Ad Widget

ಉತ್ತರಕನ್ನಡದಿಂದ ಸುಳ್ಯಕ್ಕೆ ಬಂದಿದ್ದ ಮಹಿಳೆ ಊರಿನತ್ತ ಪ್ರಯಾಣ

ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಮಹಿಳೆಯೊಬ್ಬರು ನಿನ್ನೆ ಸಂಜೆ ಸುಳ್ಯ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಪೋಲೀಸರಿಗೆ ಆಕೆಯನ್ನು ಠಾಣೆಗೆ‌ ಕರೆದುಕೊಂಡು ಹೋಗಿ ವಿಚಾರಿಸಿದರೂ ಯಾವುದೇ ಮಾಹಿತಿ ಆಕೆ ನೀಡುತ್ತಿರಲಿಲ್ಲ. ರಾತ್ರಿಯಾದುದರಿಂದ ಪೋಲೀಸರು ಆಕೆಯನ್ನು ಸುಳ್ಯದ ಸಾಂತ್ವನ ಕೇಂದ್ರಕ್ಕೆ ಸೇರಿಸಿದರು.ಮಹಿಳೆ ಹೊನ್ನಾವರದರೆಂದು ಆಕೆಯ ಆಧಾರ್ ಕಾರ್ಡ್ ನಿಂದ ಗೊತ್ತಾಗಿ ಅವರ ಮನೆಯವರ ಹುಡುಕಾಟ ನಡೆಸಲಾಗಿತ್ತು. ಮನೆಯವರು ಯಾರೆಂದು ಗೊತ್ತಾಗಿ ಆ ಮಹಿಳೆಯನ್ನು ಸುಳ್ಯದಿಂದ ಗೋಕರ್ಣ ಬಸ್ ನಲ್ಲಿ ಹೊನ್ನಾವರಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!