- Saturday
- May 2nd, 2026
ಗುತ್ತಿಗಾರು ಗ್ರಾಮದ ಪೈಕ ಗೌಡತ್ತಿಗೆ ಮನೆ ಮಹೇಶ ಕುಮಾರ್ ಜಿ.ಯಸ್. ಇಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ವಿಜಯಲಕ್ಷ್ಮೀ, ಪುತ್ರ ಶ್ರೀಕಾಂತ್, ಪುತ್ರಿ ಪ್ರಪುಲ್ಲ ಜಯಂತ್, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ , ಸಮೂಹ ಸಂಪನ್ಮೂಲ ಕೇಂದ್ರ ಸುಬ್ರಹ್ಮಣ್ಯ ಇವರ ಜಂಟಿ ಆಶ್ರಯದಲ್ಲಿ ನಡೆದ ಸುಬ್ರಮಣ್ಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2025 ರಲ್ಲಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದು ಹಿರಿಯ ಹಾಗೂ ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ
ನ.19 ಸಂಪಾಜೆ ವಲಯ ಕಾಗ್ರೆಸ್ ವತಿಯಿಂದ ದೇಶದ ಪ್ರಥಮ ಮಹಿಳಾ ಪ್ರದಾನಿಗಳು ಸ್ವಾತಂತ್ರ್ಯ ಹೋರಾಟಗಾರರು ಮತ್ತು ವಿವಿಧ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವಿರುದ್ದ ಸೆಟೆದು ನಿಂತು ದೇಶವನ್ನು ಪ್ರಥವಾಗಿ ಅಣ್ವಾಯುಧ ರಾಷ್ಟ್ರವನ್ನಾಗಿಸಿ ಉಕ್ಕಿನ ಮಹಿಳೆಯೆಂದೇ ಖ್ಯಾತಿ ಪಡೆದ ದೇಶವಿಭಜಕ ಉಗ್ರವಾದಿಗಳಿಂದ ಹತ್ಯೆಗೈಲ್ಪಟ್ಟ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರ 109ನೇ ವರ್ಷದ ಹುಟ್ಟು ಹಬ್ಬವನ್ನು ಮಹಿಳಾ ಕಾಂಗ್ರೆಸ್...
ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು “ಸಂಸದರ ನಡೆ-ಗ್ರಾಮದ ಕಡೆ” ಕಾರ್ಯಕ್ರಮ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ಸಲುವಾಗಿ ನಾಳೆ(ನ.20) ಬಾಳುಗೋಡು, ಕಲ್ಮಕಾರು ಹಾಗೂ ಕೊಲ್ಲಮೊಗ್ರು ಗ್ರಾಮಗಳಿಗೆ ಭೇಟಿ ನೀಡಲಿದ್ದು, ಬೆಳಿಗ್ಗೆ 11:30ಕ್ಕೆ ಬಾಳುಗೋಡು, ಮದ್ಯಾಹ್ನ 3:00 ಗಂಟೆಗೆ ಕಲ್ಮಕಾರು ಹಾಗೂ ಸಂಜೆ 4:50ಕ್ಕೆ ಕೊಲ್ಲಮೊಗ್ರು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು...
ಸುಬ್ರಹ್ಮಣ್ಯದಲ್ಲಿಂದ ವಿವಿಧ ಸಂಘಟನೆ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು ಈ ಮಧ್ಯೆಯೆ ಭಕ್ತಾಧಿಯೋರ್ವ ಕಾರಿನಿಂದ ನದಿಗೆ ಕಸ ಎಸೆದ ಘಟನೆ ನಡೆಯಿತು. ಈ ಸ್ಥಳೀಯರು ಗಮನಿಸಿ,ವಾಹನ ತಡೆದ ಭಕ್ತಾದಿಗಳಿಂದಲೇ ಕಸ ಹೆಕ್ಕಿಸಿದ ಘಟನೆ ನ.19 ರಂದು ನಡೆದಿದೆ. ಸುಬ್ರಹ್ಮಣ್ಯದ ಸಾರ್ವಜನಿಕರು, ವಾಹನ ಚಾಲಕರು, ಸಂಘಸಂಸ್ಥೆಗಳು ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ಪ್ರವಾಸಿಗರು, ದೂರದೂರಿನ ಭಕ್ತಾಧಿಗಳು ಕಸ ಎಸೆಯುವುದು...
