- Tuesday
- March 10th, 2026
ಮೋಹಿತ್ ಎ ಎಸ್ ಅವರ ಸಾರಥ್ಯದಲ್ಲಿ ಅಕ್ಯುಮೆನ್ ಇಂಡಿಯಾ ಲಿಮಿಟೆಡ್ ಎಂಬ ಸ್ಟಾಕ್ ಬ್ರೋಕಿಂಗ್ ಕಂಪೆನಿ ಜೂ.೨೨ರಂದು ಶುಭಾರಂಭಗೊಂಡಿದೆ.ಸುಳ್ಯ ತಾಲೂಕು ಕಛೇರಿಯ ಮುಂಭಾಗದಲ್ಲಿರುವ ಸಂಸ್ಥೆಯನ್ನು ಕೇವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಎ ಜ್ಞಾನೇಶ್ರವರು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕಾಮರ್ಸ್ ಆಫ್ ಛೇಂಬರಿನ ಅಧ್ಯಕ್ಷ ಸುಧಾಕರ ರೈ, ವಿಜಯ್ ಕುಮಾರ ಮಯೂರಿ, ಕೃಷ್ಣಪ್ರಸಾದ್ ದೋಳ,...
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ವಿಶ್ವವ್ಯಾಪಿ ಹರಡುತ್ತಿರುವ ಕೊರೋನ ವೈರಸ್ ನಾಶಕ್ಕಾಗಿ ವೇ.ಮೂ.ವೆಂಕಟ್ರಮಣ ಭಟ್ ಬಳ್ಳಕ ಇವರ ನೇತೃತ್ವದಲ್ಲಿ ಶ್ರೀ ಆದಿತ್ಯಾತ್ಮಕ ರುದ್ರಹವನ ನಡೆಯಿತು. ದೇವಾಲಯದ ಪ್ರಧಾನ ಅರ್ಚಕರಧ ರಾಮಚಂದ್ರ ಭಟ್, ನಾಗರಾಜ್ ಹೆಗ್ಡೆ ಮತ್ತು ದೇವಾಲಯದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು ಉಪಸ್ಥಿತರಿದ್ದರು.
ಮೆಸ್ಕಾಂ ಉಪ್ಪಿನಂಗಡಿ ಶಾಖಾ ವ್ಯಾಪ್ತಿಯ ಪಿಲಿಗೂಡು ಎಂಬಲ್ಲಿ ಮೆಸ್ಕಾಂ ಕರ್ತವ್ಯದ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಪವರ್ ಮ್ಯಾನ್ ಬಸವರಾಜು ಕಟ್ಟಪರ (25) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.ಲೈನ್ ಆಫ್ ಮಾಡುವ ವೇಳೆ ಗ್ರೌಂಡ್ ಆಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.ಮೃತ ಬಸವರಾಜು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ನಿವಾಸಿ ಎಂದು ತಿಳಿದು...
ಕಟ್ಟೆಕ್ಕಾರ್ ಬಳಿ (ಚೆನ್ನಕೇಶವ ದೇವಸ್ಥಾನ ರಸ್ತೆ)ಯ ಈ ಹಿಂದೆ ಚರಂಡಿಯಲ್ಲಿ ಇರುವ ನೀರಿನ ಪೈಪು ಒಡೆದು ಕುಡಿಯುವ ನೀರು ತ್ಯಾಜ್ಯ ನೀರಿನೊಂದಿಗೆ ಹರಿಯುತ್ತಿರುವ ಬಗ್ಗೆ ದೂರು ನೀಡಿ ತಕ್ಷಣ ಪಂಚಾಯತ್ ಸಿಬ್ಬಂದಿ ದುರಸ್ತಿ ಪಡಿಸಿದ್ದು ಕೆಲವೇ ಕ್ಷಣದಲ್ಲಿ ಮತ್ತೇ ಮೊದಲಿನಂತೆ ಆಗಿದ್ದು, ಈಗ ಪಂಚಾಯತು ಸಲಕರಣೆ ಮತ್ತು ತಜ್ಞರು ಹಾಸನದಿಂದ ಬಂದು ದುರಸ್ತಿ ಮಾಡಲಿದ್ದಾರೆಂದು ಹಾರಿಕೆಯ...
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(27.06.2020 ಶನಿವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 262ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...
ದಕ್ಷಿಣಕನ್ನಡ - ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಮೈಸೂರು - ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ನಡುವೆ ಇರುವ ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಕಲ್ಲಾಳ ಅರೆಕಲ್ಲು ಎರಡು ಉಪ ಗ್ರಾಮದೊಂದಿಗೆ ಸಂಪಾಜೆ 750 ಮನೆಗಳೊಂದಿಗೆ ಒಟ್ಟು 3400 ಜನಸಂಖ್ಯೆ ಹೊಂದಿದ್ದು, ಹೋಬಳಿ ಮಟ್ಟದ, ವಿವಿಧ ಇಲಾಖೆಗಳಿದ್ದು, ಗ್ರಾಮದಲ್ಲಿ ಅಂಗನವಾಡಿ, ಆರಕ್ಷಕ ಠಾಣೆ, ಅರಣ್ಯ ಇಲಾಖೆ, ಕಂದಾಯ...
