Ad Widget

ಜೇಸಿಐ ಸುಳ್ಯ ಪಯಸ್ವಿನಿ  ವತಿಯಿಂದ “ಸ್ವಚ್ಛ ಶಾಲೆ ನಾಳೆಯ ನಾಯಕತ್ವದ ನೆಲೆ” ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಜೇಸಿಐ ಸುಳ್ಯ ಪಯಸ್ವಿನಿಯ ವತಿಯಿಂದ ಪಿ.ಎಂ.ಶ್ರೀ ಸರಕಾರಿ ಪ್ರಾಥಮಿಕ ಶಾಲೆ, ಸುಳ್ಯ ಹಾಗೂ ಶಾಲಾ ಎಸ್.ಡಿ.ಎಂ.ಸಿ ಇವರ ಸಹಕಾರದೊಂದಿಗೆ “ಸ್ವಚ್ಛ ಶಾಲೆ ನಾಳೆಯ ನಾಯಕತ್ವದ ನೆಲೆ” ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಪಿ.ಎಂ.ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷರಾದ ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಇವರ ಅಧ್ಯಕ್ಷತೆಯಲ್ಲಿ...

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಸಭೆ ; ಬೀದಿ ನಾಯಿಗಳ ಸಮಸ್ಯೆ, ಅನಧಿಕೃತ ಅಂಗಡಿಗಳ ಬಗ್ಗೆ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಳ್ಳದ ಕುರಿತು, 24×7 ಆಸ್ಪತ್ರೆಯ ಬಗ್ಗೆ ಹಾಗೂ ಪಶು ಇಲಾಖೆಯ ಕಟ್ಟಡದ ಬಗ್ಗೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಗ್ರಾಮ ಸಭೆಯು ರಾಜೀವಗಾಂದಿ ಸೇವಾ ಕೇಂದ್ರ ಸಭಾಭವನದಲ್ಲಿ ಫೆ.05 ಗುರುವಾರದಂದು ನಡೆಯಿತು.ಸಭೆಯಲ್ಲಿ ಬೀದಿ ನಾಯಿ ಸಮಸ್ಯೆ, 24x7 ಆಸ್ಪತ್ರೆ ಬಗ್ಗೆ, ಮಂಗಗಳ ಹಾವಳಿ, ಮರಕತ ಅಣೆಕಟ್ಟು ಸಮಸ್ಯೆ, ಪಶು ಇಲಾಖೆಯ ಕಟ್ಟಡದ ಬಗ್ಗೆ ಚರ್ಚೆ ನಡೆಯಿತು.ಸರ್ಕಾರಿ ಜಾಗ ಒತ್ತುವರಿ ಬಗ್ಗೆ ಚರ್ಚೆ : “ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಗೆ 4.5 ಎಕ್ರೆ...
Ad Widget

“ಫೆ.08 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಾಲೂಕು ಭಜನೋತ್ಸವ” : ಯೋಜನಾಧಿಕಾರಿ ಮಾಧವ ಗೌಡ ಹೇಳಿಕೆ ; ಕ್ಷೇತ್ರದಲ್ಲಿ ಭಜಕರಿಂದ ಭಜನಾ ಸಂಕೀರ್ತನೆ ಮತ್ತು ಕುಣಿತ ಭಜನೆ

ಸುಬ್ರಹ್ಮಣ್ಯ : “ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಫೆ.08ರಂದು ತಾಲೂಕು ಭಜನೋತ್ಸವ ನಡೆಯಲಿದೆ. ಸಂಜೆ ಸುಮಾರು 100ಕ್ಕೂ ಅಧಿಕ ತಂಡಗಳಿಂದ ಸಾವಿರಕ್ಕೂ ಮಿಕ್ಕಿ ಭಜಕರಿಂದ ಕುಣಿತ ಭಜನೆ ಪ್ರದರ್ಶಿತವಾಗಲಿದೆ. ಮಧ್ಯಾಹ್ನ 120ಕ್ಕೂ ಅಧಿಕ ಭಜನಾ ತಂಡಗಳಿಂದ ಕುಳಿತು ಭಜನೆ ಬಳಿಕ ಕುಣಿತ ಭಜನೆ ನಡೆಯಲಿದೆ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ...

