Ad Widget

ಕವನ : ಬದುಕೆಂಬ ಶಿಕ್ಷಕ…

✍️ಉಲ್ಲಾಸ್ ಕಜ್ಜೋಡಿ

ನಗುವಾಗಲೇ ಅಳುವನ್ನು ನೀಡುವುದು ಬದುಕು, ಅಳುವಿನಿಂದಲೇ ನಗುವಿನ ಬೆಲೆಯನ್ನು ತಿಳಿಸುವುದು ಬದುಕು...ಖುಷಿಯ ಕ್ಷಣದಲ್ಲೇ ದುಃಖವನ್ನು ನೀಡುವುದು ಬದುಕು, ದುಃಖದಿಂದಲೇ ಸಂತೋಷದ ಬೆಲೆಯನ್ನು ಕಲಿಸುವುದು ಬದುಕು...ಜೊತೆಗಿದ್ದಾಗಲೇ ನಮ್ಮವರನ್ನು ನಮ್ಮಿಂದ ದೂರ ಮಾಡುವುದು ಬದುಕು, ಮತ್ತೆ ಮರಳಿ ಅವರಿಗೆ ಪ್ರೀತಿಯನ್ನು ನೀಡಬೇಕೆಂದರೂ-ಅವರಿಂದ ಪ್ರೀತಿಯನ್ನು ಪಡೆಯಬೇಕೆಂದರೂ ಅವರು ಮತ್ತೆ ಎಂದೂ ನಮ್ಮ ಬಳಿ ಹಿಂತಿರುಗಿ ಬಾರದಂತೆ ಮಾಡುವುದು ಬದುಕು, ಇಲ್ಲಿ...

ಪಿಡಿಓ ಕಿರುಕುಳದಿಂದ ಗ್ರಂಥಾಲಯ ಮೇಲ್ವಿಚಾರಕಿ ಆತ್ಮಹತ್ಯೆ – ಸುಳ್ಯದಲ್ಲಿ ಖಂಡನೆ

ಕಲ್ಬುರ್ಗಿಯಲ್ಲಿ ಪಿ.ಡಿ.ಓ ಕಿರುಕುಳದಿಂದ ಗ್ರಂಥಾಲಯ ಮೇಲ್ವಿಚಾರಕಿ ಆತ್ಮಹತ್ಯೆಯನ್ನು ಖಂಡಿಸಿ ಮತ್ತು ಗ್ರಂಥಾಲಯ ಮೇಲೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಆಡಳಿತ ಮಂಡಳಿಯಿಂದ ದೌರ್ಜನ್ಯದ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಮನವಿ ನೀಡಲಾಯಿತು.ಗ್ರಂಥಾಲಯ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಸಾವಿತ್ರಿ ಕಣೆಮರಡ್ಕ, ಸುಳ್ಯ ತಾಲೂಕು ಅಧ್ಯಕ್ಷೆ ಅಭಿಲಾಷ, ಕಾರ್ಯದರ್ಶಿ ಸಂತೋಷ್ ಮುಂಡಕಜೆ ಮತ್ತು ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರು  ಉಪಸ್ಥಿತರಿದ್ದರು.
Ad Widget

ಮಾರಿಷಸ್ ನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ನಾಲ್ಕೂರಿನ ಯುವಕ ದುರ್ಮರಣ

ಮಾರಿಷಸ್ ನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಹಲ್ಗುಜಿ ನಿವಾಸಿ ನಂದನ್ ಭಟ್ ಎಂಬ ಯುವಕ ಜಲಪಾತ ವೀಕ್ಷಣೆಯ ಸಂದರ್ಭದಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತದೇಹವನ್ನು ಊರಿಗೆ ತರುವ ನಿಟ್ಟಿನಲ್ಲಿ ಸಂಸದರು ಮಧ್ಯಪ್ರವೇಶಿಸಿ ಪ್ರಯತ್ನ ಮಾಡುತ್ತಿದ್ದಾರೆ.ಕಲ್ಲಾಜೆಯ ಜಯಲಕ್ಷ್ಮಿ ಭಟ್ ಎಂಬುವವರ ಪುತ್ರರಾಗಿರುವ ಇವರು ಮಾರಿಷಸ್ ನಲ್ಲಿ ವಿದ್ಯಾರ್ಥಿ ವೀಸಾದಲ್ಲಿದ್ದು, ಅಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದರು.ಭಾನುವಾರ...

