ಋಣಮುಕ್ತ ಅನುಷ್ಠಾನ ಹೋರಾಟ ಸಮಿತಿ ನಾಳೆ ಪುತ್ತೂರಿನಲ್ಲಿ ಪ್ರತಿಭಟನೆ

ಋಣಮುಕ್ತ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಜೂ.೨೫ ರಂದು ಬೆಳಿಗ್ಗೆ 10-30 ಗಂಟೆಗೆ ಪುತ್ತೂರು ಎಸಿ ಕಚೇರಿ ಮಿನಿ‌ವಿಧಾನ ಸೌದದ ಎದುರು ಪ್ರತಿಭಟನೆ ನಡೆಯಲಿದೆ. ಈ ವೇಳೆ ಸಾಲ‌ಮನ್ನಾ, ಲಾಕ್ ಡೌನ್ ಸಂತ್ರಸ್ಥ ಬಡವರಿಗೆ ಪರಿಹಾರ ಆಗ್ರಹಿಸಿ ಮತ್ತು ಸಾಲ ವಸೂಲಿಗಾರರ ದಬ್ಬಾಳಿಕೆ ವಿರುದ್ದ ಸಾಂಕೇತಿಕ ಪ್ರತಿಭಟನೆ‌ ನಡೆಯಲಿದೆ . ಆದುದರಿಂದ ಸಾಲಮಾಡಿ ಸಂಕಷ್ಟದಲ್ಲಿರುವ ಸಂತ್ರಸ್ಥ...

ಉಳ್ಳಾಲ ಠಾಣಾ ಪೊಲೀಸ್ ಅಧಿಕಾರಿಗೆ ಕೊರೋನಾ ಪಾಸಿಟಿವ್- ಠಾಣೆ ಸೀಲ್ ಡೌನ್

ಕೊರೋನ ಮಹಾಮಾರಿ ಬರುಬರುತ್ತಾ ಪೊಲೀಸ್ ಠಾಣೆಗಳಿಗೆ ದಾಳಿ ಮಾಡಲಾರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಠಾಣಾ ಪೊಲೀಸ್ ಅಧಿಕಾರಿ ಅವರಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ.ಜಿಲ್ಲೆಯಲ್ಲಿ ಕೋರೋಣ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇಂದು ಉಳ್ಳಾಲದ ವೃದ್ಧೆಯೊಬ್ಬರು ಕೊರೋನಾ ಮಹಾಮಾರಿ ಯಿಂದ ಮೃತರಾಗಿದ್ದಾರೆ. ಸೋಂಕಿತರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು...
Ad Widget

ಸಾಲದ ಕಂತು ಕಟ್ಟಲು ಸಹಕಾರಿ ಸಂಘಗಳ ಒತ್ತಡ-ಜಿಲ್ಲಾಡಳಿತ ಸ್ಪಷ್ಟನೆ ನೀಡಲು ಆಗ್ರಹ

ರೈತರ ಅಲ್ಪಾವಧಿ , ದೀರ್ಘಾವಧಿ ಬೆಳೆ ಸಾಲ ಸಹಿತ ಕೃಷಿ ಸಂಬಂಧಿಸಿದ ಇನ್ನಿತರ ಸಾಲಗಳ ಕಂತು ಕಟ್ಟಲು ಆ.31 ರ ತನಕ ಅವಧಿ ಇದ್ದರೂ ಸಹಕಾರಿ ಸಂಘದ ಅಧಿಕಾರಿಗಳು ಸಹಿತ, ಅಧ್ಯಕ್ಷರು , ನಿರ್ದೇಶಕರು ರೈತರಿಗೆ ಬಾಕಿ ಕಂತು ಕಟ್ಟಲು ಮೌಖಿಕ ಬೆದರಿಕೆ ಒಡ್ಡುವ ಮೂಲಕ ಬಡ ರೈತರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ . ಈ...

ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನಚಂದ್ರ ಜೋಗಿ ಭೇಟಿ ನೀಡಿ ಪರಿಶೀಲನೆ

ನಾಳೆ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷ ಕೇಂದ್ರಗಳಿಗೆ ಸುಳ್ಯ ವೃತ್ತ ನಿರೀಕ್ಷಕ ನವೀನಚಂದ್ರ ಜೋಗಿ , ಸಿಬ್ಬಂದಿ ವರ್ಗದವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳ ಭವಿಷ್ಯ ನಿರೂಪಣೆಗೆ ಸರಕಾರವು ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸುತ್ತಿದ್ದು ,ಪರೀಕ್ಷೆ ಸಂದರ್ಭದಲ್ಲಿ ಕೋವಿಡ್ 19 ರ ಹಿನ್ನೆಲೆಯಲ್ಲಿ ಸರಕಾರ ಆದೇಶಿಸಿರುವ ಎಲ್ಲಾ ನಿಯಮಾನುಸಾರವನ್ನು ವಿದ್ಯಾರ್ಥಿಗಳು ಸರಿಯಾಗಿ ಅನುಸರಿಸ...

ಹೆತ್ತವರಿಗೆ ಮಕ್ಕಳ ಆರೋಗ್ಯ ಮುಖ್ಯ – ಅಭಿಮತ

ಇಡೀ ವಿಶ್ವದೆಲ್ಲೆಡೆ ಕೊರೋನ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಮಯ ಸಂದರ್ಭದಲ್ಲಿ ಶಾಲಾ - ಕಾಲೇಜುಗಳನ್ನು ಆರಂಭಿಸುವುದು ಸರಿಯಲ್ಲ. ಹೆತ್ತವರಿಗೆ ಮಕ್ಕಳ ಜೀವ ಮುಖ್ಯ, ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ಶಿಕ್ಷಣ ಅಗತ್ಯವಿರುವುದು ಆದುದರಿಂದ ಕರೋನ ರಣಕೇಕೆ ಕಡಿಮೆಯಾಗುವವರೆಗೂ ಶಾಲೆಗಳನ್ನು ಆರಂಭಿಸಬಾರದು.✍️ ನಿತೀನ್ ಪುತ್ತೂರು

ಕೆಎಫ್ ಡಿಸಿ ನಲ್ಲಿ ಭಾರೀ ಅಕ್ರಮ-ಮಾಧ್ಯಮ ವರದಿ ಬೆನ್ನಲ್ಲೇ ನಿಗಮದ ಬಡ ಕಾರ್ಮಿಕರ ತಲೆದಂಡ

ಸುಬ್ರಹ್ಮಣ್ಯ ರಬ್ಬರ್ ನಿಗಮದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಅವ್ಯವಹಾರವನ್ನು ಮಾಧ್ಯಮಗಳು ಬಯಲಿಗೆಳೆದ ತರುವಾಯ ನಿಗಮದ ಕಾರ್ಮಿಕರನ್ನು ಅಮಾನತು ಮಾಡಿದ ಪ್ರಕರಣ ನಡೆದಿದೆ.ರಬ್ಬರ್ ನಿಗಮದಲ್ಲಿ ಅಧಿಕಾರಿಗಳು ಔಷದಿ ಸಿಂಪಡಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ವಿಚಾರ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದಾದ ಬಳಿಕ ಎಚ್ಚೆತ್ತ ಅಧಿಕಾರಿಗಳು ಬಾಕಿ ಮಾಡಿದ ರಬ್ಬರ್ ಮರಗಳಿಗೆ ಪುನಃ ಔಷಧಿಯನ್ನು ಸಿಂಪಡಿಸಿ ತನ್ನ ತಪ್ಪನ್ನು...

ಪತಂಜಲಿ ಕೊರೊನ ಔಷಧಿಗೆ ಆಯುಷ್ ಇಲಾಖೆ ಬ್ರೇಕ್

ಪತಂಜಲಿ ಕೊರೊನಾ ಮದ್ದಿಗೆ ಆಯುಷ್ ಇಲಾಖೆ ಬ್ರೇಕ್ ಹಾಕಿದೆ . ಪತಂಜಲಿ ಉತ್ಪನ್ನದ ಬಗ್ಗೆ ಆಯುಷ್ ಇಲಾಖೆಗೆ ಮಾಹಿತಿ ಇಲ್ಲ ಎಂದು ತಿಳಿಸಿದೆ . ಪರೀಕ್ಷೆ ನಡೆಸಿ ಫಲಿತಾಂಶ ಬರುವವರೆಗೂ ಈ ಔಷಧಿಯಿಂದ ಕೊರೋನಾ ದೂರವಾಗುತ್ತದೆ ಎಂಬ ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ಹಾಗೂ ವೈಜ್ಞಾನಿಕ ವಾಗಿ ಧೃಡೀಕೃತಗೊಳ್ಳುವವರೆಗೆ ರೋಗಿಗಳಿಗೆ ಪ್ರಯೋಗ ಮಾಡಬಾರದು ಎಂದು ಆಯುಷ್ ಇಲಾಖೆ...

