭವಾಗಿದ್ದು, ಸೆ.07 ರವರೆಗೆ ನಡೆಯಲಿದೆ.ಆ.31 ರಂದು ಸ್ಕ್ರಾಚ್ ಕಾರ್ಡ್ ನಲ್ಲಿ...
ಸುಳ್ಯದ ಅಂಬಟೆಡ್ಕದ ಕೆ.ವಿ.ಜಿ ಆಯುರ್ವೇದಿಕ್ ಆಸ್ಪತ್ರೆ ಬಳಿ ಶ್ರೀ ಆಟೋಮೊಬೈಲ್ ಸ್ಪೇರ್ಸ್ ಸಂಸ್ಥೆ ಆ.31 ರಂದು ಶುಭಾರಂಭಗೊಂಡಿತು. ಇಲ್ಲಿ ನಾಲ್ಕು ಚಕ್ರದ ವಾಹನಗಳ ಬಿಡಿಭಾಗಗಳು ಲಭ್ಯವಿರಲಿದೆ.ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭಾರೈಸಿದರು. ಅತಿಥಿಗಳಾಗಿ ನ.ಪಂ. ಸದಸ್ಯರಾದ ಎಂ ವೆಂಕಪ್ಪ ಗೌಡ, ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಕಿಶೋರಿ ಶೇಟ್, ವರ್ತಕರ ಸಂಘದ...
ಸುಬ್ರಹ್ಮಣ್ಯ : ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈಧಿಕ ವಿದಿವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಆ.31 ಆದಿತ್ಯವಾರದಂದು ನೆರವೇರಿತು. ಈ ನಿಮಿತ್ತ ಪ್ರಾತಃಕಾಲ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಮೂಲ ವಿಗ್ರಹಕ್ಕೆ ಪಂಚಾಮೃಮಹಾಭಿಷೇಕವನ್ನು ಶ್ರೀ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಸೀತಾರಾಮ...
ಶ್ರೀ ಸರ್ವೇಜನಾ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್(ರಿ.) ನಾಗರ ಬಾವಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಭಾಗಿತ್ವದಲ್ಲಿ ಆ.31 ರಂದು ಸವಾಯಿ ಗಂಧರ್ವ ಕಲಾಮಂದಿರ ಹುಬ್ಬಳ್ಳಿಯಲ್ಲಿ ಯೋಗ ಪಟು ಗೌರಿತಾ ಕೆ.ಜಿ ಅವರಿಗೆ “ಕರುನಾಡ ತಾರೆ ರಾಜ್ಯ ಪ್ರಶಸ್ತಿ” ಪ್ರಧಾನ ಮಾಡಲಾಯಿತು. ಗೌರಿತಾ ಇದುವರೆಗೆ ಯೋಗದಲ್ಲಿ ಮಾಡಿದ 15 ದಾಖಲೆಗಳನ್ನು ಪರಿಶೀಲಿಸಿ...
ಮಂಡೆಕೋಲು ಗ್ರಾಮದ ಕಲ್ಲಡ್ಕ ಸ.ಕಿ.ಪ್ರಾ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿರುವ ಶ್ರೀಮತಿ ದುರ್ಗಾಪರಮೇಶ್ವರಿಯವರು ಆ.31 ರಂದು ಸೇವೆಯಿಂದ ನಿವೃತ್ತರಾದರು.1996ರಲ್ಲಿ ಸ.ಹಿ.ಪ್ರಾ ಶಾಲೆ ಅಡ್ಪಂಗಾಯದಲ್ಲಿ ವೃತ್ತಿ ಸೇವೆ ಆರಂಭಿಸಿ, 2023ರಿಂದ ಸ.ಉ.ಹಿ.ಪ್ರಾ ಶಾಲೆ ಮಂಡೆಕೋಲಿಗೆ ವರ್ಗಾವಣೆಗೊಂಡರು. ಅಲ್ಲಿ ಹದಿಮೂರುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದರು. 2016ರಲ್ಲಿ ಸ.ಕಿ.ಪ್ರಾ.ಶಾಲೆ ಕಲ್ಲಡ್ಕಕ್ಕೆ ವರ್ಗಾವಣೆಗೊಂಡರು. 30 ವರ್ಷಗಳ ಸೇವೆಯ ಬಳಿಕ ಆ.31ರಂದು...
ನಿಟ್ಟೆ ಎನ್ ಎಮ್ ಎ ಎಮ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ವಿಭಾಗದ ವಿದ್ಯಾರ್ಥಿ ನಾಯಕನಾಗಿ ಅಪೇಕ್ಷ್ ಎಂಪಿ ಆಯ್ಕೆ
ನಿಟ್ಟೆ ಎನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಅಪೇಕ್ಷ್ ಎಂ.ಪಿ. ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇವರು ಗುತ್ತಿಗಾರು ಗ್ರಾಮದ ಮಣಿಯಾನ ನಿವೃತ್ತ ಪಿಡಿಒ ಪುರುಷೋತ್ತಮ ಹಾಗೂ ಪೈಕ ಶಾಲಾ ಮುಖ್ಯಶಿಕ್ಷಕಿ ಸ್ನೇಹಲತಾ ದಂಪತಿಗಳ ಪುತ್ರ.
Loading posts...
All posts loaded
No more posts
