Ad Widget

ಪೆರಾಜೆ ಹಿಂದೂ ಜಾಗರಣ ವೇದಿಕೆ ವತಿಯಿಂದ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಶ್ರಮದಾನ

ಹಿಂದೂ ಜಾಗರಣ ವೇದಿಕೆ ಪೆರಾಜೆ ಘಟಕ ಇದರ ವತಿಯಿಂದ ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆ ಇಲ್ಲಿ ಇಂದು ಶ್ರಮದಾನ ನಡೆಯಿತು. ಈ ಶ್ರಮದಾನದಲ್ಲಿ ಘಟಕದ ಗೌರವಾಧ್ಯಕ್ಷರಾದ ಸೀತಾರಾಮ್ ಕಡಿಕಡ್ಕ, ಅಧ್ಯಕ್ಷರಾದ ಮನೋಜ್ ಕುಂಟಿಕಾನ, ಕಾರ್ಯದರ್ಶಿ ಭುವನ್ ಕುಂಬಳಚೇರಿ, ಸಂಪರ್ಕ ಪ್ರಮುಖ್ ಸುಭಾಶ್ ಬಂಗಾರಕೋಡಿ,ಪ್ರಚಾರ ಪ್ರಮುಖ್ ವಿನಯ್ ಮೂಲೆಮಜಲು, ಮತ್ತು ಘಟಕದ ಇತರ ಪಧಾಧಿಕಾರಿಗಳು ಹಾಗೂ ಪೆರಾಜೆ...

ನಡುಗಲ್ಲು ಮರಕತ ಶ್ರೀ ದುರ್ಗಾ ಭಜನಾ ಮಂಡಳಿ – ಅಧ್ಯಕ್ಷ : ವಿಜಯಕುಮಾರ್ ಚಾರ್ಮತ, ಕಾರ್ಯದರ್ಶಿ : ಸತೀಶ್ ಬಂಬುಳಿ

ಸತೀಶ್ ಬಂಬುಳಿ ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ನಡುಗಲ್ಲು ಇದರ ವತಿಯಿಂದ ಶ್ರೀ ಕೃಷ್ಣಾ ಜನ್ಮಾಷ್ಠಮಿ ಪ್ರಯುಕ್ತ ನಡುಗಲ್ಲಿನ ನಿವೃತ್ತ ಯೋಧ ಚಿನ್ನಪ್ಪ ಗೌಡ ಪಡ್ರೆ ಇವರ ಮನೆಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಮಂಡಳಿ ಅಧ್ಯಕ್ಷ ಪ್ರಭಾಕರ ಪಡ್ರೆ, ಕಾರ್ಯದರ್ಶಿ ಧರ್ಮಪಾಲ ಚಾರ್ಮತ ಹಾಗೂ ಸದಸ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ...
Ad Widget

ಬೆಳ್ಳಾರೆಯ ಜಕ್ರಿಯ ಜುಮಾ ಮಸ್ಜಿದ್ ನಲ್ಲಿ ಸಡಗರದ ಈದ್ ಸಂಭ್ರಮಾಚರಣೆ

ಬೆಳ್ಳಾರೆ ಜಕ್ರೀಯ ಜುಮಾ ಮಸ್ಜಿದ್ ನಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಈದ್ ನಮಾಝ್ ಹಾಗೂ ಪ್ರಾರ್ಥನಾ ಸಂಗಮ ನಡೆಯಿತು. ಸ್ಥಳೀಯ ಮಸ್ಜಿದ್ ನ ಖತೀಬರಾದ ಯೂನುಸ್ ಸಖಾಫಿ ವಯನಾಡ್ ನೇತೃತ್ವ ವಹಿಸಿದ್ದರು. ಸರ್ಕಾರದ ನಿಯಮಾನುಸಾರವಾಗಿ ಪರಿಸರದಲ್ಲಿ ಮುಸಲ್ಮಾನ ಬಾಂಧವರ ಸಂಖ್ಯೆ ಹೆಚ್ಚಿರುವ ಕಾರಣ ಮೂರು ಹಂತಗಳಲ್ಲಿ ನಮಾಜ್ ನಿರ್ವಹಿಸಲಾಯಿತು ಎಂದು ತಿಳಿದುಬಂದಿದೆ.

