Ad Widget

ಬಾಳಿಲ: ಆಯುಷ್ಮಾನ್ ನೋಂದಣಿ ಶಿಬಿರ ಮುಂದೂಡಿಕೆ

ಕಳಂಜ - ಬಾಳಿಲ ಪ್ರಾ.ಕೃ.ಪ.ಸ.ಸಂಘ ನಿ. ಹಾಗೂ ನಾಗರಿಕ ಸೇವಾ ಸಮಿತಿ ಬಾಳಿಲ - ಮುಪ್ಪೇರ್ಯ ಇದರ ಜಂಟಿ ಆಶ್ರಯದಲ್ಲಿ ಬಾಳಿಲ ಸೊಸೈಟಿ ಶಾಖೆಯ ಮಿನಿ ಸಭಾಂಗಣದಲ್ಲಿ ನಾಳೆ(ಸೆ.13) ಆಯೋಜಿಸಲಾಗಿದ್ದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣಿ ಶಿಬಿರವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಬೆಳ್ಳಾರೆಗೆ ಭೇಟಿ – ಆರೋಗ್ಯ ಹಸ್ತ ಯೋಜನೆಯ ಬಗ್ಗೆ ಪರಿಶೀಲನೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಗ್ಯ ಹಸ್ತ ಕಾರ್ಯಕ್ರಮ ಕ್ಕೆ ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ರಾದ ಸಲೀಂ ಅಹ್ಮದ್, ವಿಧಾನ ಪರಿಷತ್ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾದ ಹರೀಶ್ ಕುಮಾರ್ ಅರಂತೋಡು ಹಾಗೂ ಬೆಳ್ಳಾರೆ ಗ್ರಾಮದ ದರ್ಖಾಸ್ತು ಗೆ ಭೇಟಿ ನೀಡಿದರು. ಕೆ ಪಿ ಸಿ ಸಿ...
Ad Widget

ಸೆ.19 : ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಮಕ್ಕಳನ್ನು ಬೆಳೆಸುವ ರೀತಿ ಎಂಬ ವಿಷಯದ ಬಗ್ಗೆ ಉಚಿತ ಆನ್ಲೈನ್ ತರಬೇತಿ ಕಾರ್ಯಾಗಾರ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಮತ್ತು ಬೀಜದಕಟ್ಟೆ ಅಭಿಮಾನಿಗಳ ಬಳಗ ಬೆಂಗಳೂರು ಜಂಟಿ ಸಹಯೋಗದೊಂದಿಗೆ ಸತತ ನಾಲ್ಕನೇ ಬಾರಿಗೆ ಉಚಿತ ಝೂಮ್ ಆನ್ಲೈನ್ ತರಬೇತಿ ಕಾರ್ಯಾಗಾರ ನಡೆಯಲಿದೆ.ಇದೇ ಬರುವ ಸೆ.19 ಶನಿವಾರದಂದು ಸಾಯಂಕಾಲ 7.30 ರಿಂದ ರಾತ್ರಿ 9.15 ರ ವರೆಗೆ ತರಬೇತಿ ಕಾರ್ಯಕ್ರಮ ನಡೆಯಲಿದೆ. ಮಕ್ಕಳನ್ನು ಬೆಳೆಸುವ ರೀತಿ ಎಂಬ ವಿಷಯದ ಬಗ್ಗೆ ಪೋಷಕರೊಂದಿಗೆ ,ಅಂತರರಾಷ್ಟ್ರೀಯ...

