- Wednesday
- March 11th, 2026
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ತನ್ನ ನಿರಂತರ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಗ್ರಾಮದ ಕೃಷಿಕರೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ಇದೀಗ ತಾಲೂಕಿನ ಸಹಕಾರಿ ಸಂಘಗಳಲ್ಲಿಯೇ ಪ್ರಥಮವಾಗಿ “ಸಹಕಾರಿ ಫೋನ್ ಆ್ಯಪ್” ಬಿಡುಗಡೆ ಮಾಡಿದೆ.ಡಿ.22 ರಂದು ಸಂಘದ ಸಭಾಭವನದಲ್ಲಿ “ಸಹಕಾರಿ ಮೊಬೈಲ್ ಆ್ಯಪ್” ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಕೃಷಿಕರಾದ ದಾಮೋದರ ಜಬಳೆಯವರು “ಸಹಕಾರಿ ಮೊಬೈಲ್...
“ತುರ್ತು ಸಂದರ್ಭದಲ್ಲಿ ಹೃದಯ ಸ್ಥಂಭನ ಮತ್ತು ಉಸಿರಾಟದ ತೊಂದರೆಯ ಸಂಧರ್ಭದಲ್ಲಿ ಸಿ.ಪಿ.ಆರ್ ಮೂಲಕ ಜೀವ ರಕ್ಷಣಾ ಕೌಶಲ್ಯದಿಂದ ಅನೇಕ ಜೀವಗಳನ್ನು ಉಳಿಸಬಹುದು” ಎಂದು ಸುಳ್ಯ ತಾಲೂಕು ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಪಿ.ಬಿ ಸುಧಾಕರ ರೈ ಹೇಳಿದರು. ಅವರು ಬೆಳ್ಳಾರೆಯ ಪೆರುವಾಜೆ ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ.13ರಂದು ಯುವಜನ...
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ಆಶ್ರಯದಲ್ಲಿ ನಡೆಯುತ್ತಿರುವ "ಪಂಚಸಪ್ತತಿ - 2025 ಸ್ವಚ್ಚತಾ ಅಭಿಯಾನದ ಅಂಗವಾಗಿ ರೆಂಜಾಳ ಶಾಸ್ತಾವು ಯುವಕ ಮಂಡಲದ ಸದಸ್ಯರು ಮರ್ಕಂಜ ಗ್ರಾಮದ ಮಾವಜಿ ದುಗ್ಗಪ್ಪ ಗೌಡರ ಮನೆಗೆ ನೂತನ ಶೌಚಾಲಯ ನಿರ್ಮಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ. ನೂತನ ಶೌಚಾಲಯದ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೀತಾ...
ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ) ಮಸೀದಿಯಲ್ಲಿ ಪ್ರವಾದಿ ಮುಹಮ್ಮದ್ ಮುಸ್ತ್ವಫಾ(ಸ್ವ.ಅ.ಸ)ರ ಹೆಸರಿನಲ್ಲಿ ಪ್ರತೀ ಆದಿತ್ಯವಾರ ಅಸ್ತಮಿಸಿದ ಸೋಮವಾರ ಮುಸ್ಸಂಜೆ ನಡೆಸಿಕೊಂಡು ಬರುತ್ತಿರುವ ಸ್ವಲಾತ್ ಮಜ್ಲಿಸಿನ ಮಾಸಿಕ ಸ್ವಲಾತ್ ಕಾರ್ಯಕ್ರಮ ಡಿ 21 ರಂದು ನಡೆಯಿತು.ಪಳ್ಳಿಮಜಲು ಮಸೀದಿಯ ಖತೀಬರಾದ ಮುಹಮ್ಮದ್ ರಫೀಖ್ ಬಾಹಸನಿ ಮಾದರಿ ವಿವಾಹ ಎಂಬ ವಿಷಯದಲ್ಲಿ ವಿಷಯ ಮಂಡನೆ ಮಾಡಿದರು. ಸ್ವಲಾತಿನ ವೇದಿಕೆಯಲ್ಲಿ...
ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ. ಕ. ಮತ್ತು ಉಡುಪಿ ಜಿಲ್ಲೆಗಳ ಜಮೀಯ್ಯತ್ತುಲ್ ಸಂಸ್ಥೆಯ ಫಲಾಹ್ ಸುಳ್ಯತಾಲೂಕು ಘಟಕದ ವತಿಯಿಂದ ಸ್ಕಾಲರ್ಷಿಪ್ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಮಾದಕ ವಸ್ತುಗಳ ವಿರೋಧಿ ಆಂದೋಲನ ಜಾಗೃತಿ ಉಪನ್ಯಾಸ ಮತ್ತು ವಿದ್ಯಾರ್ಥಿ ಗಳಿಗೆ ಶೈಕ್ಷಣಿಕ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ ಜರಗಿತು.ಅಧ್ಯಕ್ಷತೆಯನ್ನು...