ಯುವ ಜನ ಸಂಯುಕ್ತ ಮಂಡಳಿಯ ಪಂಚ ಸಪ್ತತಿ ಕಾರ್ಯಕ್ರಮದ ಅಂಗವಾಗಿ ಗುತ್ತಿಗಾರು ವೀರ ಮಾರುತಿ ಸ್ಪೋಟ್ಸ್ ಕ್ಲಬ್ ವತಿಯಿಂದ 41 ನೇ ದಿನದ ಕಾರ್ಯಕ್ರಮ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸ್ವಚ್ಛತೆ ನ.19 ರಂದು ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ,ಕಾರ್ಯದರ್ಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ : ಶ್ರೀ ಕ್ಷೇ.ಧ.ಗ್ರಾ.ಯೋಜನೆ ಹಾಗೂ ವೀರ ಮಾರುತಿ ಸ್ಪೋಟ್ಸ್ ಕ್ಲಬ್ ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ
ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ, ಶೌರ್ಯ ವಿಪತ್ತು ತಂಡ ಹಾಗೂ ವೀರ ಮಾರುತಿ ಸ್ಪೋಟ್ಸ್ ಕ್ಲಬ್ ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯರಾದ ಅಶೋಕ್ ನೆಕ್ರಾಜೆ, ಮಾಸ್ಟರ್ ಪ್ಲಾನರಿಯ ಲೋಲಾಕ್ಷ ಕೈಕಂಬ, ಸತೀಶ್ ಕೂಜಗೋಡು, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಆರೋಗ್ಯಾಧಿಕಾರಿ...
ಮಹಾತ್ಮ ಗಾಂಧಿ ನರೇಗಾ ಯೋಜನೆಯ ವಿಶೇಷ ಗ್ರಾಮ ಸಭೆ ಯು ನ.20 ಗುರುವಾರ 10.30 ಕ್ಕೆ ಗ್ರಾಮ ಪಂಚಾಯತ್ ಸಭಾಂಗಣ ದಲ್ಲಿ ನಡೆಯಲಿದೆ. 2026-27ನೇ ಸಾಲಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ಇಚ್ಚಿಸುವ ಫಲಾನುಭವಿಗಳು ಈ ದಿನ ಅರ್ಜಿ ಸಲ್ಲಿಸಲು ತಿಳಿಯಪಡಿಸಿದೆ. ಅರ್ಜಿ ಸಲ್ಲಿಸಿದ ಫಲಾನುಭವಿ ಗಳು ಮುಂದಿನ ಆರ್ಥಿಕ ವರ್ಷದಲ್ಲಿ( ಏಪ್ರಿಲ್ 2026ರಿಂದ...
ಗುತ್ತಿಗಾರು ಬಳ್ಪ ಸಂಪರ್ಕಿಸುವ ರಸ್ತೆ ಚತ್ರಪ್ಪಾಡಿ ಎಂಬಲ್ಲಿ ಹಳೆ ಸೇತುವೆ ತೆಗೆದು ನೂತನ ಸೇತುವ ನಿರ್ಮಾಣ ಕಾಮಗಾರಿ ಕೆಲಸ ಇಂದಿನಿಂದ ನ.19 ರಿಂದ ಪ್ರಾರಂಭವಾಗಲಿದೆ. ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಬದಲಿ ರಸ್ತೆ ಬಳಸುವಂತೆ ಸೂಚಿಸಿದ್ದಾರೆ.
Loading posts...
All posts loaded
No more posts