ಮರಳುಗಾರಿಕೆಗೆ ಆಯಾ ಗ್ರಾಮ ಪಂಚಾಯತಿಗಳಿಂದ ಶೀಘ್ರ ಅನುಮತಿ – ತಹಶೀಲ್ದಾರ್ ಸ್ಥಳ ಪರಿಶೀಲನೆ

ಆಯಾ ಗ್ರಾಮ ಪಂಚಾಯತಿಗಳಿಂದ ಅನುಮತಿ ಪಡೆದು ಮರಳುಗಾರಿಕೆ ನಡೆಸಲು ಮುಂದಿನ ದಿನಗಳಲ್ಲಿ ಸಾಧ್ಯತೆ. ಜಿಲ್ಲಾ ಆಡಳಿತದಿಂದ ಈ ರೀತಿಯ ವ್ಯವಸ್ಥೆ ಕಲ್ಪಿಸಲು ಈಗಾಗಲೆ ಸಿದ್ಧತೆಗಳು ಆರಂಭಗೊಂಡಿದೆ ‌ ಇದರ ಅಂಗವಾಗಿ ಇಂದು ಸುಳ್ಯ ತಾಲೂಕಿನ ಹಳ್ಳ ,ನದಿ ತಟ, ಸಣ್ಣ ಮತ್ತು ದೊಡ್ಡ ತೋಡುಗಳ ವಿವಿಧ ಸ್ಥಳಗಳಿಗೆ ತಹಶೀಲ್ದಾರ್ ಅನಂತ ಶಂಕರ್ ರವರ ನೇತೃತ್ವದಲ್ಲಿ ಸ್ಥಳ...

ಚರಂಡಿ ನಿರ್ಮಾಣದಿಂದ ವಾಹನ ನಿಲುಗಡೆಗೆ ಸಮಸ್ಯೆ – ಸರಿಪಡಿಸಿ ಕೊಡುವಂತೆ ಸ್ಥಳೀಯರಿಂದ ಅಧಿಕಾರಿಗಳಿಗೆ ಮನವಿ

ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯಲ್ಲಿರುವ ಚರಂಡಿಯ ಕಾಮಗಾರಿ ನಡೆಯುತ್ತಿದೆ.ಈ ಪರಿಸರದಲ್ಲಿ ದಿನ ನಿತ್ಯ ನೂರಾರು ಸಾರ್ವಜನಿಕರು ವಿವಿಧ ಕೆಲಸ ಕಾರ್ಯದ ನಿಮಿತ್ತ ಬರುತ್ತಿದ್ದು, ವಿವಿಧ ಸಭೆ ಸಮಾರಂಭಗಳು ನಡೆಯುವ ಲಯನ್ಸ್ ಸಭಾ ಭವನ ಇರುದರಿಂದ ವಾಹನ ಪಾರ್ಕಿಂಗ್‌ಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ವಾಹನ ಪಾರ್ಕಿಂಗ್‌ಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿ ನಡೆಸಬೇಕು ಎಂದು ಸ್ಥಳೀಯ ಅಂಗಡಿ ಮಾಲಕರು ನಗರ...

ಮಲ್ಲಿಕಾ ಗೋಪಾಲ್ ಮರ್ಕಂಜ ಪ್ರೌಢ ಶಾಲಾ ಶಿಕ್ಷಕಿಯಾಗಿ ಪದೋನ್ನತಿ

ಪುತ್ತೂರಿನ ಕುಟ್ಟಿನೋಪಿನಡ್ಕ ಪ್ರಾಥಮಿಕ ಶಾಲೆಯಿಂದ ಮಲ್ಲಿಕಾ ಗೋಪಾಲ್ ಗುಂಡ್ಯ ಪದೋನ್ನತಿ ಹೊಂದಿ ಮರ್ಕಂಜ ಪ್ರೌಢ ಶಾಲಾ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮಲ್ಲಿಕಾರವರು 16 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು , ಬೆಳ್ತಂಗಡಿ , ಬಂಟ್ವಾಳ ಪುತ್ತೂರುಗಳಲ್ಲಿ ಸೇವೆ ಸಲ್ಲಿಸಿ ಪುತ್ತೂರಿನ ಕುಟ್ಟಿನೋಪಿನಡ್ಕ ಶಾಲೆಯಿಂದ ಪ್ರೌಢಶಾಲಾ ಶಿಕ್ಷಕಿಯಾಗಿ ಭಡ್ತಿ ಪಡೆದು ಮರ್ಕಂಜ ಸರಕಾರಿ ಪ್ರೌಢಶಾಲೆಗೆ ಇಂಗ್ಲೀಷ್ ಶಿಕ್ಷಕಿಯಾಗಿ...

