- Monday
- March 3rd, 2025

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಜ.31 ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದು ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಕುಂಚಡ್ಕ ಹಾಗೂ ಉಪಾಧ್ಯಕ್ಷರಾಗಿ ಹರಿಪ್ರಸಾದ್ ಕಾಪುಮಲೆ ಯವರು ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶ್ರೀಪತಿ ಭಟ್ ಮಜಿಗುಂಡಿ, ಕರುಣಾಕರ ಹಾಸ್ಪಾರೆ, ಸುಧಾಕರ ಆಲೆಟ್ಟಿ, ಚಿದಾನಂದ ಕೋಲ್ಟಾರು, ಶ್ರೀಮತಿ ವಿದ್ಯಾ ಕುಡೆಕಲ್ಲು,ಶ್ರೀಮತಿ ಉಷಾ...

ಪ್ರಯೋಜನಕ್ಕೆ ಬಾರದಂತಾಯಿತೇ ಮುಳ್ಳುಬಾಗಿಲು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಟವರ್..!? ಸಂಬಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಜನತೆ ದೇಶದ ಅಭಿವೃದ್ಧಿ ಆಗಬೇಕಾದರೆ ಹಳ್ಳಿಗಳು ಅಭಿವೃದ್ಧಿ ಆಗಬೇಕು. ಹಳ್ಳಿ-ಹಳ್ಳಿಗಳನ್ನು ಸೇರಿಸುವ ನಿಟ್ಟಿನಲ್ಲಿ ಬಿ.ಎಸ್.ಎನ್.ಎಲ್ ದೇಶದ ಅನೇಕ ಪ್ರದೇಶಗಳಲ್ಲಿ ಹೊಸ ಟವರ್ ಗಳನ್ನು ನಿರ್ಮಿಸಿ 4ಜಿ ಸೇವೆಯನ್ನು ನೀಡುತ್ತಿದೆ. ಅದರಲ್ಲಿ ಸುಳ್ಯ ತಾಲೂಕಿನ ಅನೇಕ...

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ ಜ.30 ರಂದು ನಡೆಯಿತು. . ಅಧ್ಯಕ್ಷರಾಗಿ ಹಿರಿಯ ಸಹಕಾರಿ ಮಾಜಿ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಉಪಾಧ್ಯಕ್ಷರಾಗಿ ರಾಮ ನಾಯ್ಕ ಉಡುವೆಕೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರಾದ ಅಶೋಕ ಜಿ. ಗೋಳ್ತಾಜೆ, ತೃಪ್ತಿ ಯು., ರವಿಕಿರಣ ಎ.,...

ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಜ.30 ದಿನ ನಿಗದಿಯಾಗಿತ್ತು. ಪಕ್ಷ ಸೂಚಿಸಿದ ಅಭ್ಯರ್ಥಿಗಳ ಬಗ್ಗೆ ಮಾಜಿ ಅಧ್ಯಕ್ಷ ವಸಂತ ನಡುಬೈಲು ತಂಡ ಅಸಮಾಧಾನಗೊಂಡು ಪಕ್ಷದ ಅಭ್ಯರ್ಥಿಗಳ ವಿರುದ್ಧ ಕಣಕ್ಕಿಳಿದಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆದು ಬಂಡಾಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಅಧ್ಯಕ್ಷರಾಗಿ ವಸಂತ ನಡುಬೈಲು...

ದೇಶದ ಅಭಿವೃದ್ಧಿಯಾಗಬೇಕಾದರೇ ಹಳ್ಳಿಗಳು ಅಭಿವೃದ್ಧಿಯಾಗಬೇಕು. ಹಳ್ಳಿ ಹಳ್ಳಿಗಳನ್ನು ಸೇರಿಸುವ ನಿಟ್ಟಿನಲ್ಲಿ ಬಿಎಸ್ಎನ್ಎಲ್ ದೇಶದ ಅನೇಕ ಪ್ರದೇಶಗಳಲ್ಲಿ ಹೊಸ ಟವರ್ ನಿರ್ಮಿಸಿ 4G ಸೇವೆ ನೀಡುತ್ತಿದೆ. ಆದರೇ ಸುಳ್ಯ ತಾಲೂಕಿನ ಅನೇಕ ಗ್ರಾಮಗಳು ಸೇರಿದೆ. ಟವರ್ ನಿರ್ಮಾಣಗೊಂಡು ನೆಟ್ವರ್ಕ್ ಬಂದಾಗ ಅನೇಕ ಜನರು ಖುಷಿ ಪಟ್ಟರು. ಆದರೇ ಬಹುದಿನ ಉಳಿಯಲಿಲ್ಲ. ಸುಳ್ಯದ ಮಡಪ್ಪಾಡಿ, ಕಂದ್ರಪ್ಪಾಡಿ, ದೇವ, ಬಳ್ಳಕ್ಕ...