ಗುತ್ತಿಗಾರು : ವರ್ಗಾವಣೆಗೊಂಡ ಪಿಡಿಓ ಧನಪತಿ ಅವರಿಗೆ ಗ್ರಾ.ಪಂ.ವತಿಯಿಂದ ಅ.15 ರಂದು ಅಭಿನಂದನಾ ಕಾರ್ಯಕ್ರಮ

ಗುತ್ತಿಗಾರು ಗ್ರಾಮ ಪಂಚಾಯತ್ ನಲ್ಲಿ ನಾಲ್ಕು ವರ್ಷಗಳ ಸೇವೆ ಸಲ್ಲಿಸಿ, ಪಂಚಾಯತ್ ಹಾಗೂ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಧನಪತಿ.ಬಿ ರವರಿಗೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಊರಿನ ವಿವಿಧ ಇಲಾಖಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಅ. 15 ರಂದು ಗುತ್ತಿಗಾರು ಪರಿಶಿಷ್ಠ ಪಂಗಡ ಸಭಾಭವನದಲ್ಲಿ ಸಾರ್ವಜನಿಕ ಅಭಿನಂದನಾ ಸಭೆ...

ಗುತ್ತಿಗಾರು : ಡಿಸಿಸಿ ಬ್ಯಾಂಕ್ ಸ್ಥಳಾಂತರಗೊಂಡು ಶುಭಾರಂಭ – ಎಟಿಎಂ ಉದ್ಘಾಟನೆ

ಡಿಸಿಸಿ ಬ್ಯಾಂಕ್ ನ ಗುತ್ತಿಗಾರು ಶಾಖೆಯು ಅ.13 ರಂದು ಸ್ಥಳಾಂತರಗೊಂಡು ಗುತ್ತಿಗಾರು ಪೇಟೆಯ 'ರಾಘವೇಂದ್ರ ಕಾಂಪ್ಲೆಕ್ಸ್‌' ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ದೀಪ ಪ್ರಜ್ವಲನೆ ಮಾಡಿ ಶಾಖೆ ಉದ್ಘಾಟಿಸಿದರು.ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ವಿನಯಕುಮಾ‌ರ್ ಸೂರಿಂಜೆ  ಎ.ಟಿ.ಎಂ ಉದ್ಘಾಟಿಸಿದರು.ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ...

ಕುಂ..ಕುಂ.. ಫ್ಯಾಶನ್ ವಸ್ತ್ರ‌ಮಳಿಗೆಯಲ್ಲಿ ಸಾರಿ ಮೇಳ ; ಭರ್ಜರಿ ರೆಸ್ಪಾನ್ಸ್ – ಸಾರಿ ಖರೀದಿಸಿ ಖುಷಿ ಪಟ್ಟ ನಾರಿಯರು

ಸುಳ್ಯದಲ್ಲಿ ಮನೆ ಮಾತಾಗಿರುವ  ವಸ್ತ್ರ ಮಳಿಗೆ ಕುಂ.. ಕುಂ.. ಫ್ಯಾಶನ್ ನಲ್ಲಿ ಸಾರಿ‌ಮೇಳ ಆರಂಭಗೊಂಡಿದೆ. ಜೂ.16ರಂದು ಸಾರಿ ಮೇಳ ಆರಂಭಗೊಂಡಿದ್ದು ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಪ್ರತೀ ದಿನವೂ ಮಹಿಳೆಯರು ಬಂದು ಸಾರಿ ಖರೀದಿಸುತ್ತಿದ್ದಾರೆ.ಮಾನ್ಸೂನ್ ನ ಈ ದಿನದಲ್ಲಿ ಗ್ರಾಹಕರಿಗೆ ಕೈಗೆಟಕುವ ರೀತಿಯ ಬೆಲೆಯಲ್ಲಿ ಉತ್ತಮ ಗುಣ ಮಟ್ಟದ ಸಾರಿಗಳ ಮಾರಾಟ ನಡೆಯುತ್ತಿದ್ದು  ರೂ.89 ರಿಂದ ಆರಂಭ...

ಹರಿಹರ ಪಳ್ಳತ್ತಡ್ಕ : ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ, ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ

ರೋಟರಿ ಕ್ಲಬ್ ಸುಬ್ರಹ್ಮಣ್ಯ, ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ, ಗ್ರಾಮ ಪಂಚಾಯತ್ ಹರಿಹರ ಪಳ್ಳತ್ತಡ್ಕ ಹಾಗೂ ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಳ್ಳತ್ತಡ್ಕ ಇವುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು ಹಾಗೂ ಅಶ್ವಿನ್ ಆಪ್ಟಿಕಲ್ಸ್ ಮತ್ತು ಕ್ಲಿನಿಕ್ಸ್ ಯೋಗಕ್ಷೇಮ ಸಂಕೀರ್ಣ ಕಡಬ ಇವುಗಳ ಸಹಯೋಗದೊಂದಿಗೆ ಅ.12 ರಂದು ಹರಿಹರ ಪಳ್ಳತ್ತಡ್ಕದ ಶ್ರೀ...

