18 ಕೋಟಿ ಭಾರತೀಯರಲ್ಲಿ ಕೊರೊನ ಬಂದು ಹೋಯ್ತಂತೆ – ಖಾಸಗಿ ಸಂಸ್ಥೆ ವರದಿ

ಭಾರತದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 11 ಲಕ್ಷ ಗಡಿ ದಾಟಿರುವಂತೆಯೇ ಇತ್ತ ಅಧ್ಯಯನವೊಂದು ಈಗಾಗಲೇ 18 ಕೋಟಿ ಭಾರತೀಯರಲ್ಲಿ ಕೊರೋನಾ ವೈರಸ್ ಬಂದು ಹೋಗಿದೆ ಎಂಬ ಅಚ್ಚರಿ ಅಂಶವನ್ನು ಬಯಲಿಗೆ ತಂದಿದೆ.ಹೌದು.. ಖ್ಯಾತ ಖಾಸಗಿ ಪರೀಕ್ಷಾ ಲ್ಯಾಬ್ ಸಂಸ್ಥೆ ಥೈರೋಕೇರ್ ಈ ಬಗ್ಗೆ ಮಾಹಿತಿ ನೀಡಿದ್ದು, ತಾನು ನಡೆಸಿದ ಅಧ್ಯಯನದಲ್ಲಿ ದೇಶದ ಸುಮಾರು...

ಏನೆಕಲ್ಲು ದೇವರ ಮೀನು ಹಿಡಿಯಲು ಬಂದ ಅನ್ಯಧರ್ಮಿಯರನ್ನು ಪೋಲೀಸರಿಗೊಪ್ಪಿಸಿದ ಸ್ಥಳೀಯರು

ಏನೇಕಲ್ ದೇವರ ಗುಂಡಿಯಲ್ಲಿರುವ ಮೀನು ಹಿಡಿಯುತ್ತಿದ್ದ ಸವಣೂರಿನ ಅನ್ಯಧರ್ಮದ ವ್ಯಕ್ತಿಗಳನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಕಳೆದ ರಾತ್ರಿ ನಡೆದಿದೆ. ಈ ಹಿಂದೆ ಕೂಡ ದೇವರ ಮೀನುಗಳನ್ನು ಅನ್ಯಧರ್ಮಿಯರು ಹಿಡಿಯುವ ಪ್ರಯತ್ನ ಮಾಡಿದ್ದನ್ನು ತಡೆದು ಪೋಲೀಸರಿಗೆ ಒಪ್ಪಿಸಿದ್ದರು. ಸವಣೂರಿನ ಬಶೀರ್, ಅಬ್ದುಲ್ ರಜಾಕ್, ಬಶೀರ್ ,ಅಬ್ದುಲ್ ಸಮಾದ್ ಮೇಲೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...
Ad Widget

ಜುಲೈ 31 ರಂದು ಬಕ್ರೀದ್ ಹಬ್ಬ ಆಚರಣೆ – ದ.ಕ.ಜಿಲ್ಲಾ ಖಾಝಿಗಳ ಘೋಷಣೆ

ಇಂದು ಮಂಗಳವಾರ (ಜುಲೈ 21) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಜುಲೈ 22 ಬುಧವಾರ ನಾಳೆ ದುಲ್ ಹಜ್ ತಿಂಗಳ ಪ್ರಾರಂಭವಾಗಿದ್ದು ಜುಲೈ 30 ಗುರುವಾರದಂದು ಅರಫಾ ಉಪವಾಸ ಮತ್ತು ಜುಲೈ 31 ಶುಕ್ರವಾರ ಈದುಲ್ ಅದ್'ಹಾ(ಬಕ್ರೀದ್ ಹಬ್ಬ) ಆಗಿರುತ್ತದೆ ಎಂದು ದ.ಕ ಜಿಲ್ಲಾ ಖಾಝಿಗಳು ಘೋಷಿಸಿರುತ್ತಾರೆ.

ತನ್ನ ಬಿಸಿನೆಸ್ ಹೆಚ್ಚಿಸಲು ಸೌಂದರ್ಯ ಸ್ಪರ್ಧೆ ನಡೆಸಿದ ಸುಳ್ಯದ ಮೊಬೈಲ್ಸ್ ಗ್ಯಾರೇಜ್ ಸಂಸ್ಥೆಯ ವಿರುದ್ಧ ಪೋಲೀಸ್ ಅಧೀಕ್ಷರಿಗೆ ದೂರು ನೀಡಿದ ಹಿಂದೂ ಜಾಗರಣಾ ವೇದಿಕೆ

