ಸುಳ್ಯ ನಗರ ಕಾಂಗ್ರೆಸ್ ಸಭೆ

ಸುಳ್ಯ ನಗರ ಕಾಂಗ್ರೆಸ್ ನ ವಾರ್ಡ್ ಸಮಿತಿಗಳ ಪುನರ್ ರಚನೆ ಮತ್ತು ವಾರ್ಡ್ ಉಸ್ತುವಾರಿಗಳ ನೇಮಕಾತಿ ಕುರಿತು ನಗರ ಕಾಂಗ್ರೆಸ್ ಸಮಿತಿ ಸಭೆಯನ್ನು ದಿನಾಂಕ 30-11-2025ರ ಭಾನುವಾರ ಸಂಜೆ ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಸಲಾಯಿತು. ಸುಳ್ಯ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಶಶಿಧರ ಎಂ.ಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರದ ವಾರ್ಡ್...

ಮಡಪ್ಪಾಡಿ : ಪಂಚಸಪ್ತತಿ ಅಭಿಯಾನದ ಅಂಗವಾಗಿ ಕ್ರೀಡಾಂಗಣ ಸ್ವಚ್ಛತೆ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಯುವಕ ಮಂಡಲ(ರಿ.) ಮಡಪ್ಪಾಡಿ ಇದರ ಆಶ್ರಯದಲ್ಲಿ ಪಂಚಸಪ್ತತಿ  ಸ್ವಚ್ಛತಾ ಅಭಿಯಾನ-2025(75 ದಿನಗಳ ಸ್ವಚ್ಛತಾ ಅಭಿಯಾನ) ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಈ ದಿನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಡಪ್ಪಾಡಿಯ ಶಾಲಾ ಕ್ರೀಡಾಂಗಣವನ್ನು ಸ್ವಚ್ಛತೆ ಮಾಡಲಾಯಿತು.            ಈ ಸಂದರ್ಭದಲ್ಲಿ ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಮತ್ತು ಯುವಜನ ಸಂಯುಕ್ತ...
Ad Widget

ಗುತ್ತಿಗಾರು : ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪಂಚಸಪ್ತತಿ ಆಂದೋಲನ ಅಂಗವಾಗಿ ಮಾಹಿತಿ ಕಾರ್ಯಕ್ರಮ

ಪಂಚಸಪ್ತತಿ 75 ದಿನಗಳ ಸ್ವಚ್ಚತಾ ಆಂದೋಲನದಡಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ.) ಆಶ್ರಯದಲ್ಲಿ ಶುಚಿ 2025 ಆರೋಗ್ಯ ಮಾಹಿತಿ ಕಾರ್ಯಕ್ರಮ ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಸರಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರು ಡಾ| ಶಾಲಿನಿ ವಿ.ಎಲ್ ಇವರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಮಾಹಿತಿ ನೀಡಿದರು. ಕಾರ್ಯಕ್ರಮ ಉದ್ಘಾಟನೆಯನ್ನು  ಪ್ರಾಂಶುಪಾಲರಾದ ಶ್ರೀಮತಿ...

ಸುಳ್ಯದ “ಸ್ವರ್ಣಂ ಜ್ಯುವೆಲ್ಸ್” ನಲ್ಲಿ ಗೋಲ್ಡ್ ಎಕ್ಸ್  ಚೇಂಜ್ ಮೇಳಕ್ಕೆ ಗ್ರಾಹಕರ ಉತ್ತಮ ಸ್ಪಂದನೆ – ಗ್ರಾಹಕರ ಅಪೇಕ್ಷೆ ಮೇರೆಗೆ ಡಿ.10ರವರೆಗೆ ವಿಸ್ತರಣೆ – ಪ್ರತೀ ಆಭರಣ ಖರೀದಿಗೆ ₹250/- ಕಡಿತ – ನಿಮ್ಮ ಹಳೆಯ ಆಭರಣಗಳನ್ನು 916 ಆಭರಣಗಳೊಂದಿಗೆ  ಬದಲಾಯಿಸಿಕೊಳ್ಳಲು  ಅವಕಾಶ