ಡಾ.ಲೀಲಾಧರ್ ಡಿ.ವಿ.ಯವರಿಗೆ ಜೇಸಿಐ ಯೂತ್ ಇನ್ ಸ್ಪೈಯರ್ ಅವಾರ್ಡ್

ಜೇಸಿಐ ಸುಳ್ಯ ಸಿಟಿ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಕೊಡಮಾಡುವ ಜೇಸಿಐ ಯೂತ್ ಇನ್ ಸ್ಪೈಯರ್ ಅವಾರ್ಡ್ ಗೆ ಸುಳ್ಯ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ.ಯವರನ್ನು ಆಯ್ಕೆ ಮಾಡಲಾಗಿದೆ ಎಂದು ಜೇಸಿಐ ಸುಳ್ಯ ಸಿಟಿ ಕ್ಲಬ್ ಅಧ್ಯಕ್ಷ ವಿನಯ್ ರಾಜ್ ಮಡ್ತಿಲಸೆ.11 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ...

ಪಯಸ್ವಿನಿ ಜೇಸಿಸ್ ಸಪ್ತಾಹದ ಅಂಗವಾಗಿ ಕೊರೊನ ವಾರಿಯರ್ ಗೆ ಸನ್ಮಾನ

ಜೇಸಿಐ ಸುಳ್ಯ ಪಯಸ್ವಿನಿ ಘಟಕದ ವತಿಯಿಂದ "ಜೇಸಿಐ ಸಪ್ತಾಹದ 2 ನೇ ದಿನದ ಅಂಗವಾಗಿ ಇಂದು ಗ್ರಾಮೀಣ ಪ್ರದೇಶವಾದ ಅಮರಪಡ್ನೂರು ಗ್ರಾಮದ ಅಕ್ಕೋಜಿಪಾಲ್ ಅಂಗನವಾಡಿ ಕೇಂದ್ರ ಇಲ್ಲಿ ಕೊರೊನ ವಾರಿಯರ್ ಗಳಿಗೆ ಸನ್ಮಾನ ಮತ್ತು ಸ್ವಚ್ಛತೆಯ ಬಗ್ಗೆ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು ಜೇಸಿಐ ವಲಯ 15 ರ ಯುವ ಜೇಸಿ ನಿರ್ದೇಶಕರಾದ ಜೇಸಿ ಮರಿಯಪ್ಪ ರವರು...

ಗುತ್ತಿಗಾರು ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿ ವತಿಯಿಂದ ರಾಜ್ಯಮಟ್ಟದ ಪ್ರತಿಭೆ ಅನುಷ್ ಗೆ ಸನ್ಮಾನ

ಬದ್ರಿಯಾ ಜುಮ್ಮಾ ಮಸೀದಿ ಗುತ್ತಿಗಾರು ಇದರ ಆಡಳಿತ ಮಂಡಳಿ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಅನುಷ್ ಎ.ಎಲ್ ಗೆ ಸನ್ಮಾನ ಕಾರ್ಯಕ್ರಮ ಇಂದು ನಡೆಯಿತು. ಧರ್ಮ ಗುರುಗಳಾದ ಬಹು| ಅಬ್ದುಲ್ ನಾಸಿರ್ ಜೌಹರಿ, ಬಹು|ಖಾಲಿದ್ ಮಿಸ್ಬಾಯಿ, ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಅಬ್ಬಾಸ್ ವಳಲಂಬೆ, ಕಾರ್ಯದರ್ಶಿ ಹಸೈನಾರ್ ವಳಲಂಬೆ, ಪದಾಧಿಕಾರಿಗಳಾದ ಅಬ್ದುಲ್...

ಎಲಿಮಲೆ: ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಭಜನಾ ಸತ್ಸಂಗ ಕಾರ್ಯಕ್ರಮ

ಎಲಿಮಲೆ ಮಂಜುಶ್ರೀ ಭಜನಾ ಮಂಡಳಿ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅಂಗವಾಗಿ ಸೆ. 10ರಂದು ರಾತ್ರಿ ಶ್ರೀ ಧರ್ಮಪಾಲ ಸುಳ್ಳಿ ಇವರ ಮನೆಯಲ್ಲಿ ವಿಶೇಷ ಭಜನಾ ಸತ್ಸಂಗ ಕಾರ್ಯಕ್ರಮ ನೆರವೇರಿತು. ಈ ಭಜನಾ ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಸದಸ್ಯರು ಹಾಗೂ ಸ್ಥಳೀಯ ಭಕ್ತರು ಪಾಲ್ಗೊಂಡಿದ್ದರು. ಭಜನಾ ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ನೆರವೇರಿತು
Loading posts...

All posts loaded

No more posts

error: Content is protected !!