ಸುಳ್ಯದ ಮೊಬೈಲ್ ಗ್ಯಾರೇಜ್ ಸಂಸ್ಥೆಯವರು ಫೇಸ್ಬುಕ್ ಮತ್ತು ಇನ್ಸ್ಟ್ರಾಗ್ರಾಮ್ ನಲ್ಲಿ ನಡೆಸಲು ಉದ್ದೇಶಿಸಿರುವ ಫೋಟೋ ಸೌಂದರ್ಯ ಸ್ಪರ್ದೆಯು ಹಿಂದು ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡೇ ನಡೆಯುತ್ತಿದೆ, ಈ ಫೋಟೋ ಗಳು ಮುಂದೆ ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಆಗುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಹಿಂದು ಜಾಗರಣ ವೇದಿಕೆ ಕಾರ್ಯದರ್ಶಿ ಅಜಿತ್ ಹೊಸಮನೆ ಪೋಲೀಸ್ ಅಧೀಕ್ಷರಿಗೆ...

ಮಗಳನ್ನೇ ಲೈಂಗಿಕವಾಗಿ ಬಳಸಿದ ಗೂನಡ್ಕ ಮೂಲದ ಮದ್ರಸ ಶಿಕ್ಷಕ – ಜತೆಗಿದ್ದ ಮೂವರು ಯುವಕರ ಬಂಧನ

ತನ್ನ ಹದಿನಾರು ವರ್ಷದ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ ಗೂನಡ್ಕ ದರ್ಖಾಸ್ ಮೂಲದ ಮದ್ರಸ ಶಿಕ್ಷಕ 52 ವರ್ಷದ ಅಬೂಬಕ್ಕರ್ ಮುಸ್ಲಿಯಾರ್ ಕೇರಳದ ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಕಾಞಂಗಾಡ್ ಸಮೀಪದ ತೈಕಡಪ್ಪುರ ನಿವಾಸಿಯಾದ ಈ ಉಸ್ತಾದ್ ಅಲ್ಲಿ ಮದ್ರಸ ಶಿಕ್ಷಕನಾಗಿದ್ದ. ಗೂನಡ್ಕ ಮೂಲದವನಾದ ಈತ ಇಲ್ಲಿಯೂ ಒಂದು ವಿವಾಹವಾಗಿದ್ದು 4 ಮಕ್ಕಳಿದ್ದಾರೆ, ಕಾಞಂಗಾಡ್...

ಪೆರುವಾಜೆಯ ಕಾಡಿನಲ್ಲಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪ್ರಭಾವಿ – ವಿವಾಹಿತ ಮಹಿಳೆ ಜೊತೆಗಿದ್ದ ಭೂಪನಿಗೆ ಬಿತ್ತು ಗೂಸ

ಪೆರುವಾಜೆ ಬಿಜೆಪಿಯ ಪ್ರಭಾವಿ ಮುಖಂಡಯೊಬ್ಬ ಕಾಡಿನೊಳಗೆ ವಿವಾಹಿತ ಮಹಿಳೆಯನ್ನು ಕರೆದುಕೊಂಡು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಒದೆ ತಿಂದಿರುವ ಘಟನೆ ಜು . 19 ರ ರಾತ್ರಿ ನಡೆದಿದೆ ಎನ್ನಲಾಗಿದೆ. ಪೆರುವಾಜೆ ಗ್ರಾಮದ ಕುಂಡಡ್ಕ ದಲ್ಲಿ ಜು.19 ರಂದು ವಿವಾಹಿತ ಮಹಿಳೆಯೊಬ್ಬರನ್ನು ಕಾಡಿನ ಪೊದೆಯೊಳಗೆ ಕರೆದುಕೊಂಡು ಹೋಗಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗ ವಿವಾಹಿತ ಮಹಿಳೆಯ...

ಅಕ್ರಮ ಸಕ್ರಮ ಸಮಿತಿ ರಚನೆಯಾದ ಬೆನ್ನಲ್ಲೇ ದಿಢೀರ್ ಬದಲಾವಣೆ -ವೆಂಕಟ್ ವಳಲಂಬೆ ಬದಲು ರಾಕೇಶ್ ರೈ ಕೆಡೆಂಜಿ ನೇಮಕ

ಸರಕಾರ ಆದೇಶದ ಪ್ರಕಾರ ಸುಳ್ಯ ವಿಧಾನಸಭಾ ಕ್ಷೇತ್ರ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚನೆಯಾಗಿತ್ತು. ಇದರ ಆದೇಶ ಪ್ರತಿ ಸಿಕ್ಕಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಹೊಸ ಆದೇಶದ ಪ್ರತಿಯನ್ನು ಮಾಧ್ಯಮಗಳಿಗೆ ನೀಡಿದೆ. ಇದರಲ್ಲಿ ನಾಮನಿರ್ದೇಶನಗೊಂಡ ಸದಸ್ಯ ವೆಂಕಟ್ ವಳಲಂಬೆ ಯವರ ಬದಲಾಗಿ ಕಡಬ ತಾಲೂಕಿನ ರಾಕೇಶ್ ರೈ ಕೆಡೆಂಜಿ ಯವರನ್ನು ಅಯ್ಕೆ...

