Ad Widget

ರೆಂಜಾಳ : ಶ್ರೀ ಶಾಸ್ತಾವು ಯುವಕ ಮಂಡಲದ ವತಿಯಿಂದ ಕಾರ್ಗಿಲ್ ವಿಜಯೋತ್ಸವ,ಯೋಧ ನಮನ ಕಾರ್ಯಕ್ರಮ


ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ಶಾಸ್ತಾವು ಯುವಕ ಮಂಡಲ(ರಿ.) ರೆಂಜಾಳ ಮರ್ಕಂಜ ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವ,ಯೋಧ ನಮನ ಕಾರ್ಯಕ್ರಮವು ಜು.26 ರಂದು ವಿನಾಯಕ ಸಭಾಭವನ ರೆಂಜಾಳದ ಲ್ಲಿ ನಡೆಯಿತು.ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ನಿವೃತ್ತ ಸೈನಿಕ ಉಮೇಶ್ ಮಣಿಯಾಣಿ ನಿಂತಿಕಲ್ಲು ಭಾಗವಹಿಸಿ ಕಾರ್ಗಿಲ್ ಯುದ್ಧದ ಸಮಯದಲ್ಲಿನ ತಮ್ಮ ಅನುಭವವನ್ನು ಎಳೆ ಎಳೆಯಾಗಿ ಹಂಚಿಕೊಳ್ಳುತ್ತಾ, ಸೈನ್ಯಕ್ಕೆ ಸೇರಿ ನೇರವಾಗಿ ದೇಶಸೇವೆ ಮಾಡಬಹುದು ಆದರೆ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕವೂ ದೇಶಸೇವೆ ಮಾಡಬಹುದು ಎಂದು ಹೇಳಿದರು.ವೇದಿಕೆಯಲ್ಲಿ ಶ್ರೀದೇವಳದ ವ್ಯವಸ್ಥಾಪನ ಸಮಿತಿ ನಿಕಟ ಪೂರ್ವ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ,ಸೇವಾಸಮಿತಿ ಕಾರ್ಯದರ್ಶಿ ಜಗನ್ಮೋಹನ ರೈ,ಯುವಕ ಮಂಡಲದ ಕಾರ್ಯದರ್ಶಿ ಪದ್ಮನಾಭ ನಿಡ್ಯಮಲೆ ಉಪಸ್ಥಿತರಿದ್ದರು.ಐತ್ತ ರೆಂಜಾಳ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.ಶಿವರಂಜನ್ ರಾವ್ ದಾಸರಬೈಲು ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!