Ad Widget

“ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರದ ಹೋರಾಟಕ್ಕೆ ಸಂದ ಜಯ, ಬಸ್ ವ್ಯವಸ್ಥೆಗೆ ಎ.ಬಿ.ವಿ.ಪಿ ಹೋರಾಟವೇ ಕಾರಣ” – ಮುಳಿಯ ಸಾತ್ವಿಕ್

“ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎ.ಬಿ.ವಿ.ಪಿ) ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಬಸ್ ಸೇವೆಯನ್ನು ಒದಗಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಿಗೂ ಹಾಗೂ ಕೆ.ಎಸ್‌.ಆರ್‌.ಟಿ.ಸಿ ಸುಳ್ಯ ಡಿಪೋ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ. ಈ ಬಸ್ ಸೇವೆ ಎ.ಬಿ.ವಿ.ಪಿ ನಡೆಸಿದ ಪ್ರತಿಭಟನೆ, ನಿರಂತರ ಹೋರಾಟ ಹಾಗೂ ಶಾಸಕರಿಗೆ ಸಲ್ಲಿಸಿದ ಮುಂದುವರಿದ ಮನವಿಗಳ ನೇರ ಫಲಿತಾಂಶವಾಗಿಯೇ...

ಜಿ.ಎಲ್ ಆಚಾರ್ಯ ಜ್ಯುವೆಲ್ಲ‌ರ್ಸ್‌ನಲ್ಲಿ “ರಿಪಬ್ಲಿಕ್ ಸೇಲ್ ಕೊಡುಗೆ”

ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಗಣರಾಜ್ಯೋತ್ಸವ ಹಬ್ಬದ ಪ್ರಯುಕ್ತ ಜನವರಿ 22ರಿಂದ 26ರವರೆಗೆ ರಿಪಬ್ಲಿಕ್ ಸೇಲ್ ವಿಶೇಷ ರಿಯಾಯಿತಿ ಕೊಡುಗೆಗಳನ್ನು ಪ್ರಕಟಿಸಲಾಗಿದೆ. ಚಿನ್ನ ಹಾಗೂ ವಜ್ರಾಭರಣಗಳ ವಿಶೇಷ ಸಂಗ್ರಹವೇ ಗ್ರಾಹಕರಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. 24ಕ್ಯಾರೆಟ್ ಚಿನ್ನದ ದರ 15,000 ದಾಟಿದೆ. ಈ ಫೆಸ್ಟಿವ್ ಶಾಪಿಂಗ್ ಸೀಸನ್‌ನಲ್ಲಿ ಚಿನ್ನದ ದರ ಬೆಲೆ...
Ad Widget

“ಬಾಳುಗೋಡು ಬಸ್ ಆರಂಭವಾಗಿರುವುದು ನಮ್ಮ ಹೋರಾಟಕ್ಕೆ ಸಂದ ಜಯ” –  ಎ.ಬಿ.ವಿ.ಪಿ

“ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಘಟಕದ ವತಿಯಿಂದ ಗ್ರಾಮೀಣ ಮಾರ್ಗಗಳಲ್ಲಿ ಬಸ್ಸು ಸೌಲಭ್ಯ ಕೊರತೆಯ ಕುರಿತು ಕಳೆದ ಜನವರಿ.03ರಂದು ನಡೆಸಿದ ಪ್ರತಿಭಟನೆಗೆ ಫಲವಾಗಿ, ಕಳೆದ 2 ದಿನಗಳಿಂದ ಬಾಳುಗೋಡು ಮಾರ್ಗಕ್ಕೆ ಬಸ್ಸು ಸೇವೆ ಪ್ರಾರಂಭವಾಗಿರುವುದು ಸ್ವಾಗತಾರ್ಹ ಹಾಗೂ ಹರ್ಷಕರ ವಿಷಯವಾಗಿದೆ.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರು ಬಹುಕಾಲದಿಂದ ಬಸ್ಸು ಸಮಸ್ಯೆಯಿಂದ ತೀವ್ರ...