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಚೈತನ್ಯ ಗೆಳೆಯರ ಬಳಗ(ರಿ.) ಶೆಟ್ಟಿಮಜಲು ಇದರ ಆಶ್ರಯದಲ್ಲಿ ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025(75 ದಿನಗಳ ಸ್ವಚ್ಛತಾ ಅಭಿಯಾನ) ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ದಿನಾಂಕ 21/12/25 ರ ಭಾನುವಾರ ಸಂಜೆ ಗಂಟೆ 5:00 ರಿಂದ ಶೆಟ್ಟಿಮಜಲುನಿಂದ ಸೇವಾಜೆ ವರೆಗೆ ಸ್ವಚ್ಛತಾ ಕಾರ್ಯ ಮಾಡಲಾಯಿತು. ಈ ಸಂದರ್ಭದಲ್ಲಿ ಚೈತನ್ಯ ಗೆಳೆಯರ ಬಳಗ(ರಿ.) ಶೆಟ್ಟಿಮಜಲು...
ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ಮತ್ತು ಸ್ನೇಹಿತರ ಕಲಾ ಸಂಘ ಆಶ್ರಯ ದಲ್ಲಿ 75 ದಿನಗಳ ಸ್ವಚ್ಛತಾ ಅಭಿಯಾನ ಪಂಚ ಸಪ್ತತಿ 2025 ಅಂಗವಾಗಿ "ನಮ್ಮ ಗ್ರಾಮ ಸ್ವಚ್ಛ ಗ್ರಾಮ, ಸ್ವಚ್ಛತೆಯೆಡೆಗೆ ನಮ್ಮ ನಡಿಗೆ" ಯೋಜನೆಯಂತೆ "ನಮ್ಮ ಚಿತ್ತ ಕಟ್ಟಡ ಕಾರ್ಮಿಕರತ್ತ" ಕಟ್ಟಡ ಕಾರ್ಮಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಕಾರ್ಯಕ್ರಮ ಡಿ. 21 ರಂದು...
ದೇವಚಳ್ಳ ಗ್ರಾಮದ ಮಾವಿನಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಡಿ.21 ರಂದು ನಡೆಯಿತು. ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಮೋನಿಷಾ ಜಿ. ಎಸ್, ಅಂಗನವಾಡಿ ಕಾರ್ಯಕರ್ತೆ ನಳಿನಾಕ್ಷಿ ಕೆ, ಆಶಾಕಾರ್ಯಕರ್ತೆಯರಾದ ಸರಸ್ವತಿ ಹಾಗೂ ನಿರ್ಮಲ ಬಿ. ಉಪಸ್ಥಿತರಿದ್ದರು. ಮಾವಿನಕಟ್ಟೆ ಹಾಗೂ ಕಂದ್ರಪ್ಪಾಡಿ ಬೂತ್...
ಯುವಜನ ಸಂಯುಕ್ತ ಮಂಡಳಿ ಹಮ್ಮಿಕೊಂಡಿರುವ "ಪಂಚಸಪ್ತತಿ - 2025" ಸ್ವಚ್ಚತಾ ಕಾರ್ಯಕ್ರಮದಲ್ಲಿ ದೇವ ಗೆಳೆಯರ ಬಳಗದ ವತಿಯಿಂದ ಅಂಗನವಾಡಿ ಶಾಲಾ ಬಳಿಯಿಂದ ದೇವ ಪಡ್ಪು ಅಂಗಡಿವರೆಗಿನ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸ ಹೆಕ್ಕುವ ಮೂಲಕ ಸ್ವಚ್ಚತೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ, ನಿಕಟ ಪೂರ್ವ ಉಪಾಧ್ಯಕ್ಷರಾದ ಗೋಪಾಲಕೃಷ್ಣ...
ಇತ್ತೀಚಿನ ದಿನಗಳಲ್ಲಿ ಥಲಸ್ಸೆಮಿಯಾ ಎನ್ನುವ ಮಾರಕ ಖಾಯಿಲೆಗೆ ಅನೇಕ ಮಕ್ಕಳು ತುತ್ತಾಗುತ್ತಿದ್ದು ಈ ಖಾಯಿಲೆಗೆ ಹೊಸ ಮಾದರಿಯ ಚಿಕಿತ್ಸೆಯಾದ ನಾವೆಲ್ ಥೆರಫಿ ಎನ್ನುವ ಚಿಕಿತ್ಸೆಗೆ ಕೇಂದ್ರ ಸರಕಾರದಿಂದ ಅನುಮೋದನೆ ಹಾಗು ಆರ್ಥಿಕ ಸಹಾಯ ನೀಡಬೇಕೆಂದು ಮಾನ್ಯ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿ ವಿನಯ್ ಮಣಿಯಾನ ಅವರು ಮನವಿ ಸಲ್ಲಿಸಿದರು. ಈ ಚಿಕಿತ್ಸಾ ವಿಧಾನವು ನಮ್ಮ ದೇಶದಲ್ಲಿ...
Loading posts...
All posts loaded
No more posts
