Ad Widget

ವಯನಾಡ್ ದುರಂತಕ್ಕೆ ಸಿಲುಕಿದವರ ನೆರವಿಗೆ ಧಾವಿಸಿದ ಸೇವಾ ಭಾರತಿ – ಕೈ ಜೋಡಿಸಿದ ಆಲೆಟ್ಟಿಯ ಜನನಿ ಫ್ರೆಂಡ್ಸ್ ಕ್ಲಬ್ ಮತ್ತು ಮರ್ಕಂಜದ ಶಾಸ್ತಾವು ಯುವಕ ಮಂಡಲ

ಕೇರಳದ ವಯಾನಾಡ್ ನಡೆದ ಗುಡ್ಡ ಕುಸಿತ ದುರಂತದಲ್ಲಿ ತೊಂದರೆಗೆ ಸಿಲುಕಿದ ಜನರ ಸೇವೆಗೆ ಸುಳ್ಯದ ಸೇವಾ ಭಾರತಿ ತಂಡ ಧಾವಿಸಿದೆ. ಜತೆಗೆ ಆಲೆಟ್ಟಿ ಜನನಿ ಪ್ರೆಂಡ್ಸ್ ಕ್ಲಬ್ ಹಾಗೂ ಮರ್ಕಂಜದ ಶಾಸ್ತಾವು ಯುವಕ ಮಂಡಲದ ಸದಸ್ಯರ ತಂಡ ಸೇವಾಕಾರ್ಯಕ್ಕೆ ಆ.03 ರಂದು ತೆರಳಿದೆ. ತೊಂದರೆಗೆ ಒಳಗಾದವರಿಗೆ ನೆರವಾಗುವ ದೃಷ್ಟಿಯಿಂದ ಸುಳ್ಯ ಪೇಟೆ ಹಾಗೂ ದಾನಿಗಳಿಂದ ಸಂಗ್ರಹ ಮಾಡಿದ ತುರ್ತು ಅವಶ್ಯಕತೆಯ ಮೆಡಿಸಿನ್, ಬಟ್ಟೆಗಳು,ನೀರಿನ ಬಾಟಲ್, ಆಹಾರ ಪದಾರ್ಥಗಳು, ತಿಂಡಿ, ಬ್ರೆಡ್, ಬನ್, ಸೋಪ್, ಫಿನಾಯಿಲ್, ಕ್ಯಾಂಡಲ್ ಸೇರಿದಂತೆ ಇತರ ವಸ್ತುಗಳೊಂದಿಗೆ ವಯನಾಡ್ ಗೆ ಸೇವಾ ತಂಡ ತೆರಳಿದೆ.

ಈ ಸೇವಾ ತಂಡದಲ್ಲಿ ಲತೀಶ್ ಗುಂಡ್ಯ, ಸುನಿಲ್ ಗುಂಡ್ಯ, ಸಂದೀಪ್ ಗುಂಡ್ಯ, ಗಗನ್ ಕುಡೆಕಲ್ಲು, ಧನುಷ್ ಅಲೆಟ್ಟಿ, ನವೀನ ಸುಳ್ಯ, ಗುರುದತ್ತ್ ನಾಯಕ್, ನವೀನ್, ಮಹೇಶ್, ಚರಣ್. ಕೆ, ರಾಜೇಶ್ ಬಿ., ಸಂಜಿತ್, ವಿಶ್ವನಾಥ್, ಹರ್ಷಿತ್, ಚೇತನ್ ಹಾಗೂ ಮಧುಸೂದನ್ ಕಲ್ಲುಗುಂಡಿ ತೆರಳಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!