- Sunday
- March 8th, 2026
ಎಡಮಂಗಲದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದ್ದು, ವಾಹನಗಳು ಮತ್ತು ನಡೆದುಕೊಂಡು ಹೋಗುವ ಪ್ರಯಾಣಿಕರಿಗೆ ಸಮಸ್ಯೆ ಉಂಟುಮಾಡುತ್ತಿದೆ. ಈ ದುಸ್ಥಿತಿಯನ್ನು ಕಂಡ ರೈಲ್ವೆ ನಿತ್ಯ ಪ್ರಯಾಣಿಕರು ಹಾಗೂ ಸ್ಥಳೀಯರು ಶ್ರಮದಾನ ನಡೆಸಿ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡರು. ಈ ಬಗ್ಗೆ ರೈಲ್ವೆ ಇಲಾಖೆ ಹಾಗು ಸ್ಥಳೀಯ ಆಡಳಿತ ಹದಗೆಟ್ಟ ರಸ್ತೆಯ ಬಗ್ಗೆ...
ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ 3ನೇ ವರ್ಷಕ್ಕೆ ಪಾದಾರ್ಪಣೆ ಪ್ರಯಕ್ತ ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ, ಅಧ್ಯಕ್ಷರಾದ ಜನಾರ್ಧನ ದೋಳ, ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ರಪ್ಪಾಡಿ, ನಿರ್ದೇಶಕರಾದ ಪ್ರಕಾಶ್ ಕೆರ್ಪಳ, ಸಚಿನ್ ಕುಮಾರ್ ಬಳ್ಳಡ್ಕ, ಶ್ರೀಮತಿ ಭವಾನಿ ಬಿಳಿಮಲೆ, ಕೇಶವ ನಾಯಕ್, ಚಿದಾನಂದ ವಿದ್ಯಾನಗರ, ಸತೀಶ್...
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಮತ್ತು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಅರೆಭಾಷೆ ಸಂಘದ ಉದ್ಘಾಟನೆ ಮತ್ತು ಕಾಲೇಜು ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಕಾರ್ಯಕ್ರಮವು ಜೂ.28 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರೆಭಾಷೆ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿಯವರು ವಹಿಸಿ "ಅರೆಬಾಷೆ ತ್ರೈಮಾಸಿಕ ಪತ್ರಿಕೆ ಹಿಂಗಾರದಲ್ಲಿ ವಿದ್ಯಾರ್ಥಿ ಸಾಹಿತ್ಯಕ್ಕಾಗಿಯೇ ಪುಟಗಳನ್ನು...
ಶ್ರೀ ಬಸವರಲಿ ಯೋಗ ಪ್ರತಿಷ್ಠಾನ ಪೈಲ್ವಾನ್ ಯಜಮಾನ್ "ಶ್ರೀ ಬಸವರಾಜು" ರವರ ಸ್ಮರಣಾರ್ಥ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ದ್ವಿತೀಯ ವರ್ಷದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯು ಜೂ.29 ರಂದು ಮೈಸೂರಿನಲ್ಲಿ ನಡೆಯಿತು.10 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಿಧಾತ್ ಗೌಡ.ಎಂ.ಟಿ ದ್ವಿತೀಯ ಸ್ಥಾನ, 10 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅಕ್ಷಯ ಬಾಬ್ಲುಬೆಟ್ಟು ತೃತೀಯ ಸ್ಥಾನ, 15...
ಅಮರ ಸುದ್ದಿ ವಾರಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಉಲ್ಲಾಸ್ ಕಜ್ಜೋಡಿ ಯವರು ಬರೆದ ಮೊದಲ ಕೃತಿ "ಜೀವನಯಾನ" ಕವನ ಸಂಕಲನವು ಇತ್ತೀಚೆಗೆ ಸುಳ್ಯದ ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದ್ದು, ಆಸಕ್ತ ಓದುಗರು ಈ ಕೆಳಗಿನ ಅಂಗಡಿಗಳಿಂದ ಪುಸ್ತಕವನ್ನು ಖರೀದಿಸಬಹುದುಹರಿಹರ ಪಳ್ಳತ್ತಡ್ಕ : ಶಿವ ಡಿಜಿಟಲ್ಸ್, ಶ್ರೀ ದುರ್ಗಾ...
