
ಕನಕಮಜಲು ಗ್ರಾಮದ ಬಾಳೆಹಿತ್ತಿಲು ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಉತ್ಸವ ಮಾ. 27 ಮತ್ತು 28 ರಂದು ನಡೆಯಲಿದೆ.
ಮಾ. 20 ಗುರುವಾರದಂದು ಬೆಳಿಗ್ಗೆ ಗಂಟೆ 7-00ಕ್ಕೆ ಗೊನೆ ಮುಹೂರ್ತ ನಡೆಯಲಿದೆ.
ಮಾ. 23 ಆದಿತ್ಯವಾರದಂದು ರಾತ್ರಿ ಗಂಟೆ 7-00ಕ್ಕೆ ದೈವಸ್ಥಾನ ಪುನಃ ಪ್ರತಿಷ್ಠಾ ದಿನದ ಅಂಗವಾಗಿ ಕೈವೀದು ಸೇವೆ ನಡೆಯಲಿದೆ.
ಮಾ. 27 ಗುರುವಾರದಂದು ಬೆಳಿಗ್ಗೆ ಗಂಟೆ 7-00ಕ್ಕೆ ರಕೇಶ್ವರಿ, ನಾಗ, ಗುಳಿಗ ತಂಬಿಲ ನಡೆಯಲಿದೆ. ರಾತ್ರಿ ಗಂಟೆ 7-00ಕ್ಕೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 9-00ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಲಿದೆ. ರಾತ್ರಿ ಗಂಟೆ 9-30ಕ್ಕೆ ಅನ್ನ ಸಂತರ್ಪಣೆ, ರಾತ್ರಿ ಗಂಟೆ 11-50ಕ್ಕೆ ಕುಳ್ಳಾಟ (ಶ್ರೀ ವಿಷ್ಣುಲೀಲೆ) ನಡೆಯಲಿದೆ. ಮಾ. 28 ಶುಕ್ರವಾರದಂದು ಪ್ರಾತಃಕಾಲ ಗಂಟೆ 5-00ಕ್ಕೆ ಕೆಂಡಸೇವೆ, ಮಾರಿಕಳ, ಪ್ರಸಾದ ವಿತರಣೆ ನಡೆಯಲಿದೆ.
