Ad Widget

ಶಾಲೆ ಆರಂಭದ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ – ಸಚಿವ ಸುರೇಶ್ ಕುಮಾರ್

ಬೆಂಗಳೂರು : ಶಾಲೆ ಆರಂಭದ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅ ಸೆಪ್ಟೆಂಬರ್ ತಿಂಗಳಿನಲ್ಲಿ ಶಾಲೆಗಳನ್ನು ತೆರೆಯುತ್ತೇವೆಂದು ಸರ್ಕಾರ ನಿರ್ಧೆರಿಸಿಲ್ಲ. ನಮ್ಮ ಅಧಿಕಾರಿಗಳು ಸಭೆಯೊಂದರಲ್ಲಿ ಭಾಗವಹಿಸಿದಾದ ವ್ಯಕ್ತಪಡಿಸಿರಬಹುದಾದ ಸಾಮಾನ್ಯ ಅಭಿಪ್ರಾಯವಷ್ಟೇ, ಆದರೆ ಇದನ್ನು ಹೀಗೆ ಬಿಂಬಿಸಲಾಗಿದೆ ಎಂದು...

ಇಂದಿನಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ಸೇತುಬಂಧ

ದೂರದರ್ಶನ ಚಂದನ ವಾಹಿನಿಯಲ್ಲಿ ಇಂದಿನಿಂದ ಆಗಸ್ಟ್ 14 ರವರೆಗೆ ವಿಡಿಯೋ ಪಾಠಗಳ ಸೇತುಬಂಧ ಕಾರ್ಯಕ್ರಮ ಪ್ರಸಾರವಾಗಲಿದೆ.ಈ ಅವಧಿಯಲ್ಲಿ ಹಿಂದಿನ ತರಗತಿಗಳ ವಿಷಯಗಳನ್ನು ಬೋಧಿಸಲಾಗುತ್ತದೆ. ಸದ್ಯಕ್ಕೆ ಕನ್ನಡ ಮಾಧ್ಯಮದಲ್ಲಿ ಬೋಧನೆ ಇರುತ್ತದೆ. ಆದರೆ ಕನ್ನಡ ಮಾತೃಭಾಷೆಯಾಗಿರುವ ಇಂಗ್ಲೀಷ್ ಹಾಗೂ ಇತರೆ ಮಾಧ್ಯಮಗಳ ವಿದ್ಯಾರ್ಥಿಗಳು ನೋಡಿದಲ್ಲಿ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ರಾಜ್ಯ ಪಠ್ಯಕ್ರಮ ಬಿಟ್ಟು ಕೇಂದ್ರ ಪಠ್ಯ ಕ್ರಮ...
Ad Widget

ದುಗ್ಗಲಡ್ಕದ ವ್ಯಕ್ತಿಗೆ ಕೊರೊನ ನೆಗೆಟಿವ್

ಸುಳ್ಯ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು ದುಗಲಡ್ಕ ಮೂಲದ ವ್ಯಕ್ತಿಗೆ ಕಳೆದ ಬಾರಿ ಕೊರೋನ ವೈರಸ್ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜು.19 ರಂದು ಬಂದ ವರದಿಯಲ್ಲಿ ನೆಗಟಿವ್ ಆಗಿದೆ ಎಂದು ತಿಳಿದುಬಂದಿದೆ.

ಸುಳ್ಯ : ಅಕ್ರಮ ಸಕ್ರಮ ಸಮಿತಿ ರಚನೆ

ಸುಳ್ಯ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಬಗ್ಗೆ ಸಮಿತಿ ರಚನೆ ಮಾಡಿ ಸರಕಾರ ಆದೇಶಿಸಿದೆ. Venkat valalambe Gunavathi kollanthadka ಸಮಿತಿಯ ಅಧ್ಯಕ್ಷರಾಗಿ ಶಾಸಕ ಎಸ್ ಅಂಗಾರ, ಸದಸ್ಯರಾಗಿ ಬಿಜೆಪಿ ಮಂಡಲ ಸಮಿತಿ ಮಾಜಿ ಅದ್ಯಕ್ಷ ವೆಂಕಟ್ ವಳಲಂಬೆ, ಮಾಜಿ ತಾ.ಪಂ.ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಬಿಜೆಪಿ ಎಸ್ ಸಿ ಮೋರ್ಚಾದ ಮಾಜಿ ಅಧ್ಯಕ್ಷ...

ಕೇರ್ಪಳದ ಮಹಿಳೆಯೊಬ್ಬರಿಗೆ ಪಾಸಿಟಿವ್

ಸುಳ್ಯ ಕೇರ್ಪಳ ದ ನಿವಾಸಿ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ ಹೃದಯಸಂಬಂಧಿ ಸಮಸ್ಯೆ ಗಾಗಿ ಅವರು ಕೆ.ವಿ.ಜಿ. ಆಸ್ಪತ್ರೆಗೆ ದಾಖಲಾಗಿದ್ದರು.ಅವರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು ವರದಿ ಪಾಸಿಟಿವ್ ಬಂದಿದೆ . ಅವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ ಚರ್ಚ್‌ನ ಹಿರಿಯ ಧರ್ಮಗುರುಗಳಿಗೂ ಸೋಂಕು ದೃಢ

ಸುಳ್ಯ ಚರ್ಚ್ ನ ಹಿರಿಯ ಧರ್ಮ ಗುರುಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ .ಕೆಮ್ಮು ಮತ್ತು ಜ್ವರ ಇದ್ದ ಹಿನ್ನಲೆಯಲ್ಲಿ ಅವರು ಕೋವಿಡ್ ಟೆಸ್ಟ್ ಗೆ ಸ್ವಯಂ ಹೋಗಿದ್ದರು . ಅವರ ಜತೆ ಕಿರಿಯ ಧರ್ಮ ಗುರುಗಳು ಕೂಡಾ ಹೋಗಿದ್ದರಿಂದ ಅವರು ಅದೇ ಆಸ್ಪತ್ರೆಯಲ್ಲಿ ಕ್ವಾರೆಂಟೇನ್ ಆಗಿದ್ದಾರೆ...

