Ad Widget

ಮಾವಿನಕಟ್ಟೆ : ಬೆಂಕಿಯಿಂದ ಅರಣ್ಯ ಸಂಪತ್ತು, ವನ್ಯಜೀವಿಗಳನ್ನು ರಕ್ಷಿಸುವ ಬಗ್ಗೆ ಜನಜಾಗೃತಿ

ಅರಣ್ಯ ಸಂಪತ್ತು ಮತ್ತು ವನ್ಯ ಜೀವಿಗಳನ್ನು ಬೆಂಕಿಯಿಂದ ರಕ್ಷಿಸುವ ಬಗ್ಗೆ ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಒಂದು ದಿನದ ಜನಜಾಗೃತಿ ಕಾರ್ಯಕ್ರಮ ಹಾಗೂ ಮಾಹಿತಿ ಕಾರ್ಯಾಗಾರವು ಈ ದಿನ ಮಾವಿನಕಟ್ಟೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ರವರು ವಹಿಸಿ...

“ಮೌನವಾಗಿದ್ದೆ ನಾನು…..”

ಮೌನವಾಗಿದ್ದೆ ನಾನು ಹಸಿರು ಚೆಲ್ಲುತ್ತಾ ಉಸಿರು ಪಸರಿಸುತ್ತಾ  ಅಮೃತವಾಗಿ ಸಿರಿ ಸಮೃದ್ಧಿಯಾಗಿ ತಾಯ ಮಮತೆಯ ತೊಟ್ಟಿಲಾಗಿ ಹದವರಿತು ಕಾರ್ಯವೆಸಗುತಲಿದ್ದೆ ಕ್ಷಮೆಯಾಧರಿತ್ರಿಯಾಗಿ ಕಾಯುತಲಿದ್ದೆಬಡಿದೆಬ್ಬಿಸಿದೆ ನೀನು ವಿಕೃತಿಯ ಮೆರೆಯುತ್ತಾನಿನ್ನಾಸೆ ಆಮಿಷಗಳಿಗೆ ನನ್ನ ಬಲಿಕೊಟ್ಟೆ ನನ್ನೊಡಲ ನೀ ಬರಿದು ಮಾಡಿಬಿಟ್ಟೆ ನನ್ನುಸಿರಿನಲ್ಲೇ ನಿನ್ನುಸಿರು ಅದ ಮರೆತು ಬಗೆದೆ ನನ್ನ ಬಸಿರುನಿಗೂಢತೆಯ ಹೊತ್ತ ವಿಸ್ಮಯಗಳ ತಾಣದೊಳು ರಹಸ್ಯಗಳ ಒಡಲೊಳಿಟ್ಟು ಮೌನವಾಗಿದ್ದೆ ನಾನು...
Ad Widget

ಜ.30ರಂದು ಸುಬ್ರಹ್ಮಣ್ಯ ಹಾಗೂ ಗುತ್ತಿಗಾರು ಉಪ ಕೇಂದ್ರಗಳ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

ಜ.30ನೇ ಶುಕ್ರವಾರದಂದು ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ 33 ಕೆ.ವಿ ಮಾರ್ಗ ಹಾಗೂ 33/11 ಕೆ.ವಿ ಗುತ್ತಿಗಾರು ಮತ್ತು ಸುಬ್ರಹ್ಮಣ್ಯ ವಿದ್ಯುತ್ ಉಪ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಪೂರ್ವಾಹ್ನ 10:00 ಗಂಟೆಯಿಂದ ಸಾಯಂಕಾಲ 4:00 ಗಂಟೆಯವರೆಗೆ ಸುಬ್ರಹ್ಮಣ್ಯ ಹಾಗೂ ಗುತ್ತಿಗಾರು ಉಪ ಕೇಂದ್ರಗಳಿಂದ ಹೊರಡುವ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ ಸುಬ್ರಹ್ಮಣ್ಯ ಉಪ ಕೇಂದ್ರದಿಂದ ಹೊರಡುವ ಹರಿಹರ...