ಗಿಡನೆಟ್ಟು ಪೋಷಿಸಿ ಹೂ ಬಿಡುವುದನ್ನೇ ಕಾಯುತ್ತಿದ್ದ ಪುಷ್ಪಪ್ರೇಮಿಗಳಿಗೆ ಗಿಡದಲ್ಲಿ ಹೂವಿನ ಮೊಗ್ಗು ಕಂಡಾಗ ಸಂಭ್ರಮ ಜೊತೆಗೆ ಸಾರ್ಥಕ ಭಾವ ಮನೆ ಮಾಡುತ್ತದೆ. ಅದರೇ ಒಂದೋ ಎರಡೋ ವರ್ಷಕ್ಕೊಮ್ಮೆ ಹೂ ಬಿಡುವ ಬ್ರಹ್ಮಕಮಲ ಕಂಡರೇ ಎಷ್ಷು ಸಂತೋಷವಾಗಬಹುದಲ್ಲವೇ ? ಅಂದಹಾಗೆ ಈ ಬ್ರಹ್ಮಕಮಲ ಅರಳಿದ್ದು ಗುತ್ತಿಗಾರು ಗ್ರಾಮದ ಅಮೆ ಮನೆ ವೀರಪ್ಪ ಗೌಡರ ಮನೆಯಲ್ಲಿ . ಒಂದಷ್ಟು...
ಸುಳ್ಯ ತಾ.ದೇವಚಳ್ಳ ಗ್ರಾಮದ ದೇವ ಸೀತಾರಾಮ ಗೌಡರ ಪುತ್ರಿ ಗೀತಾ ಳ ವಿವಾಹವು ಕಡಬ ತಾ. ಸವಣೂರು ಗ್ರಾಮದ ಆರೇಲ್ತಡಿ ಹೊನ್ನಪ್ಪ ಗೌಡರ ಪುತ್ರ ಪ್ರಸಾದ್ ರೊಂದಿಗೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನ ಶಾಂತಿಮೊಗರು ಕುದ್ಮಾರು ಇಲ್ಲಿ ಜೂ. 14 ರಂದು ನಡೆಯಿತು.
ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಟಿ.ಬಿ ಸೆಕ್ಷನ್ ನಲ್ಲಿ ಕಳೆದ 15 ವರುಷದಿಂದ ಕೆಲಸ ನಿರ್ವಹಿಸುತ್ತಿರುವ ಹರಿಪ್ರಸಾದ್ ಹಾಲೆಮಜಲು ಲಾಕ್ಡೌನ್ ಪ್ರಾರಂಭವಾದಗಿನಿಂದಲೂ ಇವತ್ತಿನ ವರೆಗೆ ಕೊರೋನಾ ವಾರಿಯರ್ಸ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಿಪಿಇ ಕಿಟ್ (personal protection equipment kit)ಆಳವಡಿಸಿಕೊಂಡು ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೊರದೇಶಗಳಿಂದ ಬರುವ ಪ್ರಯಾಣಿಕರ ಮತ್ತು ವೆನ್ಲಾಕ್ ಆಸ್ಪತ್ರೆಗೆ ಬರುವ ಕೋರಾನಾ ರೋಗಿಗಳ ತಪಾಸಣೆ ಕಾರ್ಯದಲ್ಲಿ...
ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕಾಪು ಎಂಬಲ್ಲಿಂದ ಪೆರುವೋಡಿ ಶ್ರೀ ವಿಷ್ಣು ಮೂರ್ತಿದೇವಸ್ಥಾನಕ್ಕೆ ಹೋಗುವ ರಸ್ತೆಗೆ ಡಾಮರೀಕರಣ ಮಾಡಲಾಗಿದ್ದು, ಕಾಮಗಾರಿ ತೀರಾ ಕಳಪೆಯಾಗಿದೆ. ಸರಿಯಾದ ಗುಣಮಟ್ಟ ಕಾಪಾಡದೆ, ಅಧಿಕಾರಿಗಳು, ಗುತ್ತಿಗೆದಾರರು ಅನುದಾನ ದುರುಪಯೋಗ ನಡೆಸಿದ್ದಾರೆ. ಸುಮಾರು 17 ಲಕ್ಷ ರೂಪಾಯಿಯ ಅನುದಾನದಲ್ಲಿ ಈ ರಸ್ತೆಯ ಡಾಮರೀಕರಣ ಮಾಡಲಾಗಿದ್ದು, ಕಾಮಗಾರಿ ಮುಗಿದ ಹದಿನೇಳೇ ದಿನದಲ್ಲಿ ಕಾಮಗಾರಿ ಕರ್ಮಕಾಂಡ...
Loading posts...
All posts loaded
No more posts