ಸರಕಾರದ "ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಯೋಜನೆ"ಯನ್ನು ಸಹಕಾರಿ ಸಂಘದ ಮೂಲಕ ಸದಸ್ಯರಿಗೆ ಜಾರಿಗೊಳಿಸಲಾಗಿದ್ದು, ಸುಳ್ಯ ಮತ್ತು ಪುತ್ತೂರು ತಾಲೂಕು ಮಟ್ಟದಲ್ಲಿ ಯಾವುದೇ ಯಶಸ್ವಿನಿ ನೋಂದಾಯಿತ ಆಸ್ಪತ್ರೆಗಳು ಇಲ್ಲದೇ ಇರುವುದರಿಂದ ಫಲಾನುಭವಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗದೇ ವಂಚಿತರಾಗುತ್ತಿದ್ದಾರೆಸುಳ್ಯ ತಾಲೂಕಿನಲ್ಲಿ ಕೆ.ವಿ.ಜಿ ವೈದ್ಯಕೀಯ ಆಸ್ಪತ್ರೆ ಮತ್ತು ಪುತ್ತೂರು ತಾಲೂಕಿನ ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾ ಕೇಂದ್ರ...
ಪೆರಾಜೆ ದೇವಸ್ಥಾನದಲ್ಲಿ ನಡೆಯಲಿದ್ದ ಕಾರ್ಯಕ್ರಮದ ಅಂಗವಾಗಿ ಅನ್ಯಮತೀಯರಿಗೆ ಶಾಮಿಯಾನ ಹಾಕಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ಘಟನೆ ಇಂದು ವರದಿಯಾಗಿದೆ. ಸುಳ್ಯದ ಸಹನಾ ಶಾಮಿಯಾನ ದವರಿಗೆ ಅವಕಾಶ ನೀಡಿದ್ದಕ್ಕೆ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ನಾವು ಸ್ವಾತಿ ಸೌಂಡ್ಸ್ ನವರಿಗೆ ನೀಡಿದ್ದೇವು ಅವರು ಸಹನಾ ದವರಿಗೆ ಸಬ್ ಕಾಂಟ್ರಾಕ್ಸ್ ನೀಡಿದ್ದಾರೆ ಎಂದು...
ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕು ಕಲ್ಮಕಾರು ಗ್ರಾಮದಿಂದ ವರದಿಯಾಗಿದ್ದು, ಬಾಳೆಬೈಲು ನಿವಾಸಿ ಶ್ರೀಮತಿ ಭಾಗೀರಥಿ ಪಾಂಡಿಗದ್ದೆ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದುಬಂದಿದೆ.ಮಹಿಳೆ ವಿಷ ಸೇವಿಸಿದ್ದು ಗೊತ್ತಾದ ತಕ್ಷಣ ಹರಿಹರ ಪಳ್ಳತ್ತಡ್ಕದ ವೈದ್ಯರಾದ ಡಾ| ಗಿರೀಶ್ ರವರಲ್ಲಿಗೆ ತರಲಾಗಿದ್ದು, ಮಹಿಳೆ ಆದಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಬಳಿಕ ಸುಳ್ಯ...

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಶಾಲಾ ಸಂಸತ್ತು ಅಧಿವೇಶನ ಜ.27ರಂದು ಜರುಗಿತು. ವಿದ್ಯಾರ್ಥಿ ಸರಕಾರದ ಸಭಾಪತಿಯಾದ ಕುಲದೀಪ್ ಜಿ. ಎನ್ ಸಭಾಧ್ಯಕ್ಷತೆಯನ್ನು ವಹಿಸಿ ಸರ್ವರನ್ನು ಸ್ವಾಗತಿಸಿದರು. ಸಂಸದೀಯ ಕಾರ್ಯದರ್ಶಿಯಾದ ಬೃಂದಾ ಗತ ಅಧಿವೇಶನದ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆದರು. ಮುಖ್ಯಮಂತ್ರಿಯಾದ ಜಶ್ಮಿ ಎನ್ . ಸಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಕ್ರೀಡಾಕೂಟದ ಸಾಧನೆಗಳಿಗೆ ಅಭಿನಂದನಾ ಗೊತ್ತುವಳಿಯನ್ನು...

ಒಂದು ಊರಿನಲ್ಲಿ ಒಬ್ಬ ವ್ಯಕ್ತಿಯಿದ್ದ. ಎಲ್ಲರೆದುರು ಅಹಂಕಾರದಿಂದ ಬೀಗುತ್ತಿದ್ದ ಆತ “ನಾನೇ ಎಲ್ಲಾ, ನನ್ನಿಂದಲೇ ಎಲ್ಲಾ” ಎನ್ನುವ ಭ್ರಮೆಯಲ್ಲಿ ಬದುಕುತ್ತಿದ್ದ. ಆದರೆ ಆತನಿಗೇ ಅರಿವಾಗದ ಆತನ ಬದುಕಿನ ಸತ್ಯಗಳು ಹೀಗಿದ್ದವು…“ನಾನು” ಎನ್ನುವ ಅಹಂಕಾರದ ಅಂಧಕಾರದಲ್ಲಿ ಮುಳುಗಿದ್ದ ಆತನಿಗೆ ತಾನೂ ಕೂಡ ಮುಂದೊಮ್ಮೆ ಎಲ್ಲರಂತೆ ಸತ್ತು ಮಣ್ಣು ಸೇರುತ್ತೇನೆ ಎಂಬುವುದು ನೆನಪಾಗಲೇ ಇಲ್ಲ…“ನನ್ನಿಂದಲೇ ಎಲ್ಲಾ” ಎನ್ನುವ ದೊಡ್ಡಸ್ತಿಕೆಯ...

All posts loaded
No more posts