ಕೊಯನಾಡು : ಗಣರಾಜ್ಯೋತ್ಸವ ಪ್ರಯುಕ್ತ ಗಣೇಶ ಯುವ ಬಳಗ ವತಿಯಿಂದ ಶ್ರಮದಾನ

ಕೊಡಗು-ಸಂಪಾಜೆ ಗ್ರಾಮದ ಕೊಯನಾಡು ಶ್ರೀ ಗಣೇಶ ಯುವ ಬಳಗ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ  ಶ್ರಮದಾನ ಕಾರ್ಯ ನಡೆಯಿತು.ಸ್ವಚ್ಛ ಎಂದರೆ ನಿರ್ಮಲವಾದದ್ದು, ಪರಿಶುದ್ಧವಾದದ್ದು ಎಂದರ್ಥ ಸ್ವಚ್ಛ ಭಾರತ ಎಂದರೆ ಭಾರತ ದೇಶದ ಕಲುಷಿತ ಸ್ಥಳಗಳನ್ನು ನಿರ್ಮಲಗೊಳಿಸುವದು. ಸ್ವಚ್ಛ ಭಾರತ ಅಭಿಯಾನವು ಭಾರತ ದೇಶದ ಒಂದು ಅತ್ಯುತ್ತಮ ನೈರ್ಮಲ್ಯ ಯೋಜನೆಯಾಗಿದೆ ಈ ಉದ್ದೇಶದಿಂದ  ಗಣರಾಜ್ಯೋತ್ಸವದಂದು  ಕೊಯನಾಡಿನಿಂದ - ಚಿಟ್ಟೆಕಾನ...

“ವನಜ-ಸುಜನಾ ರಂಗಮನೆ ಪ್ರಶಸ್ತಿ”ಗೆ ಹಾಸ್ಯಗಾರ ಮಹೇಶ್ ಮಣಿಯಾಣಿ ಆಯ್ಕೆ

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ಇದರ ಆಶ್ರಯದಲ್ಲಿ, ರಂಗನಿರ್ದೇಶಕ ಡಾ| ಜೀವನ್ ರಾಂ ಸುಳ್ಯ ಇವರ ಮಾತಾಪಿತೃಗಳ ನೆನಪಿನಲ್ಲಿ ಕೊಡ ಮಾಡುವ 2026 ನೇ ಸಾಲಿನ “ವನಜ-ಸುಜನಾ ರಂಗಮನೆ ಪ್ರಶಸ್ತಿ”ಗೆ ಶ್ರೀ ಧರ್ಮಸ್ಥಳ ಮೇಳದ ಪ್ರಸಿದ್ಧ ಹಾಸ್ಯಗಾರರಾದ ಮಹೇಶ್ ಮಣಿಯಾಣಿಯವರನ್ನು ಆಯ್ಕೆ ಮಾಡಲಾಗಿದೆ.ಸುಳ್ಯ ತಾಲೂಕಿನ ದೊಡ್ಡತೋಟದವರಾದ ಮಹೇಶ ಮಣಿಯಾಣಿ ಇವರು ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ...

ದೇವಚಳ್ಳ : ತಳೂರು ಅಂಗನವಾಡಿ ಬಳಿಯ ಕಾಂಕ್ರೀಟ್ ರಸ್ತೆ ಉದ್ಘಾಟನೆ

ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ತಳೂರು --ಮೆತ್ತಡ್ಕ ರಸ್ತೆಯ ತಳೂರು ಅಂಗನವಾಡಿ ಬಳಿಯ ಕಾಂಕ್ರೀಟ್ ರಸ್ತೆಯನ್ನು ಹಿರಿಯರಾದ ಶ್ರೀಮತಿ ರಾಮಕ್ಕ ನಾರಾಯಣ ಮಡಿವಾಳ ದೀಪ ಬೆಳಗಿಸಿ ಉದ್ಘಾಟಿಸಿದರು. ದಯಾನಂದ ಮೆತ್ತಡ್ಕಮತ್ತು ರಮೇಶ್ ತಳೂರು ಜಂಟಿಯಾಗಿ ರಿಬ್ಬನ್ ಕತ್ತರಿಸಿದರು. ಗುತ್ತಿಗಾರು ಸೊಸೈಟಿ ಮಾಜಿ ನಿರ್ದೇಶಕ ಆನಂದ ನಾಯ್ಕ್ ತೆಂಗಿನಕಾಯಿ ಒಡೆದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ...