ಪಂಜ ನೆಕ್ಕಿಲ ಬದ್ರಿಯಾ ಜುಮಾ ಮಸ್ಜಿದ್ ಈದ್ ಆಚರಣೆ

ಪಂಜ ನೆಕ್ಕಿಲ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಸ್ಥಳೀಯ ಜಮಾ ಅತರು ಬಕ್ರೀದ್ ಹಬ್ಬದ ಅಂಗವಾಗಿ ಈದ್ ನಮಾಝ್ ನಿರ್ವಹಿಸಿದರು. ನಮಾಜಿನ ನಂತರ ಮಹಾಮಾರಿ ಕರೋನವೈರಸ್ ನಿರ್ಮೂಲನಕ್ಕಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ನಮಾಜಿನಲ್ಲಿ ಸಾಮಾಜಿಕ ಅಂತರವನ್ನು ಬಳಸಿಕೊಂಡು ಮೂರು ಹಂತವಾಗಿ ನಮಾಜ್ ನಿರ್ವಹಿಸಿದರು.

ಮಾಣಿಬೈಲು ನಾಗರಪಂಚಮಿ

ಮಾಣಿಬೈಲು ಕುಟುಂಬದ ಹಾಗೂ ಊರಿನ ನಾಗನ ಕಟ್ಟೆಯಲ್ಲಿ ಇಂದು ನಾಗರ ಪಂಚಮಿ ಪ್ರಯುಕ್ತ ಸೀಯಾಳ, ಹಾಲು ಅಭಿಷೇಕ ನಡೆದು ಪೂಜಾ ಕಾರ್ಯ ನೆರವೇರಿತು. ಅರ್ಚಕ ರಘುರಾಮ ಅಮ್ಮಣ್ಣಾನೈರ್ ರ್ಪೂಜಾ ಕಾರ್ಯ ನೆರವೇರಿಸಿದರು.

ಕೊರೊನ ನಡುವೆ ಬಕ್ರೀದ್ ಆಚರಣೆ-ಸರಕಾರದ ಮಾರ್ಗಸೂಚಿ ಬಿಡುಗಡೆ

ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಈ ಮಧ್ಯೆ ಆಗಸ್ಟ್ 1ರಂದು ಬಕ್ರೀದ್ ಹಬ್ಬ ಆಚರಿಸುವುದಾಗಿ ಹಿಲಾಲ್ ಸಮಿತಿ ಘೋಷಿಸಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಜುಲೈ 31ರಂದೇ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಗೈಡ್​ಲೈನ್ಸ್ ಹೊರಡಿಸಿದೆ. ರಾಜ್ಯ ಸರ್ಕಾರದ ಮಾರ್ಗಸೂಚಿಗಳು.. ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್​ ಕಡ್ಡಾಯವಾಗಿ...

ವಳಲಂಬೆಯಲ್ಲಿ ಸಾಮೂಹಿಕ‌ ನಾಗರ ಪಂಚಮಿ ರದ್ದು

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಸಾಮೂಹಿಕ ನಾಗರ ಪಂಚಮಿ ಹಾಗೂ ಆಶ್ಲೇಷ ಬಲಿ‌ ಕಾರ್ಯಕ್ರಮವನ್ನು ಕೊರೊನ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಇದೇ ಜು.25ರಂದು ನಾಗರ ಪಂಚಮಿ ಹಬ್ಬ ನಡೆಯಲಿದ್ದು, ಈ ದಿನ ದೇವಸ್ಥಾನಕ್ಕೂ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ದೇವಳದ ಆಡಳಿತಾದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳ್ಳಾರೆಯಲ್ಲಿ ವಿಶ್ವ ಹಿಂದೂ ಪರಿಷತ್-ಬಜರಂಗದಳ ಅಸ್ತಿತ್ವಕ್ಕೆ

