Ad Widget

ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ 

ವಲಯ ಅರಣ್ಯಾಧಿಕಾರಿಗಳ ಕಚೇರಿ ಸುಬ್ರಹ್ಮಣ್ಯದಲ್ಲಿ, ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ಗಡಿಗುರುತು ಹಾಗೂ ಜಂಟಿಸರ್ವೆ ಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ ನಡೆಯಿತು.
ಮೀರಾ ಸಾಹೇಬ್, ಚಂದ್ರಶೇಖರ ಬಾಳುಗೋಡು ಸೇರಿದಂತೆ ಮ.ಜ.ಹಿ.ರ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿಯವರು ಈ ಬಗ್ಗೆ ಮಾತನಾಡಿದರು.
ರೈತರ ಭೂಮಿ ಉಳಿಯಬೇಕು,ಕೃಷಿ ಉಳಿಯಬೇಕು ಎಂದರೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸರ್ವೇ ನಡೆಸಿ ಜನವಸತಿ ಪ್ರದೇಶಗಳನ್ನು ಬಿಟ್ಟು ಗಡಿ ಗುರುತು ಮಾಡಿ ಅದರ 100 ಮೀ ಗಳ ಆಚೆಗೆ ಬಪರ್ ಝೋನ್ ಹಾಕಬೇಕು, ರೈತರಿಗೆ ಮಾರಕವಾದ ಕಸ್ತೂರಿ ರಂಗನ್ ವರದಿಯನ್ನು ಈ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದ ಕಿಶೋರ್ ಶಿರಾಡಿಯವರು ವಲಯ ಅರಣ್ಯಾಧಿಕಾರಿಗಳಿಗೆ ಈ ಬಗ್ಗೆ ಮನವಿ ಪತ್ರ ನೀಡಿ ಸರಕಾರಕ್ಕೆ ಮುಟ್ಟಿಸಿ ಶೀಘ್ರ ಕ್ರಮವಹಿಸುವಂತೆ ಕೋರಿದರು. ಮುಂದಿನ ದಿನಗಳಲ್ಲಿ ಸುಳ್ಯ, ಪಂಜ,ಉಪ್ಪಿನಂಗಡಿ ಮುಂತಾದ ಕಡೆಗಳಲ್ಲಿಯೂ ವಲಯ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿವೆ ಎಂದು ತಿಳಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading