- Saturday
- March 14th, 2026
ಮಡಪ್ಪಾಡಿಯ ಗೌಡ ಕ್ರೀಡಾ ಸಮಿತಿ ನಿಯೋಗದಿಂದ ಯುವ ಜೆ.ಡಿ.ಎಸ್ ರಾಜ್ಯಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಅ.26ರಂದು ಭೇಟಿ ಮಾಡಲಾಯಿತು. ನ.08 ಮತ್ತು 09 ರಂದು ಮಡಪ್ಪಾಡಿಯಲ್ಲಿ ನಡೆಯುವ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟಕ್ಕೆ ಆಹ್ವಾನ ನೀಡಲಾಯಿತು. ಅವರು ಪೋಸ್ಟರ್ ವೀಕ್ಷಿಸಿ ಪಂದ್ಯಾಟಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ, ಜಾತ್ಯತೀತ ಜನತಾದಳದ...
ಯುವಜನ ಸಂಯುಕ್ತ ಮಂಡಳಿ ಸುಳ್ಯ, ವೀರವನಿತೆ ಕ್ರೀಡಾ ಮತ್ತು ಕಲಾ ಸಂಘ ಮಂಡೆಕೋಲು, ಗ್ರಾಮ ಪಂಚಾಯತ್ ಮಂಡೆಕೋಲು ಇದರ ವತಿಯಿಂದ ಪಂಚಸಪ್ತತಿ 4ನೇ ಕಾರ್ಯಕ್ರಮ ಉದ್ಯೋಗ ಖಾತರಿ ಯೋಜನೆಯಡಿ ತೋಡಿನ ಹೂಳು ಎತ್ತುವ ಕಾಯಕ ತಂಡದ ಮಹಿಳೆಯರಿಗೆ ಮಹಿಳೆಯರ ಆರೋಗ್ಯ,ಶುಚಿತ್ವದ ಬಗ್ಗೆ ಮಾಹಿತಿ ಕಾರ್ಯಗಾರ ಪಾತಿಕಲ್ಲು ಹರಿಶ್ಚಂದ್ರ ಗೌಡರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಡಾ....
ಆಸರೆ ಎಂಟರ್ಪ್ರೈಸಸ್(ರಿ.) ಮಾವಿನಕಟ್ಟೆ ಸುಳ್ಯ ಇವರು ದೀಪಾವಳಿ ಪ್ರಯುಕ್ತ ನಡೆಸಿದ ಲಕ್ಕಿ ಕೂಪನ್ ಡ್ರಾ ಇವತ್ತು ಮಾವಿನಕಟ್ಟೆ ಶ್ರೀ ವಿಷ್ಟು ಸಭಾಂಗಣ ದಲ್ಲಿ ಜರುಗಿತು.ಡ್ರಾ ಫಲಿತಾಂಶ ಈ ಕೆಳಗಿನಂತಿದೆ.ಬಂಪರ್ ಬಹುಮಾನ:- 0423ಪ್ರಥಮ ಬಹುಮಾನ :- 5938ದ್ವಿತೀಯ ಬಹುಮಾನ:- 0662ಸಮಧಾನಕರ ಬಹುಮಾನ:-6452, 5873, 0792, 5365, 6550, 5481, 5853, 0385, 7045, 7648, 5871, 6007,...
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ಆಶ್ರಯದಲ್ಲಿ ಹಮ್ಮಿಕೊಂಡಿರುವ "ಪಂಚಸಪ್ತತಿ 2025" ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಶ್ರೀ ಗಜಾನನ ಯುವತಿ ಮಂಡಲ(ರಿ.) ಬೊಮ್ಮಾರು ಇದರ ಸದಸ್ಯರಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಮರ್ಕಂಜದ ವಠಾರದಲ್ಲಿ ಅಕ್ಟೋಬರ್ 24ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಗಜಾನನ ಯುವತಿ ಮಂಡಲರವರಿಂದ ರೂಪುಗೊಂಡಿರುವ ಮಹಿಳಾ ಸಿಂಗಾರಿ ಮೇಳದ ರಂಗಪ್ರವೇಶ...
"ಪಂಚಸಪ್ತತಿ - 2025" ನೇ ಸ್ವಚ್ಚತಾ ಕಾರ್ಯಕ್ರಮದಲ್ಲಿ 17ನೇ ದಿವಸವಾಗಿ ಇಂದು ವೀರಮಾರುತಿ ಸ್ಪೋರ್ಟ್ಸ್ ಕ್ಲಬ್(ರಿ.) ಗುತ್ತಿಗಾರು ಇವರಿಂದ ಗುತ್ತಿಗಾರು - ಬಳ್ಪ ಜಂಕ್ಷನ್ ಹಾಗೂ ಬಸ್ಸು ತಂಗುದಾಣವನ್ನು ಸ್ವಚ್ಚತೆ ಮಾಡಲಾಯಿತು.
