Ad Widget

ಕೊಲ್ಲಮೊಗ್ರ : ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ ಹಾಗೂ ಜನಜಾಗೃತಿ ವೇದಿಕೆ ಸುಭ್ರಹ್ಮಣ್ಯ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೆ.ವಿ.ಜಿ ಅನುದಾನಿತ ಪ್ರೌಢ ಶಾಲೆಯ ಶಿಕ್ಷಕರಾದ ಶ್ರೀಮತಿ ಸಂಧ್ಯಾರವರ ಅಧ್ಯಕ್ಷತೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಕೆ.ವಿ.ಜಿ ಅನುದಾನಿತ ಪ್ರೌಢ...

ಸುಳ್ಯ ಮೆಸ್ಕಾಂ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಸುಳ್ಯದ ಮೆಸ್ಕಾಂ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಎ.ಇ.ಇ ಹರೀಶ್ ನಾಯ್ಕ್, ಜೆ.ಇ ಉಷಾ, ಜೆ.ಇ ದಿವ್ಯ, ಮೇಲ್ವಿಚಾರಕರಾದ ಧರ್ಮಪಾಲ ಕೆ, ಜಯಪ್ರಕಾಶ್ ಕೆ.ರಫೀಕ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Ad Widget

ಆರಂತೋಡು ರಬ್ಬರ್  ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಶಶಿಕುಮಾರ್ ಉಳುವಾರು ಪುನರಾಯ್ಕೆ

ಆರಂತೋಡು ರಬ್ಬರ್  ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಶಶಿಕುಮಾರ್ ಉಳುವಾರು ಅಡ್ತಲೆ ಪುನರಾಯ್ಕೆಗೊಂಡಿದ್ದಾರೆ.  ಹಾಗೂ ನಿರ್ದೇಶಕರಾಗಿ  ಆರಂತೋಡು ಗ್ರಾಮದಿಂದ ಯಶೋಧರ ಪಿಂಗಾರ ತೋಟ, ಯು.ಎಂ ಕಿಶೋರ್ ಕುಮಾರ್ ಉಳುವಾರು, ಮೋಹನ್ ಕುಮಾರ್ ಪಾರೆಮಜಲು ಹಾಗೂ ತೊಡಿಕಾನ ಗ್ರಾಮದಿಂದ ಕೇಶವ ಕೊಳಲುಮೂಲೆ, ವೆಂಕಟ್ರಮಣ ಪೆತ್ತಾಜೆ ಮತ್ತು ಕಮಲಾಕ್ಷ ಕಾಟೂರು(ಪಡ್ಪು) ಆಯ್ಕೆಯಾಗಿದ್ದಾರೆ.

ಕನ್ನಡ ಕನ್ನಡ ಅಹಾ…..! ಸವಿಗನ್ನಡ

ಕರ್ನಾಟಕ ಬರಿಯ ನಾಡಲ್ಲ. ನಮ್ಮ  ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ಅದು ನಮ್ಮಂತರಂಗದ ಮಾತು. ಇಂದು ನವೆಂಬರ್ ೧ ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡದ ದಿನ .ಕರ್ನಾಟಕ ರಚನೆಯ ದಿನ. 1947 ಆಗಸ್ಟ್ 15ರಂದು ಭಾರತ ಬ್ರಿಟಿಷರ ಕಪಿಮುಷ್ಟಿಯಿಂದ  ಮುಕ್ತಿ ಹೊಂದಿತು.1950ರಲ್ಲಿ ಭಾರತವು ಗಣರಾಜ್ಯವಾಯಿತು. ಇದಾದ ನಂತರ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಾಜ್ಯಗಳ...

ನ.05 : ನಿಡ್ವಾಳ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಸಾಮೂಹಿಕ ಶ್ರೀಮಹಾವಿಷ್ಣು ಮಹಾಯಾಗ – ಕೋಡಿ ಮಠದ ಶ್ರೀಗಳ ಉಪಸ್ಥಿತಿ – ಮುಂದಿನ ಎಪ್ರಿಲ್ ನಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ತೀರ್ಮಾನ

ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನವಂಬರ್ 05 ಬುಧವಾರದಂದು ಬೆಳಗ್ಗೆ 8-30ರಿಂದ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀಮಹಾವಿಷ್ಣು ಮಹಾಯಾಗ ನಡೆಯಲಿದೆ. ಋಷಿ ಪರಂಪರೆಯ ಸನಾತನ ಹಿಂದೂ ಧರ್ಮದ ಉಳಿವಿಗಾಗಿ, ಲೋಕಕಲ್ಯಾಣಾರ್ಥವಾಗಿ ಹಾಗೂ 2026ನೇ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಶ್ರೀ ದೇವರ ಪುನಃಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ನೂತನ ದೇವಾಲಯದ ಲೋಕಾರ್ಪಣೆಯ ಪೂರ್ವಭಾವಿಯಾಗಿ ಈ ಮಹಾಯಾಗ ನಡೆಯಲಿದೆ....

