Ad Widget

ಸುಳ್ಯ : ವಿಕಲ ಚೇತನರ ಸಮನ್ವಯ ಸಭೆ ಮತ್ತು ಮಾಹಿತಿ ಕಾರ್ಯಗಾರ

ಸುಳ್ಯಪಟ್ಟಣ ಪಂಚಾಯತ್ ವತಿಯಿಂದ ಇಂದು ವಿಕಲ ಚೇತನರ ಸಮನ್ವಯ ಸಭೆ ಮತ್ತು ಮಾಹಿತಿ ಕಾರ್ಯಗಾರ ಸುಳ್ಯ ದ ಪುರ ಭವನ ದಲ್ಲಿ ನಡೆಯಿತು.ಕಾರ್ಯಕ್ರಮ ದ ಉದ್ಘಾಟನೆ ಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿ ಅಧ್ಯಕ್ಷ ತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ, ಕರ್ನಾಟಕ ದ ಕನಿಷ್ಠ ವೇತನಸಲಹಾ ಸಮಿತಿ ಅಧ್ಯಕ್ಷ ಟಿ ಎಂ ಶಹೀದ್,...

ಕ್ಯಾಂಪ್ಕೋ  ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ  ಆರ್ಥಿಕ ನೆರವಿನ ಚೆಕ್ ಹಸ್ತಾಂತರ

ಕ್ಯಾಂಪ್ಕೋ  ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ  ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ಜ.19 ರಂದು ಜಾಲ್ಸೂರು ನಲ್ಲಿ ನಡೆಯಿತು.  ಕ್ಯಾಂಪ್ಕೋ  ಸಂಸ್ಥೆ ಸುಳ್ಯ ಶಾಖೆಯ ಸಕ್ರೀಯ  ಸದಸ್ಯರಾದ  ಎಂ. ರವಿಶಂಕರ್ ಭಟ್  ಜಾಲ್ಸೂರು ಇವರ ಆಸ್ಪತ್ರೆ ಚಿಕಿತ್ಸಾ ವೆಚ್ಚದ ಸಹಾಯಧನದ ಮೊತ್ತ ರೂ. 96,000/- (ರೂಪಾಯಿ ತೊಂಬತ್ತಾರು ಸಾವಿರ ) ದ    ಚೆಕ್ಕನ್ನು ಕ್ಯಾಂಪ್ಕೋ  ಸಂಸ್ಥೆಯ ...
Ad Widget

ಗುತ್ತಿಗಾರು  – ಬೃಹತ್ ಹಿಂದು ಸಂಗಮ ಕಾರ್ಯಕ್ರಮ : “ಆರ್ ಎಸ್.ಎಸ್ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ” – ನಾಗರಾಜ್ ಭದ್ರಾವತಿ : “ದೇಶದ ಐಕ್ಯತೆಗೆ ನಮ್ಮ ಕುಟುಂಬ ಜೀವನ  ವ್ಯವಸ್ಥೆಯೇ ಕಾರಣ” – ಎಂ.ಬಿ.ಸದಾಶಿವ

“ಆರ್ ಎಸ್.ಎಸ್ ವ್ಯಕ್ತಿ ನಿರ್ಮಾಣದ ಮೂಲಕ ಹಿಂದೂ ಸಮಾಜದ ಸಂಘಟನೆಯೊಂದಿಗೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ ಎಂದು” ಮುಖ್ಯ ಭಾಷಣಕಾರರಾಗಿ ಆಗಮಿಸಿದ ಸಂಘದ ಕರ್ನಾಟಕ ಘೋಷ್ ಪ್ರಮುಖ್ ಆಗಿ ಪ್ರಸ್ತುತ ವಿಕ್ರಮ ವಾರಪತ್ರಿಕೆಯ ಸಹ ಸಂಪಾದಕ ನ.ನಾಗರಾಜ್ ಭದ್ರಾವತಿ ಹೇಳಿದರು. ಅವರು ಗುತ್ತಿಗಾರಿನಲ್ಲಿ ಜ.18 ರಂದು ನಡೆದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು. “ಮೇಲು-ಕೀಳು ಎನ್ನುವ...

ಸುಳ್ಯ : ರಥಬೀದಿಯಲ್ಲಿ ನೀರು ಸೋರಿಕೆ – ಸ್ಥಳೀಯಾಡಳಿತ ನಿರ್ಲಕ್ಷ್ಯ

“ಸುಳ್ಯ ನಗರ ರೋಟರಿ ಸ್ಕೂಲ್ ಮುಂಭಾಗದಲ್ಲಿ ಕಳೆದ ಹಲವು  ದಿನಗಳಿಂದ ಪೈಪಿನಿಂದ ನಿರಂತರವಾಗಿ ನೀರು ಸೋರಿಕೆಯಾಗುತ್ತಿದೆ. ಈ ಸಮಸ್ಯೆ ಬಗ್ಗೆ ಸಾರ್ವಜನಿಕರು ಗಮನ ಸೆಳೆದಿದ್ದರೂ ನಗರಾಡಳಿತದಿಂದ ಇದುವರೆಗೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ನೀರಿನ ಸೋರಿಕೆಯಿಂದ ರಸ್ತೆ ಉದ್ದಕ್ಕೂ ನೀರು ಹರಿಯುತ್ತಿದ್ದು, ನಡೆದುಕೊಂಡು ಹೋಗುವ ಸಾರ್ವಜನಿಕರಿಗೆ ಹಾಗೂ ರಿಕ್ಷಾ ಚಾಲಕರಿಗೆ ತೀವ್ರ ತೊಂದರೆ ಉಂಟಾಗಿದೆ. ಸುಳ್ಯದಲ್ಲಿ...

