- Tuesday
- August 4th, 2026
ಚೆಂಬು ಗ್ರಾಮದ ಚಂದ್ರಶೇಖರ ಕಾಚೇಲು(50) ರವರು ಮೇ 29 ರಂದು ರಾತ್ರಿ ಮೃತಪಟ್ಟಿದ್ದು, ಅವರಿಗೆ ಜ್ವರ ಭಾದಿಸಿರುವ ಹಿನ್ನೆಲೆಯಲ್ಲಿ ಮೇ 30 ಅವರ ಮೃತದೇಹವನ್ನು ಮಡಿಕೇರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ . ಚಂದ್ರಶೇಖರ ಅವರಿಗೆ ಕೆಲವು ದಿನಗಳಿಂದ ಜ್ವರ ಬಾಧೆಯಿತ್ತೆನ್ನಲಾಗಿದೆ . ಇದಕ್ಕಾಗಿ ಸ್ಥಳೀಯ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು . ನಿನ್ನೆ ಸಂಜೆ...
ಕಳೆದ ಮೂರು ತಿಂಗಳುಗಳಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟ ಮಸೀದಿ ಮತ್ತು ದರ್ಗಾಗಳ ದ್ವಾರಗಳು ತೆರೆಯುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಅಲ್ಪಸಂಖ್ಯಾತರ ಆಯೋಗದಿಂದ ಪ್ರಕಟಿಸಲಾಗಿದೆ.ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವರು ತಮ್ಮ ತಮ್ಮ ಮನೆಗಳಿಂದ ಅಂಗ ಸ್ನಾನ ಮಾಡಿಕೊಂಡು ಬರುವುದು,ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳುವುದು ಮಸೀದಿಯಲ್ಲಿ ಜನರು ಅಧಿಕ ಸಂಖ್ಯೆಯಲ್ಲಿದ್ದರೆ ಎರಡು ಜಮಾಹತ್ ಗಳನ್ನು ಆಯೋಜಿಸುವುದು, ಸುನ್ನತ್ ನಫೀಲ್ ನಮಾಜ್...
ಗುತ್ತಿಗಾರು ಗ್ರಾಮದ ಬಳ್ಳಕ ಎಂಬಲ್ಲ ಕುಕ್ಕೆತ್ತಿ & ಕಂಚಾರತಿ ಎಂಬ ಬಡ ವೃದ್ಧ ಅಶಕ್ತ ಮಹಿಳೆಯರು ವಾಸವಿರುವ ಮನೆಯ ಮಾಡಿನ ದುರಸ್ತಿ ಕಾರ್ಯವನ್ನು ಕೊರೊನಾ ತುರ್ತು ಕಾರ್ಯಪಡೆಯ ಸದಸ್ಯರು ಕೈಗೊಂಡರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಚ್ಯುತ ಗುತ್ತಿಗಾರು ಗ್ರಾ .ಪ .ಸದಸ್ಯರಾದ ಜಯಪ್ರಕಾಶ್ ಮೊಗ್ರ & ರಾಕೇಶ್ ಮೆಟ್ಟಿನಡ್ಕ, ಲೋಕೇಶ್ವರ ಡಿ ಆರ್ ಧರ್ಮಸ್ಥಳ ಗ್ರಾಮಾಭಿವೃಧ್ದಿ...
ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಪಿ ಎಸ್ ಸಾಬು ರವರನ್ನು ವರ್ಗಾವಣೆಗೊಳಿಸಿ ಆಸ್ತಾನಕ್ಕೆ ಕರ್ನಾಟಕ ಮೂಲದ ಡಿ ಶಿಲ್ಪಾ ರವರನ್ನು ನೇಮಿಸಲಾಗಿದೆ ಶಿಲ್ಪಾ ರವರು ಜಿಲ್ಲೆಯ ಪ್ರಥಮ ಮಹಿಳಾ ಎಸ್ಪಿಯಾಗಿ ನೇಮಕಗೊಂಡಿದ್ದಾರೆ.