ನಾಗಪಟ್ಟಣ ಆಲೆಟ್ಟಿ ರಸ್ತೆ ತೀರ ಕಳಪೆ ಬಗ್ಗೆ ಸುಳ್ಯ ಆಫ್‌ ನಾಯಕರಿಂದ ಸೂಕ್ತ ತನಿಖೆಗೆ ಆಗ್ರಹ

ಸುಳ್ಯನಾಗಪಟ್ಟಣ ಆಲೆಟ್ಟಿ ಅಂತರರಾಜ್ಯ ಕರ್ನಾಟಕ ಕೇರಳ ಸಂಪರ್ಕ ರಸ್ತೆಯು ರೂ.30 ಲಕ್ಷ ವೆಚ್ಚದಲ್ಲಿ ಸುಳ್ಯ ನಗರ ವ್ಯಾಪ್ತಿ ಯಲ್ಲಿ ಇದೇ ಮೇ 29 ರಂದು ಸುಳ್ಯ ಶಾಸಕರ ನೇತೃತ್ವದಲ್ಲಿ ಕಾಮಾಗಾರಿ ಆರಂಭವಾಗಿ ಇದೀಗ 15 ದಿವಸ ಕಳೆದಾಗ ರಸ್ತೆ ಬಿರುಕು ಬಿಟ್ಟಿದ್ದು ಸಂಪೂರ್ಣ ಕಾಮಾಗಾರಿಯ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಒತ್ತಾಯಿಸುತ್ತದೆ...

ದ.ಕ. ಜಿಲ್ಲೆಯಲ್ಲಿ ಕೊರೊನ ಸೋಂಕಿಗೆ ಮತ್ತೊಂದು ಬಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಕಾರಣದಿಂದ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ .ಜೂನ್ 7ರಂದು ಬೆಂಗಳೂರಿನಿಂದ ಆಗಮಿಸಿದ್ದ 70 ವರ್ಷದ ಪ್ರಾಯದ ವೃದ್ಧ ಮಧುಮೇಹ ಮತ್ತು ನಿಮೋನಿಯ ದಿಂದ ಬಳಲುತ್ತಿದ್ದರು. ಜೂನ್12ರಂದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.

ಕೊಡಗಿನ‌ ಕೊರೋನಾ‌ ನಂಜಿನಿಂದ ಗದಗ ಜಿಲ್ಲೆ ಪೊಲೀಸ್ ಠಾಣೆ ಸೀಲ್

ಗದಗ: ಕೊಡಗು ಜಿಲ್ಲೆಯ ಕೊರೋನಾ ಸೋಂಕಿತ ವ್ಯಕ್ತಿಯೋರ್ವನಿಂದ ಪೊಲೀಸ್ ಠಾಣೆ ಸೀಲ್ ಆಗಿರುವ ಘಟನೆ ಜಿಲ್ಲೆ ಮುಂಡರಗಿನಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಪಿ-9215 ರ ವ್ಯಕ್ತಿ ದಿನಾಂಕ 18 ರಂದು ಖಾಸಗಿ ವಿಷಯಕ್ಕೆ ಸಂಬಂಧಿಸಿಯ ಕೊಡಗು ನಿಂದ ಮುಂಡರಗಿ ಠಾಣೆಗೆ ಬಂದಿದ್ದ. ಆದ್ರೆ ನಿನ್ನೆ ಹೆಲ್ತ್ ಬುಲೆಟಿನ್ ನಲ್ಲಿ ಆ ವ್ಯಕ್ತಿಗೆ ಪಾಸಿಟಿವ್ ದೃಢವಾಗಿದೆ. ಇದರಿಂದ...
Loading posts...

All posts loaded

No more posts

error: Content is protected !!