Ad Widget

ಸುಳ್ಯ : ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೊಡೆ,ಪೆನ್ಸಿಲ್ ಹಾಗೂ ದತ್ತಿನಿಧಿ ವಿತರಣೆ

ಸುಳ್ಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.22 ರಂದು ಗ್ರೀನ್ ಹೀರೋ ಆಫ್ ಇಂಡಿಯಾ2023 ಪ್ರಶಸ್ತಿ ಪಡೆದ ಶ್ರೀಯುತ ಆರ್.ಕೆ.ನಾಯರ್ ರವರು ಹಲವು ವರ್ಷಗಳಿಂದ ನೀಡುತ್ತಿರುವ ಕೊಡೆ ಹಾಗೂ ಪೆನ್ಸಿಲ್ ಬಾಕ್ಸ್ ವಿತರಣೆ ಹಾಗೂ ದತ್ತಿನಿಧಿ ವಿತರಣಾ ಕಾರ್ಯಕ್ರಮ ನಡೆಯಿತು. ಸಭಾಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರವಿರಾಜ ಕಮಿಲಡ್ಕ ವಹಿಸಿದ್ದರು. ವೇದಿಕೆಯಲ್ಲಿ ದತ್ತಿನಿಧಿ ಇರಿಸಿರುವ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ.ವಿ.ಶೆಟ್ಟಿ, ಹಿರಿಯ ವಿದ್ಯಾರ್ಥಿ ಗೋಕುಲದಾಸ್ , ತಮಿಳು ಸಂಘದ ಸ್ಥಾಪಕಾಧ್ಯಕ್ಷರಾದ ಪೆರುಮಾಳ್, ಹಾಗೂ ಕಾರ್ಯದರ್ಶಿ ಕಾರ್ತಿಕ್ ,ದಾನಿಗಳಾದ ದೇವರಾಜ್ ಕುದ್ಪಾಜೆ, ಹಿರಿಯ ವಿದ್ಯಾರ್ಥಿಸಂಘದ ಸಂಚಾಲಕರಾದ ಶ್ರೀ ಆರ್. ಕೆ. ಭಟ್, ಶಾಲಾ ಮುಖ್ಯಶಿಕ್ಷಕಿ ಸುನಂದಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುನಂದಾ ಶೆಟ್ಟಿ ಸ್ವಾಗತಿಸಿದರು,ಶಿಕ್ಷಕಿ ಶ್ರೀಮತಿ ಶೀಲಾವತಿ ದತ್ತಿನಿಧಿ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಿಕ್ಷಕ ಚಂದ್ರಶೇಖರ ವಂದನಾರ್ಪಣೆ ಮಾಡಿದರು. ಅತಿಥಿ ಶಿಕ್ಷಕಿ ಕು| ಮಲ್ಲಿಕಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಕ್ಷಕಿಯರಾದ ಪ್ರೇಮಾವತಿ ಹಾಗೂ ಹೇಮಲತಾ ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!