- Wednesday
- March 11th, 2026
ಡಯಾಲಿಸಿಸ್ ರೋಗಿಗಳಿಗೆ ಸುಳ್ಯದಲ್ಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹ ಸುಳ್ಯ ತಾಲೂಕಿನಲ್ಲಿ ದಿನಕಳೆದಂತೆ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ, ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ನರ್ಸ್ ಗಳಿಗೂ ವೈರಸ್ ತಗುಲಿದ ಕಾರಣ ಸರ್ಕಾರಿ ಆಸ್ಪತ್ರೆಯೆ ಸೀಲ್ ಡೌನ್ ಗೆ ಒಳಗಾಗಿದೆ.ಬಡ ರೋಗಿಗಳು ಪರದಾಡ್ತಾ ಇದ್ದಾರೆ, ಹಾಗೂ ಡಯಾಲಿಸಿಸ್ ರೋಗಿಗಳ ಬವಣೆಯನ್ನು ಆಲಿಸುವವರೆ ಇಲ್ಲದಂತಾಗಿದೆ.ಕೊರೋನಾ ನಿಯಂತ್ರಣಕ್ಕೆ ಮತ್ತು ಆಸ್ಪತ್ರೆ...
ಸಂಪಾಜೆ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾಕ್ಟರ್ ವಿನುತ್ ಉತ್ತಮ ಸೇವೆ ನೀಡಿ ಸಂಪಾಜೆಯ ಜನರ ಪ್ರೀತಿಗೆ ಪಾತ್ರರಾಗಿದ್ದರು. ಇವರನ್ನು ಹುಡುಕಿಕೊಂಡು ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ. ಇವರ ಬಗ್ಗೆ ಕಳೆದ ಬಾರಿ ಅಮರ ಸುಳ್ಯ ಸುದ್ದಿ ಪತ್ರಿಕೆಯಲ್ಲಿ ಇವರ ಉತ್ತಮ ಸೇವೆಗೆ ಲೇಖನವು ಪ್ರಕಟಗೊಂಡಿತ್ತು. ಗರ್ಭಿಣಿ ಮಹಿಳೆಯರ ಹೆರಿಗೆಯ...
ಪಂಜ ಪಲ್ಲೋಡಿ ಮಧ್ಯೆ ನೆಲ್ಲಿಕಟ್ಟೆ ಎಂಬಲ್ಲಿ ಆ್ಯಕ್ಟಿವಾ ಹಾಗೂ ಬುಲ್ಲೆಟ್ ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಬುಲೆಟ್ ಸವಾರ ಬಳ್ಪದ ಹರೀಶ್ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆ್ಯಕ್ಟಿವಾದಲ್ಲಿದ್ದ ಸವಾರರಿಬ್ಬರಿಗೂ ಗಾಯಗಳಾಗಿದೆ ಎಂದು ವರದಿಯಾಗಿದೆ.
ಸುಳ್ಯದಲ್ಲಿ ಸಂಚಲನವನ್ನೇ ಮೂಡಿಸಿದ್ದ ಆಸಿಯ ಇಬ್ರಾಹಿಂ ಕಲೀಲ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಸಂಧಾನಕಾರರ ನೇತೃತ್ವದಲ್ಲಿ ಎರಡು ಬಾರಿ ಮಾತುಕತೆ ಮತ್ತು ಚರ್ಚೆಗಳು ನಡೆದಿದ್ದು, ಮುಂದಿನ 15 ದಿನಗಳಲ್ಲಿದಾಖಲೆಗಳನ್ನು ಸಂಗ್ರಹಿಸಿ ತರುವಂತೆ ಕಲೀಲ್ ರವರಿಗೆ ಸಂಧಾನಕಾರರ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ ಇದೀಗ ಕಲೀಲ್ ಮತ್ತು ಮನೆಯವರು ಹೈಕೋರ್ಟಿಗೆ ಮಹಿಳಾ ಆಯೋಗದ ನೋಟೀಸಿಗೆ ತಡೆಯಾಜ್ಞೆ ಕೋರಿದ್ದು ಆಸಿಯ...
ಸುಳ್ಯ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಓರ್ವ ವೈದ್ಯರಿಗೆ ಕರೋನ ವೈರಸ್ ಸೋಂಕು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ ನಿಲ್ಲಿಸಿ ಅವರು ತೀವ್ರ ಸಂಕಷ್ಟ ಕ್ಕೆ ಒಳಗಾಗಿರುತ್ತಾರೆ. ಡಯಾಲಿಸಿಸ್ ಒದಗಿಸಲು ಹೊರ ಗುತ್ತಿಗೆದಾರ ಸಂಸ್ಥೆಯ ವತಿಯಿಂದ ಬದಲಿ ವ್ಯವಸ್ಥೆ ಮಾಡಿಸಬೇಕಾದ ಜನಪ್ರತಿನಿಧಿಗಳು ಈ ವಿಚಾರ ತಿಳಿದುಕೊಂಡೇ ಇಲ್ಲ. ಮೂತ್ರ ಪಿಂಡದ ಸಮಸ್ಯೆಯವರ ಗೋಳು...