ಸುಳ್ಯದ  ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ "ಸ್ವರ್ಣಂ ಜ್ಯುವೆಲ್ಸ್" ನಲ್ಲಿ "ಗೋಲ್ಡ್  ಎಕ್ಸ್ ಚೇಂಜ್ ಮೇಳ"ಕ್ಕೆ ಗ್ರಾಹಕರ ಉತ್ತಮ ಸ್ಪಂದನೆ ನೀಡಿದ್ದು, ಚಿನ್ನ ಎಕ್ಸ್ ಚೇಂಜ್ ಗೆ ಗ್ರಾಹಕರು ಮುಗಿಬಿದ್ದ ಕ್ಷಣ ಕಂಡುಬಂದಿತು.ಸುಳ್ಯದ ಗ್ರಾಹಕರಿಗೋಸ್ಕರ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ನ.24  ಡಿ.4 ರವರೆಗೆ ಗೋಲ್ಡನ್ ಎಕ್ಸ್ ಚೇಂಜ್ ಮೇಳ ನಡೆಯುತ್ತಿದ್ದು,...

ಬೆಳ್ಳಾರೆ : ರಸ್ತೆಯ ಎರಡು ಬದಿಯ ಮರಗಳನ್ನು ತೆರವುಗೊಳಿಸಲು ನಾಗರಿಕರ ಒತ್ತಾಯ – ಶಾಸಕರಿಗೆ ಮನವಿ

ಸುಳ್ಯ ಬೆಳ್ಳಾರೆ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ  ಕೆಲವೆಡೆ ಒಂದು ಭಾಗದಲ್ಲಿ ಮಾತ್ರ ಮರವನ್ನು ತೆರವು ಮಾಡಲಾಗಿದ್ದು, ಇನ್ನೊಂದು ಭಾಗದ ಮರಗಳು ರಸ್ತೆಗೆ ಸಮೀಪದಲ್ಲಿದೆ. ತಿರುವು ರಸ್ತೆಯಿರುವ ಕಾರಣ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಹಾಗೂ ತಿರುವಿನಲ್ಲಿ ರಸ್ತೆ ಕಾಣದೇ  ಅಪಘಾತಗಳಿಗೆ ಎಡೆ ಮಾಡಿಕೊಡುವ ಮುನ್ನ ತೆರವುಗೊಳಿಸುವುದು ಒಳಿತು.  ಈ ರಸ್ತೆ ವೀಕ್ಷಣೆಯನ್ನು...

ನಡುಗಲ್ಲು : ಮಕ್ಕಳ ಕುಣಿತ ಭಜನಾ ತರಬೇತಿ ಕಾರ್ಯಾಗಾರ ಉದ್ಘಾಟನೆ

ಶ್ರೀ ದುರ್ಗಾ ಭಜನಾ ಮಂಡಳಿ ಹಾಗೂ ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಇವರ ನೇತೃತ್ವದಲ್ಲಿ ನಡುಗಲ್ಲು ಪ್ರಾಥಮಿಕ ಶಾಲೆಯಲ್ಲಿ “ಮಕ್ಕಳ ಕುಣಿತ ಭಜನಾ ತರಬೇತಿ ಕಾರ್ಯಾಗಾರ” ನಡೆಯಲಿದ್ದು, ಇದರ ಉದ್ಘಾಟನೆಯನ್ನು ಶ್ರೀ ಮಹಾಮೃತ್ಯುಂಜಯೇಶ್ವರ ಪಾರ್ವತಿ ಕ್ಷೇತ್ರ ನಡುಗಲ್ಲು ಇದರ ಸೇವಾ ಟ್ರಸ್ಟ್ ಅಧ್ಯಕ್ಷರಾದ ರಾಮಚಂದ್ರ ಭಟ್ ನಡುಗಲ್ಲು ರವರು ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ...

ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ – ಸರಕಾರಿ ಪ್ರೌಢ ಶಾಲೆ ಎಣ್ಮೂರು ಸಮಗ್ರ ಪ್ರಶಸ್ತಿ

ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಇತ್ತೀಚೆಗೆ ಕೆ.ಎಸ್.ಗೌಡ ವಿದ್ಯಾ ಸಂಸ್ಥೆ ನಿಂತಿಕಲ್ಲು ಇಲ್ಲಿ ನಡೆಯಿತು. ಸರಕಾರಿ ಪ್ರೌಢ ಶಾಲೆ ಎಣ್ಮೂರು ಏಳು ಪ್ರಥಮ, ಮೂರು ದ್ವಿತೀಯ ಹಾಗೂ ಎರಡು ತೃತೀಯ ಸ್ಥಾನ ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಶುಭವಿವಾಹ: ದೀಪಕ್ – ನವ್ಯಶ್ರೀ

ಕಡಬ ತಾಲೂಕು ಎಣ್ಮೂರು ಗ್ರಾಮದ ಚಾಮೆತಡ್ಕ ಖಂಡಿಗೆ ಶ್ರೀಮತಿ ಲೀಲಾವತಿ ಮತ್ತು ದಿ|ಪದ್ಮಯ್ಯ ಗೌಡರ ಸುಪುತ್ರ ದೀಪಕ್ ರವರ ವಿವಾಹವು ಸುಳ್ಯ ತಾಲೂಕು ಅಮರಮುಡ್ನೂರು ಗ್ರಾಮದ ದಾತಡ್ಕ ಮನೆಯ ಇಡಾಲ ಶ್ರೀಮತಿ ಚಂದ್ರಕಲಾ ಮತ್ತು ಶ್ರೀ ಪುರುಷೋತ್ತಮ ಗೌಡರ ಸುಪುತ್ರಿ ನವ್ಯಶ್ರೀ ರವರೊಂದಿಗೆ ಸುಳ್ಯ ಅಮರಶ್ರೀಭಾಗ್ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನ.30ರಂದು ಜರುಗಿತು.

ಮಡಪ್ಪಾಡಿಯಲ್ಲಿ ಪಂಚಸಪ್ತತಿ ಸ್ವಚ್ಛತಾ ಕಾರ್ಯಕ್ರಮ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಯುವಕ ಮಂಡಲ(ರಿ.) ಮಡಪ್ಪಾಡಿ ಇದರ ಆಶ್ರಯದಲ್ಲಿ ಪಂಚಸಪ್ತತಿ  ಸ್ವಚ್ಛತಾ ಅಭಿಯಾನ-2025 (75 ದಿನಗಳ ಸ್ವಚ್ಛತಾ ಅಭಿಯಾನ) ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಈ ದಿನ ಸ್ವಚ್ಛತಾ ಕಾರ್ಯಕ್ರಮವನ್ನು ಮಡಪ್ಪಾಡಿಯ ಬಸ್ ನಿಲ್ದಾಣ ಮತ್ತು ಮಡಪ್ಪಾಡಿ ಪೇಟೆಯಲ್ಲಿ  ಸ್ವಚ್ಛತೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷರು, ಸದಸ್ಯರು ಮತ್ತು ಯುವಜನ...

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ – ಕೆ.ಆರ್ ಗಂಗಾಧರ, ಡಾ.ಯು.ಪಿ ಶಿವಾನಂದ ಹಾಗೂ ದಂಬೆಕೋಡಿ ಸುಬ್ರಾಯ ಆನಂದರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಸಿದ್ಧರಾಮಯ್ಯ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 30ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ, ಸುದ್ದಿ ಬಿಡುಗಡೆ ಸಂಪಾದಕ ಡಾ.ಯು.ಪಿ ಶಿವಾನಂದ ಹಾಗೂ ಅರೆಭಾಷೆ ಸಂಘಟಕ ದಂಬೆಕೋಡಿ ಸುಬ್ರಾಯ ಆನಂದ ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ...
Loading posts...

All posts loaded

No more posts

error: Content is protected !!