ಮಂಡೆಕೋಲು ಸೊಸೈಟಿ ನಿರ್ದೇಶಕಿ ಕುಸುಮಾ ದೇವರಗುಂಡ ನಿಧನ

ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ, ಮಂಡೆಕೋಲು ಗ್ರಾಮದ ದೇವರಗುಂಡ ಯಶವಂತ ಡಿ.ಕೆ. ಯವರ ಪತ್ನಿ ಶ್ರೀಮತಿ ಕುಸುಮಾ ದೇವರಗುಂಡ ಅಸೌಖ್ಯದಿಂದ  ನಿಧನರಾದರು. ಅವರಿಗೆ ಸುಮಾರು 53 ವರ್ಷ ವಯಸ್ಸಾಗಿತ್ತು.

ಸುಬ್ರಹ್ಮಣ್ಯದಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಂಗಳೂರು ಪಚ್ಚನಾಡಿ ಸಾಂತ್ವನ ಕೇಂದ್ರಕ್ಕೆ ರವಾನೆ

ಸುಬ್ರಹ್ಮಣ್ಯ ಜನವರಿ 22 : ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನವರು ಹಿಡಿದು ಮಂಗಳೂರು  ಪಚ್ಚನಾಡಿಯ ಸಾಂತ್ವನ   ಕೇಂದ್ರಕ್ಕೆ ಕಳುಹಿಸಿದ ಘಟನೆ ವರದಿಯಾಗಿದೆ.ಸುಬ್ರಹ್ಮಣ್ಯ ಪೇಟೆ ಹಾಗೂ ಇನ್ನಿತರ  ಪ್ರದೇಶಗಳಲ್ಲಿ ಕಳೆದ ಹಲವಾರು ದಿನಗಳಿಂದ ಮಾನಸಿಕ ಅಸ್ವಸ್ಥನೆಂದು ಹೇಳಲಾದ ವ್ಯಕ್ತಿ ಒಬ್ಬ ತಿರುಗಾಡುತ್ತಿದ್ದ, ಅಲ್ಲದೆ ಭಕ್ತಾದಿಗಳಿಗೆ ಉಪಟಳವನ್ನು ನೀಡುತ್ತಿದ್ದ. ಇದು...

ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಕೇಸು ದಾಖಲಿಸಿರುವುದು ಖಂಡನೀಯ ; “ಹಿಂದುತ್ವ ವಿರೋಧಿಸುವುದೇ ಕಾಂಗ್ರೆಸ್ಸಿನ ನಿಜವಾದ ಜಾತ್ಯಾತೀತತೆ” : ವಿನಯ ಕಂದಡ್ಕ – ಸುಳ್ಯ ಬಿಜೆಪಿ ಮಂಡಲ ಸಮಿತಿ ಪತ್ರಿಕಾಗೋಷ್ಠಿ

ಪುತ್ತೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದ ಭಾಷಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾದ ಎಫ್.ಐ.ಆರ್ ದಾಖಲಿಸಿರುವ ಬಗ್ಗೆ ಪವಿತ್ರ ಓಂಕಾರ ಧ್ವಜದ ಬಗ್ಗೆ ಅಪಸ್ವರ ಎತ್ತಿ ಹಿಂದುಗಳ ಭಾವನೆಗೆ ನೋವು ತರುವ ಹೇಳಿಕೆ ನೀಡಿದ ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ...

ಕುಕ್ಕೆ ಸುಬ್ರಹ್ಮಣ್ಯ : ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕ ತಂಡಕ್ಕೆ ಭವ್ಯ ಸ್ವಾಗತ

ಸುಬ್ರಹ್ಮಣ್ಯ : ರಾಷ್ಟ್ರ ಮಟ್ಟದ  ನೆಟ್ ಬಾಲ್ ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಚಿನ್ನದ ಪದಕ ಪಡೆದ ಬಾಲಕಿಯರ ಕರ್ನಾಟಕ ತಂಡಕ್ಕೆ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ ಆಡಳಿತ ಮಂಡಳಿ,  ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕ ರಕ್ಷಕ ಸಂಘದ ವತಿಯಿಂದ  ಮಂಗಳವಾರ ಭವ್ಯವಾಗಿ ಸ್ವಾಗತಿಸಲಾಯಿತು. ವಿಜೇತ ತಂಡ ಮತ್ತು  ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಆಟವಾಡಿದ್ದ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ...

“ಬಾಳುಗೋಡು ನೂತನ ಬಸ್ಸು ಸಂಚಾರ ಆರಂಭ ಕಾಂಗ್ರೆಸ್  ಪ್ರಯತ್ನದಿಂದ ಆಗಿದೆ” –  ಭವಾನಿಶಂಕರ್ ಕಲ್ಮಡ್ಕ

“ಬಾಳುಗೋಡು ಗ್ರಾಮಕ್ಕೆ ಸುಳ್ಯ ತಾಲೂಕು ರಚಣೆಯಾಗಿ 60 ವರ್ಷವಾದರೂ ಸುಳ್ಯ ಕೇಂದ್ರ ಸ್ಥಾನದಿಂದ ಕೆ.ಎಸ್.ಆರ್.ಟಿ.ಸಿ ಬಸ್ಸು ಸೌಲಭ್ಯ ಇಲ್ಲದೇ ಇರುವುದರಿಂದ ಸುಳ್ಯ ಘಟಕದಿಂದ ಬಾಳುಗೋಡು ರಸ್ತೆಯಲ್ಲಿ ನೂತನ ಬಸ್ಸು ಸಂಚಾರ ಪ್ರಾರಂಭ ವಾಗಬೇಕೆಂದು ಬಾಳುಗೋಡು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ರವಿಕುಮಾರ್ ಕಿರಿಭಾಗರವರು ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆಯವರು ನಿರಂತರ ಶ್ರಮಪಟ್ಟು ಗ್ಯಾರಂಟಿ ಅನುಷ್ಠಾನ...

ಸುಳ್ಯದಿಂದ ಬಾಳುಗೋಡಿಗೆ ನೂತನ ಬಸ್ಸು ಸಂಚಾರ ಪ್ರಾರಂಭ ; ಬಾಳುಗೋಡು ಗ್ರಾಮ ಕಾಂಗ್ರೆಸ್ ವತಿಯಿಂದ ಸ್ವಾಗತ

ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮಕ್ಕೆ ಪ್ರಪ್ರಥಮ ಬಾರಿಗೆ ಸುಳ್ಯ ಕೇಂದ್ರ ಸ್ಥಾನದಿಂದ ಕೆ.ಎಸ್.ಆರ್.ಟಿ.ಸಿ ಬಸ್ಸು ಸೌಲಭ್ಯ ಪ್ರಾರಂಭ ಗೊಂಡಿರುವ ಹಿನ್ನೆಲೆಯಲ್ಲಿಜ.21 ರಂದು ಬಾಳುಗೋಡು  ಗ್ರಾಮ ಕಾಂಗ್ರೆಸ್ ಸಮಿತಿ ಮತ್ತು ಗ್ರಾಮಸ್ಥರ ವತಿಯಿಂದ ಬೆಟ್ಟುಮಕ್ಕಿ ಬಸ್ಸು ತಿರುಗುತಾಣವಾದ ಬೆಟ್ಟಮಕ್ಕಿ ಕಾಲೊನಿಯಲ್ಲಿ ಗ್ರಾಮ ಸಮಿತಿ & ಗ್ರಾಮಸ್ಥರು ಸೇರಿ ನೂತನ ಬಸ್ಸು ಸಂಚಾರ ವ್ಯವಸ್ಥೆಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಂಡರು....

ಸುಬ್ರಹ್ಮಣ್ಯ : ತೃಪ್ತಿ ಜಿ.ಎನ್ ಅವರಿಗೆ ಡಾಕ್ಟರೇಟ್ ಪದವಿ

ಸುಬ್ರಹ್ಮಣ್ಯ ಜನವರಿ 22 : ತೃಪ್ತಿ ಜಿ.ಎನ್ ಅವರು “Ecological Study of Selected Lakes and Their Biodiversity in Somwarpet” ಎಂಬ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಜನವರಿ 05ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಜರಗಿದ ಪದ ಪ್ರಧಾನ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದರು....
Loading posts...

All posts loaded

No more posts

error: Content is protected !!