Ad Widget

ಗಾಂಧಿನಗರ ಅಂಗನವಾಡಿಯಲ್ಲಿ ಶ್ರಮದಾನ

ಸುಳ್ಯ ಗಾಂಧಿನಗರದ ಅಂಗನವಾಡಿ ಕೇಂದ್ರದ ಸುತ್ತ ಮುತ್ತಲಿನ ಪರಿಸರವನ್ನು ಮಹಾಮಾಯಿ ದೇವಸ್ಥಾನ ಸಮಿತಿ ಹಾಗು ಕೃಷ್ಣ ಜನ್ಮಾಷ್ಟಮಿ ಸಮಿತಿಯ ತಂಡದವರಿಂದ ಶ್ರಮದಾನ ಮೂಲಕ ಸ್ವಚ್ಛಗೊಳಿಸಲಾಯಿತು.ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಶ್ರಮದಾನ ಮಾಡುತ್ತಿರುವ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸೇವೆಯನ್ನು ಅಭಿನಂದಿಸಿದರು . ಈ ಸಂದರ್ಭದಲ್ಲಿ ಎಂ ಬಿ ಚೋಮ, ನಾರಾಯಣ, ರವಿ ನಾವೂರು, ಐತಪ್ಪ, ಗುರು,...

ಕೊಯನಾಡು ಬರೆ ಕುಸಿದು ಶಾಲಾ ಕಟ್ಟಡಕ್ಕೆ ಹಾನಿ

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಸರಕಾರಿ ಶಾಲೆಯ ಹಿಂಭಾಗದ ಬರೆ ಕುಸಿತ ಗೊಂಡಿದ್ದು ಹೊಸದಾಗಿ ನಿರ್ಮಾಣವಾದ ಕಟ್ಟಡಕ್ಕೆ ಹಾನಿಗೊಂಡಿದ್ದು ಪಂಚಾಯತ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು ಪರಿಶೀಲನೆ ನಡೆಸಿದರು.
Ad Widget

ಸೊಗಸಾದ ಸೋಣಂಗೇರಿಯ ಜಲಪಾತದ ಜಲರಾಶಿಯ ಝೇಂಕಾರ

ಮಳೆಗಾಲದ ಅದ್ಭುತ ಸವಿಯೇ ಹಾಗೆ, ಮನಕೆ ಮುದ ನೀಡುವ ಚೆಲುವಿಕೆ. ವರ್ಷದಾರೆ ಭುವಿಗೆ ತಂಪನ್ನು ನೀಡುವ ಜೊತೆಗೆ ಕಂಗಳಿಗೂ ನಯನಮನೋಹರ ದೃಶ್ಯಾವಳಿ ನೀಡುವುದು. ಭೋರ್ಗರೆದು ಧುಮ್ಮುಕ್ಕುವ ಸ್ಥಳೀಯ ಜಲಪಾತವಾಗಿ ಪ್ರಕೃತಿಯ ಚೆಲುವನ್ನು ಇಮ್ಮಡಿಗೊಳಿಸುವುದು.ಇಂತಹ ನಯನಮನೋಹರ ಜಲಪಾತ ಸುಳ್ಯ ತಾಲೂಕಿನ ಸೋಣಂಗೇರಿಯಲ್ಲಿದೆ. ಸದ್ಯ ಮಳೆಯ ಪ್ರಮಾಣ ಅಧಿಕವಾಗಿದ್ದು ಜಲಪಾತದ ಅಂದ ಹೆಚ್ಚಾಗಿದೆ.ಬೆಳ್ಳಾರೆ - ಸುಳ್ಯ ಹೆದ್ದಾರಿ ಬದಿಯಲ್ಲಿ...

ವಿಶ್ವಹಿಂದೂ ಪರಿಷತ್ ಬೆಳ್ಳಾರೆ ಶಾಖೆ ಉಪಾಧ್ಯಕ್ಷರಾಗಿ ರೋಹಿತ್ ಕೊಳಂಬಳ

ವಿಶ್ವಹಿಂದೂ ಪರಿಷತ್ ಬಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ಉಪಾಧ್ಯಕ್ಷರಾಗಿ ರೋಹಿತ್ ಕೊಳಂಬಳ, ಜೊತೆ ಕಾರ್ಯದರ್ಶಿಯಾಗಿ ಚೇತನ್ ದೇವರಕಾನ, ಗೋರಕ್ಷಾ ಪ್ರಮುಖ್ ಆಗಿ ರಂಜಿತ್ ಬಾಳಿಲ ಸುಳ್ಯ ಪ್ರಖಂಡ ವತಿಯಿಂದ ಸುಳ್ಯ ಕೇರ್ಪಳ ದೇವಸ್ಥಾನ ದಲ್ಲಿ ಆಯ್ಕೆ ಮಾಡಲಾಯಿತು. ರೋಹಿತ್ ಕೊಳಂಬಳ ಚೇತನ್ ದೇವರಕಾನ ರಂಜಿತ್ ಬಾಳಿಲ