ಫೆ.09 ರಂದು ವೆಂಕಟರಮಣ ಸೊಸೈಟಿಯ ಸ್ಥಾಪನಾ ದಿನಾಚರಣೆ – 29ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಬ್ಯಾಂಕ್ ಬಗ್ಗೆ ವಿವರ ನೀಡಿದ ಅಧ್ಯಕ್ಷ ಕೆ.ಸಿ.ಸದಾನಂದ 

ಸುಳ್ಯದ ಪ್ರತಿಷ್ಠಿತ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 1998 ರಂದು ಸ್ಥಾಪನೆಯಾಗಿದ್ದು ಇದೀಗ 29ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಫೆ‌.09 ರಂದು ಪ್ರತಿ ವರ್ಷ ಸ್ಥಾಪನಾ ದಿನಾಚರಣೆಯನ್ನು ಆಚರಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷರಾದ ಕೆ.ಸಿ.ಸದಾನಂದ ಹೇಳಿದರು. ಅವರು ಫೆ.06 ರಂದು ಸೊಸೈಟಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗೌಡರ...

ಅಡ್ತಲೆ : ನಿರಂತರ ಆನೆ ದಾಳಿಯಿಂದಾಗಿ ಅಪಾರ ಕೃಷಿ ಹಾನಿ – ಅರಣ್ಯ ಇಲಾಖೆಯಿಂದ ನಿರ್ಲಕ್ಷ್ಯ – ಹೋರಾಟಕ್ಕೆ ಸಜ್ಜಾದ ಜನತೆ

ಅರಂತೋಡು ಗ್ರಾಮದ ಅಡ್ತಲೆ ಹಾಗೂ ಕಿರ್ಲಾಯ ಭಾಗದಲ್ಲಿ ಆನೆಗಳ ಹಿಂಡು ನಿರಂತರವಾಗಿ ಕೃಷಿ ತೋಟಗಳಿಗೆ ದಾಳಿ ನಡೆಸುತ್ತಿದ್ದು, ಕೃಷಿಕರನ್ನು ಕಂಗಾಲಾಗಿಸಿದೆ. ಈಗಾಗಲೇ ಎಲೆಚುಕ್ಕಿ, ಕೊಳೆರೋಗ ಹಾಗೂ ಹಳದಿ ಎಲೆ ರೋಗಗಳಿಂದ ನಷ್ಟ ಅನುಭವಿಸುತ್ತಿರುವ ಕೃಷಿಕರನ್ನು ಈ ಆನೆಗಳ ದಾಳಿಯು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಫೆ.05ರಂದು ರಾತ್ರಿ ಅರಂತೋಡು ಗ್ರಾಮದ ಅಡ್ತಲೆ ನಿವಾಸಿ ಪೊನ್ನಪ್ಪ ಅಜಿಲ ಅವರ...

ಸುಳ್ಯ : ನೀರಿನ ಪೂರೈಕೆಯಲ್ಲಿ ಅವ್ಯವಸ್ಥೆ – ನಳ್ಳಿಯಲ್ಲಿ ಬಿಳಿ ಬಣ್ಣದ ನೀರು

ಸುಳ್ಯ ನಗರದಲ್ಲಿ  ಅಮೃತ್ ಯೋಜನೆ ಮೂಲಕ ಪೂರೈಕೆಯಾಗುತ್ತಿರುವ ನೀರು ಬಿಳಿ ಬಣ್ಣಕ್ಕೆ ಬಂದಿದ್ದು, ಇದಕ್ಕೆ ಅತಿಯಾದ ಪ್ರಮಾಣದಲ್ಲಿ ಬ್ಲೀಚಿಂಗ್ ಪೌಡರ್ ಹಾಕಿರಬಹುದು ಎನ್ನಲಾಗುತ್ತಿದೆ. ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಕಾರಕವಾಗುವ ಸಾಧ್ಯತೆಯಿದ್ದು, ಈ ಬಗ್ಗೆ  ಆರೋಗ್ಯ ಇಲಾಖೆಯು ತಕ್ಷಣ ಗಮನ ಹರಿಸಬೇಕು, ಸ್ಥಳೀಯಾಡಳಿತ ತಕ್ಷಣ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಸಾಮಾಜಿಕ ಹೋರಾಟಗಾರ ಸುಪ್ರೀತ್ ಮೋಂಟಡ್ಕ...

