Ad Widget

ಬಿಎಸ್ಎನ್ಎಲ್ ಅಳಿದರೇನು… ಉಳಿದರೇನು…??!!

ಬಿಎಸ್ಎನ್ಎಲ್ ಅಳಿದರೇನು… ಉಳಿದರೇನು…??!!ಬಿ ಎಸ್ ಎನ್ ಎಲ್ ಅನ್ನೋದು ಭಾರತ ಸರ್ಕಾರದ ಅಧೀನದಲ್ಲಿರುವ ಒಂದು ಟೆಲಿಕಾಂ ಸಂಸ್ಥೆ. ಬಿಎಸ್ ಎನ್ ಎಲ್ ತನ್ನ ಸೇವೆಯನ್ನು ಆರಂಭಿಸಿ, ಹಲವು ವರ್ಷಗಳ ಕಾಲ ಉತ್ತಮ ಸೇವೆಯನ್ನೂ ನೀಡಿ ಜನ ಮನ್ನಣೆಯನ್ನೂ ಗಳಿಸಿತ್ತು. ನಮ್ಮ ಸುಳ್ಯದಲ್ಲಂತೂ ಬಿಎಸ್ಎನ್ಎಲ್ ಹವಾ ಜೋರಾಗೆ ಇತ್ತು. ಈಗಲೂ ಇದೆ. ಸುಳ್ಯ ತಾಲೂಕಿನ ಕೆಲವು ಗ್ರಾಮಗಳು...

ಕೊರೋನಾಕ್ಕೆ ಆಯುರ್ವೇದ ಔಷಧ ಪತ್ತೆ | ಡಾ.ಗಿರಿಧರ ಕಜೆ ನೇತೃತ್ವದ ತಂಡದ ಪ್ರಯೋಗ ಯಶಸ್ವಿ

ಬೆಂಗಳೂರು : ಕೊರೋನಾ ಸೋಲಿಸುವ ನಿಟ್ಟಿನಲ್ಲಿ ಭಾರತದ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಅದು ನಮ್ಮ ಬೆಂಗಳೂರಿನಲ್ಲೇ ಅನ್ನುವುದು ಮತ್ತೊಂದು ಹೆಮ್ಮೆಯ ವಿಚಾರ. ಈಗಾಗಲೇ ಪ್ರಸ್ತಾಪವಾದಂತೆ ಕೊರೋನಾ ಗೆ ಆರ್ಯುವೇದವೇ ಪರಿಹಾರ ಅನ್ನುವ ಮಾತು ಸತ್ಯವಾಗುವ ಲಕ್ಷಣ ಗೋಚರಿಸುತ್ತಿದೆ. ಆಯುರ್ವೇದದಿಂದ ಕೊರೋನಾ ನಿವಾರಣೆರ ಸಾಧ್ಯ ಎಂಬುದು ಇದೀಗ ಬೆಂಗಳೂರಿನಲ್ಲಿ ನಡೆದ ಕ್ಲಿನಿಕಲ್ ಟ್ರಯಲ್​ನಿಂದ ದೃಢಪಟ್ಟಿದೆ. ಸರ್ಕಾರದ ಮಾರ್ಗಸೂಚಿಯಂತೆ...
Ad Widget

ಗುತ್ತಿಗಾರು ರಬ್ಬರ್ ಸೊಸೈಟಿ – ಮಾರುಕಟ್ಟೆ ದರ

ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ನಿ.( ರಬ್ಬರ್ ಸೊಸೈಟಿ ) ಇದರ ಇಂದಿನ ಮಾರುಕಟ್ಟೆ ದರ ಇಂತಿದೆ. Rubber Market Dt-01.07.2020RSS - 4 -115.00LOT. - 104.00SCRAP -1st -67-00SCRAP -2nd -59.00

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(01.07.2020 ಬುಧವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 262ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...

ಕನ್ನಡ ಪತ್ರಿಕಾ ದಿನದ ಶುಭಾಶಯಗಳು

ಜುಲೈ 01 ಕನ್ನಡ ಪತ್ರಿಕಾ ದಿನ. ಜರ್ಮನಿ ಮೂಲದ ಬಾಸೆಲ್ ಮಿಶನ್ ಸಂಸ್ಥೆಯ ರೆ.ಹರ್ಮನ್ ಮೊಗ್ಲಿಂಗ್ ಸಂಪಾದಕತ್ವದಲ್ಲಿ 1843 ಜುಲೈ 01 ರಂದು ಮಂಗಳೂರು ಸಮಾಚಾರ ಎಂಬ ವಾರಪತ್ರಿಕೆ ಆರಂಭಗೊಂಡಿತು. ಈ ದಿನವನ್ನು ಕನ್ನಡ ಪತ್ರಿಕಾ ದಿನಾಚರಣೆಯಾಗಿ ರಾಜ್ಯದೆಲ್ಲೆಡೆ ಆಚರಿಸಲಾಗುತ್ತಿದೆ. ನಮ್ಮ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಏಜೆಂಟರಿಗೆ,ಪತ್ರಿಕಾಭಿಮಾನಿಗಳಿಗೆ ,ಪತ್ರಕರ್ತ ಮಿತ್ರರಿಗೆ ಅಮರ ಸುದ್ದಿ ಬಳಗದ ವತಿಯಿಂದ ಶುಭಾಶಯಗಳು.