ಮಡಿಕೇರಿ : ಉದ್ಯಮಿ ಹೆಚ್.ಎಂ.ನಂದಕುಮಾರ್ ಮಾಲಕತ್ವದ ಲಾಲಿ ಅಪ್ಪರೆಲ್ಸ್(ಗಾರ್ಮೆಂಟ್ಸ್) ಉದ್ಘಾಟನೆ – “ಕೌಶಲ್ಯ ತರಬೇತಿ ಮತ್ತು ಸಣ್ಣ ಉದ್ದಿಮೆಗಳಿಗೆ ಸರಕಾರದಿಂದ ಪ್ರೋತ್ಸಾಹ” : ಸಚಿವ ಹೆಚ್.ಸಿ ಮಹದೇವಪ್ಪ

ಮಡಿಕೇರಿಯ ಉದ್ಯಮಿ ಹೆಚ್.ಎಂ ನಂದಕುಮಾರ್ ಮಾಲಕತ್ವದ ಲಾಲಿ ಅಪ್ಪರೆಲ್ಸ್(ಗಾರ್ಮೆಂಟ್ಸ್) ಉದ್ಯಮ ಮಡಿಕೇರಿಯ ಚೈನ್ ಗೇಟ್ ಬಳಿ ಉದ್ಘಾಟನೆ ಗೊಂಡಿತು. ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು “ಕರ್ನಾಟಕ ಸರಕಾರ ಎಸ್.ಇ.ಪಿ, ಟಿ.ಎಸ್.ಪಿ ಅನುದಾನದಲ್ಲಿ ಇಂತಹ ಉದ್ಯಮಗಳಿಗೆ ಪ್ರೋತ್ಸಾಹ ನೀಡುತ್ತಿದೆ....

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಂಪಾಜೆ ವಲಯದ ಪ್ರಥಮ ತ್ರೈಮಾಸಿಕ ಸಭೆ

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಂಪಾಜೆ ವಲಯ ಇದರ ಪ್ರಥಮ ತ್ರೈಮಾಸಿಕ ಸಭೆಯು 12.10.2025ರಂದು ಸಿ.ಎ.ಬ್ಯಾಂಕ್ ಐಸಿರಿ ಸಭಾಂಗಣ ಮರ್ಕಂಜದಲ್ಲಿ ನಡೆಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.ಕಾರ್ಯಕ್ರಮವನ್ನು ನಿವೃತ  ಪೊಲೀಸ್ ಅಧಿಕಾರಿ ರಾಜಗೋಪಾಲ್ ಉಳುವಾರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಂಪಾಜೆ ವಲಯ ಮೇಲ್ವಿಚಾರಕರಾದ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಘಾಟಕರು ಮಾತನಾಡಿ ಭಜನಾ ಪರಿಷತ್ ನ ಕಾರ್ಯಕ್ರಮದ...

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಪದಾಧಿಕಾರಿಗಳ ಆಯ್ಕೆ

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ‌‌ ಸಂಘದ 2025-2028ನೇ ಸಾಲಿನ ಆಡಳಿತ ಸಮಿತಿ ಸದಸ್ಯರ ಪ್ರಥಮ ಸಭೆ ಸಂಘದ ಅಧ್ಯಕ್ಷರಾದ ಪಿ.ಬಿ ಸುಧಾಕರ್ ರೈಯವರ ಅಧ್ಯಕ್ಷತೆಯಲ್ಲಿ ಅರಂಬೂರಿನ ಹೋಟೆಲ್ ರಸಪಾಕ ಗ್ರ್ಯಾಂಡ್ ನಲ್ಲಿ ಜರುಗಿತು.2025-2028ನೇ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆರಿಸಲಾಯಿತು.ಗೌರವಾಧ್ಯಕ್ಷರಾಗಿ ಪಿ.ಬಿ.ಸುಧಾಕರ್ ರೈ ನೆಟ್ ಕಾಂ, ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಜನತಾ ಗ್ರೂಪ್ಸ್, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್...
Loading posts...

All posts loaded

No more posts

error: Content is protected !!