ದೇವರಕಾನ ಸರ್ಕಾರಿ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿನಿಗೆ ಶಸ್ತ್ರಚಿಕಿತ್ಸೆಗೆ ಭಾರಿ ಮೊತ್ತದ ಹಣದ ಅವಶ್ಯಕತೆ ಇದ್ದು, ಆರ್ಥಿಕವಾಗಿ ಹಿಂದುಳಿದಿದ್ದ ಕುಟುಂಬಕ್ಕೆ ವಿದ್ಯಾರ್ಥಿನಿಯ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗಿರಲಿಲ್ಲ. ವಿಷಯ ತಿಳಿದ ಸುಳ್ಯ ಶಿಕ್ಷಣ ಅಧಿಕಾರಿ ಮಹದೇವ ಮಂಗಳೂರು ಆಸ್ಪತ್ರೆಯ ವೈದ್ಯರುಗಳನ್ನು ಸಂಪರ್ಕಿಸಿ ಸುಮಾರು ಎರಡು ಲಕ್ಷ ರೂಪಾಯಿಗಳ ಅನುದಾನ ಬರುವಲ್ಲಿ ಸಹಕಾರವನ್ನು ಮಾಡಿರುತ್ತಾರೆ. ಮಂಗಳೂರು ಎಜೆ...
ಸುಳ್ಯ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಕೊಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ತಹಶಿಲ್ದಾರರ ಹತ್ಯೆಯನ್ನು ಖಂಡಿಸಿ ಸರಕಾರಿ ನೌಕರರ ಸಂಘದ ನೇತೃತ್ವದಲ್ಲಿ ಸರಕಾರಿ ನೌಕರರು ತಾಲೂಕು ಕಛೇರಿಯಲ್ಲಿ ತಹಶಿಲ್ದಾರ ಮತ್ತು ತಾಲೂಕು ಪಂಚಾಯತ್ ಇ. ಓ ಇವರ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಅಲ್ ಅಮೀನ್ ಯೂತ್ ಸೆಂಟರ್ (ರಿ) ಪೈಚಾರ್ ಇದರ ವತಿಯಿಂದ. ಮರ ಬೆಳಸಿ ಪರಿಸರ ಉಳಿಸಿ ಕಾರ್ಯಕ್ರಮವು ಪೈಚಾರ್ ವಠಾರದಲ್ಲಿ ಇಂದು ನಡೆಯಿತು. ಕಾರ್ಯಕ್ರಮದ ದುವಾ ಹಾಗೂ ಉದ್ಘಾಟನೆಯನ್ನು. ಬಿಜೆಎಮ್ ಖತೀಬರಾದ ಮುನೀರ್ ಸಖಾಫಿಯವರು ನೇರವೆರಿಸಿದು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಎವೈಸಿ ಅಧ್ಯಕ್ಷ ಕರೀಂ ಕೆ ಎಮ್ ವಹಿಸಿದ್ದರು.ಈ ಸಂದರ್ಭದಲ್ಲಿ ಎವೈಸಿ ಉಪಾಧ್ಯಕ್ಷರಾದ ಮುಜೀಬ್...
ಸುಳ್ಯ ನಗರ ಪಂಚಾಯತ್ ಸಮೀಪದಲ್ಲಿರುವ ಒಳಚರಂಡಿಯ ಮ್ಯಾನ್ ಹೋಲ್ ನಿಂದ ತ್ಯಾಜ್ಯ ನೀರು ಬರುತ್ತಿದ್ದು ಇದನ್ನು ತಕ್ಷಣ ಸರಿಪಡಿಸಬೇಕೆಂದು ಆರ್ ಟಿ ಐ ಕಾರ್ಯಕರ್ತ ಡಿ ಎಂ ಶಾರಿಖ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಮಾಡಿದ್ದಾರೆ. ಇದರ ಬಗ್ಗೆ ನಗರ ಪಂಚಾಯತ್ ಸುಳ್ಯ ಇದರ ಮುಖ್ಯ ಅಧಿಕಾರಿಯವರಿಗೆ ತಿಳಿಸಲು ಜಿಲ್ಲಾಧಿಕಾರಿ ಕಚೇರಿಯ ಸೂಚನೆಯಂತೆ...
Loading posts...
All posts loaded
No more posts
