Ad Widget

ಬಾಳುಗೋಡು : ವಿಶ್ವ ಯುವಕ ಮಂಡಲದ ಆಶ್ರಯದಲ್ಲಿ ಕೆಸರುಗದ್ದೆ ಕ್ರೀಡಾಕೂಟ

ವಿಶ್ವ ಯುವಕ ಮಂಡಲ(ರಿ.) ಬಾಳುಗೋಡು ಇದರ ಆಶ್ರಯದಲ್ಲಿ ಸೆ.15 ಆದಿತ್ಯವಾರದಂದು ಕಿರಿಭಾಗ-ಬಾಳುಗೋಡಿನಲ್ಲಿ “ಕಂಡಡೊಂಜಿ ದಿನ ಗೊಬ್ಬು” ಕೆಸರುಗದ್ದೆ ಕ್ರೀಡಾಕೂಟ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಯುವಜನ ಸಂಯುಕ್ತ ಮಂಡಳಿ ಇದರ ನಿರ್ದೇಶಕರಾದ ದಿನೇಶ್ ಹಾಲೆಮಜಲು ನೆರವೇರಿಸಿದರು. ವಿಶ್ವ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಕಿರಿಭಾಗ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೌರವ ಉಪಸ್ಥಿತರಾಗಿ ವಿಶ್ವ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಶಿಶಿರ್ ಕಟ್ಟೆಮನೆ ಹಾಗೂ ಮುಖ್ಯ ಅತಿಥಿಗಳಾಗಿ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ ಉಪಸ್ಥಿತರಿದ್ದರು.
ವಿಶ್ವ ಯುವಕ ಮಂಡಲದ ಹಿರಿಯ ಸದಸ್ಯರು ಹಾಗೂ ಕ್ರೀಡಾಕೂಟದ ಸ್ಥಳ ದಾನಿಗಳಾದ ಯೋಗೀಶ್ ಕಿರಿಭಾಗ ಕೆಸರುಗದ್ದೆಗೆ ಹಾಲೆರೆಯುವ ಮುಖಾಂತರ ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಸೀಮಿತ ತಂಡಗಳ ಮುಕ್ತ ಕೆಸರುಗದ್ದೆ ಹಗ್ಗಜಗ್ಗಾಟ ಹಾಗೂ ಪುರುಷರ ವಾಲಿಬಾಲ್ ಪಂದ್ಯಾಟ ಸೇರಿದಂತೆ ಪುರುಷರಿಗೆ ಕಂಬಸುತ್ತು ಓಟ, ಮೂರು ಕಾಲು ಓಟ, ಉಪ್ಪು ಮುಡಿ, ರಿಲೇ ಓಟ ಹಾಗೂ ಮಹಿಳೆಯರಿಗೆ ಡಾಡ್ಜ್ ಬಾಲ್, ಮೊಸರು ಕುಡಿಕೆ, ಉಪ್ಪು ಮುಡಿ ರಿಲೇ ಓಟ ಹಾಗೂ ಶಾಲಾ ಬಾಲಕ-ಬಾಲಕಿಯರಿಗೆ ವಿವಿಧ ಸ್ಪರ್ಧೆಗಳು ನಡೆದವು. ಸುಳ್ಯ ತಾಲೂಕಿನ ವಿವಿಧ ತಂಡಗಳ ಹಾಗೂ ಸ್ಥಳೀಯರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಕ್ರೀಡಾಕೂಟದ ನಂತರ ನಡೆದ ಸಮಾರೋಪ ಸಮಾರಂಭವು ವಿಶ್ವ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಕಿರಿಭಾಗ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಗೌರವ ಉಪಸ್ಥಿತರಾಗಿ ವಿಶ್ವ ಯುವಕ ಮಂಡಲದ ಗೌರವಾಧ್ಯಕ್ಷರಾದ ರಾಧಾಕೃಷ್ಣ ಕಟ್ಟೆಮನೆ ಹಾಗೂ ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ಭರತ್ ಮುಂಡೋಡಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ್, ಜಿ.ಪಂ. ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀಕಾಂತ್ ಮಾವಿನಕಟ್ಟೆ, ವಿಶ್ವ ಯುವಕ ಮಂಡಲದ ಉಪಾಧ್ಯಕ್ಷರಾದ ಶಿವಪ್ರಸಾದ್ ಶಿವಾಲ ಉಪಸ್ಥಿತರಿದ್ದರು.
ವಿಶ್ವ ಯುವಕ ಮಂಡಲದ ಕಾರ್ಯದರ್ಶಿ ಅಜೇಯ ಪೊಯ್ಯೆಮಜಲು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿಶ್ವ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ಊರಿನವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!