Ad Widget

ರಕ್ತದಾನಿ, ಸುಳ್ಯ ತಾಲೂಕು ರೆಡ್ ಕ್ರಾಸ್ ಸಭಾಪತಿ ಸುಧಾಕರ ರೈ ಅವರ ಕಾರು ಅಪಘಾತ, ಸುಧಾಕರ ರೈ ಅವರು ಅಪಾಯದಿಂದ ಪಾರು

ರಕ್ತದಾನಿ, ಸುಳ್ಯ ತಾಲೂಕು ರೆಡ್ ಕ್ರಾಸ್ ಸಭಾಪತಿ ಸುಧಾಕರ ರೈ ಅವರ ಕಾರು ಅಪಘಾತ, ಸುಧಾಕರ ರೈ ಅವರು ಅಪಾಯದಿಂದ ಪಾರುಖ್ಯಾತ ರಕ್ತದಾನಿಗಳಾದ ಸುಳ್ಯ ತಾಲೂಕು ರೆಡ್ ಕ್ರಾಸ್ ಸಭಾಪತಿ ಹಾಗೂ ಸುಳ್ಯ ತಾಲೂಕು ವರ್ತಕರ ಸಂಘದ ಅಧ್ಯಕ್ಷರಾದ ಸುಧಾಕರ ರೈ ಅವರ ಕಾರು ಜೂ.19 ರಂದು ಪುತ್ತೂರಿನ ಕುಂಬ್ರದ ಬಳಿ ಅಪಘಾತಗೊಂಡಿದ್ದು, ಕಾರು ಜಂಖಂಗೊಂಡಿದ್ದು, ಸುಧಾಕರ ರೈ ಅವರು ಪವಾಡ ಸದೃಶ್ಯವಾಗಿ ಅಪಾಯದಿಂದ ಪಾರಾಗಿದ್ದಾರೆ.ಸುಧಾಕರ ರೈ ಅವರು ಮಣಿಪಾಲದ ತಮ್ಮ ಮನೆಗೆ ಹೋಗಿದ್ದು, ಮಣಿಪಾಲದಿಂದ ಪುತ್ತೂರು ಮೂಲಕ ಸುಳ್ಯಕ್ಕೆ ಹಿಂತಿರುಗಿ ಬರುವ ಸಂಧರ್ಭದಲ್ಲಿ ಕುಂಬ್ರದ ಬಳಿ ಗೋಣಿಕೊಪ್ಪದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರೊಂದಕ್ಕೆ ನಾಯಿಯೊಂದು ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಹೋದ ಕಾರು ಎದುರಿಗೆ ಬರುತ್ತಿದ್ದ ಸುಧಾಕರ ರೈ ಅವರ ಕಾರಿಗೆ ಗುದ್ದಿದ್ದು, ಸುಧಾಕರ ರೈ ಅವರ ಕಾರು ಜಖಂಗೊಂಡಿದ್ದು, ಸುಧಾಕರ ರೈ ಅವರು ಪವಾಡ ಸದೃಶ್ಯವಾಗಿ ಯಾವುದೇ ಗಾಯಗಳಿಲ್ಲದೇ ಅಪಾಯದಿಂದ ಪಾರಾಗಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!