Ad Widget

ಅಜಪಿಲ ದೇವಸ್ಥಾನಕ್ಕೆ ಪುಡ್ಕಜೆ ಮಂಜುನಾಥ ಆಳ್ವರಿಂದ ರೂ.1 ಲಕ್ಷ ದೇಣಿಗೆ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೂಮಿ ಖರೀದಿಸುವ ಪ್ರಯುಕ್ತವಾಗಿ ದೇವಸ್ಥಾನದ ಮಾಜಿ ಟ್ರಸ್ಟಿಯಾಗಿರುವ ಪುಡ್ಕಜೆ ಮಂಜುನಾಥ ಆಳ್ವರವರು ರೂ. 1 ಲಕ್ಷದ ಚೆಕ್ ಅನ್ನು ದೇಣಿಗೆಯಾಗಿ ಸೆ.1 ರಂದು ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆಯವರು ಚೆಕ್ ನ್ನು ಸ್ವೀಕರಿಸಿದರು.

ಬಿಜೆಪಿಯ ದಾವಣಗೆರೆ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಮುಳುಗಾಡು

ಭಾರತೀಯ ಜನತಾ ಪಾರ್ಟಿ ದಾವಣಗೆರೆ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿ ಜಯಪ್ರಕಾಶ್ ಮುಳುಗಾಡು ನಿಯುಕ್ತಿಗೊಂಡಿರುತ್ತಾರೆ. ಇವರು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಮುಳುಗಾಡು ಚಂದ್ರಶೇಖರ ಹಾಗೂ ಪದ್ಮಾವತಿ ದಂಪತಿಗಳ ಪುತ್ರ. ಇವರು ಸುಳ್ಯದಲ್ಲಿ ಎಬಿವಿಪಿ ಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
Ad Widget

ಗಾಳಿಪಟದೊಂದಿಗೆ ಹಾರಿದ ಮಗು

ಗಾಳಿಪಟದೊಂದಿಗೆ ಮಗುವೊಂದು ಹಾರಿದ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಥೈವಾನ್ ನಲ್ಲಿ ನಡೆದ ಘಟನೆಯಲ್ಲಿ 3 ವರ್ಷದ ಬಾಲಕಿಯೊಬ್ಬಳು ಸುಮಾರು 100 ಮೀ ಎತ್ತರಕ್ಕೆ ಗಾಳಿಪಟದೊಂದಿಗೆ ಹಾರಿದ್ದಾಳೆ. ಅದೃಷ್ಟವಶಾತ್ ಗಾಳಿಪಟ ಕೆಳಗೆ ಬಂದುದರಿಂದ ಸಾರ್ವಜನಿಕರು ಮಗುವನ್ನು ಹಿಡಿಕೊಂಡರು. ಇಲ್ಲಿದೆ ನೋಡಿ ವಿಡಿಯೋ. https://youtu.be/qz8dORfY7K0

ಪಂಜ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕಾಹಾರ ವಿತರಣೆ

ಪಂಜ ಅಂಗನವಾಡಿ ಕೇಂದ್ರದಲ್ಲಿ ಅರ್ಹ ಫಲಾನುಭವಿಗಳಾದ ಮಕ್ಕಳು ಮತ್ತು ಬಾಣಂತಿಯರಿಗೆ ಪೌಷ್ಟಿಕಾಹಾರ ವಿತರಣೆ ಇಂದು ನಡೆಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಪ್ರಮೀಳ ಪಿ. ಪೂರಕ ಆಹಾರ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಸಮಿತಿ ಸದಸ್ಯೆ ನಳಿನಿ, ಶಾಲಾ ಮುಖ್ಯ ಶಿಕ್ಷಕ ಮುತ್ತಪ್ಪ ಗೌಡ,ಆಶಾ ಕಾರ್ಯಕರ್ತೆ ಹಾಗೂ ಪೋಷಕರು,ಫಲಾನುಭವಿಗಳು ಉಪಸ್ಥಿತರಿದ್ದರು. ಕಾರ್ಯಕರ್ತೆ ಭಾಗೀರಥಿ, ಸಹಾಯಕಿ ವಿಮಲ ಸಹಕರಿಸಿದರು.

ಸಮಸ್ಯೆಯನ್ನು ಹುಟ್ಟುಹಾಕುವವರು ಎಸ್ ವೈಎಸ್ ನವರಾಗಬಾರದು – ಮೌಲಾನಾ ಜಿ.ಎಮ್ ಉಸ್ತಾದ್

ಎಸ್ ವೈಎಸ್ ಪಂಜ ನೆಕ್ಕಿಲ ಬ್ರಾಂಚ್ ಹಮ್ಮಿಕೊಂಡ ಸಂಘಟನಾ ಕಾರ್ಯಾಗಾರದಲ್ಲಿ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಎಸ್ ವೈಎಸ್ ರಾಜ್ಯ ಸಮಿತಿಯ ಸಾಂತ್ವನ ವಿಭಾಗದ ಚೇರ್ಮೆನ್ ಜಿ ಎಮ್ ಉಸ್ತಾದರು ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಹುಟ್ಟು ಹಾಕುವವರು ಎಸ್ ವೈಎಸ್ , ಎಸ್ಸೆಸ್ಸೆಫ್ ಕಾರ್ಯಕರ್ತರಾಗಬಾರದು ಎಂದು ಕಾರ್ಯಕರ್ತರಿಗೆ ಮನದಟ್ಟು ಮಾಡಿದರು.ಪ್ರಸ್ತುತ ಆನ್ ಲೈನ್ ಶಿಬಿರದ ಸಭಾಧ್ಯಕ್ಷತೆಯನ್ನು ನೆಕ್ಕಿಲ ಬ್ರಾಂಚ್...