ಕಾಲವದು ತಲೆಕೆಳಗಾಗಿದೆ, ಚಳಿಗಾಲ ಮಳೆಗಾಲವಾಗಿದೆ...ದೀಪಾವಳಿ ಹಬ್ಬವು ಕಳೆದಿತ್ತು, ಇನ್ನೇನು ಚಳಿಗಾಲ ಶುರುವಾಗಲೆಬೇಕಿತ್ತು, ಆದರೆ ಮಳೆಗಾಲ ಹೊರಟು ಹೋಗಲು ಒಲ್ಲೇ ಎನ್ನುತ್ತಿತ್ತು, ಚಳಿಗಾಲವದು ಯಾಕೋ ದೂರವೇ ಉಳಿದಿತ್ತು...ಸಮಯವದು ಸೂತ್ರವ ತಪ್ಪಿದೆ, ಕಾಲವದು ತಲೆಕೆಳಗಾಗಿದೆ...ಮನುಷ್ಯನ ಬದುಕಿನ ದುರಾಸೆಯು ಈಗ ಮಿತಿಯನ್ನು ಮೀರಿದೆ, ಪರಿಸರದ ನಿಯಮವ ಮೀರಿ ಮನುಜನ ಯೋಚನೆಯು ಸಾಗಿದೆ, ದೂರಾಲೋಚನೆಯು ಸಾಗಿದೆ...ಕಾಲ-ಕಾಲಕ್ಕೆ ಮಳೆ-ಬೆಳೆಯಾಗುವ ಕಾಲವು ಇಂದು ಕಾಣೆಯಾಗಿದೆ,...
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಆರಂಭವಾಗಲಿರುವ ಸಂಸ್ಕಾರ ಅಧ್ಯಯನ ಕಾರ್ಯಕ್ರಮವನ್ನು ಶ್ರೀಕೃಷ್ಣ ವೈಲಾಯ ಉದ್ಘಾಟನೆ ಮಾಡಿದರು.ಸಭಾಧ್ಯಕ್ಷತೆಯನ್ನು ಶ್ರೀಮುಖ ಪ್ರತಿಷ್ಠಾನ ಅಧ್ಯಕ್ಷ ಉದಯ ಶಂಕರ್ ಅಡ್ಕ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ಪಂಜ ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಸುಮಾ ಕುದ್ವ, ಪಂಜ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಹಾಗೂ ಮಂಡೆಕೋಲು, ಕಲ್ಲಡ್ಕ, ಪೇರಾಲು ಎ&ಬಿ ಒಕ್ಕೂಟ ಇವುಗಳ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 26ನೇ ಆದಿತ್ಯವಾರದಂದು ಬೆಳಿಗ್ಗೆ 8:00 ಗಂಟೆಯಿಂದ 21ನೇ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.ಪೂರ್ವಾಹ್ನ 11:15ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸುಳ್ಯ ತಾಲೂಕು ಪ್ರಗತಿಬಂಧು ಹಾಗೂ ಸ್ವ-ಸಹಾಯ...
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ಚೊಕ್ಕಾಡಿ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಬೆಳ್ಳಾರೆ ಹೋಬಳಿ ಮಟ್ಟದ ಕ್ರೀಡಾಕೂಟವು ಅ. 24ರಂದು ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಜರಗಿತು. ಈ ಕ್ರೀಡಾಕೂಟದ ಸಭಾಧ್ಯಕ್ಷತೆಯನ್ನು ವಹಿಸಿದ್ದ ಚೊಕ್ಕಾಡಿ ವಿದ್ಯಾಸಂಸ್ಥೆಗಳ ಸಂಚಾಲಕರಾಗಿರುವ ರಾಧಾಕೃಷ್ಣ ಬೊಳ್ಳೂರು ಅವರು ಧ್ವಜಾರೋಹಣ ಮಾಡಿ ಕ್ರೀಡಾಪಟುಗಳು ಉತ್ತಮವಾಗಿ ತಮ್ಮ ಕ್ರೀಡಾ...
ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರು ತಮ್ಮ ಆಭರಣ ಯೋಜನೆಗಳನ್ನು ನಿರ್ವಹಿಸಲು, ಆರ್ಡರ್ ಸ್ಥಿತಿಯನ್ನು ವೀಕ್ಷಿಸಲು, ಲೋಹದ ದರಗಳನ್ನು ಪರಿಶೀಲಿಸಲು ಮತ್ತು ಬ್ಯಾಲೆನ್ಸ್ ವಿವರಗಳ ಮಾಹಿತಿಗಾಗಿ "ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್" ಶೀರ್ಷಿಕೆಯ ಹೊಸ ಅಪ್ಲಿಕೇಶನ್ನನ್ನು ಬಿಡುಗಡೆಗೊಂಡಿದೆ.ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಹಾಗೂ ಆ್ಯಪ್ ಸ್ಟೋರ್ನಲ್ಲಿ ಲಭ್ಯವಿದ್ದು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಈ ಆ್ಯಪ್ನಲ್ಲಿ ಗ್ರಾಹಕರಿಗೆ...
Loading posts...
All posts loaded
No more posts