(ವರದಿ : ಉಲ್ಲಾಸ್ ಕಜ್ಜೋಡಿ)ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಂತರಾಮ ಮಣಿಯಾನಮನೆ ರವರು ನಾಳೆ(ಜೂ.30) ನಿವೃತ್ತಿ ಹೊಂದುತ್ತಿದ್ದು, 1985 ಜನವರಿ 01 ರಲ್ಲಿ ಹಂಗಾಮಿ ಗುಮಾಸ್ತರಾಗಿ ಕರ್ತವ್ಯಕ್ಕೆ ಸೇರಿದ ಇವರು ಆರು ತಿಂಗಳುಗಳ ನಂತರ ಕಾಯಂ ನೌಕರರಾದರು. ಬಾಳುಗೋಡು, ಹರಿಹರ ಪಳ್ಳತ್ತಡ್ಕ, ಕಲ್ಮಕಾರು ಗಳಲ್ಲಿ ಕಾರ್ಯ ನಿರ್ವಹಿಸಿದ ಇವರು ರೇಷನ್,...
"ಬದಲಾವಣೆ ಜಗದ ನಿಯಮ, ನಿವೃತ್ತಿ ಎಂಬುದು ಯಾವುದೇ ಉದ್ಯೋಗಿಯ ಬದುಕಿನಲ್ಲಿ ಅನಿವಾರ್ಯ. ನಿವೃತ್ತಿಯ ಬಳಿಕ ತಮ್ಮ ಪ್ರವೃತ್ತಿಯನ್ನು ಉಳಿಸಿಕೊಂಡರೆ ನಿವೃತ್ತ ಬದುಕು ಸುಂದರಮಯವಾಗುತ್ತದೆ. ಕೆ.ಪಿ.ಎಸ್ ಬೆಳ್ಳಾರೆ ಎಂಬ ನಮ್ಮ ಈ ಶಿಕ್ಷಣ ಸಂಸ್ಥೆ ಒಂದು ದೊಡ್ಡ ಕುಟುಂಬದ ರೀತಿಯ ವ್ಯವಸ್ಥೆ. ಇಲ್ಲಿ ಸಾವಿತ್ರಿಯವರು ಉತ್ತಮ ಕೆಲಸವನ್ನು ಮಾಡಿರುತ್ತಾರೆ. ಅವರನ್ನು ಅಭಿನಂದಿಸುತ್ತೇವೆ ಮತ್ತು ಅವರ ನಿವೃತ್ತಿ ಜೀವನ...
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು ಇದರ ವತಿಯಿಂದ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಚುರುಕುತನದ ಯಶಸ್ಸು, ಮೊಬೈಲ್ ಬಳಕೆಯಿಂದ ದೂರವಿರಿಸುವಿಕೆಯ ಪರಿಕಲ್ಪನೆಯೊಂದಿಗೆ "ಅಮರ ನಾಟ್ಯ" ತರಬೇತಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವು ಜೂ.29 ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಗುತ್ತಿಗಾರು ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಸ್ಥಾಪಕಾ ಧ್ಯಕ್ಷರಾದ ಸುರೇಶ್ ಕಂದ್ರಪ್ಪಾಡಿ, ಶ್ರೀ ಮಂಗಳಾ...
ಎಸ್ಸೆಸ್ಸೆಫ್ ಬೆಳ್ಳಾರೆ ಸೆಖ್ಟೊರ್ ವತಿಯಿಂದ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಜೂ 28 ರಂದು ಬೆಳಗ್ಗೆ 6 ಗಂಟೆಗೆ ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಇಲ್ಲಿ ನಡೆಯಿತು.ಹಸನ್ ಸಖಾಫಿ ಬೆಳ್ಳಾರೆ ಪ್ರಾರ್ಥನೆ ನೆರವೇರಿಸಿದರು.ಇರ್ಷಾದ್ ಸಅದಿ ಅಧ್ಯಕ್ಷತೆಯನ್ನು ವಹಿಸಿದ್ದರು.ಬುರ್ದಾ ನೇತೃತ್ವವನ್ನು ತ್ವಾಹ ತಂಙಲ್ ವಹಿಸಿದ್ದರು ಮತ್ತು ಶಾಹಿನ್ ಬಾಬು ಸಂಗಡಿಗರಾಗಿದ್ದರು.ಆಲಿಂಗಳು ಮತ್ತು ಇಸ್ಲಾಂ ಮತ ಪ್ರವರ್ತಕರು ಉಪಸ್ಥಿತರಿದ್ದರು.ಎಸ್ಸೆಸ್ಸೆಪ್...
Loading posts...
All posts loaded
No more posts