ಸಂಡೇ ಲಾಕ್ ಡೌನ್ ವ್ಯರ್ಥಗೊಳಿಸದ ಮೇನಾಲ ವಿಖಾಯ ತಂಡ

ರಾಜ್ಯದಲ್ಲಿ ಇಂದು ಫುಲ್ ಲಾಕ್ ಡೌನ್ ಇದ್ದರೂ ಶ್ರಮ ಸೇವೆಯ ಮೂಲಕ ಬಡ ಕುಟುಂಬವೊಂದಕ್ಕೆ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡ ಸುಳ್ಯ ವಲಯ ಮೇನಾಲ ವಿಖಾಯ ಕಾರ್ಯಕರ್ತರು ಮಾದರಿ ಸೇವೆ ನೀಡಿದರು.ಮೇನಾಲ ನಿವಾಸಿ ಹನೀಫ್ ಎಂಬವರಿಗೆ ನಿರ್ಮಿಸುತ್ತಿರುವ ಮನೆಯ ಫೌಂಡೇಶನ್ ಗೆ ಮಣ್ಣು ತುಂಬಿಸುವ ಕೆಲಸವನ್ನು ಮಾಡಿ ವಿಖಾಯ ತಂಡವು ಲಾಕ್ ಡೌನ್ ಅನ್ನು ಸದುಪಯೋಗಿಸಿಕೊಂಡರು.ಶ್ರಮ ಸೇವೆಯಲ್ಲಿ...

ನಾವೂರು: ನ.ಪಂ ಸದಸ್ಯ ಶರೀಫ್ ಕಂಠಿ ನೇತೃತ್ವದಲ್ಲಿ ರಸ್ತೆ ದುರಸ್ತಿ

ಸುಳ್ಯ ನಾವೂರು ಪರಿಸರದ ರಸ್ತೆಗಳು ಮಳೆಯಿಂದಾಗಿ ಹೊಂಡಗಳಿಂದ ತುಂಬಿದ್ದು ಸ್ಥಳೀಯ ನ.ಪಂ ಸದಸ್ಯ ಶರೀಫ್ ಕಂಠಿ ರವರ ನೇತೃತ್ವದಲ್ಲಿ ಸ್ಥಳೀಯ ಯುವಕರ ಸಹಕಾರದಿಂದ ಜುಲೈ 18ರಂದು ರಸ್ತೆಗಳ ಹೊಂಡ ಮುಚ್ಚುವ ಕಾರ್ಯ ಶ್ರಮದಾನದ ಮೂಲಕ ನಡೆಸಿದರು.

ಕನಕಮಜಲು: ಯುವಕ ಮಂಡಲದಿಂದ ವಿದ್ಯುತ್ ಲೈನ್ ಸ್ವಚ್ಚತಾ ಕಾರ್ಯ

ನೆಹರು ಯುವಕೇಂದ್ರ ಮಂಗಳೂರು,ಯುವಜನ ವಿಕಾಸ ಕೇಂದ್ರ, ಯುವಕ ಮಂಡಲ (ರಿ) ಕನಕಮಜಲು ಇದರ ವತಿಯಿಂದ ಗ್ರಾಮ ವ್ಯಾಪ್ತಿಯ ಎಲ್ಲಾ ವಿದ್ಯುತ್ ಲೈನ್ ಗಳ ಅಕ್ಕಪಕ್ಕದಲ್ಲಿರುವ ಗಿಡಮರಗಳ ಗೆಲ್ಲುಗಳನ್ನು ಕಡಿದು ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನು ಜುಲೈ 19 ರಂದು ಸುಬ್ರಮಣ್ಯ ಮಾಣಿಕೊಡಿ ಇವರ ಸಂಯೋಜಕತ್ವದಲ್ಲಿ ನಡೆಸಲಾಯಿತು. ಈ ಕಾರ್ಯದಲ್ಲಿ ಎಲ್ಲಾ ಬೈಲುವಾರು ಸದಸ್ಯರುಗಳು ಕೈ ಜೋಡಿಸಿದರು. ಈ ಸಂದರ್ಭದಲ್ಲಿ...

ಆಡು,ಕೋಳಿ,ಹಂದಿ ಮರಿ ಬೇಕಾಗಿದೆ

ಊರು ಕೋಳಿ ಮರಿ ,ಹಂದಿ ಮರಿ, ಊರು ಹಸು, ಮೇಕೆ ಮರಿ ಬೇಕಾಗಿದೆ. ಮಾರಲಿಚ್ಚಿಸುವವರು ಸಂಪರ್ಕಿಸಿ ಮೊ: 9449451328
Loading posts...

All posts loaded

No more posts

error: Content is protected !!