Ad Widget

ಅದ್ದೂರಿ ಸುಳ್ಯ ಮೊಸರು ಕುಡಿಕೆ ಉತ್ಸವ ಸ್ಟಿಕ್ಕರ್ ಬಿಡುಗಡೆ



ಸುಳ್ಯ: ಹಲವಾರು ವರ್ಷಗಳಿಂದ ಅದ್ದೂರಿಯಾಗಿ ಸುಳ್ಯ ಮೊಸರು ಕುಡಿಕೆ ಉತ್ಸವವು ನಡೆಯುತ್ತಿದ್ದು ಅದೇ ರೀತಿಯಲ್ಲಿ ಈ ಭಾರಿ ವಿಶೇಷವಾಗಿ ಖ್ಯಾತ ವಾಗ್ಮಿ ಮಾಜಿ ಸಂಸದರಾದ ಪ್ರತಾಪ್ ಸಿಂಹ ಅವರು ದಿಕ್ಸೂಚಿ ಭಾಷಣವನ್ನು ನೆರವೇರಿಸಲಿದ್ದು ಈ ಕಾರ್ಯಕ್ರಮವು ಸೆ.4 ರಂದು ನಡೆಯಲಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಉತ್ಸವ ಸಮಿತಿ ಅಧ್ಯಕ್ಷರಾದ ಎ ವಿ ತೀರ್ಥರಾಮ, ಗಣಪತಿ ಭಟ್ ಮಜಿಕೋಡಿ, ಮುಖ್ಯ ಅಥಿತಿಗಳಾಗಿ ಕೇಪು ಅಜಿಲ , ಪ್ರದೀಪ್ ಸರಿಪಲ್ಲ, ಪುನೀತ್ ಅತ್ತಾವರ, ಶಶಿಧರ ತೆಂಕಿಲ ಭಾಗವಹಿಸಲಿದ್ದು ಸುಳ್ಯದ ನಗರದುದ್ದಕ್ಕು ಹಿಂದು ಯುವಕರಿಂದ ಸಾಹಸಮಯವಾದ ಅಟ್ಟಿ ಮಡಿಕೆ ಒಡೆಯುವ ಸ್ಪರ್ದೆಗಳೊಂದಿಗೆ ಸಾಗಲಿದ್ದು ಕಾರ್ಯಕ್ರಮದ‌ ಉದ್ಘಾಟನೆಯನ್ನು ಹರಪ್ರಸಾದ್ ತುದಿಯಡ್ಕ ನೆರವೇರಿಸಲಿದ್ದಾರೆ. ಅಲ್ಲದೇ ಈ ಕಾರ್ಯಕ್ರಮದ ಪೂರ್ವ ತಯಾರಿಯು ಭರ್ಜರಿಯಾಗಿ ಸಾಗುತ್ತಿದ್ದು ಸುಳ್ಯದಲ್ಲಿ ಈ ಭಾರಿಯ ಮೊಸರು ಕುಡಿಕೆ ಉತ್ಸವವು ಸಿಂಹ ಆಗಮನ ಹಿನ್ನಲೆಯಲ್ಲಿ ಮತ್ತಷ್ಟು ರಂಗು ಪಡೆದಿದ್ದು ಈ ಕಾರ್ಯಕ್ರಮದ ಸ್ಟಿಕ್ಕರ್ ಅನಾವರಣವನ್ನು ದಿಕ್ಸೂಚಿ ಭಾಷಣಕಾರ ಪ್ರತಾಪ್ ಸಿಂಹ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!