ಸುಳ್ಯದಲ್ಲಿ ಎರಡನೇ ಹಂತದ ಆತ್ಮನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಸಮಾರೋಪ

ಸುಳ್ಯದಲ್ಲಿ ಎರಡನೇ ಹಂತದ ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿಯ ಸಮಾರೋಪ ಸಮಾರಂಭ ಕೇರ್ಪಳದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಆ 8ರಂದು ನಡೆಯಿತು. ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರಧ್ವಾಜ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಾ ಕಾರ್ಯವಾಹಕು ಹಾಗೂ ಹೊಸದಿಗಂತ ಪತ್ರಿಕೆಯ ಸಿ.ಓ....

ಅಡ್ಡಬೈಲು- ಬಸ್ತಿಕಾಡು ಕಿರುಸೇತುವೆಯಲ್ಲಿ ಸಿಲುಕಿಕೊಂಡಿದ್ದ ಮರ ತೆರವು

ಸುರಿಯುತ್ತಿರುವ ಭಾರಿ ಮಳೆಗೆ ಅಡ್ಡಬೈಲು- ಬಸ್ತಿಕಾಡು ಹೊಳೆಯಲ್ಲಿ ಪ್ರವಾಹದ ಜತೆಗೆ ಬಂದು ಕಿರುಸೇತುವೆಯಲ್ಲಿ ಸಿಲುಕಿಕೊಂಡಿದ್ದ ಬೃಹತ್ ಮರದ ತುಂಡುಗಳು, ಕಸಕಡ್ಡಿ ತೆರವುಗೊಳಿಸುವ ಕಾರ್ಯ ಇಂದು ನಡೆಯಿತು. ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡಬೈಲ್ ಸಮೀಪದ ಬೊಳ್ಮಲೆಯಿಂದ ಕೂತ್ಕುಂಜ ಗ್ರಾಮದ ಬಸ್ತಿಕಾಡುವಿಗೆ ಹೋಗುವ ಕಿರುಸೇತುವೆಯಲ್ಲಿ ಕಸಕಡ್ಡಿಗಳು, ಮರದ ದಿಮ್ಮಿಗಳು ನಿಂತು, ನೀರು ಸೇತುವೆ ಮೇಲೆ ಹರಿದು ಸಂಚಾರಕ್ಕೆ...

ವಿದ್ಯುತ್ ಪ್ರವಹಿಸದ, ಭಾರವೂ ಇಲ್ಲದ ಫೈಬರ್ ಏಣಿ ಮಾರುಕಟ್ಟೆಯಲ್ಲಿ ಲಭ್ಯ

ತೆಂಗಿನಮರ, ಅಡಿಕೆಮರ ಸಹಿತ ವಿದ್ಯುತ್ ಕಂಬಗಳನ್ನು ಏರಲು ಸಹಕಾರಿಯಾಗುವ ಫೈಬರ್ ಏಣಿಯನ್ನು ಕಡಬ ತಾಲೂಕಿನ ಸವಣೂರಿನ ದಯಾನಂದ ಎಂಬವರು ತಯಾರಿಸಿದ್ದಾರೆ. ಕೃಷಿ ಚಟುವಟಿಕೆ ಮತ್ತು ವಿದ್ಯುತ್ ಕಂಬಗಳನ್ನು ಏರಲು ಬಳಸಬಹುದಾದ ಸಾಧನ ಇದಾಗಿದ್ದು, ಕೇವಲ 10-12 ಕೆಜಿ ಭಾರವಿದೆ. ಅಕಸ್ಮಾತ್ ಈ ಏಣಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದರೂ ವಿದ್ಯುತ್ ಪ್ರವಹಿಸುವುದಿಲ್ಲ. ಹಾಗಾಗಿ ಮೆಸ್ಕಾಂನಲ್ಲಿ ಕೆಲಸಮಾಡುವ ಪವರ್...