ಯೇನೆಕಲ್ಲು : ಕೋಡಿಬೈಲು ಕುಟುಂಬದ “ಧರ್ಮದೈವ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ”

ಕೋಡಿಬೈಲು ಕುಟುಂಬದ “ಧರ್ಮದೈವ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ”ಯು ಜ.17 ಮತ್ತು 18ರಂದು ಯೇನೆಕಲ್ಲು ಗ್ರಾಮದ ಕೋಡಿಬೈಲು ತರವಾಡು ಮನೆಯಲ್ಲಿ ನಡೆಯಿತು.ಜ.17ನೇ ಶನಿವಾರದಂದು ಸಂಜೆ ದೈವಗಳ ಭಂಡಾರ ತೆಗೆದು ನಂತರ ರಾತ್ರಿ ಕಲ್ಲುರ್ಟಿ ಮತ್ತು ಜಾವತೆ ದೈವಗಳ ನೇಮೋತ್ಸವ ಹಾಗೂ ಅನ್ನಸಂತರ್ಪಣೆ ನಡೆದು ನಂತರ ಕೊರತ್ತಿ, ವರ್ಣಾರ ಪಂಜುರ್ಲಿ, ವ್ಯಾಘ್ರ ಚಾಮುಂಡಿ, ಕುಪ್ಪೆ ಪಂಜುರ್ಲಿ...

ಯುವಕರಿಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ; ಕೊಲ್ಲಮೊಗ್ರು ಪೇಟೆಯಲ್ಲಿ ಅಂತಿಮ ನಮನ-ಮೃತರ ಅಂತಿಮ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜನರು

ಕೊಲ್ಲಮೊಗ್ರು ಗ್ರಾಮದ ಹರಿಪ್ರಸಾದ್ ಮಲ್ಲಾಜೆ ಹಾಗೂ ಸುಜಿತ್ ಗೋಳ್ಯಾಡಿ ಎಂಬ ಇಬ್ಬರು ಯುವಕರು ನಿನ್ನೆ(ಜ.18) ಸುಬ್ರಹ್ಮಣ್ಯದ ಕುಲ್ಕುಂದ ಸಮೀಪದ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇಂದು(ಜ.19) ಮೃತರ ಅಂತಿಮ ಯಾತ್ರೆ ನೆರವೇರಿದ್ದು, ಹರಿಹರ ಪಳ್ಳತ್ತಡ್ಕದಲ್ಲಿ ಅಂತಿಮ ಯಾತ್ರೆಯನ್ನು ಮುಗಿಸಿ ಕೊಲ್ಲಮೊಗ್ರದ ಮಯೂರ ವೃತ್ತಕ್ಕೆ ಬಂದು ಕೊಲ್ಲಮೊಗ್ರು ಪೇಟೆಯಲ್ಲಿ ಮೃತರ ಅಂತಿಮ...

ಯುವಕರಿಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ; ಕೊಲ್ಲಮೊಗ್ರು ಹಾಗೂ ಹರಿಹರ ಪಳ್ಳತ್ತಡ್ಕದಲ್ಲಿ ಅಂಗಡಿ ಮುಂಗಟ್ಟು ಬಂದ್ – ಅವಳಿ ಗ್ರಾಮಗಳಲ್ಲಿ ಆವರಿಸಿದ ನೀರವ ಮೌನ

ಕೊಲ್ಲಮೊಗ್ರು ಗ್ರಾಮದ ಹರಿಪ್ರಸಾದ್ ಮಲ್ಲಾಜೆ ಹಾಗೂ ಸುಜಿತ್ ಗೋಳ್ಯಾಡಿ ಎಂಬ ಇಬ್ಬರು ಯುವಕರು ನಿನ್ನೆ(ಜ.18) ಸುಬ್ರಹ್ಮಣ್ಯದ ಕುಲ್ಕುಂದ ಸಮೀಪದ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇಂದು(ಜ.19) ಮೃತರ ಅಂತಿಮ ಯಾತ್ರೆ ಹಾಗೂ ಅಂತಿಮ ದರ್ಶನ ನೆರವೇರಿದ್ದು, ಕೊಲ್ಲಮೊಗ್ರು ಹಾಗೂ ಹರಿಹರ ಪಳ್ಳತ್ತಡ್ಕದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಅವಳಿ ಗ್ರಾಮಗಳಲ್ಲಿ...
error: Content is protected !!