ಸುಳ್ಯ : ಅಕ್ರಮ ಸಕ್ರಮ ಸಮಿತಿ ರಚನೆ

ಸುಳ್ಯ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಬಗ್ಗೆ ಸಮಿತಿ ರಚನೆ ಮಾಡಿ ಸರಕಾರ ಆದೇಶಿಸಿದೆ. Venkat valalambe Gunavathi kollanthadka ಸಮಿತಿಯ ಅಧ್ಯಕ್ಷರಾಗಿ ಶಾಸಕ ಎಸ್ ಅಂಗಾರ, ಸದಸ್ಯರಾಗಿ ಬಿಜೆಪಿ ಮಂಡಲ ಸಮಿತಿ ಮಾಜಿ ಅದ್ಯಕ್ಷ ವೆಂಕಟ್ ವಳಲಂಬೆ, ಮಾಜಿ ತಾ.ಪಂ.ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಬಿಜೆಪಿ ಎಸ್ ಸಿ ಮೋರ್ಚಾದ ಮಾಜಿ ಅಧ್ಯಕ್ಷ...

ಕ್ವಾರಂಟೈನ್ ಉಲ್ಲಂಘನೆ – ಕೆವಿಜಿ ವೈದ್ಯಕೀಯ ಕಾಲೇಜಿನ ಐವರು ವೈದ್ಯರೆಂದು ಕೇಸು ದಾಖಲು – ನಮ್ಮ ಸಂಸ್ಥೆಯ ವೈದ್ಯರಲ್ಲ ಕೆವಿಜಿ ಸಂಸ್ಥೆಯಿಂದ ಸ್ಪಷ್ಟನೆ

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಸುಳ್ಯ ಕೆವಿಜಿ ವೈದ್ಯಕೀಯ ಕಾಲೇಜಿನ ಐವರು ವೈದ್ಯರು ಎಂದು ಪರಿಗಣಿಸಿದ ಜಿಲ್ಲಾಡಳಿತ ಸುಳ್ಯ ಪೊಲೀಸ್ ಠಾಣೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.ಮಾಧ್ಯಮ ಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಕೆವಿಜಿ ಸಂಸ್ಥೆಯ ವಕ್ತಾರರು ಮಾಧ್ಯಮ ಗಳಿಗೆ ಸ್ಪಷ್ಟನೆ ನೀಡಿ ನಮ್ಮ ಸಂಸ್ಥೆಯ ವೈದ್ಯರು ಅಲ್ಲ ,ಸಿಬ್ಬಂದಿಯೂ ಅಲ್ಲ ಎಂದಿದೆ. ನಮ್ಮಲ್ಲಿರುವ ಯಾರೂ ಕ್ವಾರೆಂಟೈನ್...

ದನಸಾಗಾಟ ಅಕ್ರಮವಲ್ಲ. ಹಾಲು ಉತ್ಪಾದನೆಗಾಗಿ ಹಸುಗಳನ್ನು ಖರೀದಿಸಲಾಗಿದೆ. ದಾಖಲೆಗಳು ಇದ್ದರು ನಮ್ಮನ್ನು ಅಪರಾಧಿಗಳನ್ನಾಗಿಸಿರುವುದು ಸರಿಯಲ್ಲ – ಮಹಿಳೆ ಹೇಳಿಕೆ

ಜುಲೈ 14 ರಂದು ಪುತ್ತೂರು ಕಾವು ನಿಂದ ಸುಳ್ಯಕ್ಕೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಪಡೆದ ಬಜರಂಗದಳದ ಯುವಕರು ಕನಕಮಜಲಿನಲ್ಲಿ ಕಾದು ಕುಳಿತು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿ ನಂತರ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಕಾರ್ಯಾಚರಣೆಯಲ್ಲಿ ಬಾರಿ ಸಾಹಸಮಯ ರೀತಿಯಲ್ಲಿ ಪಿಕಪ್ ವಾಹನವನ್ನು ಹಾಗೂ ದನಸಾಗಾಟ ದಲ್ಲಿ ಭಾಗಿಯಾದ ವ್ಯಕ್ತಿಯನ್ನು...
Loading posts...

All posts loaded

No more posts

error: Content is protected !!