ಕಡಬದಲ್ಲಿ ಸತ್ಯಶ್ರೀ ಅಸೋಸಿಯೇಟ್ಸ್ ಕಚೇರಿ ಶುಭಾರಂಭ

ಎಡಮಂಗಲ ಗ್ರಾಮದ ಪೊಟ್ರೆ ತಿಮ್ಮಪ್ಪ ಗೌಡರ ಪುತ್ರ ರಾಜೇಶ್ ಪಿ. ಯವರ ಮಾಲಕತ್ವದ ಸತ್ಯಶ್ರೀ ಅಸೋಸಿಯೇಟ್ಸ್ ಸಿವಿಲ್ ಇಂಜಿನಿಯರಿಂಗ್ ಕಚೇರಿಯು ಆ.31 ರಂದು ಕಡಬದಲ್ಲಿ ಶುಭಾರಂಭಗೊಂಡಿತು.

ಜಯನಗರದಲ್ಲಿ ಕೇಂದ್ರ ಸರ್ಕಾರದ ಉಚಿತ ಆಯುಷ್ಮಾನ್ ಕಾರ್ಡ್ ಯೋಜನೆಯ ಅಭಿಯಾನ

ಮೊಗರ್ಪಣೆ ಎಸ್ಎಸ್ಎಫ್ ಶಾಖೆ ವತಿಯಿಂದ ಕೇಂದ್ರ ಸರ್ಕಾರದ ಮಹತ್ ಕಾಂಕ್ಷಿ ಯೋಜನೆಯಲ್ಲಿ ಒಂದಾದ ಬಿಪಿಎಲ್ ಅರ್ಹ ಕುಟುಂಬಸ್ಥರಿಗೆ ಉಚಿತ ಆಯುಷ್ಮಾನ್ ಕಾರ್ಡ್ ಯೋಜನೆ ಕಾರ್ಯಕ್ರಮ ಜಯನಗರ ಬಿಎಂ ಸ್ಟೋರ್ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಮೊಗರ್ಪಣೆ ಎಸ್ಎಸ್ಎಫ್ ವತಿಯಿಂದ ಆಯೋಜಿಸಲಾಗಿತ್ತು. ಸಮಿತಿಯ ಅಧ್ಯಕ್ಷ ಆಸಿಫ್ ಜಯನಗರ, ಪ್ರಧಾನ ಕಾರ್ಯದರ್ಶಿ ಶಾಕಿರ್ ಮೊಗರ್ಪಣೆ, ಕೋಶಧಿಕಾರಿ ಶರೀಫ್ ಜಯನಗರ,...

ಬಿಳಿನೆಲೆಯಲ್ಲಿ ವಿದ್ಯುತ್ ಶಾಕ್ ಗೆ ಕಾಡಾನೆ ಬಲಿ

ವಿದ್ಯುತ್ ಶಾಕ್ ತಗುಲಿ ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಪುತ್ತಿಲ ಎಂಬಲ್ಲಿ ನಡೆದಿದೆ.ವಿದ್ಯುತ್ ತಂತಿ ಸ್ಪರ್ಶಿಸಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಪಂಜ ಉಂಗುರ ಬಿದ್ದು ಸಿಕ್ಕಿದೆ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಆ.31 ರಂದು ಚಿನ್ನದ ಉಂಗುರವೊಂದು ಬಿದ್ದು ಸಿಕ್ಕಿರುತ್ತದೆ. ಇದಕ್ಕೆ ಸಂಬಂಧಪಟ್ಟವರು ಪಂಜ ದೇವಾಲಯದ ಆಡಳಿತಾಧಿಕಾರಿಗಳಾದ ಡಾ. ದೇವಿಪ್ರಸಾದ್ ಕಾನತ್ತೂರ್ ಇವರಲ್ಲಿ ಗುರುತು ಹೇಳಿ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್ಸೆಸೆಲ್ಸಿ ಸಾಧಕಿ ಆಶಿತಾಳಿಗೆ ಧನಸಹಾಯ

   ಕಡುಬಡತನ ಹಾಗೂ ತಾಯಿಯ ಅನಾರೋಗ್ಯದ ನಡುವೆಯೂ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಡಬ ತಾಲೂಕಿನ ಬಳ್ಪ ಗ್ರಾಮದ ವಿಷ್ಣುಮಂಗಿಲ ಹೊನ್ನಪ್ಪ ಗೌಡ ಮತ್ತು ವಾರಿಜಾ ದಂಪತಿಗಳ ಪುತ್ರಿ ಆಶಿತಾಳಿಗೆ, ಗ್ರಾಮದ ಸಹೃದಯಿ ದಾನಿಗಳಿಂದ ಸಂಗ್ರಹಿಸಲ್ಪಟ್ಟ ರೂ.18000 ಮೊತ್ತದ ಹಣವನ್ನು ಸಹಾಯದ ರೂಪದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಬಳ್ಪ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ್...
Loading posts...

All posts loaded

No more posts

error: Content is protected !!