12 ನೇ ವರ್ಷಕ್ಕೆ ಪಾದಾರ್ಪಣೆ ಅಂಗವಾಗಿ ಹೋಟೆಲ್ ಲಕ್ಷ್ಮೀ ವಿಲಾಸ್ ನಲ್ಲಿ ಪೂಜೆ – ಅನ್ನದಾನ

ಸುಳ್ಯದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಎದುರುಗಡೆ ಕಳೆದ 11 ವರ್ಷಗಳಿಂದ ಕಾರ್ಯಚರಿಸುತ್ತಿರುವ ಹೋಟೆಲ್ ಲಕ್ಷ್ಮೀ ವಿಲಾಸ್ 12 ನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆಯಲ್ಲಿ ಅ.31 ರಂದು ಲಕ್ಷ್ಮೀ ಪೂಜೆ ನೆರವೇರಿತು. ಇದರ ಅಂಗವಾಗಿ ಮಧ್ಯಾಹ್ನ ಅತಿಥಿಗಳಿಗೆ ಹಾಗೂ ಗ್ರಾಹಕರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಹೊಟೇಲ್ ಮಾಲಕರಾದ ಲಕ್ಷ್ಮೀಶ ಎನ್. ಚೊಕ್ಕಾಡಿ,...

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ; “ಸದೃಢ ಯುವ ಜನತೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ” : ಡಾ. ಅನುರಾಧ ಕುರುಂಜಿ

"ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಭಾವನ್ಮಾಕವಾಗಿ, ಧಾರ್ಮಿಕವಾಗಿ ಸದೃಢ ಯುವಜನತೆ ಹುಟ್ಟಿದಾಗ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ" ಎಂದು ಸುಳ್ಯ ಎನ್.ಎಂ.ಸಿ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಹೇಳಿದರು.ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಸುಳ್ಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಜಾಲ್ಸೂರು ವಲಯ ಹಾಗೂ ಅಖಿಲ ಭಾರತ ಕರ್ನಾಟಕ...

ನ್ಯಾಯಾಲಯದಲ್ಲಿ ಅರೆ ಕಾನೂನು ಸ್ವಯಂ ಸೇವಕರ(Para Legal Volunteers) ಆಯ್ಕೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ರವರ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಹಾಗೂ ಅಧೀನ ಕಾರ್ಯನಿರ್ವಹಿಸುತ್ತಿರುವ ತಾಲೂಕು ಕಾನೂನು ಸೇವಾ ಸಮಿತಿ ಸುಳ್ಯ ಇವರ ಕಾರ್ಯವ್ಯಾಪ್ತಿಯಲ್ಲಿ ಅರೇ ಕಾನೂನು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ ಅರ್ಜಿ  ಆಹ್ವಾನಿಸಲಾಗಿದೆ.ಶಿಕ್ಷಕರು / ನಿವೃತ್ತ ಶಿಕ್ಷಕರು, ವಿವಿಧ ಇಲಾಖೆಯ...

ಆಮೆಗತಿಯಲ್ಲಿ ಸಾಗುತ್ತಿರುವ ಸುಳ್ಯ 108 ಆಂಬುಲೆನ್ಸ್ ದುರಸ್ತಿ ಕಾರ್ಯ ; ತುರ್ತು ಸಂದರ್ಭಗಳಲ್ಲಿ ಅಂಬುಲೆನ್ಸ್ ಗಾಗಿ ಪರದಾಡುತ್ತಿರುವ ರೋಗಿಗಳು

ಸುಳ್ಯದ 108 ಆಂಬುಲೆನ್ಸ್ ವಾಹನವು ದುರಸ್ತಿ ಕಾರ್ಯಕ್ಕಾಗಿ ಮಂಗಳೂರಿನ ಶೋರೂಂ ಗೆ ತೆರಳಿ ತಿಂಗಳಾದರೂ ಇದುವರೆಗೂ ದುರಸ್ತಿ ಕಾರ್ಯ ಆರಂಭವಾಗಿಲ್ಲ ಎಂಬ ಮಾಹಿತಿ ಬಲ್ಲಮೂಲಗಳಿಂದ ತಿಳಿದುಬಂದಿದೆ. ಸರಕಾರ ಹಾಗೂ 108 ಆಂಬುಲೆನ್ಸ್ ಗುತ್ತಿಗೆ ಪಡೆದಿರುವ ಜಿವಿಕೆ ಸಂಸ್ಥೆಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ನೆನೆಗುದಿಗೆ ಬಿದ್ದಿರುವ 108 ಆಂಬುಲೆನ್ಸ್ ದುರಸ್ತಿ ಕಾರ್ಯದಿಂದಾಗಿ ಜನಸಾಮಾನ್ಯರು, ರೋಗಿಗಳು ಪರದಾಡುವಂತಾಗಿದೆ. ಸುಳ್ಯ ಸರಕಾರಿ...

ಶುಭ ವಿವಾಹ : ವರ್ಷಿತ್ – ಹೇಮಶ್ರೀ

ದೇವಚಳ್ಳ ಗ್ರಾಮದ ತಳೂರು ಪೂಜಾರಿಮನೆ ಉಮಾವತಿ ಮತ್ತು ರುಕ್ಮಯ್ಯ ಗೌಡರ ಪುತ್ರ ವರ್ಷಿತ್ ರವರ ವಿವಾಹವು ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುತ್ಯಾಳ ಮನೆ  ಡೀಲಾಕ್ಷಿ ಮತ್ತು  ಜನಾರ್ಧನ ಗೌಡರ  ಪುತ್ರಿ ಹೇಮಶ್ರೀ ಯವರೊಂದಿಗೆ ಅ.30 ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
Loading posts...

All posts loaded

No more posts

error: Content is protected !!