ಕಾಸರಗೋಡು ಜಿಲ್ಲಾ ಗಡಿಯಲ್ಲಿ ಅಲರ್ಟ್ – ಜಿಲ್ಲಾಧಿಕಾರಿ ಸೂಚನೆಯಂತೆ ದ.ಕ. ಸಂಪರ್ಕಿಸುವ ಎಲ್ಲಾ ರಸ್ತೆಗಳೂ ಬಂದ್

ಕಾಸರಗೋಡು:ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಸುವ‌ ಪ್ರಮುಖ ರಸ್ತೆಗಳನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಕಾಸರಗೋಡು ಹಾಗೂ ಮಂಗಳೂರು ಸಂಪರ್ಕಿಸುವ ಬೆರಿಪದವು, ಪಾದೆಕಲ್ಲು, ಮುಗುಳಿ, ಪದ್ಯಾಣ ಮತ್ತಿತರ ಪ್ರಮುಖ ಸಂಪರ್ಕ ರಸ್ತೆಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇತೃತ್ವದಲ್ಲಿ ಈ ರೀತಿ ಬಂದ್ ಮಾಡಲಾಗಿದೆ. ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ...

ಡಿಕೆಶಿ ಪದಗ್ರಹಣ -ಸಂಪಾಜೆಯಲ್ಲಿ ಪೂರ್ವಭಾವಿ ಸಭೆ

ಜುಲೈ 2 ರಂದು ಕೆ.ಪಿ.ಸಿ.ಸಿ.ಯ ನೂತನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಪದಗ್ರಹಣ ಕಾರ್ಯಕ್ರಮದ ಕುರಿತಾಗಿ ಸಂಪಾಜೆ ವಲಯ ಕಾಂಗ್ರೆಸ್ ನ ಸಭೆಯು ಗ್ರಾಮ ಪಂಚಾಯತ್ ಸದಸ್ಯೆ ಆಶಾ ವಿನಯ್ ಕುಮಾರ್ ರವರ ನಿವಾಸದಲ್ಲಿ ಜರುಗಿತು.ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆಯವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ...

ಸಂಪಾಜೆಮೂಲೆ ದರ್ಖಾಸ್ತು ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿಪೂಜೆ

ಸಂಪಾಜೆಮೂಲೆ ದರ್ಖಾಸ್ತು ರಸ್ತೆ ಕಾಂಕ್ರೀಟಿಕರಣಕ್ಕೆ ಇಂದು ಗುದ್ದಲಿಪೂಜೆ ನಡೆಯಿತು. ಕಾಮಗಾರಿಗೆ ಸಂಪಾಜೆ ಸೊಸೈಟಿ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಶಿಲಾನ್ಯಾಸ ನೆರವೇರಿಸಿದರು ಗ್ರಾಮ ಪಂಚಾಯತ್ ಅಧ್ಯಕ್ಷ ಸುಂದರಿ ಮುಂಡಡ್ಕ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯರುಗಳಾದ ಅಬೂಸಾಲಿ , ಹಮೀದ್.ಜಿ. ಕೆ., ಅಶಾ ವಿನಯಕುಮಾರ್, ರುಕ್ಮಯ್ಯ ಗೌಡ, ಬಾಲಚಂದ್ರ, ಹ್ಯಾರಿಸ್,ಅಝೀಜ್ , ಶವಾದ್ ಗೂನಡ್ಕ ಹಾಗೂ ಊರವರು ಉಪಸ್ಥಿತರಿದ್ದರು.

ಕೊಪ್ಪತಕಜೆ ದರ್ಖಾಸ್ತು ರಸ್ತೆಗೆ ಶಿಲಾನ್ಯಾಸ

ಕೊಪ್ಪತಕಜೆ ದರ್ಖಾಸ್ತು ರಸ್ತೆಗೆ ಶಿಲಾನ್ಯಾಸಸಂಪಾಜೆ ಗ್ರಾಮದ ಕೊಪ್ಪತಕಜೆ ದರ್ಖಾಸ್ತು ರಸ್ತೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮದ್ ಕುಂಞ ಗೂನಡ್ಕ ನೆರವೇರಿಸಿದರು. ಗ್ರಾ.ಪಂ. ಅಧ್ಯಕ್ಷೆ ಸುಂದರಿ ಮುಂಡಡ್ಕ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ, ಪಂಚಾಯತ್ ಸದಸ್ಯರುಗಳಾದ ಹಮೀದ್ ಜಿ. ಕೆ, ಅಬೂಸಾಲಿ .ಪಿ. ಕೆ, ಆಶಾ ವಿನಯಕುಮಾರ್,...

ಜುಲೈ 5 ರವರೆಗೆ ಲೇಡಿಗೋಶನ್ ಆಸ್ಪತ್ರೆ ಸೀಲ್ ಡೌನ್

ಮುಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಹೆಚ್ಚಿನ ವೈಧ್ಯರು, ಸಿಬ್ಬಂದಿಗಳು ಕಾರಂಟೈನ್ ನಲ್ಲಿರುವುದರಿಂದ ಹಾಗೂ ಅಸ್ಪತ್ರೆಯ ಎಲ್ಲಾ ವಿಭಾಗಗಳನ್ನು ಫ್ಯೂಮಿಗೇಶನ್ ಮತ್ತು ಸ್ಯಾನಿಟೈಸರ್ ಮಾಡಲಿರುವುದರಿಂದ ಜೂ.30 ರಿಂದ ಜುಲೈ 5 ರವರೆಗೆ ಹೊರರೋಗಿ ಮತ್ತು ಒಳರೋಗಿ ದಾಖಲಾತಿಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹೆಚ್ವಿನ ಮಾಹಿತಿಗೆ ದೂರವಾಣಿ ಸಂಖ್ಯೆ 0824-2424001 ನ್ನು ಸಂಪರ್ಕಿಸಬಹುದು.
Loading posts...

All posts loaded

No more posts

error: Content is protected !!