Ad Widget

ಬಿದ್ದು ಸಿಕ್ಕಿದ ನಗದು ವಾರಿಸುದಾರರಿಗೆ ಠಾಣಾಧಿಕಾರಿಗಳ ಮುಖಾಂತರ ಹಸ್ತಾಂತರ

ದಿನಾಂಕ 27.07.24 ರಂದು ಮದ್ಯಾಹ್ನ 12.00 ಗಂಟೆಗೆ ರುತ್ತಿಕ್ 20 ವರ್ಷ ಇಂದಿರ ನಗರ ಬೆಳ್ಳಾರೆ ರವರು ತನ್ನ ಅಕ್ಕ ಬಾಬ್ತು ಮೋಟಾರು ಸೈಕಲ್ ಮಾರಾಟ ಮಾಡಿ ಅದರಿಂದ ಸಿಕ್ಕ ಸುಮಾರು 8610 ರೂ, ಹಣವನ್ನು ಬೆಳ್ಳಾರೆ ಅಮ್ಮುರೈ ಕಾಂಪ್ಲೆಕ್ಸ್ ಬಳಿ ಕಳೆದುಕೊಂಡಿದ್ದರು. ಅದೇ ಸಮಯಕ್ಕೆ ನಾರಾಯಣ ಕಜೆಮೂಲೆ ಕಳಂಜ ಗ್ರಾಮ ರವರು ದಾರಿ ಹೋಗುವ ಸಮಯ,8610 ರೂ ಹಣದ ಕಂತೆ ಸಿಕ್ಕಿ ಆ ಕೂಡಲೇ ಅಲ್ಲಿಯೇ ಇದ್ದ ಯಾಹಿಯಾ ಉಮ್ಮಿಕಲ ರವರು ಬಳಿ ತಿಳಿಸಿ ಹಣದ ವಾರಿಸುದಾರರು ಯಾರೆಂದು ಅಲ್ಲಯೇ ಸ್ಥಳೀಯವಾಗಿ ವಿಚಾರಿಸಿ ಬಳಿಕ ಪ್ರಾಮಾಣಿಕವಾಗಿ ಬೆಳ್ಳಾರೆ ಪೊಲೀಸ್ ಠಾಣೆಗೆ ತಂದುಕೊಟ್ಟ ಸುಮಾರು 8610 ರೂ ಹಣವನ್ನು ಈ ದಿನ 02.08.24 ರಂದು ಬೆಳ್ಳಾರೆ ಪೊಲೀಸ್ ಠಾಣಾ ಪಿ ಎಸ್ ಐ ರವರ ಸಮಕ್ಷಮದಲ್ಲಿ ವಾರಿಸುದಾರರಾದ ರುತ್ತಿಕ್ ಇಂದಿರಾ ನಗರ ಬೆಳ್ಳಾರೆ ರವರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಶ್ರೀ ನಾರಾಯಣ ಕಜೆಮೂಲೆ ಹಾಗೂ ಯಾಹಿಯಾ ಉಮ್ಮಿಕಲರವರನ್ನು ಬೆಳ್ಳಾರೆ ಪೋಲಿಸ್ ಠಾಣಾ ವತಿಯಿಂದ ಸ್ಲಾಗಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!