ಆಪತ್ಕಾಲದಲ್ಲಿ ಜೀವರಕ್ಷಣೆಗೆ ಮುಳುಗು ತಜ್ಞರ ತಂಡವನ್ನು ರಚಿಸಿದ ಅಸ್ತ್ರ ಸ್ಪೋರ್ಟ್ಸ್ ಕ್ಲಬ್

ಕಳೆದ ಹಲವು ವರ್ಷಗಳಿಂದ ಪೈಚಾರು ಪರಿಸರದ ಯುವಕರಲ್ಲಿ ಮುಳುಗು ತಜ್ಞರ ತಂಡವೊಂದು ಸದಾ ಕಾರ್ಯಾಚರಿಸುತ್ತಿದ್ದು , ಆಪತ್ಬಾಂಧವ ರಾಗಿ ಸುಳ್ಯ ತಾಲೂಕಿನ ಹಲವಾರು ಘಟನೆಗಳಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟವರ ಶರೀರವನ್ನು ಮೇಲೆ ತರುವಲ್ಲಿ ಸದಾ ಇಲಾಖೆಯೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ತೊಡಗಿಸಿಗೊಂಡು ಹಲವಾರು ಸನ್ಮಾನಗಳನ್ನು ಪಡೆದುಕೊಂಡಿರುತ್ತಾರೆ.ಇದೀಗ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿ ಹಳ್ಳಗಳು...

ಬಸ್ ಚಲಾಯಿಸುತ್ತಿರುವ ವೇಳೆ ಪಾರ್ಶ್ವವಾಯು ಗೆ ತುತ್ತಾದರೂ ಪ್ರಯಾಣಿಕರ ಜೀವ ರಕ್ಷಿಸಿ ಸಮಯಪ್ರಜ್ಞೆ ಮೆರೆದ ಚಾಲಕ ಸದಾಶಿವ

ಪುತ್ತೂರು ಡಿಪೋದ ಕೆ.ಎಸ್ ಆರ್.ಟಿ.ಸಿ.ಬಸ್ ( KA21 F0166) ಬೆಳಗ್ಗಿನ ಜಾವ ಪುತ್ತೂರಿನಿಂದ ಮೈಸೂರಿಗೆ ಪ್ರಯಾಣಿಕರನ್ನು ಕೊಂಡೊಯ್ದು ಪುನಃ ಸಂಜೆ ಹಿಂತಿರುಗುವ ವೇಳೆ ಜೋಡುಪಾಲ ಸಮೀಪಿಸುತ್ತಿದ್ದಂತೆ ಬಸ್ ಚಾಲಕ ಸದಾಶಿವ ಎಂಬವರು ಪಾರ್ಶವಾಯು ಬಾಧಿಸಿ ತೀರ್ವ ಅಸೌಖ್ಯಕ್ಕೊಳಗಾದರು. ಬಸ್ ನಲ್ಲಿ ಇದ್ದ ಪ್ರಯಾಣಿಕರ ಮತ್ತು ತಮ್ಮ ಜೀವ ಆತಂಕದಲ್ಲಿತ್ತು .ಆದರೂ ಈ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳದ...

ಪೆರುವಾಜೆ ಅಕ್ರಮ ಗೋಸಾಗಾಟ ಪತ್ತೆ- ಆರೋಪಿ ಪೋಲೀಸ್ ವಶ

ಅಕ್ರಮವಾಗಿ ಕಸಾಯಿಖಾನೆಗೆ ಗೋ ಸಾಗಾಟ ಮಾಡುತ್ತಿದ್ದಾಗ ಪೆರುವಾಜೆ ಗ್ರಾಮದ ಕುಂಡಡ್ಕ -ಕಾಪು ಎಂಬಲ್ಲಿ ಬಜರಂಗದಳ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬೆಳ್ಳಾರೆ ಪೋಲೀಸರಿಗೆ ಒಪ್ಪಿಸಿದ್ದಾರೆ. ಕಸಾಯಿಖಾನೆಗೆ ದನದ ಸಾಗಾಟ ಮಾಡುತ್ತಿದ್ದ ಕೃಷ್ಣಪ್ಪ ಬಂಬಿಲ ಎಂಬಾತನನ್ನು ಹಿಡಿದು ಬೆಳ್ಳಾರೆ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಶ್ವಹಿಂದೂ ಪರಿಷತ್- ಬಜರಂಗದಳ ಬೆಳ್ಳಾರೆ ಮತ್ತು ಬಜರಂಗದಳ ಕೆಯ್ಯೂರು ಘಟಕದ ಕಾರ್ಯಕರ್ತರು ಕಾರ್ಯಚರಣೆ ನಡೆಸಿದ್ದರು ಎಂದು...
Loading posts...

All posts loaded

No more posts

error: Content is protected !!