ಕಡಬ ತಾಲೂಕಿನ ಐನೆಕಿದು ಗ್ರಾಮದ ಕೆದಿಲ ಗಿರಿಯಪ್ಪ ಗೌಡ ರವಿ ಕೆದಿಲ ಹಾಗೂ ದೇವರಾಜ್ ಕೆದಿಲ ಎಂಬವರ ತೋಟಕ್ಕೆ ಕಾಡಾನೆ ದಾಳಿ ನಡೆಸಿದ್ದು ಕೃಷಿಗೆ ಅಪಾರ ಹಾನಿ ಮಾಡಿದೆ.ಬಾಳೆ ,ಅಡಿಕೆ, ತೆಂಗು ಹಾಗು ನೀರಿನ ಪೈಪ್ ಗೆ ಹಾನಿಯಾಗಿದ್ದು ಸುಮಾರು ರೂ 50 ಸಾವಿರದಷ್ಟು ಸಂಭವಿಸಿದೆ ಎಂದು ತಿಳಿದುಬಂದಿದೆ.
ದೇಶಾದ್ಯಂತ ಜೂನ್ 30 ರವರೆಗೆ ಲಾಕ್ಡೌನ್ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ . ಆದರೆ ಕಂಟೈನ್ ಮೆಂಟ್ ಝೂನ್ ಗಳಿಗೆ ಮಾತ್ರ ಲಾಕ್ಡೌನ್ ಅನ್ವಯಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ . ಜೂನ್ 8 ರಿಂದ ಧಾರ್ಮಿಕ ಸ್ಥಳಗಳು , ಮಾಲ್ , ರೆಸ್ಟೋರೆಂಟ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ . ರಾತ್ರಿ 9...
ದ ಕ ಜಿಲ್ಲೆಯನ್ನು ಬೆಂಬಿಡದೆ ಕಾಡುತ್ತಿರುವ ಕೊರೋನ ವೈರಸ್ ಇಂದು 14 ಮಂದಿಗೆ ಕೊರೋನಾ ಪಾಸಿಟಿವ್ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 14 ಮಂದಿಗೆ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ .ಉಡುಪಿ ಜಿಲ್ಲೆಯಲ್ಲಿ 13 ಪ್ರಕರಣಗಳು ವರದಿಯಾಗಿದ್ದು ರಾಜ್ಯದಲ್ಲಿ ಒಟ್ಟು 141ಮಂದಿ ಕರೋನಾವೈರಸ್ ಇಂದು ಪ್ರಕರಣಗಳು ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 2922 ಪ್ರಕರಣಗಳು ದಾಖಲಾಗಿದ್ದು, ಸಾವಿನ...
ಕೋವಿಡ್ -19 ಲಾಕ್ ಇನ್ ಪ್ರಭಾವ ತಗ್ಗಿಸುವ ಹಿನ್ನೆಲೆಯಲ್ಲಿ ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ಬಿಲ್ಲಿನಲ್ಲಿ ರಿಯಾಯಿತಿ ನೀಡುವ ಸಲುವಾಗಿ MSME ಸರ್ಟಿಫಿಕೇಟ್ ಒದಗಿಸುವಂತೆ ಕೋರಿದೆ. ಸರಕಾರದ ಆದೇಶದಂತೆ MSME ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ಬಿಲ್ಲಿನಲ್ಲಿ ನಿಗಧಿತ ಶುಲ್ಕ ( Fixed Charge ) ರಿಯಾಯಿತಿ ಇರುವುದರಿಂದ ಗ್ರಾಹಕರು ಸಕ್ಷಮ ಪ್ರಾಧಿಕಾರವು ನೀಡಿದ MSME ಪ್ರಮಾಣ ಪತ್ರದ...
ಬಂಟ್ವಾಳ : ವಿದ್ಯುತ್ ಶಾಕ್ ನಿಂದ ಯುವಕನೋರ್ವ ಸಾವನ್ನಪ್ಪಿದ್ದು ಇನ್ನೋರ್ವ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪ ಪೇರಿಮಾರ್ ನಲ್ಲಿ ಶನಿವಾರ ಸಂಭವಿಸಿದೆ . ಘಟನೆಯಲ್ಲಿ ಮುಬಾರಕ್ ಅಮ್ಮೆಮಾರ್ ( 23 ) ಮೃತಪಟ್ಟ ಯುವಕ . ಫಾರೂಕ್ ಅಮ್ಮೆಮಾರ್ ಗಂಭೀರ ಗಾಯಗೊಂಡಿದ್ದು , ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ .
Loading posts...
All posts loaded
No more posts