ಪುತ್ತೂರು ಕಂಬಳದಲ್ಲಿ ಕುಮಾರ್ ಪೆರ್ನಾಜೆಯವರ ಸಾಧನೆಗೆ ಸನ್ಮಾನ

ಪುತ್ತೂರು : ಸಾಂಸ್ಕೃತಿಕ ಶ್ರೀಮಂತಿಕೆಯ ಕರಾವಳಿಯ ಕ್ರೀಡೆ 33ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳವು ಪುತ್ತೂರು ಶ್ರೀ ಮಾಲಿಂಗೇಶ್ವರ ದೇವರ ದೇವಮಾರು ಗದ್ದೆಯಲ್ಲಿ ಜ. 24 ರಂದು ಹಲವು ವಿಶೇಷಗಳಲ್ಲಿ ಜಾಗತಿಕವಾಗಿ ಜೇನು ಗಡ್ಡದಾರಿ ಜೇನು ಕೃಷಿ ವಿಶಿಷ್ಟ ಬರಹ ಸಂಶೋಧನೆ ಬೋರ್ಡ್ ದ್ರಾವಣ ಟೆಕ್ನಿಕ್ ರಾಷ್ಟ್ರೀಯ ಪ್ರಶಸ್ತಿ ಹಲವು ಪ್ರಶಸ್ತಿ ಸನ್ಮಾನ...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್ ಭೇಟಿ

ಸುಬ್ರಹ್ಮಣ್ಯ ಜನವರಿ 27 : ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜ.27ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಸುಬ್ರಹ್ಮಣ್ಯ ಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಿದ್ವತ್ ಸಮ್ಮೇಳನ ವಿಶ್ವ ಸಂಭ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಈ ಸಂದರ್ಭದಲ್ಲಿ ಶ್ರೀ...

ಪಂಜ ಶಾಲೆಯಲ್ಲಿ ಮಕ್ಕಳೊಂದಿಗೆ ಎಸ್.ಐ ಸಂವಾದ ಕಾರ್ಯಕ್ರಮ

ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಬ್ರಹ್ಮಣ್ಯ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಜ.27ರಂದು ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಮಧ್ಯಾಹ್ನ ಶಾಲೆಗೆ ಭೇಟಿ ನೀಡಿದ ಪೊಲೀಸ್ ಉಪನಿರೀಕ್ಷಕರನ್ನು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಬರಮಾಡಿಕೊಂಡರು. ನಂತರ ಕ್ಲಾಸ್ ರೂಮ್‌ಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಮಕ್ಕಳ...

ದೇವಚಳ್ಳ: ರೈತರಿಗೆ ಅಲ್ಯೂಮಿನಿಯಂ ಏಣಿ ವಿತರಣೆ

ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ನೀರಾಂಬೃತ ಯೋಜನೆಯ ಫಲಾನುಭವಿಗಳಿಗೆ ಸುಳ್ಯ ತಾಲೂಕು ದೇವಚಳ್ಳ ಗ್ರಾಮ ಪಂಚಾಯತ್ ವಠಾರ ಮತ್ತು ಎಲಿಮಲೆ ಶಾಲಾ ವಠಾರದಲ್ಲಿ ರೈತರಿಗೆ ಅಲ್ಯೂಮಿನಿಯಂ ಏಣಿಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ  ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಇವರ ಅದ್ಯಕ್ಷತೆಯಲ್ಲಿ ಯೋಜನೆಯ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕರಾದ ಪ್ರಸಾದ್ ಶೆಟ್ಟಿ ಯವರು ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ...
Loading posts...

All posts loaded

No more posts

error: Content is protected !!