Ad Widget

ಬೆಳ್ಳಾರೆಯಲ್ಲಿ ಜೇಸಿಐ ಸಂಗಮ 2024 – ವಲಯಾಧ್ಯಕ್ಷರ ಭೇಟಿ

ಜೆಸಿಐ ವಲಯ 15 ರ  ವಲಯಾಧ್ಯಕ್ಷರ ಅಧಿಕೃತ ಭೇಟಿ  ಮತ್ತು ಮಲ್ಟಿಲೋ ಮೀಟ್ ಕಾರ್ಯಕ್ರಮ ಜು.13 ರಂದು ಬೆಳ್ಳಾರೆಯ  ಜೆ.ಡಿ. ಆಡಿಟೋರಿಯಂ ನಲ್ಲಿ ಅದ್ದೂರಿ ಯಾಗಿ ನಡೆಯಿತು.

ಜೆಸಿಐ ಬೆಳ್ಳಾರೆ ವತಿಯಿಂದ ನೀಡಲಾದ ಬೆಳ್ಳಾರೆ ಅಜಪಿಲ  ದೇವಸ್ಥಾನದ  ಬೋರ್ವೆಲ್ ಗೆ ಜಲ ಮರುಪೂರಣ ಯೋಜನೆಯನ್ನು ಮತ್ತು ಮಾರ್ಗಸೂಚಿ ಫಲಕವನ್ನು   ವಲಯದ್ಯಕ್ಷರು  ಬಿಡುಗಡೆ ಮಾಡಿದರು. ಜೆಸಿಐ ಆಲಂಗಾರು ವತಿಯಿಂದ ಅಂಗನವಾಡಿ ಕೇಂದ್ರಕ್ಕೆ ಕುಡಿಯುವ ನೀರಿನ ಘಟಕ ಮತ್ತು ಗ್ರಂಥಾಲಯಕ್ಕೆ ಮೇಜಿನ ಕೊಡುಗೆಯನ್ನು ಹಸ್ತಾಂತರಿಸಿದರು.

ವಲಯಾಧ್ಯಕ್ಷರಾದ  ಜೇಸಿಐ  ಸೆನೆಟರ್ ಅಡ್ವೋಕೇಟ್ ಗಿರೀಶ್ ಎಸ್.ಪಿ.,ಉಪಾಧ್ಯಕ್ಷ ಜೆಸಿಐ  ಸೆನೆಟರ್  ಅಭಿಷೇಕ್, ಜೇಸಿ ಪ್ರಶಾಂತ್ ಕುಮಾರ್  ಮತ್ತು ವಲಯದ ಅಧಿಕಾರಿ ನಿರ್ಮಲಾ ಬೆಳ್ಳಾರೆ  ಭಾಗವಹಿಸಿದ್ದರು.
ವಿವಿಧ  ಘಟಕದ ವತಿಯಿಂದ ವಲಯಾಧ್ಯಕ್ಷರಾದ  ಜೇಸಿಐ  ಸೆನೆಟರ್ ಅಡ್ವೋಕೇಟ್ ಗಿರೀಶ್ ಎಸ್.ಪಿಯವರನ್ನು  ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪೆನ್ಸಿಲ್ ಆರ್ಟ್ ಮೂಲಕ  ಖ್ಯಾತಿ ಗಳಿಸಿದ ಪೂಜಾ ಬೊರ್ಕರ್ ಸುಳ್ಯ ಇವರು ಬಿಡಿಸಿದ ವಲಯಾಧ್ಯಕ್ಷರ ಭಾವಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರ ವಾಯಿತು.

ಮಲ್ಟಿ ಲೋ ಮೀಟ್ ನಲ್ಲಿ ಜೆಸಿಐ ಬೆಳ್ಳಾರೆ ಘಟಕಾದ್ಯಕ್ಷ ಜಗದೀಶ್ ಪೆರುವಾಜೆ  ಸಭಾಧ್ಯಕ್ಷತೆ ವಹಿಸಿ ಶುಭ ಕೋರಿದರು, ಜೆಸಿಐ ಕಡಬ ಕದಂಬ  ದ ಜಾಫರ್ ಮೊಹಮ್ಮದ್, ಜೇಸಿಐ ಸುಳ್ಯ ಪಯಸ್ವಿನಿಯ ಗುರುಪ್ರಸಾದ್ ನಾಯಕ್, ಜೆಸಿಐ ಅಲಂಗಾರ್ ನ ಮಮತಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಜೆಸಿಐ ನೆಲ್ಯಾಡಿ,   ಜೆಸಿಐ ಸುಳ್ಯ ಸಿಟಿ ಘಟಕದ ಪದಾಧಿಕಾರಿಗಳು,  ಬೆಳ್ಳಾರೆ ಘಟಕದ ಎಲ್ಲಾ ಪೂರ್ವಾಧ್ಯಕ್ಷರು ಪದಾದಿಕಾರಿಗಳು, ಪೂರ್ವ ವಲಯಾದ್ಯಕ್ಷರು,  ಇತರ ಘಟಕದ ಸದಸ್ಯರು ಭಾಗವಹಿಸಿ ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!