ಮನು ಸಚಿನ್ ರೈ ಬಾಲಕೃಷ್ಣ ಸುನಿಲ್ ಬೆಳ್ಳಾರೆಯಲ್ಲಿ ವಿಶ್ವ ಹಿಂದೂ ಪರಿಷತ್ , ಭಜರಂಗದಳ ಮುಖಾಂತರ ಹಿಂದೂ ಸಂಘಟನೆ ಕಾರ್ಯೋನ್ಮುಖವಾಗಿದೆ. ನೂತನ ಸಂಘಟನೆಯ ಅಧ್ಯಕ್ಷರಾಗಿ ಪ್ರಸಾದ್ ಕೆ.ಬಿ., ಕಾರ್ಯದರ್ಶಿಯಾಗಿ ಮನು ಬಾಯಂಬಾಡಿ, ಸತ್ಸಂಗ ಪ್ರಮುಖರಾಗಿ ಉಮೇಶ್ ಮಣಿಮಜಲು, ಬಜರಂಗದಳ ಸಂಯೋಜಕರಾಗಿ ಸಚಿನ್ ರೈ ಪೂವಾಳಿಕೆ, ಸಹ ಸಂಯೋಜಕರಾಗಿ ಬಾಲಕೃಷ್ಣ ಮಣಿಮಜಲು, ಗೋ ರಕ್ಷಕ್ ಪ್ರಮುಖರಾಗಿ ಸುನಿಲ್...

ಕಟ್ಟ ದೇವಸ್ಥಾನದ ಆಡಳಿತಾಧಿಕಾರಿ ಯಾಗಿ ಪಿಡಿಓ ರವಿಚಂದ್ರ ಅಧಿಕಾರ ಸ್ವೀಕಾರ

ಕೊಲ್ಲಮೊಗ್ರ ಗ್ರಾಮದ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಆಡಳಿತದ ಅವಧಿಯು ಕೊನೆಗೊಂಡಿದ್ದು, ನೂತನ ಆಡಳಿತಾಧಿಕಾರಿಯಾಗಿ ಕೊಲ್ಲಮೊಗ್ರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಎ ವಹಿಸಿಕೊಂಡಿರುವರು. ಈ ಸಂದರ್ಭದಲ್ಲಿ ವ್ಯವಸ್ಥಪನಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕಟ್ಟ ಹಾಗೂ ಸದಸ್ಯರು,ಅರ್ಚಕರು, ಭಕ್ತಭಿಮಾನಿಗಳು ಉಪಸ್ಥಿತರಿದ್ದರು.

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ ಇಂದು ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವಗಳ ಆಯೋಜನೆ

ಎಲ್ಲ ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಹಿಂದೂಗಳು ಕುಟುಂಬಸಮೇತರಾಗಿ ಆನ್‌ಲೈನ್ ‘ಗುರುಪೂರ್ಣಿಮಾ ಮಹೋತ್ಸವದ ಲಾಭ ಪಡೆಯಬೇಕು ಹಾಗೂ ತಮ್ಮ ಸ್ನೇಹಿತರು, ಪರಿಚಿತರು, ಕುಟುಂಬದವರು ಇವರಿಗೂ ಇದರ ಆಮಂತ್ರಣ ನೀಡಬೇಕು ಎಂದು ಸನಾತನ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜುಲೈ 5 ರ ಸಾಯಂಕಾಲ 5 ಗಂಟೆಗೆ ಕನ್ನಡ ಭಾಷೆಯ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ ನಡೆಯಲಿದ್ದು FaceBook ಅಥವಾ...
Loading posts...

All posts loaded

No more posts

error: Content is protected !!