Ad Widget

ಚೆಂಬು ಊರುಬೈಲಿನಲ್ಲಿ  ಒಂಟಿಸಲಗದ ದಾಂಧಲೆ_ ವ್ಯಕ್ತಿ ಪವಾಡ ಸದೃಶ ಪಾರು_ ಅಪಾರ ಕೃಷಿ ನಾಶ

ರಬ್ಬರ್ ಟ್ಯಾಪಿಂಗ್ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಕಾಡಾನೆ ದಿಢೀರ್‌ ದಾಳಿ ನಡೆಸಲು ಯತ್ನಿಸಿದ ಘಟನೆ ಇಂದು ಬೆಳಗ್ಗೆ ಚೆಂಬು ಗ್ರಾಮದ ಊರುಬೈಲಿನಲ್ಲಿ ನಡೆದಿದೆ. 

ಊರುಬೈಲಿನ ಪಾಲ್ತಾಡು ರವಿ ಎಂಬವರು ಬೆಳಿಗ್ಗೆ ರಬ್ಬರ್ ಟ್ಯಾಪಿಂಗ್ ಮುಗಿಸಿ ಶೆಡ್ ಗೆ ಬರುತ್ತಿದ್ದ ವೇಳೆ ಒಂಟಿಸಲಗವೊಂದು ಹಿಂಬದಿಯಿಂದ ದಾಳಿಗೆ ಯತ್ನಿಸಿದ್ದು, ರವಿ ಅವರು ಓಡಿ ಪವಾಡ ಸದೃಶ ಪಾರಾಗಿದ್ದಾರೆ.

 
ಕಾಡಾನೆ ರಬ್ಬರ್ ಕೆಲಸದ ಶೆಡ್ಡನ್ನು  ಸಂಪೂರ್ಣ ಹಾನಿಗೊಳಿಸಿದೆ. ಊರುಬೈಲಿನಲ್ಲಿರುವ ಡಾ. ಯು.ಪಿ. ಶಿವಾನಂದರ ತೋಟ, ವಾಸುದೇವ ಅರಂಬೂರು, ಗೋಪಾಲಕೃಷ್ಣ ಪೈಲಾಜೆ ಅವರ ತೋಟ ಸೇರಿದಂತೆ ಅಕ್ಕಪಕ್ಕದ ಕೃಷಿಕರ ತೋಟದಲ್ಲಿ ಅಪಾರ ಪ್ರಮಾಣದ ಕೃಷಿ ಹಾನಿಯಾಗಿರುವುದಾಗಿ ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!