ಹವ್ಯಾಸ್ – ಭವ್ಯ : ವಿವಾಹ ನಿಶ್ಚಿತಾರ್ಥ

ಕೊಲ್ಲಮೊಗ್ರ ಗ್ರಾಮದ ಚಾಂತಾಳ ಶ್ರೀಧರ ಗೌಡರ ಪುತ್ರ ಹವ್ಯಾಸ್ ಅವರ ವಿವಾಹ ನಿಶ್ಚಿತಾರ್ಥವು ಸಂಪಾಜೆ ಗ್ರಾಮದ ಸಣ್ಣಮನೆ ದಿ. ಜಗದೀಶ್ ರವರ ಪುತ್ರಿ ಭವ್ಯ ಳೊಂದಿಗೆ ಫೆ.05 ರಂದು ವಧುವಿನ ಮನೆಯಲ್ಲಿ ನಡೆಯಿತು.

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:06-02-2026 ಶುಕ್ರವಾರ*01,🐏ಮೇಷರಾಶಿ🐏*🌻,ವ್ಯಾಪಾರ ಮಾಡುವವರಿಗೆ ಇಂದು ಉತ್ತಮ ದಿನವಾಗಲಿದೆ. ಸಣ್ಣ ವಿಷಯವನ್ನು ಬೆನ್ನಟ್ಟುವುದಕ್ಕಿಂತ ದೊಡ್ಡ ಅವಕಾಶದ ಬಗ್ಗೆ ಯೋಚಿಸುವುದು ಉತ್ತಮ. ಇಲ್ಲದಿದ್ದರೆ ಅವರು ತಪ್ಪಿನ ಭಾರವನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಕೆಲವು ವಿಷಯದ ಬಗ್ಗೆ ವಾದಗಳು ಉಂಟಾಗಬಹುದು ಎಚ್ಚರ,ಪರಿಹಾರ:-ತಾಯಿಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ,*02,🐂ವೃಷಭರಾಶಿ🐂*🌻,ಇಂದು ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಯಾರಿಗೂ ಕೇಳದೆ ಸಲಹೆ ನೀಡುವುದನ್ನು ಬಿಡಬೇಕು ಮತ್ತು ನಿಮ್ಮ ಕ್ಷೇತ್ರದಲ್ಲಿ...

ನಿವೃತ್ತ ಉಪ ತಹಶೀಲ್ದಾರ್ ವೇದಾವತಿ ಮುಂಡೋಡಿ ನಿಧನ

ದೇವಚಳ್ಳ ಗ್ರಾಮದ ವಸಂತ ಕುಮಾರ್ ಮುಂಡೋಡಿಯವರ ಪತ್ನಿ ನಿವೃತ್ತ ಉಪ ತಹಶೀಲ್ದಾರ್ ಆಗಿದ್ದ ವೇದಾವತಿ ಅಲ್ಪ ಕಾಲದ ಅಸೌಖ್ಯದಿಂದ ಫೆ.05 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಮೃತರು ಪತಿ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

ಸುಳ್ಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್(ರಿ‌.) ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಹಾಗೂ ಶ್ರೀಮತಿ ಹೇಮಾವತಿ ಹೆಗ್ಗಡೆ ಅವರ ಶುಭಾರ್ಶೀವಾದದೊಂದಿಗೆ  ಸುಳ್ಯ ತಾಲೂಕಿನಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಾಸಾಶನ ನೀಡುತ್ತಿರುವ ಕುಟುಂಬಗಳಿಗೆ  ಶ್ರೀಮತಿ ಹೇಮಾವತಿ ಹೆಗ್ಗಡೆಯವರು ನೀಡಿದ ದಿನನಿತ್ಯ ಬಳಕೆ ಮಾಡುವ ವಾತ್ಸಲ್ಯ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ...
Loading posts...

All posts loaded

No more posts

error: Content is protected !!